Hot News
- Quick Links
- ಸ್ಥಳೀಯ ಸುದ್ದಿ
ಹೊನ್ನಾವರ: ಕರ್ತವ್ಯನಿಷ್ಠೆ ಹಾಗೂ ಜನಪರ ಕಾಳಜಿಯಿಂದ ಕೆಲಸ ಮಾಡುವ ಅಧಿಕಾರಿಗಳು ಸದಾ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎನ್ನುವುದಕ್ಕೆ ತಾಲೂಕಿನ ಇಡುಗುಂಜಿ ಗ್ರಾಮ ಪಂಚಾಯಿತಿಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭವೊಂದು ಸಾಕ್ಷಿಯಾಯಿತು. ಪ್ರಭಾರಿ ಪಿಡಿಒ ಆಗಿ ಸೇವೆ ಸಲ್ಲಿಸಿ, ತಮ್ಮ ವಿಶಿಷ್ಟ ಕಾರ್ಯವೈಖರಿಯಿಂದಲೇ ಇಡುಗುಂಜಿ ಗ್ರಾಮಸ್ಥರ ಮನೆಮಾತಾಗಿದ್ದ ಕರ್ವ ಪಂಚಾಯತ್ನ ಪಿಡಿಒ ಗಿರೀಶ್ ನಾಯಕ್ ಅವರನ್ನು ಗ್ರಾಮದ ಸಮಸ್ತ ನಾಗರಿಕರು ಒಗ್ಗೂಡಿ, 'ನಾಗರಿಕ ಸನ್ಮಾನ' ಮಾಡುವ ಮೂಲಕ ಅತ್ಯಂತ ಭಾವುಕರಾಗಿ ಬೀಳ್ಕೊಟ್ಟರು. ಇಡುಗುಂಜಿ ಗ್ರಾಮ ಪಂಚಾಯಿತಿಗೆ ನೂತನ ಪಿಡಿಒ ಆಗಮಿಸಿದ ಹಿನ್ನೆಲೆಯಲ್ಲಿ ಗಿರೀಶ್ ನಾಯಕ್ ಅವರು…
ಕುಮಟಾ: ನಗರದ ಪ್ರತಿಷ್ಠಿತ ವರದಾ ಹೋಟೆಲ್ನಲ್ಲಿ ಮದ್ಯ ನೀಡಲು ನಿರಾಕರಿಸಿದ ಕಾರಣಕ್ಕಾಗಿ ಗ್ರಾಹಕನೋರ್ವ ಹೋಟೆಲ್ ಸಿಬ್ಬಂದಿಯ ಮೇಲೆ ಹಲ್ಲೆಗೆ ಯತ್ನಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಗಂಭೀರ ಘಟನೆಯೊಂದು ಸೆಪ್ಟೆಂಬರ್ 04, 2026 ರಂದು ಜರುಗಿದೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಥಮ ವರ್ತಮಾನ ವರದಿ (ಎಫ್.ಐ.ಆರ್ ಸಂಖ್ಯೆ: 178/2026) ದಾಖಲಾಗಿದೆ. ಆರೋಪಿತನ ವಿರುದ್ಧ ನೂತನ 'ಭಾರತೀಯ ನ್ಯಾಯ ಸಂಹಿತೆ-2023' ರ ಸೆಕ್ಷನ್ 352, 351(2), ಹಾಗೂ 118(1) ರ ಅಡಿಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ. ಘಟನೆಯ ವಿವರಗಳಿಗೆ ಹೋಗುವುದಾದರೆ, ಶುಕ್ರವಾರ ಸಂಜೆ 16:15…
ಬೆಂಗಳೂರು (ಸೆ 5): ಪೊಲೀಸ್ ವ್ಯವಸ್ಥೆಯ ವಿರುದ್ಧದ ಸಾರ್ವಜನಿಕರ ದೂರುಗಳನ್ನು ಆಲಿಸುವ ಮಹತ್ವದ ವೇದಿಕೆಯಾಗಿರುವ 'ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ'ವು ಕಳೆದ 1 ತಿಂಗಳಿನಿಂದ ಅಧ್ಯಕ್ಷರಿಲ್ಲದೆ ಕಾರ್ಯನಿರ್ವಹಿಸುತ್ತಿದ್ದು, ತ್ವರಿತಗತಿಯಲ್ಲಿ ನೂತನ ಅಧ್ಯಕ್ಷರನ್ನು ನೇಮಿಸುವಂತೆ ರಾಜ್ಯ ಪೊಲೀಸ್ ದೂರು ಪ್ರಾಧಿಕಾರದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಅವರು ಒಳಾಡಳಿತ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು, ಶೀಘ್ರ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜಸ್ಟಿಸ್…
ಕಾರವಾರ: ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ್ದ ತಾಲೂಕಿನ ಕಡವಾಡ ಗ್ರಾಮದ ಲ್ಯಾನ್ಸ್ ನಾಯಕ, ಹುತಾತ್ಮ ವಿನೋದ ನಾಯ್ಕ ಅವರ 21ನೇ ಪುಣ್ಯತಿಥಿಯನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಇದೇ ವೇಳೆ ಅವರ ಸ್ಮಾರಕಕ್ಕೆ ಹೊಸದಾಗಿ ನಿರ್ಮಿಸಲಾದ ಕಾಂಪೌಂಡ್ ಗೋಡೆಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಉದ್ಘಾಟಿಸಿ, ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ರೂಪಾಲಿ ನಾಯ್ಕ, "ಭಾರತ ಮಾತೆಗಾಗಿ ತಮ್ಮ ಏಕೈಕ ಮಗನನ್ನೇ ಬಲಿದಾನ ಮಾಡಿದ ವಿನೋದ್ ನಾಯ್ಕ ಅವರ ತಂದೆ ಮಹಾದೇವ ನಾಯ್ಕ ಅವರಿಗೆ ನಮಸ್ಕರಿಸುತ್ತೇನೆ. ಆ ಯೋಧನ…
ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸ್ವತಃ ನೀರಿಗೆ ಇಳಿದು ಬಾಲಕನ ಮೃತದೇಹವನ್ನು ಹೊರತೆಗೆದು ಮಾನವೀಯತೆ ಮೆರೆದ ಕುಮಟಾ ಪೊಲೀಸ್ ಠಾಣೆಯ ಪಿಎಸ್ಐ ಖಾದರ್ ಭಾಷಾ ಅವರ ಧೈರ್ಯ, ಕರ್ತವ್ಯನಿಷ್ಠೆ ಹಾಗೂ ಸೇವಾ ಮನೋಭಾವವನ್ನು ಯುವ ಕಾಂಗ್ರೆಸ್ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸಂಕಷ್ಟದ ಸಂದರ್ಭದಲ್ಲಿ ಕ್ಷಣವೂ ತಡಮಾಡದೆ ನೀರಿಗೆ ಇಳಿದು ಮೃತದೇಹವನ್ನು ಹೊರತೆಗೆದ ಪಿಎಸ್ಐ ಖಾದರ್ ಭಾಷಾ ಅವರ ಕಾರ್ಯ ಅತ್ಯಂತ ಶ್ಲಾಘನೀಯವಾಗಿದ್ದು, ಪೊಲೀಸ್ ಇಲಾಖೆಯ ಕರ್ತವ್ಯಪ್ರಜ್ಞೆ ಹಾಗೂ ಮಾನವೀಯತೆಗೆ ಉತ್ತಮ ನಿದರ್ಶನವಾಗಿದೆ. ಇಂತಹ ಧೈರ್ಯಶಾಲಿ ಹಾಗೂ ಮಾನವೀಯ ಕಾರ್ಯವನ್ನು ಗುರುತಿಸಿ…
ಅಂಕೋಲಾ: ತಾಲೂಕಿನ ಮಾದನಗೇರಿ ಕ್ರಾಸ್ ಬಳಿ ಹೆದ್ದಾರಿಯಲ್ಲಿ ಎರಡು ಟ್ರಕ್ಗಳ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು, ಭಾರಿ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಂಕೋಲಾ ಕಡೆಯಿಂದ ಕುಮಟಾ ದಿಕ್ಕಿನತ್ತ ಚಲಿಸುತ್ತಿದ್ದ ಟ್ರಕ್ ಒಂದು(NL01AG5494) ಅದೇ ಸಮಯಕ್ಕೆ ಹೆದ್ದಾರಿಯಿಂದ ಅಡ್ಡಲಾಗಿ ಹಿಲ್ಲೂರು ರಸ್ತೆಯತ್ತ ತಿರುವು ಪಡೆಯುತ್ತಿದ್ದ ಮತ್ತೊಂದು ಟ್ರಕ್ನ( KL 21 AA8455) ಹಿಂಭಾಗಕ್ಕೆ ರಭಸವಾಗಿ ಗುದ್ದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ವಾಹನಗಳ ಮುಂಭಾಗ ಹಾಗೂ ಹಿಂಭಾಗಕ್ಕೆ ಹಾನಿಯಾಗಿದೆ. ಅಪಘಾತದ ತಕ್ಷಣವೇ ಸ್ಥಳದಲ್ಲಿ ಭಾರೀ ಸದ್ದು ಕೇಳಿಬಂದಿದ್ದು,…
ಅಂಕೋಲಾ : ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ 'ಓ.ಸಿ-ಮಟಕಾ' ಜೂಗಾರಾಟದ ಅಡ್ಡೆಯ ಮೇಲೆ ಅಂಕೋಲಾ ಠಾಣೆಯ ಪೊಲೀಸರು ದಿಢೀರ್ ದಾಳಿ ನಡೆಸಿ, ಕಾನೂನು ಕ್ರಮ ಜರುಗಿಸಿದ ಘಟನೆ ವರದಿಯಾಗಿದೆ. ಈ ಸಂಬಂಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 173ರ ಅಡಿಯಲ್ಲಿ ಎಫ್ಐಆರ್ (ಎಫ್.ಐ.ಆರ್ ಸಂಖ್ಯೆ: 165/2026) ದಾಖಲಾಗಿದ್ದು, ಆರೋಪಿಯ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ 1963ರ ಸೆಕ್ಷನ್ 78(3) ರ ಅನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಂಕೋಲಾ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಸುನೀಲ್ ಹುಲ್ಲೋಳ್ಳಿ ಅವರು ನೀಡಿದ ದೂರಿನ ಆಧಾರದ ಮೇಲೆ…
ಅಂಕೋಲಾ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಭಾರಿ ವಾಹನಗಳ ನಡುವೆ ಉಂಟಾದ ಸಣ್ಣ ತಿಕ್ಕಾಟ, ಹೊರ ರಾಜ್ಯದ ಇಬ್ಬರು ಟ್ರಕ್ ಚಾಲಕರ ನಡುವಿನ ಭೀಕರ ರಕ್ತಸಿಕ್ತ ಹೊಡೆದಾಟದಲ್ಲಿ ಅಂತ್ಯವಾದ ಘಟನೆ ನಡೆದಿದೆ. ದೂರದ ಊರುಗಳಿಂದ ಸರಕು ಸಾಗಣೆ ಮಾಡಿಕೊಂಡು ಬರುತ್ತಿದ್ದ ಈ ಹೊರ ರಾಜ್ಯದ ಟ್ರಕ್ಗಳು ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ಆಕಸ್ಮಿಕವಾಗಿ ಪರಸ್ಪರ ಸ್ವಲ್ಪ ಉಜ್ಜಿಕೊಂಡಿವೆ. ಕೇವಲ ವಾಹನಗಳಿಗೆ ಸಣ್ಣ ಗೀರು ಬಿದ್ದ ಈ ಕ್ಷುಲ್ಲಕ ಕಾರಣಕ್ಕೆ ತಾಳ್ಮೆ ಕಳೆದುಕೊಂಡ ಇಬ್ಬರೂ ಚಾಲಕರು, ನಡುರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಿ ಕೆಳಗಿಳಿದಿದ್ದಾರೆ. ಆರಂಭದಲ್ಲಿ ಪರಸ್ಪರ ಬೈಗುಳಗಳೊಂದಿಗೆ ಶುರುವಾದ…
ಕಾರವಾರ ತಾಲ್ಲೂಕಿನ ಶಿರವಾಡ ಕೈಗಾರಿಕಾ ಪ್ರದೇಶದಲ್ಲಿರುವ ಪ್ರತಿಷ್ಠಿತ ಆಯುರ್ವೇದ ಔಷಧಿ ತಯಾರಿಕಾ ಕಂಪೆನಿಯಾದ ರೆವಿಂಟೊ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ನಲ್ಲಿ 80 ನೇ ಸ್ವಾತಂತ್ರ್ಯ ದಿನಾಚರಣೆ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕಂಪೆನಿಯ ಬಿಜಿನೆಸ್ ಡೆವಲಪ್ಮೆಂಟ್ ಅಧಿಕಾರಿ ಸುಮಲತಾ ಶೇಟಿಗಾರ ಅವರು ಧ್ವಜಾರೋಹಣವನ್ನು ನೆರವೇರಿಸಿ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆ ಶುಭ ಕೋರಿ ಈ ದಿನದ ಮಹತ್ವ ಬಗ್ಗೆ ಮಾತನಾಡಿದರು. ನಂತರ ಈ ಸಂಸ್ಥೆಯ ಮುಖ್ಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ: ಜಿತೇಂದ್ರ ಶೆಟ್ಟಿ ಅವರು ಶುಭಾಶಯಗಳು ಕೋರಿ ಮಾತನಾಡಿದರು. ಡೈರೆಕ್ಟರ್ ಪ್ರಖ್ಯಾತ ಶೆಟ್ಟಿ ಅವರು 80…
ಕರ್ನಾಟಕ ಸರ್ಕಾರವು ಇಂದು (14.08.2026) ಹೊರಡಿಸಿದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಅಧಿಕೃತ ಅಧಿಸೂಚನೆಯಲ್ಲಿ, ಕರಾವಳಿ ಜಿಲ್ಲೆಯಾದ ಉತ್ತರ ಕನ್ನಡದ ಜವಾಬ್ದಾರಿಯನ್ನು ಮಾನ್ಯ ಸಹಕಾರ ಸಚಿವರಾದ ಶ್ರೀ ಲಕ್ಷ್ಮಣ ಸಂಗಪ್ಪ ಸವದಿ ಅವರಿಗೆ ವಹಿಸಲಾಗಿದೆ. ಮಾನ್ಯ ಮುಖ್ಯಮಂತ್ರಿಯವರ ಅನುಮೋದನೆಯ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ರಾಜ್ಯದ ಒಟ್ಟು 31 ಜಿಲ್ಲೆಗಳಿಗೆ ನೂತನ ಉಸ್ತುವಾರಿ ಸಚಿವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ. ಈ ಪಟ್ಟಿಯ ಅನ್ವಯ, ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಮತ್ತು ಕ್ರೀಡಾ ಸಚಿವರಾದ ಡಾ. ಜಿ. ಪರಮೇಶ್ವರ ಅವರಿಗೆ…
ವರದಿ : ಕಿರಣ ಗಾಂವಕರ ಉತ್ತರ ಕನ್ನಡ : ನ್ಯಾಯ ಎಲ್ಲಿದೇ.. ಎಲ್ಲಿದ್ದೀಯೋ ನ್ಯಾಯ. ಬಡವನು…
ಕುಮಟಾ ತಾಲೂಕಿನ ಅಘನಾಶಿನಿಯಲ್ಲಿ ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ಅಕ್ರಮ ಪ್ರವೇಶ, ಅವಾಚ್ಯ ಶಬ್ದಗಳಿಂದ ನಿಂದನೆ ಹಾಗೂ…
ಕಾರವಾರ(ಉ.ಕ): ಗ್ರಾಮೀಣಾಭಿವೃದ್ಧಿಯ ಮಹತ್ವಾಕಾಂಕ್ಷೆಯ 'ವಿಬಿ-ಜಿ-ರಾಮ್-ಜಿ' (VB-G-RAM-G) ಯೋಜನೆಯ ಅನುಷ್ಠಾನದ ಹೆಸರಿನಲ್ಲಿ ಅಧಿಕಾರಿಗಳ ಮೇಲೆ ಮಿತಿಮೀರಿದ ಒತ್ತಡ…
ದಶಕಗಳಿಂದ ಬಾರಿ ಚರ್ಚೆಯಲ್ಲಿದ್ದ ಆರ್ಥಿಕತೆಯ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ 'ಹುಬ್ಬಳ್ಳಿ-ಅಂಕೋಲಾ' ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರವು…
ಬರ್ಗಿ (ಕುಮಟಾ): ಕುಮಟಾ ತಾಲೂಕಿನ ಬರ್ಗಿ ಬಳಿಯ ರಾಷ್ಟ್ರೀಯ ಹೆದ್ದಾರಿ 66 (NH-66) ಮತ್ತೊಂದು ಭೀಕರ…
ಅಂಕೋಲಾ ತಾಲೂಕಿನಲ್ಲಿ ಏಕಮುಖ ಪ್ರೇಮಿಯೊಬ್ಬನು ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ನಡುರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ…
ಅಂಕೋಲಾ: ಸಾರ್ವಜನಿಕರ ಹಿತದೃಷ್ಟಿಯಿಂದ ಅಂಕೋಲಾದ ವಕೀಲರಾದ ಶ್ರೀ ಉಮೇಶ ನಾಯ್ಕ ಅವರು ಸಲ್ಲಿಸಿದ್ದ ಜವಾಬ್ದಾರಿಯುತ ಮನವಿಗೆ…
ಅಂಕೋಲಾ: ತಾಲೂಕಿನ ಹಿಚ್ಕಡ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಾಳೆಕಾಯಿ ತುಂಬಿದ…
ಕುಮಟಾ ತಾಲೂಕಿನ ಮಿರ್ಜಾನ ಬಳಿಯ ತಾರಿಬಾಗಿಲು ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣ ಪಣಕ್ಕಿಟ್ಟು…
Confirmed
65.1M
Death
6.6M
Lorem ipsum dolor sit amet, consectetur adipisicing elit, sed do eiusmod tempor incididunt ut labore et dolore magna aliqua.
ವಿಕಾಸ ವಾಹಿನಿಯಲ್ಲಿ ಸುದ್ದಿ ಮಾಡಿದಂತೆ ಹಳ್ಳದ ಅಕ್ಕಪಕ್ಕ ಸುರಿದಿರುವ ಕಸವನ್ನು ಸಂಬಂಧಪಟ್ಟವರು ವಿಲೇವಾರಿ ಮಾಡಲಾಗಿದೆಯೋ ಅಥವಾ ಇಲ್ಲ ಎಂದು ಸ್ಥಳ ಪರಿಶೀಲನೆಗೆ ಹೊರಟಾಗ ಅಚ್ಚರಿ ಕಾದಿತ್ತು…. ಲ್ಯಾಂಡ್ ಆರ್ಮಿ ಇಂದ ಲಕ್ಷಾಂತರ ಪ್ರವೇಶದಲ್ಲಿ ನಿರ್ಮಿಸಿರುವ ಕಾಂಕ್ರೀಟ ರಸ್ತೆಯು ಕೆಂಪು ಮಣ್ಣಿನಿಂದ ಮುಚ್ಚಿ…
Sign in to your account