ನಡುರಾತ್ರಿ ಮನೆಯವರು ನಿದ್ರಿಸುತ್ತಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳ… 24 ಗಂಟೆಯೊಳಗೆ ಪೊಲೀಸರ ಬಲೆಗೆ!!

ಕುಮಟಾ: ಪಟ್ಟಣದ ಬಸ್ತಿಪೇಟೆ ಬಳಿ ಮನೆಯೊಂದರಲ್ಲಿ ಜನರು ನಿದ್ರಿಸುತ್ತಿದ್ದ ವೇಳೆ ನುಗ್ಗಿ ಸಾವಿರಾರು ರೂಪಾಯಿ ನಗದು ದೋಚಿದ್ದ ಪ್ರಕರಣವನ್ನು ಕುಮಟಾ ಪೊಲೀಸರು ಭೇದಿಸಿದ್ದು, ಕಳ್ಳತನ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ದಿನಾಂಕ 15-02-2026 ರ ರಾತ್ರಿ ನಡೆದ ಈ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ದೂರು ದಾಖಲಾದ ಕೇವಲ 10 ಗಂಟೆಗಳಲ್ಲಿ ಮತ್ತು ಕೃತ್ಯ ನಡೆದ 24 ಗಂಟೆಯೊಳಗೆ ಪೊಲೀಸರು ಆರೋಪಿಯನ್ನು ಬಂಧಿಸಿರುವುದು ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಘಟನೆಯ ವಿವರ: ದಿನಾಂಕ 15 ರ ರಾತ್ರಿ 10:30 ರಿಂದ…

News Desk

ಮನವಿ ಸಲ್ಲಿಸಿದ ತಕ್ಷಣ ಸ್ಪಂದನೆ: ಮಂಡ್ಲಿಕೊಪ್ಪ ಬಸ್ ನಿಲ್ದಾಣಕ್ಕೆ 3.5 ಲಕ್ಷ ರೂ. ಅನುದಾನ ಘೋಷಿಸಿದ ಶಾಸಕ ಭೀಮಣ್ಣ ನಾಯ್ಕ್..

ಸಿದ್ದಾಪುರ: ತಾಲೂಕಿನ ಮಂಡ್ಲಿಕೊಪ್ಪ ಗ್ರಾಮದಲ್ಲಿ ಬಸ್ ನಿಲ್ದಾಣದ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ರಣಧೀರ ವೇದಿಕೆ ಹಾಗೂ ಗ್ರಾಮಸ್ಥರು ಸಲ್ಲಿಸಿದ ಮನವಿಗೆ ಶಿರಸಿ-ಸಿದ್ದಾಪುರ ಶಾಸಕರಾದ ಶ್ರೀ ಭೀಮಣ್ಣ ಟಿ. ನಾಯ್ಕ್ ಅವರು ಸ್ಥಳದಲ್ಲೇ ಸ್ಪಂದಿಸಿದ್ದು, ನೂತನ ಬಸ್ ನಿಲ್ದಾಣ ನಿರ್ಮಾಣಕ್ಕೆ ತಕ್ಷಣವೇ 3.5 ಲಕ್ಷ ರೂಪಾಯಿ ಅನುದಾನ ಮಂಜೂರು ಮಾಡಿದ್ದಾರೆ. ಸಮಸ್ಯೆಯ ಹಿನ್ನೆಲೆ: ಮಂಡ್ಲಿಕೊಪ್ಪ ಗ್ರಾಮದಲ್ಲಿದ್ದ ಹಳೆಯ ಬಸ್ ನಿಲ್ದಾಣವು ಕಳೆದ 3-4 ವರ್ಷಗಳ ಹಿಂದೆಯೇ ಶಿಥಿಲಗೊಂಡು ಬಿದ್ದಿತ್ತು. ಇದರಿಂದಾಗಿ ಗ್ರಾಮದ ಸುಮಾರು 30ರಿಂದ 40 ವಿದ್ಯಾರ್ಥಿಗಳು ದಿನನಿತ್ಯ ಶಾಲೆ-ಕಾಲೇಜುಗಳಿಗೆ ತೆರಳಲು ಹಾಗೂ ಗ್ರಾಮಸ್ಥರು ಕೆಲಸ…

News Desk

ಉತ್ತರ ಕನ್ನಡದಲ್ಲಿ ಬಿಸಿಲಿನ ತಾಪ ಏರಿಕೆಗೆ ಮುಂದಿನ 2 ದಿನ ಎಚ್ಚರಿಕೆ ವಹಿಸಲು ಸೂಚನೆ..

ಉತ್ತರ ಕನ್ನಡ : ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ (ಫೆ. 14 ಮತ್ತು 15) ಬಿಸಿಲಿನ ತಾಪಮಾನ ವಾಡಿಕೆಗಿಂತ ಹೆಚ್ಚಾಗಲಿದ್ದು, ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸುವಂತೆ ಉತ್ತರ ಕನ್ನಡ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ಹೊರಡಿಸಿದೆ. ಭಾರತೀಯ ಹವಾಮಾನ ಇಲಾಖೆಯ ಮಾಹಿತಿಯಂತೆ, ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶವು 37.8 ಡಿಗ್ರಿ ಸೆಲ್ಸಿಯಸ್ ವರೆಗೆ ತಲುಪುವ ಸಾಧ್ಯತೆಯಿದೆ. ಪ್ರಸ್ತುತ ಇರುವ ಉಷ್ಣತೆಗಿಂತ ಸುಮಾರು 3 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾಗಲಿದ್ದು, ಇದು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ…

News Desk

ಅಂಕೋಲಾ: ರಾತ್ರಿ ಗದ್ದೆಗೆ ತೆರಳಿದ್ದ ರೈತ “ವಾಸುದೇವ ಗೌಡ” ಬಾವಿಗೆ ಬಿದ್ದು ಸಾವು; ದಿಕ್ಕಿಲ್ಲದಂತಾದ ಬಡ ಕುಟುಂಬ..

ಅಂಕೋಲಾ: ಬೆಳೆದು ನಿಂತ ಶೇಂಗಾ ಪೈರಿಗೆ ನೀರುಣಿಸಲು ರಾತ್ರಿ ವೇಳೆ ಗದ್ದೆಗೆ ತೆರಳಿದ್ದ ರೈತ ವಾಸುದೇವ ಗೌಡ (42) ಬಾವಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪಿದ ಘಟನೆ ತಾಲೂಕಿನ ವಂದಿಗೆ ಗ್ರಾ.ಪಂ. ವ್ಯಾಪ್ತಿಯ ಬೋಳೆ ಹೊಸಗದ್ದೆಯಲ್ಲಿ ನಡೆದಿದೆ. ಘಟನೆ ಹಿನ್ನೆಲೆ: ಫೆ.11ರ ರಾತ್ರಿ 9 ಗಂಟೆ ಸುಮಾರಿಗೆ ವಾಸುದೇವ ಅವರು ಗದ್ದೆಗೆ ನೀರು ಹಾಯಿಸಲು ವಿದ್ಯುತ್ ಪಂಪ್‌ಸೆಟ್ ಚಾಲನೆ ಮಾಡಲು ತೆರಳಿದ್ದರು. ಈ ವೇಳೆ ಕತ್ತಲೆಯಲ್ಲಿ ಕಾಲು ಜಾರಿ ಅಥವಾ ವಿದ್ಯುತ್ ಅವಘಡದಿಂದ ಬಾವಿಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ರಾತ್ರಿ ಮನೆಗೆ ಬಾರದೇ ಇದ್ದಾಗ ಹುಡುಕಾಡಿದ…

News Desk

ಮಿರ್ಜಾನ ಕೋಟೆ ರಸ್ತೆಗೆ ಅಡ್ಡಲಾಗಿ ‘ಗೇಟ್’ ನಿರ್ಮಾಣ: ಸಂಚಾರಕ್ಕೆ ಅಡ್ಡಿ; ಗ್ರಾಮಸ್ಥರಿಂದ ಹೋರಾಟದ ಎಚ್ಚರಿಕೆ..

ಕುಮಟಾ: ತಾಲೂಕಿನ ಐತಿಹಾಸಿಕ ಮಿರ್ಜಾನ ಕೋಟೆ ಹಾಗೂ ಛತ್ರಕೂರ್ವೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪಿ.ಡಬ್ಲ್ಯೂ.ಡಿ ರಸ್ತೆಯಲ್ಲಿ, ಗ್ರಾಮ ಪಂಚಾಯತ್ ವತಿಯಿಂದ ‘ಗೇಟ್’ ಅಳವಡಿಸುತ್ತಿರುವುದನ್ನು ಖಂಡಿಸಿ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಈ ರಸ್ತೆ ಛತ್ರಕೂರ್ವೆ ಗ್ರಾಮದ ಜೀವನಾಡಿಯಾಗಿದೆ. ಇಲ್ಲಿ ಗೇಟ್ ಹಾಕಿದರೆ ವಿದ್ಯಾರ್ಥಿಗಳು, ಸಾರ್ವಜನಿಕರು ಹಾಗೂ ತುರ್ತು ವಾಹನಗಳ ಮುಕ್ತ ಸಂಚಾರಕ್ಕೆ ಅಡಚಣೆಯಾಗುತ್ತದೆ," ಎಂದು ಆರೋಪಿಸಿ ಗ್ರಾಮದ 50ಕ್ಕೂ ಹೆಚ್ಚು ಮಂದಿ ಪಿಡಿಒಗೆ ಮನವಿ ಸಲ್ಲಿಸಿದರು. ಗ್ರಾಮದ ಮುಖಂಡ ವಿನಾಯಕ ಪಟಗಾರ ಮಾತನಾಡಿ, "ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿ ಗೇಟ್ ಅಳವಡಿಸುವುದು ಸರಿಯಲ್ಲ, ಕೂಡಲೇ…

News Desk

ಕುಮಟಾದ ಪೆಟ್ರೋಲ್ ಬಂಕ್ ಕಳ್ಳತನ : ಹಣ ದೋಚಿದ್ದ ಇಬ್ಬರು ಆರೋಪಿಗಳು ಅಂದರ್..

ಕುಮಟಾ ತಾಲೂಕಿನ ಮಾಸೂರು ಕ್ರಾಸ್ ಬಳಿಯ ಪೆಟ್ರೋಲ್ ಬಂಕ್ ಒಂದರ ಕಚೇರಿಯ ಕಿಟಕಿ ಸರಳು ಕತ್ತರಿಸಿ, ನಗದು ದೋಚಿದ್ದ ಪ್ರಕರಣವನ್ನು ಭೇದಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕುಮಟಾ ತಾಲೂಕಿನ ವನ್ನಳ್ಳಿ ಕಲ್ಗುಡ್ಡೆಯ ನಿವಾಸಿ ಅಸ್ಲಂ ತಂದೆ ಮಹಮ್ಮದ್ ಹನೀಫ ದಂಡು (18 ವರ್ಷ) ಎಂದು ಗುರುತಿಸಲಾಗಿದ್ದು, ಈತನೊಂದಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು (17 ವರ್ಷ) ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ಹಿನ್ನೆಲೆ: ದಿನಾಂಕ ಫೆಬ್ರವರಿ 1 ರ ರಾತ್ರಿ…

News Desk

ಅಲಗೇರಿ: ಶೋಭಾಯಾತ್ರೆ, ಧಾರ್ಮಿಕ ಚಿಂತನ; ಶ್ರೀ ಸಣ್ಣಮ್ಮ ದೇವಸ್ಥಾನದ ಆವರಣದಲ್ಲಿ ಜರುಗಿದ ಬ್ರಹತ್ ಹಿಂದೂ ಸಮ್ಮೇಳನ..

ಅಂಕೋಲಾ (ಅಲಗೇರಿ): ಸಿದ್ದಾಪುರದ ಶ್ರೀ ಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತಿ ಸ್ವಾಮೀಜಿಗಳ ದಿವ್ಯ ಸಾನ್ನಿಧ್ಯದಲ್ಲಿ ಭಾನುವಾರ (ಫೆ. 08) ಇಲ್ಲಿನ ಶ್ರೀ ಸಣ್ಣಮ್ಮ ದೇವಸ್ಥಾನದ ಆವರಣದಲ್ಲಿ ಬೃಹತ್ ಹಿಂದೂ ಸಮ್ಮೇಳನ ಜರುಗಿತು. ಸುಮಾರು 800ಕ್ಕೂ ಅಧಿಕ ಜನರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಸಭಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಅಲಗೇರಿಯ ಶ್ರೀ ಈಶ್ವರ ದೇವಸ್ಥಾನದಿಂದ ಸಭಾ ಸ್ಥಳವಾದ ಶ್ರೀ ಸಣ್ಣಮ್ಮ ದೇವಸ್ಥಾನದವರೆಗೆ ಶೋಭಾಯಾತ್ರೆ ಆಯೋಜಿಸಲಾಗಿತ್ತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಶೋಭಾಯಾತ್ರೆಯು ಕಾರ್ಯಕ್ರಮಕ್ಕೆ ಚಾಲನೆ ನೀಡಿತು. ಧರ್ಮ ಜಾಗೃತಿ ಮತ್ತು ಆಶೀರ್ವಚನ: ಸಮ್ಮೇಳನದ ಸಾನ್ನಿಧ್ಯ ವಹಿಸಿದ್ದ…

News Desk

ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರು ಇನ್ನಿಲ್ಲ..

ಮುಂಡಗೋಡ ಪೊಲೀಸ್ ಠಾಣೆಯ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯಲ್ಲಾಲಿಂಗ್ ಕುನ್ನೂರು (33) ಅವರು ಅನಾರೋಗ್ಯದಿಂದ ವಿಧಿವಶರಾಗಿದ್ದು, ದಕ್ಷ ಅಧಿಕಾರಿಯ ಅಕಾಲಿಕ ಅಗಲಿಕೆ ಪೊಲೀಸ್ ವಲಯ ಹಾಗೂ ಸಾರ್ವಜನಿಕರಲ್ಲಿ ತೀವ್ರ ಶೋಕ ತಂದಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯಲ್ಲಾಲಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸತತ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೇ, ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಜನಾನುರಾಗಿ ಅಧಿಕಾರಿ: ಯಲ್ಲಾಲಿಂಗ್ ಕುನ್ನೂರು ಅವರು ಮುಂಡಗೋಡ ಠಾಣೆಗೆ ಎರಡನೇ ಬಾರಿಗೆ ಪಿಎಸ್ಐ ಆಗಿ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು.…

News Desk

ಅಂಕೋಲಾ: ಅದ್ದೂರಿಯಾಗಿ ಜರುಗಿದ ‘ಕರಾವಳಿ ಕನ್ನಡ ಹಬ್ಬ-2026’; ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಲರವ..

ಅಂಕೋಲಾ: ಅಂಕೋಲಾ ಪಟ್ಟಣದ ಹೃದಯಭಾಗದಲ್ಲಿರುವ ಜೈಹಿಂದ್ ಮೈದಾನದಲ್ಲಿ ನಿನ್ನೆ ಫೆಬ್ರವರಿ 1ರಂದು ಕನ್ನಡದ ಕಂಪು ಹರಡಿತು. ಕರ್ನಾಟಕ ರಣಧೀರರ ವೇದಿಕೆ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ "ಕರಾವಳಿ ಕನ್ನಡ ಹಬ್ಬ-2026" ಕಾರ್ಯಕ್ರಮವು ಸಾಂಸ್ಕೃತಿಕ ವೈಭವ ಮತ್ತು ಜನಸ್ತೋಮದೊಂದಿಗೆ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಬೃಹತ್ ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ರಣಧೀರರ ವೇದಿಕೆಯ ಜಿಲ್ಲಾಧ್ಯಕ್ಷರಾದ ಸೂರಜ ಪಾಂಡುರಂಗ ನಾಯ್ಕ ಅವರು ವಹಿಸಿದ್ದರು. ಪರಿಸರ ಕಾಳಜಿಯ ವಿಶಿಷ್ಟ ಉದ್ಘಾಟನೆ: ಸಾಮಾನ್ಯವಾಗಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸುವುದು ವಾಡಿಕೆ. ಆದರೆ, ಈ ಬಾರಿ ಕರಾವಳಿಯ ಬದುಕಿನ…

News Desk

ಗಂಗಾವಳಿ ಸೇತುವೆಯ ಅವೈಜ್ಞಾನಿಕ ತಿರುವಿನಲ್ಲಿ ದಿಢೀರ್ ಎದುರಾಗುವ ಬ್ಯಾರಿಕೇಡ್; ತಿರುವಿನ ಎರಡೂ ತುದಿಯಲ್ಲಿ ಬ್ಯಾರಿಕೇಡ್ ಅಳವಡಿಕೆ ಅಗತ್ಯ..

ಅಂಕೋಲಾ: ಮಂಜುಗುಣಿಯಿಂದ ಗಂಗಾವಳಿ ಕಡೆಗೆ ಸಂಪರ್ಕಿಸುವ ಗಂಗಾವಳಿ ಸೇತುವೆಯ ಸಂಪರ್ಕವಿರುವ ರಸ್ತೆ ತಿರುವು ವಾಹನ ಸಂಚಾರಕ್ಕೆ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಮಂಜುಗುಣಿ ಕಡೆಯಿಂದ ಗಂಗಾವಳಿ ಕಡೆಗೆ ಸಾಗುವಾಗ, ಇಲ್ಲಿನ ಅವೈಜ್ಞಾನಿಕ ತಿರುವಿನಲ್ಲಿ ವಾಹನಗಳ ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚಿದೆ. ಪ್ರಸ್ತುತ ಈ ಜಾಗದಲ್ಲಿರುವ ಬ್ಯಾರಿಕೇಡ್ ಚಾಲಕರಿಗೆ ತೀರಾ ಹತ್ತಿರ ಬಂದಾಗಲಷ್ಟೇ ಗೋಚರಿಸುತ್ತಿದ್ದು, ಇಲ್ಲಿನ ಅವೈಜ್ಞಾನಿಕ ತಿರುವಿನಲ್ಲಿ ದಿಡೀರನೆ ಬ್ಯಾರಿಕೇಡ್ ಎದುರಾಗುವುದರಿಂದ ಚಾಲಕರು ಗಲಿಬಿಲಿಗೊಂಡು ವಾಹನ ನಿಯಂತ್ರಿಸಲು ಕಷ್ಟಪಡುವಂತಾಗಿದೆ. ರಸ್ತೆ ಮತ್ತು ತಿರುವಿನ ರಚನೆ ಈ ರೀತಿಯಾಗಿರುವುದರಿಂದ, ಬ್ಯಾರಿಕೇಡ್ ಕೂಡ ಕಾಣದಂತೆ ಇರುವುದು ಅಪಾಯವನ್ನು ಹೆಚ್ಚಿಸಿದೆ.…

News Desk
- Sponsored -
Ad imageAd image
Weather
24°C
Karnataka
scattered clouds
24° _ 24°
36%
Tue
24 °C
Wed
32 °C
Thu
32 °C
Fri
33 °C
Sat
32 °C

Follow US

Most Read

Discover Categories

ಅಂಕೋಲಾದಲ್ಲಿ ಫೆ.1ರಂದು ವಿಜೃಂಭಣೆಯ ‘ಕರಾವಳಿ ಕನ್ನಡ ಹಬ್ಬ’: ಕಲೆ, ಸಾಹಿತ್ಯ, ಸಂಗೀತದ ಸಂಗಮ..

ಅಂಕೋಲಾ: ಕನ್ನಡ ನಾಡು-ನುಡಿಯ ಕಂಪನ್ನು ಪಸರಿಸುವ ಮತ್ತು ಸ್ಥಳೀಯ ಕಲಾ ವೈಭವವನ್ನು ಅನಾವರಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ, ಕರ್ನಾಟಕ…

News Desk

ವಿಭೂತಿ ಜಲಪಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗ; ರಕ್ಷಣಾ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ..

ಅಂಕೋಲಾ: ತಾಲೂಕಿನ ಗಡಿಭಾಗದಲ್ಲಿರುವ ಪ್ರಸಿದ್ಧ ವಿಭೂತಿ ಜಲಪಾತದಲ್ಲಿ ಸೋಮವಾರ ಮೋಜಿಗೆಂದು ಬಂದಿದ್ದ ಪ್ರವಾಸಿಗನೊಬ್ಬರು ನೀರಿನ ಆಳಕ್ಕೆ…

News Desk

ಜನಪರ ಆಡಳಿತಕ್ಕೆ ಬ್ರೇಕ್: ಅಂಕೋಲಾ ತಹಶೀಲ್ದಾರ್ ಡಾ. ಚಿಕ್ಕಪ್ಪ ನಾಯಕ ವರ್ಗಾವಣೆ..

ಅಂಕೋಲಾ (ಜ24): ವೃತ್ತಿಯಿಂದ ವೈದ್ಯರಾಗಿದ್ದು, ನಂತರ ಕೆಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದು ಆಡಳಿತ…

News Desk

ಅಂಕೋಲಾದಲ್ಲಿ ಜನವರಿ 23ರಂದು ಮೂರನೇ ವರ್ಷದ ಹಿಂದೂ ಉತ್ಸವ— ಪೋಸ್ಟರ್ ಅನಾವರಣ; ಹಿಂದೂ ಒಗ್ಗಟ್ಟಿನ ಕರೆ..

ಅಂಕೋಲಾ ತಾಲೂಕಿನಲ್ಲಿ ಜನವರಿ 23ರಂದು ನಡೆಯಲಿರುವ ಮೂರನೇ ವರ್ಷದ ಹಿಂದೂ ಉತ್ಸವದ ಪೋಸ್ಟರ್ ಅನ್ನು ದಿನಾಂಕ…

News Desk

ಹಟ್ಟಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಇ-ಕಲಿಕಾ’ ಕೊಠಡಿ ಉದ್ಘಾಟನೆ..

ಅಂಕೋಲಾ :ತಾಲೂಕಿನ ಹಟ್ಟಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ…

News Desk

ಗ್ರಾಮದ ಹೆಸರು ಕೂಡ ಸರಿಯಾಗಿ ಬರೆಯಲಾಗದ ಅಂಕೋಲಾ ಪುರಸಭೆ – “ಬೇಲುಕೇರಿ ರಸ್ತೆ” ವಿವಾದ: ಇದು ಟೈಪಿಂಗ್ ತಪ್ಪೇ? ಇಲ್ಲ ಆಡಳಿತಾತ್ಮಕ ನಿರ್ಲಕ್ಷ್ಯವೇ..?

ಅಂಕೋಲಾ: ಅಂಕೋಲಾ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ವಾರ್ಡ್‌ಗಳ ರಸ್ತೆ ಹಾಗೂ ಪ್ರದೇಶಗಳ ಗುರುತಿಗಾಗಿ ಸಾರ್ವಜನಿಕ ಹಣ…

News Desk

ಬೆಲೆಕೇರಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ: ಅಶಾಂತಿ ಸೃಷ್ಟಿಸಿದ ವ್ಯಕ್ತಿ ವಿರುದ್ಧ ಗಡಿಪಾರು ಕ್ರಮಕ್ಕೆ ಎಸ್‌ಡಿಎಂಸಿ ಅಧ್ಯಕ್ಷರಿಂದ ತಹಶೀಲ್ದಾರರಿಗೆ ಮನವಿ..

ಅಂಕೋಲಾ ತಾಲೂಕಿನ ಬೇಲೆಕೇರಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆಗಳು ನಡೆಯುತ್ತಿದ್ದು, ಗ್ರಾಮಸ್ಥರಲ್ಲಿ ಭಯ…

News Desk

ಬದುಕು ನೀಡುವ ಕಸುಬೇ ಕೊನೆಗೆ ಮುಳುವಾಯಿತು ; ವಿದ್ಯುತ್ ಶಾಕ್‌ನಿಂದ ತೆಂಗಿನ ಮರವೇರಿದ “ರಾಜು ಗೌಡ” ಸಾವು..

ಅಂಕೋಲಾ: ಮೂಲತಃ ಸೆಂಟ್ರಿಂಗ್ ಕೆಲಸಗಾರರಾಗಿದ್ದ ಇವರು, ಈ ಕೆಲಸವಿಲ್ಲದ ಸಮಯದಲ್ಲಿ ಜೀವನ ನಿರ್ವಹಣೆಗಾಗಿ ತೆಂಗಿನ ಮರ…

News Desk