ಹೋಂಗಾರ್ಡ್ಸ್,ರಿಸರ್ವ್ ಪೊಲೀಸ್ ಮತ್ತು ಎಎಸೈ(ASI) ಗಿಂತ ಕಡಿಮೆ ದರ್ಜೆಯ ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕ ವಾಹನಗಳನ್ನು ಅಡ್ಡಗಟ್ಟಿದರೆ ಕ್ರಮ!

ರಾಜ್ಯದಲ್ಲಿ ಹಿರಿಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸಾರ್ವಜನಿಕ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ನಡೆಸುವಂತಿಲ್ಲ ಎಂದು ರಾಜ್ಯ ಪೊಲೀಸ್ ಪ್ರಧಾನ ಕಚೇರಿಯು ಆದೇಶ ಹೊರಡಿಸಿದೆ. ಗೃಹರಕ್ಷಕ ದಳ (ಹೋಂಗಾರ್ಡ್ಸ್), ಸಶಸ್ತ್ರ ಮೀಸಲು ಪೊಲೀಸ್ ಹಾಗೂ ಎಎಸ್‌ಐ (ASI) ಗಿಂತ ಕಡಿಮೆ ದರ್ಜೆಯ ಪೊಲೀಸ್ ಸಿಬ್ಬಂದಿಗಳು ವಾಹನ ತಪಾಸಣೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ವಾಹನ ತಪಾಸಣೆಯ ನೆಪದಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಕಿರುಕುಳವನ್ನು ತಪ್ಪಿಸಲು ಇಲಾಖೆ ಈ ಕ್ರಮ ಕೈಗೊಂಡಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಗೃಹರಕ್ಷಕ ದಳ, ಸಶಸ್ತ್ರ ಪೊಲೀಸ್ ಹಾಗೂ ಎಎಸ್‌ಐ ದರ್ಜೆಗಿಂತ ಕೆಳಹಂತದ ಪೊಲೀಸ್ ಸಿಬ್ಬಂದಿಗಳು ನಿಯಮಬಾಹಿರವಾಗಿ…

News Desk

ಅಂಕೋಲಾ: ಉಳುವರೆ ರೇಲ್ವೆ ಬ್ರಿಜ್ ಹತ್ತಿರ ಗಂಗಾವಳಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ..

ಅಂಕೋಲಾ ತಾಲೂಕಿನ ಉಳುವರೆಯ ರೇಲ್ವೆ ಬ್ರಿಜ್ ಹತ್ತಿರ ಗಂಗಾವಳಿ ನದಿಯಲ್ಲಿ ಸುಮಾರು 50-55 ವರ್ಷ ವಯಸ್ಸಿನ ಅಪರಿಚಿತ ಗಂಡಸೊಬ್ಬರು ಮುಳುಗಿ ಮೃತಪಟ್ಟ ಸ್ಥಿತಿಯಲ್ಲಿ ದಿನಾಂಕ 27-04-2026 ರಂದು ಪತ್ತೆಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸಗಡಗೇರಿ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ವಿನಾಯಕ ಈಶ್ವರ ಸಿದ್ದಾಪುರ ಅವರು ನೀಡಿದ ದೂರಿನ ಅನ್ವಯ, ಮೃತ ವ್ಯಕ್ತಿಯ ಗುರುತು ಪತ್ತೆ ಹಚ್ಚಲು ಮತ್ತು ಮುಂದಿನ ಕಾನೂನು ಕ್ರಮಕ್ಕಾಗಿ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ನಂ. 20/2026 (ಕಲಂ. 194 ಬಿ.ಎನ್.ಎಸ್.ಎಸ್-2023) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.…

News Desk

ಮಂಕಿ ಕಬಡ್ಡಿ ಪಂದ್ಯಾವಳಿ: ಅಂಕೋಲಾದ ಶ್ರೀರಾಮ ಸ್ಪೋರ್ಟ್ಸ್ ಕ್ಲಬ್‌ಗೆ ಪ್ರಥಮ ಸ್ಥಾನ..

ಅಂಕೋಲಾ: ಹೊನ್ನಾವರ ತಾಲೂಕಿನ ಮಂಕಿಯ ಗುಳದಕೇರಿಯಲ್ಲಿ ಆಯೋಜಿಸಲಾಗಿದ್ದ ದ್ವಿತೀಯ ವರ್ಷದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ ಪಂದ್ಯಾವಳಿಯಲ್ಲಿ ಅಂಕೋಲಾದ ಶ್ರೀರಾಮ ಸ್ಪೋರ್ಟ್ಸ್ ಕ್ಲಬ್‌ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಪಂದ್ಯಾವಳಿಯ ಫೈನಲ್‌ನಲ್ಲಿ ಹೊನ್ನಾವರದ ಸೆವೆನ್ ಸ್ಟಾರ್ ತಂಡದ ವಿರುದ್ಧ ಜಯಗಳಿಸಿ ಈ ಸಾಧನೆ ಮಾಡಿದೆ. ಶ್ರೀರಾಮ ಸ್ಪೋರ್ಟ್ಸ್ ಕ್ಲಬ್‌ನ ಲವೇಶ ಗೌಡ ಬೊಬ್ರವಾಡ ಅವರು ಪಂದ್ಯಾವಳಿಯ 'ಉತ್ತಮ ದಾಳಿಗಾರ' ಪ್ರಶಸ್ತಿಗೆ ಭಾಜನರಾದರು. ತಂಡದ ಸದಸ್ಯರಾದ ಸಂಪ್ರೀತ ನಾಯಕ, ಎಜೆ ಕಾರ್ತಿಕ, ಮಯೂರ ನಾಯ್ಕ, ಗಣೇಶ ಗೌಡ, ಅಮೀತ ಗೌಡ, ಬಾಲು ನಾಯ್ಕ,…

News Desk

ಉತ್ತಮ ದಾಖಲಾತಿ ನಿರ್ವಹಣೆ: ಪಿಡಿಒ ‘ಗಿರೀಶ ನಾಯಕ್’ ಅವರಿಗೆ ‘ಉತ್ತಮ ಪಂಚಾಯತ ಅಭಿವೃದ್ಧಿ ಅಧಿಕಾರಿ’ ಪ್ರಶಸ್ತಿ ಪ್ರದಾನ..

ಕಾರವಾರ, (ಏಪ್ರಿಲ್ 24): ಗ್ರಾಮ ಪಂಚಾಯತ ಮಟ್ಟದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಪಾರದರ್ಶಕವಾಗಿ ಕಡತಗಳನ್ನು ನಿರ್ವಹಿಸಿದ ಕಾರ್ಯವೈಖರಿಯನ್ನು ಗುರುತಿಸಿ, ಖರ್ವಾ ಪಂಚಾಯತ ಪಿಡಿಒ ಗಿರೀಶ್ ನಾಯಕ್ ಅವರನ್ನು 2025-26ನೇ ಸಾಲಿನ 'ಉತ್ತಮ ಪಂಚಾಯತ ಅಭಿವೃದ್ಧಿ ಅಧಿಕಾರಿ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಅವರಿಗೆ ಇಂದು ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಷ್ಟ್ರೀಯ ಪಂಚಾಯತ ರಾಜ್ ದಿನಾಚರಣೆಯ ಪ್ರಯುಕ್ತ ಇಂದು ಕಾರವಾರದ ಜಿಲ್ಲಾ ಪಂಚಾಯತದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ, ಜಿಲ್ಲಾ ಪಂಚಾಯತದ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ (ಸಿಇಒ) ಶ್ರೀ ದಿಲೀಶ್ ಶಶಿ ಅವರು ಗಿರೀಶ್ ನಾಯಕ್ ಅವರಿಗೆ…

News Desk

ಅನಿರುದ್ಧ್ ರವಿಚಂದರ್ ಡಿ ಕನ್ಸ್ ಸ್ಟ್ರಕ್ಟ್ ಬ್ರಾಂಡ್ ಪಾರ್ಟ್ನರ್..

ಸುಪ್ರಸಿದ್ಧ ಸ್ಕಿನ್ ಕೇರ್ ಬ್ರಾಂಡ್ ಡಿಕನ್ಸ್ ಸ್ಟ್ರಕ್ಟ್ ತನ್ನ ಬ್ರಾಂಡ್ ಪಾರ್ಟ್ನರ್ ಆಗಿ ಸುಪ್ರಸಿದ್ಧ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರನ್ನು ಘೋಷಣೆ ಮಾಡಿದೆ. ರವಿಚಂದರ್ ಅವರ instagram ರೀಲ್ ನಲ್ಲಿ ಸ್ಕಿನ್ ಕೇರ್ ಡಿಕನ್ಸ್ ಸ್ಟ್ರಕ್ಟ್ ಇತ್ತು. ಇದನ್ನು ಅಭಿಮಾನಿಗಳು ಗಮನಿಸಿದರು. ಆ ಬಳಿಕ ಇದು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿತು. ಇಂಟರ್ನೆಟ್ ನಲ್ಲಿ ಸೆನ್ಸೇಶನ್ ಆದ ವಿಷಯ ಈಗ ಪಾರ್ಟ್ನರ್ ಶಿಪ್ ಗೆ ಎಡೆ ಮಾಡಿಕೊಟ್ಟಿದೆ.ಈ ಬಗ್ಗೆ ಸಂಸ್ಥೆಯ ಸಿಇಒ ಮಾಲಿನಿ ಅಡಪುರೆಡ್ಡಿ ಅವರು ಮಾತನಾಡಿದ್ದಾರೆ. ಜನರು ಸಹಜವಾಗಿ ಸ್ಪಂದಿಸಿ…

News Desk

ಅಂಕೋಲಾದ ಅಡ್ಲೂರಿನಲ್ಲಿ ಅದ್ದೂರಿ ಪ್ರತಿಭಾ ಪುರಸ್ಕಾರ ಹಾಗೂ ನಾಟಕ ಪ್ರದರ್ಶನ: ಗೋಪು ನಾಯಕರ ಸಮಾಜಮುಖಿ ಚಿಂತನೆಗೆ ಶಾಸಕ ಸತೀಶ್ ಸೈಲ್ ಮೆಚ್ಚುಗೆ..

ಅಂಕೋಲಾ ತಾಲೂಕಿನ ಅಡ್ಲೂರು ಗ್ರಾಮದ ಸದಾ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಶ್ರೀ ನಾಗದೇವತ ಶ್ರೀ ನರಸಿಂಹ ನಾಟ್ಯ ಮಂಡಳಿಯ ವತಿಯಿಂದ, ಮಂಡಳಿಯ ಅಧ್ಯಕ್ಷರಾದ ಶ್ರೀ ಗೋಪು ನಾಯಕ ಅಡ್ಲೂರು ಅವರ ನೇತೃತ್ವದಲ್ಲಿ ನಿನ್ನೆ ದ್ವಿತೀಯ ವರ್ಷದ ವಿದ್ಯಾರ್ಥಿಗಳ 'ಪ್ರತಿಭಾ ಪುರಸ್ಕಾರ' ಹಾಗೂ 'ನಾಟಕ ಪ್ರದರ್ಶನ' ಕಾರ್ಯಕ್ರಮವು ಅತ್ಯಂತ ಅದ್ದೂರಿಯಾಗಿ ಜರುಗಿತು. ಕಂಚಿನಬಾಗಿಲ ಶ್ರೀ ನಾಗದೇವರ ಹಾಗೂ ಶ್ರೀ ನರಸಿಂಹ ದೇವರ ವರ್ಧಂತಿ ಉತ್ಸವದ ಶುಭ ಸಂದರ್ಭದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವುದು ವಿಶೇಷವಾಗಿದೆ. ಊರಿನ ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಗುರುತಿಸಿ ಬೆನ್ನುತಟ್ಟುವ ಗೋಪು ನಾಯಕ ಅಡ್ಲೂರ್…

News Desk

ಅಂಕೋಲಾ : ಶಿರೂರಿನಲ್ಲಿ ಅವೈಜ್ಞಾನಿಕವಾಗಿ ರಸ್ತೆ ಕಾಮಗಾರಿಯ ಮಣ್ಣು ಸುರಿದು ಕೃತಕ ಗುಡ್ಡ ನಿರ್ಮಾಣ : ಮಳೆಗಾಲದಲ್ಲಿ ಕಾದಿದೆಯಾ ಮಹಾ ಕಂಟಕ.?

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯಿಂದಾಗಿ ಅಂಕೋಲಾ ತಾಲೂಕಿನ ಶಿರೂರು ಗ್ರಾಮಸ್ಥರು ಮತ್ತೊಮ್ಮೆ ಆತಂಕದ ನೆರಳಿನಲ್ಲಿ ದಿನ ದೂಡುವಂತಾಗಿದೆ. ರಸ್ತೆ ಕಾಮಗಾರಿಗೆಂದು ಅಗೆದು ತೆಗೆದ ಮಣ್ಣನ್ನು ಐ.ಆರ್.ಬಿ ಕಂಪನಿಯು ಸುರಕ್ಷಿತವಾಗಿ ವಿಲೇವಾರಿ ಮಾಡುವ ಬದಲು, ಅವೈಜ್ಞಾನಿಕವಾಗಿ ಒಂದೇ ಕಡೆ ರಾಶಿ ಹಾಕಿ ಬೃಹತ್ 'ಕೃತಕ ಗುಡ್ಡ'ವನ್ನೇ ನಿರ್ಮಿಸುತ್ತಿರುವುದು ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ರಸ್ತೆ ಮಣ್ಣಿನಿಂದಲೇ ಎದ್ದು ನಿಂತ ಗುಡ್ಡ: ನಿಯಮಗಳ ಪ್ರಕಾರ, ರಸ್ತೆ ಅಥವಾ ಗುಡ್ಡ ಅಗೆಯುವಾಗ ಬರುವ ಮಣ್ಣನ್ನು ಜನವಸತಿ ಹಾಗೂ ರಸ್ತೆಗೆ ತೊಂದರೆಯಾಗದಂತೆ ನಿಗದಿತ ಡಂಪಿಂಗ್ ಯಾರ್ಡ್‌ಗಳಿಗೆ ಸಾಗಿಸಿ ವಿಲೇವಾರಿ…

News Desk

ಅಂಕೋಲಾ ರಿಕ್ಷಾ ಯೂನಿಯನ್ ‘ಕ್ರಿಕೆಟ್ ಸಂಗ್ರಾಮ-2026’ – ಇಂದು ಮಹಾ ಸಮಾರೋಪ: ದಾನಿಗಳ ಸಹಕಾರಕ್ಕೆ ಆಯೋಜಕರ ಕೃತಜ್ಞತೆ.!

ಅಂಕೋಲಾ: ಅಂಕೋಲಾ ತಾಲ್ಲೂಕು ರಿಕ್ಷಾ ಯೂನಿಯನ್ ಆಯೋಜಿಸಿರುವ ಬೃಹತ್ ಕ್ರಿಕೆಟ್ ಪಂದ್ಯಾವಳಿಯು ಇಂದು ಜೈಹಿಂದ್ ಮೈದಾನದಲ್ಲಿ ಅಂತಿಮ ಘಟ್ಟಕ್ಕೆ ತಲುಪಿದೆ. ತಾಲ್ಲೂಕಿನ 24 ತಂಡಗಳು ಭಾಗವಹಿಸಿರುವ ಈ ಕ್ರೀಡಾಕೂಟದ ಯಶಸ್ಸಿನ ಹಿಂದೆ ಅನೇಕ ಗಣ್ಯ ದಾನಿಗಳ ಉದಾರ ಹಸ್ತವಿದೆ ಎಂದು ಆಯೋಜಕರು ಸ್ಮರಿಸಿದ್ದಾರೆ. ಪ್ರಮುಖ ದಾನಿಗಳ ವಿವರ: ಪಂದ್ಯಾವಳಿಯ ಗರಿಮೆಯನ್ನು ಹೆಚ್ಚಿಸಿದ ಪ್ರಮುಖ ದಾನಿಗಳ ವಿವರಗಳು ಹೀಗಿವೆ: ಬಹುಮಾನದ ಮೊತ್ತ: ಪಂದ್ಯಾವಳಿಯ ಪ್ರಥಮ ಹಾಗೂ ದ್ವಿತೀಯ ಬಹುಮಾನದ ನಗದು ಮೊತ್ತವನ್ನು ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀಮತಿ ರೂಪಾಲಿ ನಾಯ್ಕ ಅವರು ನೀಡಿ ಕ್ರೀಡಾಪಟುಗಳನ್ನು…

News Desk

ಡ್ರೈವರ್ ಸೀಟಿನಲ್ಲಿರಬೇಕಾದ ಶವ ಹಿಂಬದಿ ಸೀಟಿಗೆ ಬಂದಿದ್ದೇಗೆ? ‘ಅಪಘಾತ’ದ ನೆಪದಲ್ಲಿ ವ್ಯವಸ್ಥಿತ ಕೊಲೆ ಶಂಕೆ..?

ಯಲ್ಲಾಪುರ: ರಸ್ತೆ ಬದಿಯ ತಗ್ಗಿಗೆ ಕಾರು ಬಿದ್ದು, ಬೆಂಕಿ ಹೊತ್ತಿಕೊಂಡು ಯುವಕನೊಬ್ಬ ಸಜೀವ ದಹನವಾಗಿದ್ದಾನೆ ಎಂದು ನಂಬಲಾಗಿದ್ದ ಪ್ರಕರಣ ಇದೀಗ ಭಾರಿ ತಿರುವು ಪಡೆದುಕೊಂಡಿದೆ. ಸುಟ್ಟ ಕಾರಿನ ಹಿಂಬದಿ ಸೀಟಿನಲ್ಲಿ ಶವ ಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದಲೇ ಕೊಲೆ ಮಾಡಿ ಕಾರಿಗೆ ಬೆಂಕಿ ಹಚ್ಚಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಮೃತನ ತಂದೆ ನೀಡಿದ ದೂರಿನನ್ವಯ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಇದೀಗ 'ಕೊಲೆ' ಹಾಗೂ 'ಸಾಕ್ಷ್ಯ ನಾಶ'ದ ಎಫ್.ಐ.ಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಬೆಳಗಾವಿಯ ಕನಬರಗಿ ರಸ್ತೆಯ ಚಂದ್ರಮೌಳಿ ಕಾಲೋನಿ ನಿವಾಸಿ ನಿತೇಶ್…

News Desk

ಪ್ರೀತಿಸಿ ಕೈಕೊಟ್ಟ, ನಡುರಸ್ತೆಯಲ್ಲೇ ಹಲ್ಲೆಗೈದ: ಯುವತಿ ಮತ್ತು ತಾಯಿಗೆ ಜೀವಬೆದರಿಕೆ.!

ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದಲ್ಲದೆ, ದಲಿತ ಯುವತಿ ಮತ್ತು ಆಕೆಯ ತಾಯಿಯ ಮೇಲೆ ನಡುರಸ್ತೆಯಲ್ಲಿ ಹಲ್ಲೆ ಹಾಗೂ ಜಾತಿನಿಂದನೆ ಮಾಡಿರುವ ಗಂಭೀರ ಘಟನೆ ವರದಿಯಾಗಿದೆ. ಈ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರವೀಣ್ ತಿಮ್ಮಪ್ಪ ಅಂಬಿಗ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಕುಮಟಾ ತಾಲೂಕಿನ ಮಿರ್ಜಾನ್ ಬಿಜಿಎಸ್ ಸ್ಕೂಲ್ ಬಳಿಯ ನಿವಾಸಿ ಜಯಶ್ರೀ ಸುಬ್ರಾಯ ಮುಕ್ರಿ (42 ವರ್ಷ ) ಎಂಬುವವರು ನೀಡಿದ ದೂರಿನನ್ವಯ ಈ ಎಫ್.ಐ.ಆರ್ ದಾಖಲಾಗಿದೆ. ಆರೋಪಿ ಪ್ರವೀಣ್, ದೂರುದಾರರ ಮಗಳಾದ ಚೈತ್ರಾಳನ್ನು (2೦) ಪ್ರೀತಿಸಿ…

News Desk
- Sponsored -
Ad imageAd image

Editor's Pick

Weather
25°C
Karnataka
scattered clouds
25° _ 25°
61%
5 km/h
Thu
24 °C
Fri
37 °C
Sat
37 °C
Sun
37 °C
Mon
36 °C

Follow US

Most Read

Discover Categories

‘ಕ್ರಿಕೆಟ್ ಸಂಗ್ರಾಮ-2026’: ಅಂಕೋಲಾದಲ್ಲಿ ಏಪ್ರಿಲ್ 13 ರಿಂದ ಬೃಹತ್ ತಾಲ್ಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ..

ಅಂಕೋಲಾ: ಅಂಕೋಲಾ ತಾಲುಕು ರಿಕ್ಷಾ ಚಾಲಕರು ಮತ್ತು ಮಾಲಕರ ಸಂಘದ ವತಿಯಿಂದ ಇದೇ ಏಪ್ರಿಲ್ 13…

News Desk

ಉತ್ತರ ಕನ್ನಡ ಜಿಲ್ಲಾ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ನೂತನ ಸಮಿತಿ ಪದಗ್ರಹಣ: ಅಧಿಕಾರಿಗಳ ಹಕ್ಕುಗಳ ರಕ್ಷಣೆ ಹಾಗೂ ಜನಸೇವೆಗೆ ಬದ್ಧ ಎಂದ ಅಧ್ಯಕ್ಷ ಗಿರೀಶ್ ನಾಯಕ..

ಕಾರವಾರ: ಗ್ರಾಮೀಣಾಭಿವೃದ್ಧಿಯ ಆಧಾರ ಸ್ತಂಭವಾಗಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಹಿತರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ 'ಉತ್ತರ ಕನ್ನಡ…

News Desk

ಪ್ರಮುಖ ವೃತ್ತದಲ್ಲಿ ಭೀಕರ ಅವಘಡ: ಬೈಕ್-ಲಾರಿ ಡಿಕ್ಕಿಗೆ ಸವಾರನ ದಾರುಣ ಅಂತ್ಯ, ಮತ್ತೋರ್ವ ಗಂಭೀರ.!

ಕುಮಟಾ ಪಟ್ಟಣದ ಪ್ರಮುಖ ಕೇಂದ್ರವಾದ ಗಿಬ್ ಸರ್ಕಲ್ ಬಳಿ, ಬೈಕ್ ಮತ್ತು ಲಾರಿ ನಡುವೆ ಭೀಕರ…

News Desk

ಕರ್ತವ್ಯನಿರತ ಪಿಡಿಒ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ: ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ‘ಗಿರೀಶ್ ನಾಯಕ’..

ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ರಾಜೇಶ ಆರ್. ನಾಯ್ಕ ಅವರ…

News Desk

ಗೋಪಾಲಕೃಷ್ಣ ನಾಯಕ ಹತ್ಯೆ ಯತ್ನ ಪ್ರಕರಣ: ಶಾಸಕ ಸತೀಶ್ ಸೈಲ್ ಮೇಲಿನ ‘ಆಧಾರ ರಹಿತ’ ಆರೋಪಕ್ಕೆ ಜಿಲ್ಲಾ ಕಾಂಗ್ರೆಸ್ ತೀವ್ರ ಖಂಡನೆ..

ಕಾರವಾರ: ಕೆಪಿಸಿಸಿ ಮಾಜಿ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಅವರು ತಮ್ಮ ಮೇಲಿನ ಹಲ್ಲೆ ಯತ್ನ ಪ್ರಕರಣದಲ್ಲಿ…

News Desk

“ಗೋಪಾಲಕೃಷ್ಣ ನಾಯಕ” ಮೇಲಿನ ಭೀಕರ ದಾಳಿ ಖಂಡನೀಯ: ಅಂಕೋಲಾ ಭಯಮುಕ್ತವಾಗಲಿ ಎಂದ ಯುವ ಕಾಂಗ್ರೆಸ್ ಅಧ್ಯಕ್ಷ ‘ಅಭಿನಂದನ್ ಖಾರ್ವಿ’..

ಅಂಕೋಲಾ: ಕೆಪಿಸಿಸಿ ಮಾಜಿ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯಕ್ ಅವರ ಮೇಲೆ ಹಾಡಹಗಲೇ…

News Desk