Hot News
- Quick Links
- ಸ್ಥಳೀಯ ಸುದ್ದಿ
ಅಂಕೋಲಾ ತಾಲೂಕಿನ ರೈತರಿಗೆ 2026ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಮರುರಚಿಸಲಾದ ಬೆಳೆವಿಮೆ ಯೋಜನೆಯಡಿ ನೋಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. ನಿಗದಿತ ದಿನಾಂಕದೊಳಗೆ ರೈತರು ಈ ವಿಮಾ ಯೋಜನೆಗೆ ನೋಂದಾಯಿಸಿಕೊಂಡು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಇಲಾಖೆಯು ಪ್ರಕಟಣೆಯಲ್ಲಿ ಕೋರಿದೆ. ಈ ಯೋಜನೆಯಡಿ ವಿವಿಧ ತೋಟಗಾರಿಕಾ ಬೆಳೆಗಳಿಗೆ ಪ್ರತಿ ಎಕ್ಕರೆಗೆ ವಿಮಾ ಮೊತ್ತ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತನ್ನು ನಿಗದಿಪಡಿಸಲಾಗಿದೆ. ಅಡಿಕೆ ಬೆಳೆಗೆ ಪ್ರತಿ ಎಕರೆಗೆ 51,200 ರೂ. ವಿಮಾ ಮೊತ್ತ ನಿಗದಿಪಡಿಸಿದ್ದು, ರೈತರು 2,560…
ಸಮಾಜದಲ್ಲಿ ಜೀವ ರಕ್ಷಕರಾಗಿ ಹಗಲಿರುಳು ಶ್ರಮಿಸುವ ವೈದ್ಯರ ಸೇವೆ ಅನನ್ಯವಾದದ್ದು. "ವೈದ್ಯೋ ನಾರಾಯಣೋ ಹರಿ" ಎಂಬ ಉಕ್ತಿಯಂತೆ ದೇವರ ಸ್ವರೂಪರಾಗಿರುವ ವೈದ್ಯರನ್ನು ಸ್ಮರಿಸುವ ಮತ್ತು ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವ 'ವೈದ್ಯರ ದಿನಾಚರಣೆ'ಯ ಅಂಗವಾಗಿ, ಅಂಕೋಲಾ ತಾಲೂಕು ವೈದ್ಯಾಧಿಕಾರಿಗಳಾದ ಶ್ರೀ ಜಗದೀಶ ನಾಯಕ ಅವರನ್ನು ವಕೀಲರ ಬಳಗದ ವತಿಯಿಂದ ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಸ್ವಾಸ್ಥ್ಯ ಕಾಪಾಡುವ ವೈದ್ಯಕೀಯ ಕ್ಷೇತ್ರ ಹಾಗೂ ಜನರಿಗೆ ನ್ಯಾಯ ದೊರಕಿಸಿಕೊಡುವ ಕಾನೂನು ವಲಯದ ನಡುವಿನ ಪರಸ್ಪರ ಗೌರವ ಮತ್ತು ಬಾಂಧವ್ಯಕ್ಕೆ ಈ ಸರಳ ಹಾಗೂ ಅರ್ಥಪೂರ್ಣ ಸಮಾರಂಭ…
ಪ್ರಕೃತಿಯ ಮುನಿಸಿಗೆ ಎಂತಹ ಬಲಿಷ್ಠ ಜೀವವೂ ತಲೆಬಾಗಲೇಬೇಕು ಎಂಬುದಕ್ಕೆ ಅಂಕೋಲಾ ತಾಲೂಕಿನ ಪುರಲಕ್ಕಿ ಬೇಣದ ಆನಂದಗಿರಿ ಸಾಕ್ಷಿಯಾಗಿದೆ. ಭಾರಿ ಮಳೆ ಮತ್ತು ಬಿರುಗಾಳಿಯ ಅಬ್ಬರಕ್ಕೆ ದಶಕಗಳಿಂದ ಫಲ ನೀಡುತ್ತಾ ಬಂದಿದ್ದ ಬೃಹತ್ ತೆಂಗಿನ ಮರವೊಂದು ಮನೆಯ ಮೇಲೆ ಉರುಳಿದೆ. ಈ ಘಟನೆಯ ನಡುವೆಯೂ ಮನೆಯೊಳಗಿದ್ದ ಕಂದಮ್ಮನೊಂದು ಪವಾಡಸದೃಶ ರೀತಿಯಲ್ಲಿ ಪಾರಾಗಿದೆ. ಪುರಲಕ್ಕಿ ಬೇಣದ ದಿವಂಗತ ಡೋಲು ನಾಯ್ಕ ರವರ ಜಾಗದಲ್ಲಿ ಹೆಮ್ಮರಾವಾಗಿ ಬೆಳೆದು ನಿಂತಿದ್ದ ತೆಂಗಿನ ಮರವು, ಗಾಳಿಯ ರಭಸಕ್ಕೆ ತಾಳಲಾರದೆ ಪಕ್ಕದಲ್ಲೇ ಇದ್ದ ವಿನಾಯಕ ಆಚಾರಿ ಅವರ ಮನೆಯ ಛಾವಣಿಯ ಮೇಲೆ ದಿಢೀರನೆ…
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಪ್ರೇಯಸಿಗೆ ಚಾಕು ಇರಿದು ಬಳಿಕ ಕಾರು ಸ್ಫೋಟಗೊಂಡು ಪ್ರಿಯಕರ ಸಜೀವ ದಹನವಾಗಿದ್ದಾನೆ. ಮೃತ ಯುವಕನನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಬ್ಬುಲು ಗ್ರಾಮದ ನಾಗೇಂದ್ರ (30) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ರಮ್ಯಾ ಸದ್ಯ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ನಾಗೇಂದ್ರ ಹಾಗೂ ರಮ್ಯಾ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ರಮ್ಯಾ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ಅಲ್ಲಿನ ಸಂಜಯ್…
ಅಂಕೋಲಾ: ತಾಲೂಕಿನ ಕೇಣಿ ಗ್ರಾಮದ ಗಾಬೀತವಾಡದ ಯುವತಿಯೊಬ್ಬಳು ಮನೆಯಿಂದ ಯಾರಿಗೂ ಏನನ್ನೂ ಹೇಳದೆ ಹೊರಟು, ದಿಢೀರ್ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟವನ್ನು ಚುರುಕುಗೊಳಿಸಿದ್ದಾರೆ. ನಾಪತ್ತೆಯಾದ ಯುವತಿಯನ್ನು ಸಾಕ್ಷಿ ಸೂರ್ಯಕಾಂತ್ ಚೊಡನಕರ್ ಎಂದು ಗುರುತಿಸಲಾಗಿದೆ. ಈ ಹಿಂದೆ ಅಂಕೋಲಾ ಪಟ್ಟಣದ 'ವೈಶ್ಯ ಟ್ರೇಡರ್ಸ್' ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ್ದ ಈಕೆ, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದಳು. ದಿನಾಂಕ 23-06-2026 ರಂದು ಬೆಳಗ್ಗೆ 9:00 ರಿಂದ ಮಧ್ಯಾಹ್ನ 3:00 ಗಂಟೆಯ…
ಅಂಕೋಲಾ: ತಾಲೂಕಿನ ಕುಂಟಕಣಿ ಗ್ರಾಮದ ಅಸಳ್ಳಿ ಮೂಲದ 18 ವರ್ಷದ ಯುವತಿ ಯೋರ್ವಳು ತಾಯಿಗೆ ಔಷಧಿ ತರಲು ಶಿರಸಿಗೆ ಹೋದವಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ. ನಾಪತ್ತೆಯಾದ ಯುವತಿಯನ್ನು ಶ್ರೀದೇವಿ ಈಶ್ವರ ಗೌಡ ಎಂದು ಗುರುತಿಸಲಾಗಿದ್ದು, ಈಕೆ ಜೂನ್ 24 ರಂದು ಬೆಳಿಗ್ಗೆ 8:00 ಗಂಟೆಗೆ ಮನೆಯಿಂದ ಹೊರಟವಳು ಇಂದಿನವರೆಗೂ ಮರಳಿ ಬಂದಿಲ್ಲ. ಈ ಕುರಿತು ಯುವತಿಯ ಸಹೋದರ ಪರಮೇಶ್ವರ ಈಶ್ವರ ಗೌಡ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ 125/2026 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು,…
ಕುಮಟಾ/ ಮಿರ್ಜಾನ್: ತಾವು ಕಲಿತ ಮಾತೃಶಾಲೆಯ ಬಗ್ಗೆ ಹೆಮ್ಮೆ ಹಾಗೂ ಅಭಿಮಾನವನ್ನು ಉಳಿಸಿಕೊಂಡಿರುವ ಹಿರಿಯ ವಿದ್ಯಾರ್ಥಿಗಳು, ಮಿರ್ಜಾನ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಸಮಾಜಕ್ಕೆ ಅತ್ಯುತ್ತಮ ಮಾದರಿಯಾಗಿದ್ದಾರೆ. ಪ್ರಸ್ತುತ ಮಿರ್ಜಾನ ಗ್ರಾಮದಲ್ಲಿ ವಾಸ್ತವ್ಯವಿರುವ ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿ ಸೇವೆ ಸಲ್ಲಿಸುತ್ತಿರುವ ಈ ಶಾಲೆಯ ಹಳೆ ವಿದ್ಯಾರ್ಥಿಗಳು, ತಮ್ಮ ಏಳಿಗೆಗೆ ಕಾರಣವಾದ ಶಾಲೆಯ ಬಗ್ಗೆ ಅಪಾರ ಕೃತಜ್ಞತೆ ಹೊಂದಿದ್ದಾರೆ. ಸಮಾಜದಲ್ಲಿ ಹಾಗೂ ತಮ್ಮ ಉದ್ಯೋಗ ಸ್ಥಳದಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ಇವರು, ಶಾಲೆಯ ಪ್ರಗತಿ ಹಾಗೂ ಮಕ್ಕಳ…
ಕಾರವಾರ/ಅಂಕೋಲಾ: ಕಾರವಾರ ಜಿಲ್ಲಾ ನ್ಯಾಯಾಲಯ ಸೇರಿದಂತೆ ಕರಾವಳಿ ಭಾಗದ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬರುತ್ತಿರುವ ಘಟನೆಗಳು ತೀವ್ರ ಖಂಡನೀಯವಾಗಿದ್ದು, ಈ ದುಷ್ಕೃತ್ಯವೆಸಗಿ ನ್ಯಾಯಾಂಗ ವ್ಯವಸ್ಥೆಯ ಮೇಲೆ ಭಯದ ವಾತಾವರಣ ಸೃಷ್ಟಿಸುತ್ತಿರುವವರ ವಿರುದ್ಧ ಮುಲಾಜಿಲ್ಲದೇ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಂಕೋಲಾದ ಹಿರಿಯ ವಕೀಲರಾದ ಉಮೇಶ ನಾಯ್ಕ ಅವರಿಂದ ಆಗ್ರಹ ವ್ಯಕ್ತವಾಗಿದೆ. ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ನ್ಯಾಯಾಲಯಗಳು ನಮ್ಮ ಪಾಲಿಗೆ ದೇವಸ್ಥಾನವಿದ್ದಂತೆ. ಇಂತಹ ಪವಿತ್ರ ಸ್ಥಳಕ್ಕೆ ಬೆದರಿಕೆ ಒಡ್ಡುವುದರಿಂದ ನ್ಯಾಯಾಲಯದ ದೈನಂದಿನ ಕಾರ್ಯಕಲಾಪಗಳನ್ನು…
ಅಂಕೋಲಾ: ಸಾರ್ವಜನಿಕರ ಜೀವ ರಕ್ಷಣೆಗಾಗಿ 'ವಿಕಾಸ ವಾಹಿನಿ' ಮಾಡಿದ ಎಚ್ಚರಿಕೆಯ ವರದಿಗೆ ಪ್ರತಿಫಲ ಸಿಕ್ಕಿದೆ. ಅಂಕೋಲಾ ತಾಲೂಕಿನ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನ ಸವಾರರು ಅಡ್ಡಾದಿಡ್ಡಿಯಾಗಿ ರಸ್ತೆ ಡಿವೈಡರ್ ದಾಟುತ್ತಿದ್ದ ಅಪಾಯಕಾರಿ ಜಾಗಗಳಿಗೆ ಇದೀಗ ಸಂಬಂಧಪಟ್ಟ ಹೆದ್ದಾರಿ ಪ್ರಾಧಿಕಾರ ಹಾಗೂ ಅಧಿಕಾರಿಗಳು ಕಾಂಕ್ರೀಟ್ ಹಾಕಿ ಶಾಶ್ವತವಾಗಿ ಮುಚ್ಚಿದ್ದಾರೆ. ಇದರೊಂದಿಗೆ ಹೆದ್ದಾರಿಯಲ್ಲಿ ಸಂಭವಿಸಬಹುದಿದ್ದ ಎಷ್ಟೋ ಭೀಕರ ಅಪಘಾತಗಳಿಗೆ ಬ್ರೇಕ್ ಬಿದ್ದಂತಾಗಿದೆ. ಹೆದ್ದಾರಿಯಲ್ಲಿ ಯು-ಟರ್ನ್ ತೆಗೆದುಕೊಳ್ಳುವ ಬದಲು, ಕೇವಲ ಸಮಯ ಉಳಿಸುವ ಭರದಲ್ಲಿ ಸವಾರರು ಡಿವೈಡರ್ ನಡುವಿನ ಅನಧಿಕೃತ ಅಂತರಗಳಲ್ಲಿ ವಾಹನಗಳನ್ನು ನುಗ್ಗಿಸುತ್ತಿದ್ದರು. ಇದರಿಂದ ಹೆದ್ದಾರಿಯಲ್ಲಿ ಅತಿ ವೇಗವಾಗಿ…
ಅಂಕೋಲಾ: ರಕ್ತ ಪರೀಕ್ಷೆಗಾಗಿ ಮಗನ ಜೊತೆ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೃದ್ಧೆಯೊಬ್ಬರು ಆಟೋ ರಿಕ್ಷಾ ಡಿಕ್ಕಿಯಾದ ಪರಿಣಾಮ ಸಾವನ್ನಪ್ಪಿರುವ ದಾರುಣ ಘಟನೆ ಪಟ್ಟಣದ ಅಂಬಾರಕೊಡ್ಲ ತಿರುವಿನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ತಾಲೂಕಿನ ಶಿರಕುಳಿ ಗ್ರಾಮದ ನಿವಾಸಿ ಲಲಿತಾ ನಾಯ್ಕ (74) ಮೃತಪಟ್ಟ ದುರ್ದೈವಿ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಶನಿವಾರ ಬೆಳಿಗ್ಗೆ 7.30ರ ಸುಮಾರಿಗೆ ಮಗ ರವಿ ನಾಯ್ಕ ಅವರ ಬೈಕ್ ಹಿಂಬದಿಯಲ್ಲಿ ಕುಳಿತು ಆಸ್ಪತ್ರೆಗೆ ಹೊರಟಿದ್ದರು. ಇವರ ಬೈಕ್ ಅಂಬಾರಕೊಡ್ಲ ಬಳಿಯ ತಿರುವಿನಲ್ಲಿ ಸಾಗುತ್ತಿದ್ದ ವೇಳೆ, ಎದುರಿನಿಂದ ಬಂದ ಆಟೋ ರಿಕ್ಷಾವೊಂದು ಡಿಕ್ಕಿ…
06 Aug 2024, 03:45 pm, 302 reads ಅಂಕೋಲಾ: ಅಂಕೋಲಾ ಪುರಸಭೆಯು ಹಲವು ದಿನಗಳಿಂದ ಅಧ್ಯಕ್ಷ ಉಪಾಧ್ಯಕ್ಷ…
ಪ್ರಸ್ತಾವಿತ ಮಂಗಳೂರು ಸಂಚಾರಿ ಹೈಕೋರ್ಟ್ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸುವ ರಾಜ್ಯ ಸರ್ಕಾರದ…
ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಯ ಉಳಿಸುವ ಭರದಲ್ಲಿ ದ್ವಿಚಕ್ರ ವಾಹನ ಸವಾರರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿರುವ…
ರಾಜ್ಯದ ಸರ್ಕಾರಿ ಕಚೇರಿಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ವಿಳಂಬವಾಗಿ ಆಗಮಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು…
ಅಂಕೋಲಾ: ತಾಲೂಕಿನ ಬೆಳಂಬರ ಗ್ರಾಮದ ಉತ್ತರ ಖಾರ್ವಿವಾಡದಲ್ಲಿ ಸಾರ್ವಜನಿಕ ರಸ್ತೆಯನ್ನೇ ಜೂಜುಕೋರರು ತಮ್ಮ ಅಡ್ಡೆಯನ್ನಾಗಿ ಪರಿವರ್ತಿಸಿಕೊಂಡಿದ್ದ…
ಕುಮಟಾ: ಪ್ರಕೃತಿಯ ಮಡಿಲಲ್ಲಿರುವ ಮೂರೂರು ಗುಡ್ಡದ ನಿರ್ಜನ ಹಾಗೂ ರಮಣೀಯ ಅರಣ್ಯ ಪ್ರದೇಶವೀಗ ಮಾದಕ ವ್ಯಸನಿಗಳ…
ಅಂಕೋಲಾ ತಾಲೂಕಿನ ಚನಗಾರ ಗ್ರಾಮದ ವಿದ್ಯಾರ್ಥಿಗಳ ಸುದೀರ್ಘ ಕಾಲದ ಶೈಕ್ಷಣಿಕ ಬೇಡಿಕೆಯೊಂದು ಕೊನೆಗೂ ಈಡೇರುವ ಕಾಲ…
ಕುಮಟಾ: ಪಾಲಕರು ಬೈದರು ಎಂಬ ಕಾರಣಕ್ಕೆ ಮನನೊಂದು ಯಾವುದೇ ದಿಕ್ಕುದೆಸೆಯಿಲ್ಲದೆ ಒಂಟಿಯಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 10ನೇ…
ಅಂಕೋಲಾ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ…
Confirmed
65.1M
Death
6.6M
Lorem ipsum dolor sit amet, consectetur adipisicing elit, sed do eiusmod tempor incididunt ut labore et dolore magna aliqua.
ವಿಕಾಸ ವಾಹಿನಿಯಲ್ಲಿ ಸುದ್ದಿ ಮಾಡಿದಂತೆ ಹಳ್ಳದ ಅಕ್ಕಪಕ್ಕ ಸುರಿದಿರುವ ಕಸವನ್ನು ಸಂಬಂಧಪಟ್ಟವರು ವಿಲೇವಾರಿ ಮಾಡಲಾಗಿದೆಯೋ ಅಥವಾ ಇಲ್ಲ ಎಂದು ಸ್ಥಳ ಪರಿಶೀಲನೆಗೆ ಹೊರಟಾಗ ಅಚ್ಚರಿ ಕಾದಿತ್ತು…. ಲ್ಯಾಂಡ್ ಆರ್ಮಿ ಇಂದ ಲಕ್ಷಾಂತರ ಪ್ರವೇಶದಲ್ಲಿ ನಿರ್ಮಿಸಿರುವ ಕಾಂಕ್ರೀಟ ರಸ್ತೆಯು ಕೆಂಪು ಮಣ್ಣಿನಿಂದ ಮುಚ್ಚಿ…
Sign in to your account