Hot News
- Quick Links
- ಸ್ಥಳೀಯ ಸುದ್ದಿ
ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನದ ಸರ ಸುಲಿಗೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ 20-07-2026 ರಂದು ರಾತ್ರಿ ರಾಷ್ಟ್ರೀಯ ಹೆದ್ದಾರಿ-66ರ ದೊಡ್ಡ ಬಲಸೆ ಕ್ರಾಸ್ ಬಳಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ್ದ ಇಬ್ಬರು ಅಪರಿಚಿತರು, ಅಂದಾಜು 22 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ಅಡಿ (ಗು.ನಂ: 85/2026) ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಾದ ಕೂಡಲೇ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಯಿತು.…
ಅಂಕೋಲಾ ತಾಲೂಕಿನ ಕನಸೆಗದ್ದೆ ನಿವಾಸಿ ಹಾಗೂ ಸಕ್ರಿಯ ಸಮಾಜ ಸೇವಾ ಕಾರ್ಯಕರ್ತರಾದ ಶ್ರೀ ವಿಜಯ್ ಕುಮಾರ್ ಯಶವಂತ ನಾಯ್ಕ ಅವರ ನಿಸ್ವಾರ್ಥ ಸೇವೆಗೆ ಮಹತ್ವದ ಗೌರವ ಒಲಿದುಬಂದಿದೆ. ಅಫಜಲಪುರದಲ್ಲಿ 19/07/2026 ರಂದು ನಡೆದ 'ವಿಶ್ವದರ್ಶನ' ಕನ್ನಡ ದಿನಪತ್ರಿಕೆಯ 7ನೇ ರಾಜ್ಯ ಮಟ್ಟದ ಭಾವೈಕ್ಯತಾ ಸಮ್ಮೇಳನದಲ್ಲಿ ಇವರಿಗೆ ಪ್ರತಿಷ್ಠಿತ "ಶ್ರೇಷ್ಠ ಜೀವ ಮಾನವ" ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಮಾಜ ಸೇವಾ ಕ್ಷೇತ್ರದಲ್ಲಿ ಅವರು ಮಾಡಿರುವ ಅನನ್ಯ ಸಾಧನೆ, ಸಮಾಜಮುಖಿ ಚಿಂತನೆ ಮತ್ತು ಸಮರ್ಪಣಾ ಭಾವವನ್ನು ಗುರುತಿಸಿ ವಿಶ್ವದರ್ಶನ ದಿನಪತ್ರಿಕೆ ವತಿಯಿಂದ ಪತ್ರಿಕಾ ಸಂಪಾದಕರಾದ ಡಾ.ಎಸ್…
ಹೊನ್ನಾವರ: ತಾಲೂಕಿನ ಕಾಸರಕೋಡು ಟೊಂಕದ ಬಂದರಿನಲ್ಲಿ ಲಂಗರು ಹಾಕಿದ್ದ ಪರ್ಸಿನ್ ಬೋಟ್ವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಬಹುಪಾಲು ಸುಟ್ಟು ಕರಕಲಾದ ಘಟನೆ ವರದಿಯಾಗಿದೆ. ಈ ದುರ್ಘಟನೆಯಲ್ಲಿ ಅಗ್ನಿಗಾಹುತಿಯಾದ ಬೋಟ್ ಆಯುಬ್ ಸಾಬ್ ಎಂಬುವವರಿಗೆ ಸೇರಿದ್ದಾಗಿದೆ. ಬಂದರಿನಲ್ಲಿ ಬೋಟ್ ಅನ್ನು ನಿಲ್ಲಿಸಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ವ್ಯಾಪಿಸಿದ ಬೆಂಕಿಯನ್ನು ಗಮನಿಸಿದ ಸ್ಥಳೀಯರು ಹಾಗೂ ಇತರ ಮೀನುಗಾರರು ತಕ್ಷಣವೇ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ. ಆದಾಗ್ಯೂ, ಬೆಂಕಿಯ ತೀವ್ರತೆ ಹೆಚ್ಚಿದ್ದ ಕಾರಣ ಬೋಟ್ನಲ್ಲಿದ್ದ ಬೆಲೆಬಾಳುವ ಮೀನುಗಾರಿಕಾ ಬಲೆಗಳು, ಯಂತ್ರೋಪಕರಣಗಳು ಹಾಗೂ…
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿದೇವರವಾಡಾ ಶೇಡಗೇರಿಯಲ್ಲಿ ಜುಲೈ 19, 2026 ರಂದು ಭಾನುವಾರ ಬೆಳಿಗ್ಗೆ 07:45 ರ ಸುಮಾರಿಗೆ ಒಂದು ವಿಚಿತ್ರ ಹಾಗೂ ಆತಂಕಕಾರಿ ಘಟನೆ ನಡೆದಿದೆ. 69 ವರ್ಷದ ವೃದ್ಧ ಹಾಗೂ ವೃತ್ತಿಯಲ್ಲಿ ಚಾಲಕರಾಗಿರುವ ಮತೇಶ್ ಡಿಯೋಗ್ ಲೂಯಿಸ್ ಎಂಬುವವರು ತಮ್ಮ ಮನೆಯಿಂದ ಚರ್ಚ್ಗೆ ಹೊರಟಿದ್ದಾಗ ಈ ಅಹಿತಕರ ಘಟನೆ ಸಂಭವಿಸಿದೆ. ಮತೇಶ್ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ ಮನೆಯ ಮುಂದುಗಡೆ ಯಾವುದೋ ಒಂದು ಬೆಕ್ಕು ಮಲವಿಸರ್ಜನೆ ಮಾಡುವುದನ್ನು ಕಂಡು ಅಸಹ್ಯಗೊಂಡು ಉಗುಳಿದ್ದಾರೆ. ಆದರೆ, ಇದನ್ನು ಸಂಪೂರ್ಣವಾಗಿ ತಪ್ಪಾಗಿ…
ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಅಧಿಕಾರಿಗಳು ಒಂದೇ ಸ್ಥಳದಲ್ಲಿ ದೀರ್ಘಕಾಲದಿಂದ ಮುಂದುವರಿದಿರುವುದರಿಂದ ಹಾಗೂ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು, ಇಲಾಖೆಯ ಘನತೆ ಕಾಪಾಡಲು, ವಸ್ತುನಿಷ್ಠತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯನ್ನು ಮರುಸ್ಥಾಪಿಸುವ ದಿಟ್ಟ ಹೆಜ್ಜೆಯಾಗಿ ದಿನಾಂಕ 20-07-2026 ರಂದು ಕಚೇರಿ ಆದೇಶದ ಮೂಲಕ ಮಹತ್ವದ ವರ್ಗಾವಣೆಗಳನ್ನು ಮಾಡಿದೆ. ಸರ್ಕಾರದ ಈ ಆದೇಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ಗಣಿ ಇಲಾಖೆಗೂ ಮೇಜರ್ ಸರ್ಜರಿ ಮಾಡಲಾಗಿದ್ದು, ಅಕ್ರಮಗಳಿಗೆ ಕಡಿವಾಣ ಹಾಕುವ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ…
ಹೊನ್ನಾವರ ತಾಲೂಕಿನ ಕರ್ವ ಗ್ರಾಮ ಪಂಚಾಯಿತಿಯಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಮೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದರ ಸವಿನೆನಪಿಗಾಗಿ ಗೃಹಲಕ್ಷ್ಮಿ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಅತಿಥಿಗಳು ಮತ್ತು ಫಲಾನುಭವಿಗಳು ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಸಬಲೀಕರಣ, ಕುಟುಂಬದ ಆರ್ಥಿಕ ಸ್ಥಿರತೆ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಉಂಟಾಗಿರುವ ಸಕಾರಾತ್ಮಕ ಪರಿಣಾಮಗಳ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು. ಪಂಚಾಯಿತಿ…
ಅಂಕೋಲಾ ತಾಲೂಕಿನ ಪ್ರಸಿದ್ಧ ಬೆಳಂಬಾರ ಕಡಲ ತೀರದಲ್ಲಿ ಶನಿವಾರ ಬೃಹತ್ ಗಾತ್ರದ ಡಾಲ್ಫಿನ್ ವೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಮುದ್ರ ತೀರದತ್ತ ತೆರಳಿದಾಗ ಸ್ಥಳೀಯ ನಿವಾಸಿ ನಂದನ ಖಾರ್ವಿ ಹಾಗೂ ಸ್ಥಳೀಯ ಮೀನುಗಾರರು ಈ ದೈತ್ಯ ಜಲಚರವನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ಸುತ್ತಮುತ್ತಲಿನ ಊರಿನವರಿಗೆ ಮಾಹಿತಿಯನ್ನು ಮುಟ್ಟಿಸಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಕಡಲ ತೀರದಲ್ಲಿ ಸ್ಥಳೀಯರು ಜಮಾಯಿಸಿ ಅಂದಾಜು 8 ಅಡಿಗೂ ಹೆಚ್ಚು ಉದ್ದವಿದ್ದ ಅಪರೂಪದ ಡಾಲ್ಫಿನ್ನ ಕರುಣಾಜನಕ ಅಂತ್ಯವನ್ನು ಕಂಡು ವಿಷಾದ ವ್ಯಕ್ತಪಡಿಸಿದ್ದಾರೆ. ಡಾಲ್ಫಿನ್ ಸಾವಿಗೆ ನಿಖರವಾದ ಕಾರಣಗಳು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ಕಳೆದ…
ಕುಮಟಾ: ಸಾರ್ವಜನಿಕ ಸ್ಥಳದಲ್ಲಿ ದಾರಿಹೋಕರಿಗೆ ಹಣದ ಆಮಿಷವೊಡ್ಡಿ ಅಕ್ರಮವಾಗಿ ನಡೆಯುತ್ತಿದ್ದ ಓ.ಸಿ ಮಟಕಾ ಜುಗಾರಿ ಅಡ್ಡೆಯೊಂದರ ಮೇಲೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳ ತಂಡವು, ಓರ್ವ ಆರೋಪಿಯನ್ನು ವಶಕ್ಕೆ ಪಡೆದು ನಗದು ಹಾಗೂ ಜುಗರಾಟಕ್ಕೆ ಬಳಸುತ್ತಿದ್ದ ಪರಿಕರಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ. ಹೊಸ ಹೇರವಟ್ಟಾ ರೈಲ್ವೆ ಸೇತುವೆಯೊಂದರ ಸಮೀಪ ಜುಲೈ 15, 2026 ರಂದು ಬುಧವಾರ ಸಂಜೆ 7:50 ರ ಸುಮಾರಿಗೆ ಈ ದಿಢೀರ್ ದಾಳಿ ನಡೆದಿದ್ದು, ಸಾರ್ವಜನಿಕವಾಗಿ ರಾಜಾರೋಷವಾಗಿ ನಡೆಯುತ್ತಿದ್ದ ಕಾನೂನುಬಾಹಿರ ಜೂಜಾಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ವೃತ್ತಿಯಲ್ಲಿ…
ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ರಾಜ್ಯಾದ್ಯಂತ ಒಟ್ಟು 40 ವಲಯ ಅರಣ್ಯಾಧಿಕಾರಿಗಳನ್ನು (ಆರ್ಎಫ್ಒ) ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 15, 2026ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಈ ಕಛೇರಿ ಆದೇಶವನ್ನು ಹೊರಡಿಸಿದ್ದು, ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅದಲು-ಬದಲು ಒಟ್ಟು 40 ಅಧಿಕಾರಿಗಳ ವರ್ಗಾವಣೆ ಪಟ್ಟಿಯಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಯಾದ ಉತ್ತರ ಕನ್ನಡದ ಪಾಲು…
ಅಂಕೋಲಾ: ತಾಲೂಕಿನ ಹೊಸಕಂಬಿ ವಲಯದ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿಗಾಗಿ ಅರಣ್ಯ ಇಲಾಖೆ ಅಳವಡಿಸಿದ್ದ ಬೆಲೆಬಾಳುವ ಕ್ಯಾಮೆರಾಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಅಂಕೋಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವಾಗಿದ್ದ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂಕೋಲಾ ತಾಲೂಕಿನ ಹಿಲ್ಲೂರು ಸಮೀಪದ ಕೋಳಗಿ ನಿವಾಸಿ, ಕೂಲಿ ಕಾರ್ಮಿಕ ದುರ್ಗಾ ದೇವು ಹರಿಕಾಂತ್ರ (54) ಬಂಧಿತ ಆರೋಪಿ. ಘಟನೆಯ ಹಿನ್ನೆಲೆ: ಅಖಿಲ ಭಾರತ ಹುಲಿ ಗಣತಿ ಹಿನ್ನೆಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ, ಮೇ 1, 2026 ರಂದು ಹೊಸಕಂಬಿ ವಲಯದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ 'ಕಡಿಬ್ಯಾಕ್'…
ಅಂಕೋಲಾ: ತಾಲೂಕಿನ ಕೇಣಿ ಗ್ರಾಮದ ಗಾಬೀತವಾಡದ ಯುವತಿಯೊಬ್ಬಳು ಮನೆಯಿಂದ ಯಾರಿಗೂ ಏನನ್ನೂ ಹೇಳದೆ ಹೊರಟು, ದಿಢೀರ್…
ಅಂಕೋಲಾ: 2012ರಲ್ಲಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 14…
ಅಂಕೋಲಾ: ತಹಶೀಲ್ದಾರ್ ಕಛೇರಿಯಲ್ಲಿ ವಿಕಲಚೇತನರ ಓಡಾಟಕ್ಕೆ ನಿರ್ಮಿಸಲಾದ ಮಾರ್ಗವು ಗಿಡಗಂಟಿಗಳಿಂದ ಆವೃತವಾಗಿ ಸಂಚಾರಕ್ಕೆ ಅಡ್ಡಿಯಾಗಿರುವ ಕುರಿತು…
ಉತ್ತರ ಕನ್ನಡ: ರಾಜ್ಯದ ಗ್ರಾಮ ಪಂಚಾಯಿತಿಗಳು ಪ್ರಸ್ತುತ ತೀವ್ರ ಹಣಕಾಸಿನ, ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಂದ…
ಅಂಕೋಲಾ ತಹಶೀಲ್ದಾರ್ ಕಛೇರಿಯು ಲಿಫ್ಟ್ ಸೌಲಭ್ಯವುಳ್ಳ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡವಾಗಿದ್ದರೂ, ಅಲ್ಲಿ ವಿಕಲಚೇತನರಿಗೆ ಸೂಕ್ತ…
ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ…
ಸಮಾಜಮುಖಿ ಚಿಂತಕರು, ದಲಿತ ಮುಖಂಡರು ಹಾಗೂ ಅಂಕೋಲಾ ಪುರಸಭೆಯ ಮಾಜಿ ಸದಸ್ಯರಾದ ಅಶೋಕ್ ಶೇಡಗೇರಿ ಅವರು…
ಅಂಕೋಲಾ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಆರಂಭವಾದ ಗಾಳಿ-ಮಳೆಯ ಆರ್ಭಟ ಈಗಲೂ ಬಿಡುವಿಲ್ಲದೆ ಮುಂದುವರೆದಿದ್ದು, ಜನಜೀವನ…
ಹೊನ್ನಾವರ ತಾಲೂಕಿನ ಕರ್ವಾ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವಂಗತ ಗೋಪಾಲ್ ನಾಯ್ಕ್ ಅವರ ಅಕಾಲಿಕ…
Confirmed
65.1M
Death
6.6M
Lorem ipsum dolor sit amet, consectetur adipisicing elit, sed do eiusmod tempor incididunt ut labore et dolore magna aliqua.
Nemo enim ipsam voluptatem quia voluptas sit aspernatur aut odit aut fugit, sed quia consequuntur magni dolores eos qui.
Sign in to your account