ಪರಿಸರ ಸ್ನೇಹಿ ಮಣ್ಣಿನ ಗಣಪತಿಗೆ ಹೆಚ್ಚಿದ ಬೇಡಿಕೆ: ಕಡವಾಡದ ಅಪ್ಪ-ಮಗನ ಕಲಾಕೃತಿಗಳಿಗೆ ಗೋವಾದಲ್ಲೂ ಮನ್ನಣೆ..

ಕಾರವಾರ: ಗೌರಿ-ಗಣೇಶ ಹಬ್ಬಕ್ಕೆ ಇನ್ನೇನು ಒಂದು ದಿನವಷ್ಟೇ ಬಾಕಿ ಉಳಿದಿದೆ. ಕರಾವಳಿಯಾದ್ಯಂತ ಹಬ್ಬದ ಸಡಗರ ಮನೆಮಾಡಿದ್ದು, ಕಲಾಕಾರರು ಮಣ್ಣಿನ ಗಣಪತಿ ವಿಗ್ರಹಗಳಿಗೆ ಬಣ್ಣದ ಚಿತ್ತಾರಗಳ ಮೂಲಕ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಕಾರವಾರ ತಾಲೂಕಿನ ಕಡವಾಡ ಗ್ರಾಮದ ಗಣಪತಿ ಬಾಬನಿ ಮಾಂಜ್ರೇಕರ್ ಹಾಗೂ ಅವರ ಪುತ್ರ ರಜತ್ ಮಾಂಜ್ರೇಕರ್ ಅವರ ಕೈಯಲ್ಲಿ ಅರಳಿದ ಸುಂದರ ಮಣ್ಣಿನ ಗಣಪತಿ ವಿಗ್ರಹಗಳು ಇದೀಗ ಭಕ್ತರ ಮನೆ ಬೆಳಗಲು ಸಜ್ಜಾಗಿವೆ. ತಂದೆಯಿಂದ ಒಲಿದ ಕಲೆಗಣಪತಿ ಮಾಂಜ್ರೇಕರ್ ಅವರು ಹಲವು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಮಗ ರಜತ್‌ಗೆ ಕೇವಲ…

News Desk

ಬೆಳಸೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಾಂಧಲೆ ಪ್ರಕರಣ: ಪ್ರಮುಖ ಆರೋಪಿ ಬಂಧನ : ಪೊಲೀಸರ ತ್ವರಿತ ಕಾರ್ಯಾಚರಣೆಗೆ ಪಿಡಿಒ ಸಂಘದ ಮೆಚ್ಚುಗೆ..

ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಾರಿದೀಪ ಅಳವಡಿಸುವ ವಿಚಾರವಾಗಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಇಲಾಖೆಯ ಈ ಕ್ಷಿಪ್ರ ಕಾರ್ಯಾಚರಣೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ತಂಡ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದೆ. ಘಟನೆಯ ಹಿನ್ನೆಲೆ: ಶುಕ್ರವಾರ (ಸೆಪ್ಟೆಂಬರ್ 11, 2026) ಸಂಜೆ 4:15ರ ಸುಮಾರಿಗೆ ಕಚೇರಿಗೆ ಬಂದ ಶಿರೂರು ನಿವಾಸಿಗಳಾದ ಮನೋಜ ಬಾಬು ಗೌಡ, ನಾಗೇಶ ಸಣ್ಣು ಗೌಡ,…

News Desk

ಆರೋಪಿಗಳ ಪತ್ತೆಯಲ್ಲಿ ಅತ್ಯುತ್ತಮ ಕಾರ್ಯಾಚರಣೆ: ಅಂಕೋಲಾ ಠಾಣೆಯ ಇಬ್ಬರು ಸಿಬ್ಬಂದಿಗೆ ‘ಕಾಪ್ ಆಫ್ ದಿ ಮಂತ್’ ಗೌರವ..

ಅಂಕೋಲಾ: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಳ್ಳುವ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಯ ಅತ್ಯಂತ ಸವಾಲಿನ ಹಾಗೂ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಕಾರವಾರ ಉಪವಿಭಾಗದ ಅಂಕೋಲಾ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯು ಆಗಸ್ಟ್ 2026ರ ಸಾಲಿನ ಪ್ರತಿಷ್ಠಿತ 'ಕಾಪ್ ಆಫ್ ದಿ ಮಂತ್' ಗೌರವವನ್ನು ಪ್ರಕಟಿಸಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿ.ಪಿ.ಸಿ 559 ಶ್ರೀ ಗಿರೀಶ ಲಮಾಣಿ ಹಾಗೂ ಅದೆ ಠಾಣೆಯ ಸಿ.ಪಿ.ಸಿ 564 ಶ್ರೀ ಭಗವಾನ್…

News Desk

ಅಂಕೋಲಾ ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಾಂಧಲೆ : ದಾರಿದೀಪದ ನೆಪದಲ್ಲಿ ಕರ್ತವ್ಯನಿರತ ಸಿಬ್ಬಂದಿ ಮೇಲೆ ಹಲ್ಲೆ – ಪ್ರಕರಣ ದಾಖಲು..

ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಾರಿದೀಪ ಅಳವಡಿಸುವ ವಿಚಾರವನ್ನು ಮುಂದಿಟ್ಟುಕೊಂಡು ಕರ್ತವ್ಯದಲ್ಲಿದ್ದ ಸಿಬ್ಬಂದಿಯೋರ್ವರ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಲ್ಲೆಗೊಳಗಾದ ಸಿಬ್ಬಂದಿಯ ಬೆಂಬಲಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಪ್ರಮುಖರು ದೃಢವಾಗಿ ನಿಲ್ಲುವ ಮೂಲಕ ಇಲಾಖೆಯಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಬೆಳಸೆ ಗ್ರಾಮ ಪಂಚಾಯತದಲ್ಲಿ ಸ್ವಚ್ಛತಾಗಾರರಾಗಿ ಕೆಲಸ ಮಾಡುತ್ತಿರುವ ಮಂಜುನಾಥ ವಿಷ್ಣು ನಾಯ್ಕ (50) ಹಲ್ಲೆಗೊಳಗಾದವರು. ಶುಕ್ರವಾರ ಸಂಜೆ 4:15ರ ಸುಮಾರಿಗೆ…

News Desk

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹಿರಿಯ ವಕೀಲ ಜಿ.ಟಿ. ನಾಯ್ಕ ನೇಮಕ..

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಪಕ್ಷದ ಹಿರಿಯ ಮುಖಂಡ ಹಾಗೂ ವಕೀಲರಾದ ಜಿ.ಟಿ. ನಾಯ್ಕ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ನೇಮಕ ಮಾಡಿದೆ. ಈ ನೇಮಕಾತಿ ಆದೇಶವು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊರಡಿಸಲಾಗಿದೆ. ನೇಮಕಾತಿಯ ಹಿನ್ನೆಲೆ ಮತ್ತು ಪ್ರಕ್ರಿಯೆ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅನುಮೋದನೆಯ ಮೇರೆಗೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿದ್ದು, ಸೆಪ್ಟೆಂಬರ್ 9ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಪಕ್ಷದ ಸಂಘಟನೆಯನ್ನು…

News Desk

ಆಡಳಿತ-ಜನಸಾಮಾನ್ಯರ ಬಾಂಧವ್ಯಕ್ಕೆ ಸಾಕ್ಷಿಯಾದ ಬೀಳ್ಕೊಡುಗೆ: ಇಡುಗುಂಜಿಯಲ್ಲಿ ಪಿಡಿಒ ಗಿರೀಶ್ ನಾಯಕ್‍ರಿಗೆ ನಾಗರಿಕ ಸನ್ಮಾನ..

ಹೊನ್ನಾವರ: ಕರ್ತವ್ಯನಿಷ್ಠೆ ಹಾಗೂ ಜನಪರ ಕಾಳಜಿಯಿಂದ ಕೆಲಸ ಮಾಡುವ ಅಧಿಕಾರಿಗಳು ಸದಾ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎನ್ನುವುದಕ್ಕೆ ತಾಲೂಕಿನ ಇಡುಗುಂಜಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭವೊಂದು ಸಾಕ್ಷಿಯಾಯಿತು. ಪ್ರಭಾರಿ ಪಿಡಿಒ ಆಗಿ ಸೇವೆ ಸಲ್ಲಿಸಿ, ತಮ್ಮ ವಿಶಿಷ್ಟ ಕಾರ್ಯವೈಖರಿಯಿಂದಲೇ ಇಡುಗುಂಜಿ ಗ್ರಾಮಸ್ಥರ ಮನೆಮಾತಾಗಿದ್ದ ಕರ್ವ ಪಂಚಾಯತ್‌ನ ಪಿಡಿಒ ಗಿರೀಶ್ ನಾಯಕ್ ಅವರನ್ನು ಗ್ರಾಮದ ಸಮಸ್ತ ನಾಗರಿಕರು ಒಗ್ಗೂಡಿ, 'ನಾಗರಿಕ ಸನ್ಮಾನ' ಮಾಡುವ ಮೂಲಕ ಅತ್ಯಂತ ಭಾವುಕರಾಗಿ ಬೀಳ್ಕೊಟ್ಟರು. ಇಡುಗುಂಜಿ ಗ್ರಾಮ ಪಂಚಾಯಿತಿಗೆ ನೂತನ ಪಿಡಿಒ ಆಗಮಿಸಿದ ಹಿನ್ನೆಲೆಯಲ್ಲಿ ಗಿರೀಶ್ ನಾಯಕ್ ಅವರು…

News Desk

ಹೋಟೆಲ್‌ನಲ್ಲಿ ‘ಮದ್ಯ’ದ ಮದ: ನಿರಾಕರಿಸಿದ ಕ್ಯಾಶಿಯರ್‌ಗೆ ಅವಾಚ್ಯ ನಿಂದನೆ, ಅಡ್ಡಬಂದ ಕ್ಯಾಪ್ಟನ್‌ ಮೇಲೆ ಬಾಟಲಿ ಪ್ರಹಾರ, FIR ದಾಖಲು..

ಕುಮಟಾ: ನಗರದ ಪ್ರತಿಷ್ಠಿತ ವರದಾ ಹೋಟೆಲ್‌ನಲ್ಲಿ ಮದ್ಯ ನೀಡಲು ನಿರಾಕರಿಸಿದ ಕಾರಣಕ್ಕಾಗಿ ಗ್ರಾಹಕನೋರ್ವ ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಗಂಭೀರ ಘಟನೆಯೊಂದು ಸೆಪ್ಟೆಂಬರ್ 04, 2026 ರಂದು ಜರುಗಿದೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್.ಐ.ಆರ್ ಸಂಖ್ಯೆ: 178/2026) ದಾಖಲಾಗಿದೆ. ಆರೋಪಿತನ ವಿರುದ್ಧ ನೂತನ 'ಭಾರತೀಯ ನ್ಯಾಯ ಸಂಹಿತೆ-2023' ರ ಸೆಕ್ಷನ್ 352, 351(2), ಹಾಗೂ 118(1) ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಘಟನೆಯ ವಿವರಗಳಿಗೆ ಹೋಗುವುದಾದರೆ, ಶುಕ್ರವಾರ ಸಂಜೆ 16:15…

News Desk

ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಶೀಘ್ರವೇ ನೂತನ ಅಧ್ಯಕ್ಷರನ್ನು ನೇಮಿಸಲು ಮೋಹನ್ ಕುಮಾರ್ ದಾನಪ್ಪ ಆಗ್ರಹ..

ಬೆಂಗಳೂರು (ಸೆ 5): ಪೊಲೀಸ್ ವ್ಯವಸ್ಥೆಯ ವಿರುದ್ಧದ ಸಾರ್ವಜನಿಕರ ದೂರುಗಳನ್ನು ಆಲಿಸುವ ಮಹತ್ವದ ವೇದಿಕೆಯಾಗಿರುವ 'ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ'ವು ಕಳೆದ 1 ತಿಂಗಳಿನಿಂದ ಅಧ್ಯಕ್ಷರಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ತ್ವರಿತಗತಿಯಲ್ಲಿ ನೂತನ ಅಧ್ಯಕ್ಷರನ್ನು ನೇಮಿಸುವಂತೆ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಅವರು ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್…

News Desk

ವೀರ ಯೋಧ ವಿನೋದ ನಾಯ್ಕ 21ನೇ ಪುಣ್ಯತಿಥಿ: ಸ್ಮಾರಕದ ಆವರಣ ಗೋಡೆ ಲೋಕಾರ್ಪಣೆ, ನಿವೃತ್ತ ಸೈನಿಕರಿಗೆ ಸನ್ಮಾನ..

ಕಾರವಾರ: ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ್ದ ತಾಲೂಕಿನ ಕಡವಾಡ ಗ್ರಾಮದ ಲ್ಯಾನ್ಸ್ ನಾಯಕ, ಹುತಾತ್ಮ ವಿನೋದ ನಾಯ್ಕ ಅವರ 21ನೇ ಪುಣ್ಯತಿಥಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಇದೇ ವೇಳೆ ಅವರ ಸ್ಮಾರಕಕ್ಕೆ ಹೊಸದಾಗಿ ನಿರ್ಮಿಸಲಾದ ಕಾಂಪೌಂಡ್ ಗೋಡೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಉದ್ಘಾಟಿಸಿ, ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ರೂಪಾಲಿ ನಾಯ್ಕ, "ಭಾರತ ಮಾತೆಗಾಗಿ ತಮ್ಮ ಏಕೈಕ ಮಗನನ್ನೇ ಬಲಿದಾನ ಮಾಡಿದ ವಿನೋದ್ ನಾಯ್ಕ ಅವರ ತಂದೆ ಮಹಾದೇವ ನಾಯ್ಕ ಅವರಿಗೆ ನಮಸ್ಕರಿಸುತ್ತೇನೆ. ಆ ಯೋಧನ…

News Desk

ಬಾಲಕನ ಮೃತದೇಹ ಹೊರತೆಗೆದು ಮಾನವೀಯತೆ ಮೆರೆದ ಕುಮಟಾ ಪಿಎಸ್ಐ ಖಾದರ್ ಭಾಷಾ ಅವರಿಗೆ ಯುವ ಕಾಂಗ್ರೆಸ್‌ನಿಂದ ಸನ್ಮಾನ..

ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸ್ವತಃ ನೀರಿಗೆ ಇಳಿದು ಬಾಲಕನ ಮೃತದೇಹವನ್ನು ಹೊರತೆಗೆದು ಮಾನವೀಯತೆ ಮೆರೆದ ಕುಮಟಾ ಪೊಲೀಸ್ ಠಾಣೆಯ ಪಿಎಸ್ಐ ಖಾದರ್ ಭಾಷಾ ಅವರ ಧೈರ್ಯ, ಕರ್ತವ್ಯನಿಷ್ಠೆ ಹಾಗೂ ಸೇವಾ ಮನೋಭಾವವನ್ನು ಯುವ ಕಾಂಗ್ರೆಸ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸಂಕಷ್ಟದ ಸಂದರ್ಭದಲ್ಲಿ ಕ್ಷಣವೂ ತಡಮಾಡದೆ ನೀರಿಗೆ ಇಳಿದು ಮೃತದೇಹವನ್ನು ಹೊರತೆಗೆದ ಪಿಎಸ್ಐ ಖಾದರ್ ಭಾಷಾ ಅವರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಪೊಲೀಸ್ ಇಲಾಖೆಯ ಕರ್ತವ್ಯಪ್ರಜ್ಞೆ ಹಾಗೂ ಮಾನವೀಯತೆಗೆ ಉತ್ತಮ ನಿದರ್ಶನವಾಗಿದೆ. ಇಂತಹ ಧೈರ್ಯಶಾಲಿ ಹಾಗೂ ಮಾನವೀಯ ಕಾರ್ಯವನ್ನು ಗುರುತಿಸಿ…

News Desk
- Sponsored -
Ad imageAd image
Weather
22°C
Karnataka
overcast clouds
22° _ 22°
83%
2 km/h
Sun
32 °C
Mon
32 °C
Tue
33 °C
Wed
31 °C
Thu
28 °C

Follow US

Most Read

Discover Categories

ಅಂಕೋಲಾ – ಕುಮಟಾ ಹೆದ್ದಾರಿಯ ಮಾದನಗೇರಿ ಬಳಿ ಲಾರಿಗಳ ನಡುವೆ ಅಪಘಾತ..

ಅಂಕೋಲಾ: ತಾಲೂಕಿನ ಮಾದನಗೇರಿ ಕ್ರಾಸ್ ಬಳಿ ಹೆದ್ದಾರಿಯಲ್ಲಿ ಎರಡು ಟ್ರಕ್‌ಗಳ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು,…

News Desk

ಅಂಕೋಲಾದಲ್ಲಿ ಹಗಲು ಹೊತ್ತಲ್ಲೇ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಟ್ಕಾ ದಂಧೆ: ಪೊಲೀಸರ ಕಾರ್ಯಾಚರಣೆ, ಓರ್ವ ವಶಕ್ಕೆ..

ಅಂಕೋಲಾ : ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ 'ಓ.ಸಿ-ಮಟಕಾ' ಜೂಗಾರಾಟದ ಅಡ್ಡೆಯ ಮೇಲೆ ಅಂಕೋಲಾ ಠಾಣೆಯ…

News Desk

ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಚಾಲಕರ ನಡುವೆ ಮಾರಾಮಾರಿ: ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ ಅಂಕೋಲಾ ಪೊಲೀಸರು..

ಅಂಕೋಲಾ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಭಾರಿ ವಾಹನಗಳ ನಡುವೆ ಉಂಟಾದ ಸಣ್ಣ ತಿಕ್ಕಾಟ,…

News Desk

ಕಾರವಾರದ ಪ್ರತಿಷ್ಠಿತ ರೆವಿಂಟೊ ಲೈಫ್ ಸೈನ್ಸಸ್‌ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ: ಶಿರವಾಡದಲ್ಲಿ ಮೊಳಗಿದ ದೇಶಭಕ್ತಿ..

ಕಾರವಾರ ತಾಲ್ಲೂಕಿನ ಶಿರವಾಡ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಆಯುರ್ವೇದ ಔಷಧಿ ತಯಾರಿಕಾ ಕಂಪೆನಿಯಾದ ರೆವಿಂಟೊ ಲೈಫ್…

News Desk

ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಕುರಿತು ಇಂದು ಅಧಿಕೃತ ಅಧಿಸೂಚನೆ: ಕರಾವಳಿ ಭಾಗದ ಉತ್ತರ ಕನ್ನಡಕ್ಕೆ ಯಾರು ನೋಡಿ..

ಕರ್ನಾಟಕ ಸರ್ಕಾರವು ಇಂದು (14.08.2026) ಹೊರಡಿಸಿದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಅಧಿಕೃತ ಅಧಿಸೂಚನೆಯಲ್ಲಿ, ಕರಾವಳಿ…

News Desk

‘ಚುನಾವಣೆಗೆ ಸ್ಪರ್ಧಿಸದಂತೆ ಕ್ರಿಮಿನಲ್ ಕೇಸ್ ಹಾಕುತ್ತೇವೆ’: ಕಾಂಪೌಂಡ್ ಗಲಾಟೆ ವೇಳೆ ಬೆದರಿಕೆ ಹಾಕಿದ ಗಂಭೀರ ಆರೋಪ..

ಕುಮಟಾ ತಾಲೂಕಿನ ಅಘನಾಶಿನಿಯಲ್ಲಿ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಅಕ್ರಮ ಪ್ರವೇಶ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ…

News Desk

ಮೌಖಿಕ ಆದೇಶಗಳಿಗೆ ಮಣಿಯದ ಅಧಿಕಾರಿಗಳು: ‘ವಿಬಿ-ಜಿ-ರಾಮ್-ಜಿ’ ಅವೈಜ್ಞಾನಿಕ ಗುರಿ ವಿರುದ್ಧ ಉತ್ತರ ಕನ್ನಡದಲ್ಲಿ ಆಡಳಿತಾತ್ಮಕ ಬಂಡಾಯ..

ಕಾರವಾರ(ಉ.ಕ): ಗ್ರಾಮೀಣಾಭಿವೃದ್ಧಿಯ ಮಹತ್ವಾಕಾಂಕ್ಷೆಯ 'ವಿಬಿ-ಜಿ-ರಾಮ್-ಜಿ' (VB-G-RAM-G) ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಅಧಿಕಾರಿಗಳ ಮೇಲೆ ಮಿತಿಮೀರಿದ ಒತ್ತಡ…

News Desk

ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಕೇಂದ್ರದ ಅಧಿಕೃತ ಮುದ್ರೆ: ಅಂಕೋಲಾದ ಈ 16 ಹಳ್ಳಿಗಳ ಮೂಲಕ ಹಾದುಹೋಗಲಿದೆ ನೂತನ ಬ್ರಾಡ್ ಗೇಜ್ ಮಾರ್ಗ..

ದಶಕಗಳಿಂದ ಬಾರಿ ಚರ್ಚೆಯಲ್ಲಿದ್ದ ಆರ್ಥಿಕತೆಯ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ 'ಹುಬ್ಬಳ್ಳಿ-ಅಂಕೋಲಾ' ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರವು…

News Desk

ಕಾಂಕ್ರೀಟ್ ರಸ್ತೆಯನ್ನು ಕೆಂಪು ಮಣ್ಣಿನಿಂದ ಮುಚ್ಚಲು ಹೊರಟರೇ ರಿಯಲ್ ಎಸ್ಟೇಟ್ ಮಾಫಿಯಾಗಳು

ವಿಕಾಸ ವಾಹಿನಿಯಲ್ಲಿ ಸುದ್ದಿ ಮಾಡಿದಂತೆ ಹಳ್ಳದ ಅಕ್ಕಪಕ್ಕ ಸುರಿದಿರುವ ಕಸವನ್ನು ಸಂಬಂಧಪಟ್ಟವರು ವಿಲೇವಾರಿ ಮಾಡಲಾಗಿದೆಯೋ ಅಥವಾ ಇಲ್ಲ ಎಂದು ಸ್ಥಳ ಪರಿಶೀಲನೆಗೆ ಹೊರಟಾಗ ಅಚ್ಚರಿ ಕಾದಿತ್ತು…. ಲ್ಯಾಂಡ್ ಆರ್ಮಿ ಇಂದ ಲಕ್ಷಾಂತರ ಪ್ರವೇಶದಲ್ಲಿ ನಿರ್ಮಿಸಿರುವ ಕಾಂಕ್ರೀಟ ರಸ್ತೆಯು ಕೆಂಪು ಮಣ್ಣಿನಿಂದ ಮುಚ್ಚಿ…

bluechipinfosystem