ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಸೆ. 21ರಿಂದ ಪಿಡಿಒಗಳಿಂದ ಅನಿರ್ದಿಷ್ಟಾವಧಿ ಅಸಹಕಾರ ಚಳುವಳಿ..

ಕಾರವಾರ : ತಮ್ಮ ದೀರ್ಘಕಾಲದ ಮತ್ತು ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸೇವಾ ಅಭಿವೃದ್ಧಿ ಸಂಘದ ಕರೆಯ ಮೇರೆಗೆ, ಉತ್ತರ ಕನ್ನಡ ಜಿಲ್ಲೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಗ್ರಾಮ ಪಂಚಾಯಿತಿ ನೌಕರರು ಸೆಪ್ಟೆಂಬರ್ 21ರಿಂದ 'ಅನಿರ್ದಿಷ್ಟಾವಧಿ ಅಸಹಕಾರ ಚಳುವಳಿ' ನಡೆಸಲು ನಿರ್ಧರಿಸಿದ್ದಾರೆ. ಮುಂಬರುವ ಈ ಹೋರಾಟಕ್ಕೆ ಬೆಂಬಲ ಹಾಗೂ ಸಹಕಾರ ಕೋರಿ ಸಂಘದ ಜಿಲ್ಲಾ ಶಾಖೆಯ ವತಿಯಿಂದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ (ಸಿಇಒ) ಮನವಿ ಸಲ್ಲಿಸಲಾಗಿದೆ. ಸಂಘವು ಸರ್ಕಾರದ ಮುಂದಿಟ್ಟಿರುವ ಪ್ರಮುಖ…

News Desk

ನಿರಂತರ ವಿದ್ಯುತ್ ಕಡಿತ, ಶಾಲಾ ರಸ್ತೆಗಳಲ್ಲೇ ನೇತಾಡುತ್ತಿರುವ ಅಪಾಯಕಾರಿ ತಂತಿಗಳು :ಅನಾಹುತಕ್ಕೂ ಮುನ್ನ ಎಚ್ಚೆತ್ತುಕೊಳ್ಳಲು ಹೆಸ್ಕಾಂಗೆ ಕಡವಾಡ ಗ್ರಾಮಸ್ಥರ ಆಗ್ರಹ..

ಕಾರವಾರ: ತಾಲೂಕಿನ ಕಡವಾಡ ಗ್ರಾಮದಲ್ಲಿ ಹಗಲು-ರಾತ್ರಿ ಎನ್ನದೆ ಪದೇ ಪದೇ ಉಂಟಾಗುತ್ತಿರುವ ವಿದ್ಯುತ್ ಕಡಿತ ಹಾಗೂ ಗ್ರಾಮದ ವಿವಿಧೆಡೆ ಕೆಳಮಟ್ಟಕ್ಕೆ ವಾಲಿಕೊಂಡಿರುವ ಅಪಾಯಕಾರಿ ವಿದ್ಯುತ್ ತಂತಿಗಳನ್ನು ಸರಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗಳಿಗೆ ತೀವ್ರ ಒತ್ತಾಯ ಹೇರಿದ್ದಾರೆ. ಗೌರಿ-ಗಣೇಶ ಹಬ್ಬದಂತಹ ಸಡಗರದ ಸಂದರ್ಭದಲ್ಲಿಯೂ ಹೆಸ್ಕಾಂ ಅಘೋಷಿತ ವಿದ್ಯುತ್ ಕಡಿತ ಮಾಡಿದೆ. ಇದರಿಂದಾಗಿ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಮನೆ ಹಾಗೂ ಅಂಗಡಿ-ಮುಂಗಟ್ಟುಗಳ ಫ್ರಿಡ್ಜ್‌ಗಳಲ್ಲಿಟ್ಟಿದ್ದ ಹಾಲು, ತರಕಾರಿ ಸೇರಿದಂತೆ ಇನ್ನಿತರ ದಿನಬಳಕೆಯ ಸಾಮಗ್ರಿಗಳು ವಿದ್ಯುತ್ ಇಲ್ಲದೆ ದಿನನಿತ್ಯ ಹಾಳಾಗುತ್ತಿವೆ ಎಂದು ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ…

News Desk

ಅಂಕೋಲಾದ ಅಚವೆ ಗ್ರಾಮದಲ್ಲಿ ಮಗಳ ಮನೆಯಿಂದ ಹೊರಟಿದ್ದ ವೃದ್ಧ ನಾಪತ್ತೆ..!!

ಅಂಕೋಲಾ: ತಾಲೂಕಿನ ಅಚವೆ ಗ್ರಾಮದ ಹೊಸಕೇರಿಯಲ್ಲಿ ವೃದ್ಧರೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ವರದಿಯಾಗಿದ್ದು, ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಚವೆ ಗ್ರಾಮದ ಹೊಸಕೇರಿ ನಿವಾಸಿ ಗುಂಡು ಪೇಟು ಸಿದ್ದಿ (64) ಕಾಣೆಯಾದ ವ್ಯಕ್ತಿ.ಕಳೆದ ಸೆಪ್ಟೆಂಬರ್ 02 ರಂದು ಬೆಳಗ್ಗೆ 9:00 ಗಂಟೆಯ ಸುಮಾರಿಗೆ ಅಚವೆ ಗ್ರಾಮದ ಹೊಸಕೇರಿ ಯಲ್ಲಿರುವ ತಮ್ಮ ಮಗಳ ಮನೆಯಿಂದ ಹೊರಗೆ ಹೋದವರು ಈವರೆಗೂ ವಾಪಸ್ಸಾಗಿಲ್ಲ. ಎಲ್ಲಿಯೋ ಹೋಗಿ ಕಾಣೆಯಾಗಿದ್ದು, ಎಲ್ಲ ಕಡೆ ಹುಡುಕಾಡಿದರೂ ಅವರ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ನಾಪತ್ತೆಯಾಗಿರುವ ತಮ್ಮ ತಂದೆಯನ್ನು…

News Desk

ಅಂಕೋಲಾ: ಹೈವೇಯಲ್ಲಿ ಡೀಸೆಲ್ ಆಟ ಬಯಲು: ಹೆದ್ದಾರಿ ಪಕ್ಕ ಅಪಾಯಕಾರಿ ಸಂಗ್ರಹ, ಪ್ರಕರಣ ದಾಖಲು..

ಅಂಕೋಲಾ ತಾಲೂಕಿನ ರಾಮನಗುಳಿ ದುಗ್ಗನಬೈಲ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಕ್ರಮವಾಗಿ ಡೀಸೆಲ್ ಸಂಗ್ರಹಿಸುತ್ತಿದ್ದ ಅಡ್ಡೆಯ ಮೇಲೆ ಅಂಕೋಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಓರ್ವನ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ರಾಮನಗುಳಿ ದುಗ್ಗನಬೈಲ್ ನಿವಾಸಿ ಹಾಗೂ ಟ್ರಾನ್ಸ್‌ಪೋರ್ಟ್ ವ್ಯವಹಾರ ನಡೆಸುವ ಚಂದ್ರಶೇಖರ್ ತಂದೆ ಪಾಂಡುರಂಗ ನಾಯ್ಕ (37) ಎಂದು ಗುರುತಿಸಲಾಗಿದೆ. ಸೆಪ್ಟೆಂಬರ್ 14ರಂದು ಮುಂಜಾನೆ 1:45ರ ಸುಮಾರಿಗೆ ಪೊಲೀಸರು ಈ ದಾಳಿ ನಡೆಸಿದ್ದಾರೆ. ಆರೋಪಿಯು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಯಾವುದೇ ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮಗಳಿಲ್ಲದೆ, ಅತ್ಯಂತ ಅಪಾಯಕಾರಿ ದಹ್ಯ ವಸ್ತುವಾದ ಡೀಸೆಲ್…

News Desk

ರಸ್ತೆ ಬದಿಯ ಗೋವುಗಳೇ ಟಾರ್ಗೆಟ್: ಮಧ್ಯರಾತ್ರಿ ಎರ್ಟಿಗಾ ಕಾರಿನಲ್ಲಿ ಬಂದು ದನ ಕದ್ದ ಖದೀಮನ ಹೆಡೆಮುರಿ ಕಟ್ಟಿದ ಕುಮಟಾ ಪೊಲೀಸರು..

ಕುಮಟಾ ಪಟ್ಟಣದಲ್ಲಿ ರಸ್ತೆ ಬದಿ ಮಲಗಿದ್ದ ದನವನ್ನು ಕಾರಿನಲ್ಲಿ ಬಂದು ಕದ್ದೊಯ್ದಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಕುಮಟಾ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ಸೆಪ್ಟೆಂಬರ್ 10, 2026 ರಂದು ಬೆಳಗಿನ ಜಾವ 2:14 ರ ಸುಮಾರಿಗೆ ಕುಮಟಾದ ರೈಸ್ ಮಿಲ್ ಪಕ್ಕದ ರಸ್ತೆಯಲ್ಲಿ ಮಲಗಿದ್ದ ದನವನ್ನು ಬಿಳಿ ಬಣ್ಣದ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸಿನಿಮೀಯ ಶೈಲಿಯಲ್ಲಿ ಕದ್ದೊಯ್ದಿದ್ದರು. ಈ ಕುರಿತು ಕುಮಟಾ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್. (BNS) ಕಲಂ 303(2) ಅಡಿಯಲ್ಲಿ (ಗುನ್ನೆ ನಂ: 184/2026) ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ…

News Desk

ಪರಿಸರ ಸ್ನೇಹಿ ಮಣ್ಣಿನ ಗಣಪತಿಗೆ ಹೆಚ್ಚಿದ ಬೇಡಿಕೆ: ಕಡವಾಡದ ಅಪ್ಪ-ಮಗನ ಕಲಾಕೃತಿಗಳಿಗೆ ಗೋವಾದಲ್ಲೂ ಮನ್ನಣೆ..

ಕಾರವಾರ: ಗೌರಿ-ಗಣೇಶ ಹಬ್ಬಕ್ಕೆ ಇನ್ನೇನು ಒಂದು ದಿನವಷ್ಟೇ ಬಾಕಿ ಉಳಿದಿದೆ. ಕರಾವಳಿಯಾದ್ಯಂತ ಹಬ್ಬದ ಸಡಗರ ಮನೆಮಾಡಿದ್ದು, ಕಲಾಕಾರರು ಮಣ್ಣಿನ ಗಣಪತಿ ವಿಗ್ರಹಗಳಿಗೆ ಬಣ್ಣದ ಚಿತ್ತಾರಗಳ ಮೂಲಕ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಕಾರವಾರ ತಾಲೂಕಿನ ಕಡವಾಡ ಗ್ರಾಮದ ಗಣಪತಿ ಬಾಬನಿ ಮಾಂಜ್ರೇಕರ್ ಹಾಗೂ ಅವರ ಪುತ್ರ ರಜತ್ ಮಾಂಜ್ರೇಕರ್ ಅವರ ಕೈಯಲ್ಲಿ ಅರಳಿದ ಸುಂದರ ಮಣ್ಣಿನ ಗಣಪತಿ ವಿಗ್ರಹಗಳು ಇದೀಗ ಭಕ್ತರ ಮನೆ ಬೆಳಗಲು ಸಜ್ಜಾಗಿವೆ. ತಂದೆಯಿಂದ ಒಲಿದ ಕಲೆಗಣಪತಿ ಮಾಂಜ್ರೇಕರ್ ಅವರು ಹಲವು ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಮಗ ರಜತ್‌ಗೆ ಕೇವಲ…

News Desk

ಬೆಳಸೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಾಂಧಲೆ ಪ್ರಕರಣ: ಪ್ರಮುಖ ಆರೋಪಿ ಬಂಧನ : ಪೊಲೀಸರ ತ್ವರಿತ ಕಾರ್ಯಾಚರಣೆಗೆ ಪಿಡಿಒ ಸಂಘದ ಮೆಚ್ಚುಗೆ..

ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಾರಿದೀಪ ಅಳವಡಿಸುವ ವಿಚಾರವಾಗಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಇಲಾಖೆಯ ಈ ಕ್ಷಿಪ್ರ ಕಾರ್ಯಾಚರಣೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ತಂಡ ತೀವ್ರ ಮೆಚ್ಚುಗೆ ವ್ಯಕ್ತಪಡಿಸಿದೆ. ಘಟನೆಯ ಹಿನ್ನೆಲೆ: ಶುಕ್ರವಾರ (ಸೆಪ್ಟೆಂಬರ್ 11, 2026) ಸಂಜೆ 4:15ರ ಸುಮಾರಿಗೆ ಕಚೇರಿಗೆ ಬಂದ ಶಿರೂರು ನಿವಾಸಿಗಳಾದ ಮನೋಜ ಬಾಬು ಗೌಡ, ನಾಗೇಶ ಸಣ್ಣು ಗೌಡ,…

News Desk

ಆರೋಪಿಗಳ ಪತ್ತೆಯಲ್ಲಿ ಅತ್ಯುತ್ತಮ ಕಾರ್ಯಾಚರಣೆ: ಅಂಕೋಲಾ ಠಾಣೆಯ ಇಬ್ಬರು ಸಿಬ್ಬಂದಿಗೆ ‘ಕಾಪ್ ಆಫ್ ದಿ ಮಂತ್’ ಗೌರವ..

ಅಂಕೋಲಾ: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಳ್ಳುವ ಆರೋಪಿಗಳನ್ನು ಪತ್ತೆ ಹಚ್ಚುವುದು ಪೊಲೀಸ್ ಇಲಾಖೆಯ ಅತ್ಯಂತ ಸವಾಲಿನ ಹಾಗೂ ಪ್ರಮುಖ ಜವಾಬ್ದಾರಿಗಳಲ್ಲಿ ಒಂದಾಗಿದೆ. ಈ ನಿಟ್ಟಿನಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿದ ಕಾರವಾರ ಉಪವಿಭಾಗದ ಅಂಕೋಲಾ ಪೊಲೀಸ್ ಠಾಣೆಯ ಇಬ್ಬರು ಸಿಬ್ಬಂದಿಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಯು ಆಗಸ್ಟ್ 2026ರ ಸಾಲಿನ ಪ್ರತಿಷ್ಠಿತ 'ಕಾಪ್ ಆಫ್ ದಿ ಮಂತ್' ಗೌರವವನ್ನು ಪ್ರಕಟಿಸಿದೆ. ಅಂಕೋಲಾ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸಿ.ಪಿ.ಸಿ 559 ಶ್ರೀ ಗಿರೀಶ ಲಮಾಣಿ ಹಾಗೂ ಅದೆ ಠಾಣೆಯ ಸಿ.ಪಿ.ಸಿ 564 ಶ್ರೀ ಭಗವಾನ್…

News Desk

ಅಂಕೋಲಾ ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಾಂಧಲೆ : ದಾರಿದೀಪದ ನೆಪದಲ್ಲಿ ಕರ್ತವ್ಯನಿರತ ಸಿಬ್ಬಂದಿ ಮೇಲೆ ಹಲ್ಲೆ – ಪ್ರಕರಣ ದಾಖಲು..

ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ದಾರಿದೀಪ ಅಳವಡಿಸುವ ವಿಚಾರವನ್ನು ಮುಂದಿಟ್ಟುಕೊಂಡು ಕರ್ತವ್ಯದಲ್ಲಿದ್ದ ಸಿಬ್ಬಂದಿಯೋರ್ವರ ಮೇಲೆ ಹಲ್ಲೆ ನಡೆಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದ್ದು, ಹಲ್ಲೆಗೊಳಗಾದ ಸಿಬ್ಬಂದಿಯ ಬೆಂಬಲಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಂಘದ ಪ್ರಮುಖರು ದೃಢವಾಗಿ ನಿಲ್ಲುವ ಮೂಲಕ ಇಲಾಖೆಯಲ್ಲಿ ಹೊಸ ಭರವಸೆ ಮೂಡಿಸಿದ್ದಾರೆ. ಬೆಳಸೆ ಗ್ರಾಮ ಪಂಚಾಯತದಲ್ಲಿ ಸ್ವಚ್ಛತಾಗಾರರಾಗಿ ಕೆಲಸ ಮಾಡುತ್ತಿರುವ ಮಂಜುನಾಥ ವಿಷ್ಣು ನಾಯ್ಕ (50) ಹಲ್ಲೆಗೊಳಗಾದವರು. ಶುಕ್ರವಾರ ಸಂಜೆ 4:15ರ ಸುಮಾರಿಗೆ…

News Desk

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ನೂತನ ಸಾರಥಿಯಾಗಿ ಹಿರಿಯ ವಕೀಲ ಜಿ.ಟಿ. ನಾಯ್ಕ ನೇಮಕ..

ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಪಕ್ಷದ ಹಿರಿಯ ಮುಖಂಡ ಹಾಗೂ ವಕೀಲರಾದ ಜಿ.ಟಿ. ನಾಯ್ಕ ಅವರನ್ನು ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ನೇಮಕ ಮಾಡಿದೆ. ಈ ನೇಮಕಾತಿ ಆದೇಶವು ತಕ್ಷಣದಿಂದಲೇ ಜಾರಿಗೆ ಬರುವಂತೆ ಹೊರಡಿಸಲಾಗಿದೆ. ನೇಮಕಾತಿಯ ಹಿನ್ನೆಲೆ ಮತ್ತು ಪ್ರಕ್ರಿಯೆ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಅನುಮೋದನೆಯ ಮೇರೆಗೆ ಕರ್ನಾಟಕದ ಹಲವು ಜಿಲ್ಲೆಗಳಿಗೆ ನೂತನ ಅಧ್ಯಕ್ಷರನ್ನು ನೇಮಿಸಲಾಗಿದ್ದು, ಸೆಪ್ಟೆಂಬರ್ 9ರಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಪಕ್ಷದ ಸಂಘಟನೆಯನ್ನು…

News Desk
- Sponsored -
Ad imageAd image

Editor's Pick

ಅಂಕೋಲಾ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ಪತ್ರಿಕಾ ದಿನಾಚರಣೆ: ಸಮಾಜದಲ್ಲಿ ಆಗುವ ಅನೇಕ ತಪ್ಪುಗಳನ್ನು ತಿದ್ದುವಲ್ಲಿ ಪತ್ರ ಕರ್ತರ ಪಾತ್ರ ಪ್ರಮುಖವಾಗಿದೆ- ಗಿರೀಶ್ ನಾಯಕ..

ಅಂಕೋಲಾ: ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಎತ್ತಿತೋರಿಸುವ ಜೊತೆಗೆ ಉತ್ತಮ ಕೆಲಸಗಳನ್ನು ಬೆಳಕಿಗೆ ತಂದು ಪ್ರೋತ್ಸಾಹ ನೀಡುವ…

News Desk
Weather
24°C
Karnataka
overcast clouds
24° _ 24°
72%
1 km/h
Sun
31 °C
Mon
26 °C
Tue
31 °C
Wed
26 °C
Thu
21 °C

Follow US

Most Read

Discover Categories

ಆಡಳಿತ-ಜನಸಾಮಾನ್ಯರ ಬಾಂಧವ್ಯಕ್ಕೆ ಸಾಕ್ಷಿಯಾದ ಬೀಳ್ಕೊಡುಗೆ: ಇಡುಗುಂಜಿಯಲ್ಲಿ ಪಿಡಿಒ ಗಿರೀಶ್ ನಾಯಕ್‍ರಿಗೆ ನಾಗರಿಕ ಸನ್ಮಾನ..

ಹೊನ್ನಾವರ: ಕರ್ತವ್ಯನಿಷ್ಠೆ ಹಾಗೂ ಜನಪರ ಕಾಳಜಿಯಿಂದ ಕೆಲಸ ಮಾಡುವ ಅಧಿಕಾರಿಗಳು ಸದಾ ಜನರ ಮನಸ್ಸಿನಲ್ಲಿ ಶಾಶ್ವತವಾಗಿ…

News Desk

ಹೋಟೆಲ್‌ನಲ್ಲಿ ‘ಮದ್ಯ’ದ ಮದ: ನಿರಾಕರಿಸಿದ ಕ್ಯಾಶಿಯರ್‌ಗೆ ಅವಾಚ್ಯ ನಿಂದನೆ, ಅಡ್ಡಬಂದ ಕ್ಯಾಪ್ಟನ್‌ ಮೇಲೆ ಬಾಟಲಿ ಪ್ರಹಾರ, FIR ದಾಖಲು..

ಕುಮಟಾ: ನಗರದ ಪ್ರತಿಷ್ಠಿತ ವರದಾ ಹೋಟೆಲ್‌ನಲ್ಲಿ ಮದ್ಯ ನೀಡಲು ನಿರಾಕರಿಸಿದ ಕಾರಣಕ್ಕಾಗಿ ಗ್ರಾಹಕನೋರ್ವ ಹೋಟೆಲ್ ಸಿಬ್ಬಂದಿಯ…

News Desk

ರಾಜ್ಯ ಪೊಲೀಸ್ ದೂರು ಪ್ರಾಧಿಕಾರಕ್ಕೆ ಶೀಘ್ರವೇ ನೂತನ ಅಧ್ಯಕ್ಷರನ್ನು ನೇಮಿಸಲು ಮೋಹನ್ ಕುಮಾರ್ ದಾನಪ್ಪ ಆಗ್ರಹ..

ಬೆಂಗಳೂರು (ಸೆ 5): ಪೊಲೀಸ್ ವ್ಯವಸ್ಥೆಯ ವಿರುದ್ಧದ ಸಾರ್ವಜನಿಕರ ದೂರುಗಳನ್ನು ಆಲಿಸುವ ಮಹತ್ವದ ವೇದಿಕೆಯಾಗಿರುವ 'ಕರ್ನಾಟಕ…

News Desk

ವೀರ ಯೋಧ ವಿನೋದ ನಾಯ್ಕ 21ನೇ ಪುಣ್ಯತಿಥಿ: ಸ್ಮಾರಕದ ಆವರಣ ಗೋಡೆ ಲೋಕಾರ್ಪಣೆ, ನಿವೃತ್ತ ಸೈನಿಕರಿಗೆ ಸನ್ಮಾನ..

ಕಾರವಾರ: ದೇಶದ ಗಡಿಯಲ್ಲಿ ಉಗ್ರರೊಂದಿಗೆ ಹೋರಾಡಿ ವೀರಮರಣವನ್ನಪ್ಪಿದ್ದ ತಾಲೂಕಿನ ಕಡವಾಡ ಗ್ರಾಮದ ಲ್ಯಾನ್ಸ್ ನಾಯಕ, ಹುತಾತ್ಮ…

News Desk

ಬಾಲಕನ ಮೃತದೇಹ ಹೊರತೆಗೆದು ಮಾನವೀಯತೆ ಮೆರೆದ ಕುಮಟಾ ಪಿಎಸ್ಐ ಖಾದರ್ ಭಾಷಾ ಅವರಿಗೆ ಯುವ ಕಾಂಗ್ರೆಸ್‌ನಿಂದ ಸನ್ಮಾನ..

ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸ್ವತಃ ನೀರಿಗೆ ಇಳಿದು ಬಾಲಕನ ಮೃತದೇಹವನ್ನು…

News Desk

ಅಂಕೋಲಾ – ಕುಮಟಾ ಹೆದ್ದಾರಿಯ ಮಾದನಗೇರಿ ಬಳಿ ಲಾರಿಗಳ ನಡುವೆ ಅಪಘಾತ..

ಅಂಕೋಲಾ: ತಾಲೂಕಿನ ಮಾದನಗೇರಿ ಕ್ರಾಸ್ ಬಳಿ ಹೆದ್ದಾರಿಯಲ್ಲಿ ಎರಡು ಟ್ರಕ್‌ಗಳ ನಡುವೆ ರಸ್ತೆ ಅಪಘಾತ ಸಂಭವಿಸಿದ್ದು,…

News Desk

ಅಂಕೋಲಾದಲ್ಲಿ ಹಗಲು ಹೊತ್ತಲ್ಲೇ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಟ್ಕಾ ದಂಧೆ: ಪೊಲೀಸರ ಕಾರ್ಯಾಚರಣೆ, ಓರ್ವ ವಶಕ್ಕೆ..

ಅಂಕೋಲಾ : ಸಾರ್ವಜನಿಕ ಸ್ಥಳದಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ 'ಓ.ಸಿ-ಮಟಕಾ' ಜೂಗಾರಾಟದ ಅಡ್ಡೆಯ ಮೇಲೆ ಅಂಕೋಲಾ ಠಾಣೆಯ…

News Desk

ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ ಚಾಲಕರ ನಡುವೆ ಮಾರಾಮಾರಿ: ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ ಅಂಕೋಲಾ ಪೊಲೀಸರು..

ಅಂಕೋಲಾ: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಎರಡು ಭಾರಿ ವಾಹನಗಳ ನಡುವೆ ಉಂಟಾದ ಸಣ್ಣ ತಿಕ್ಕಾಟ,…

News Desk