ಮುಂಡಗೋಡ ಪಿಎಸ್ಐ ಯಲ್ಲಾಲಿಂಗ್ ಕುನ್ನೂರು ಇನ್ನಿಲ್ಲ..

ಮುಂಡಗೋಡ ಪೊಲೀಸ್ ಠಾಣೆಯ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯಲ್ಲಾಲಿಂಗ್ ಕುನ್ನೂರು (33) ಅವರು ಅನಾರೋಗ್ಯದಿಂದ ವಿಧಿವಶರಾಗಿದ್ದು, ದಕ್ಷ ಅಧಿಕಾರಿಯ ಅಕಾಲಿಕ ಅಗಲಿಕೆ ಪೊಲೀಸ್ ವಲಯ ಹಾಗೂ ಸಾರ್ವಜನಿಕರಲ್ಲಿ ತೀವ್ರ ಶೋಕ ತಂದಿದೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯಲ್ಲಾಲಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸತತ ಪ್ರಯತ್ನ ನಡೆಸಿದರೂ ಚಿಕಿತ್ಸೆ ಫಲಕಾರಿಯಾಗದೇ, ಇಂದು ಅವರು ಕೊನೆಯುಸಿರೆಳೆದಿದ್ದಾರೆ. ಜನಾನುರಾಗಿ ಅಧಿಕಾರಿ: ಯಲ್ಲಾಲಿಂಗ್ ಕುನ್ನೂರು ಅವರು ಮುಂಡಗೋಡ ಠಾಣೆಗೆ ಎರಡನೇ ಬಾರಿಗೆ ಪಿಎಸ್ಐ ಆಗಿ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು.…

News Desk

ಅಂಕೋಲಾ: ಅದ್ದೂರಿಯಾಗಿ ಜರುಗಿದ ‘ಕರಾವಳಿ ಕನ್ನಡ ಹಬ್ಬ-2026’; ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಲರವ..

ಅಂಕೋಲಾ: ಅಂಕೋಲಾ ಪಟ್ಟಣದ ಹೃದಯಭಾಗದಲ್ಲಿರುವ ಜೈಹಿಂದ್ ಮೈದಾನದಲ್ಲಿ ನಿನ್ನೆ ಫೆಬ್ರವರಿ 1ರಂದು ಕನ್ನಡದ ಕಂಪು ಹರಡಿತು. ಕರ್ನಾಟಕ ರಣಧೀರರ ವೇದಿಕೆ ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ "ಕರಾವಳಿ ಕನ್ನಡ ಹಬ್ಬ-2026" ಕಾರ್ಯಕ್ರಮವು ಸಾಂಸ್ಕೃತಿಕ ವೈಭವ ಮತ್ತು ಜನಸ್ತೋಮದೊಂದಿಗೆ ಅತ್ಯಂತ ಯಶಸ್ವಿಯಾಗಿ ಜರುಗಿತು. ಈ ಬೃಹತ್ ಕಾರ್ಯಕ್ರಮದ ನೇತೃತ್ವವನ್ನು ಕರ್ನಾಟಕ ರಣಧೀರರ ವೇದಿಕೆಯ ಜಿಲ್ಲಾಧ್ಯಕ್ಷರಾದ ಸೂರಜ ಪಾಂಡುರಂಗ ನಾಯ್ಕ ಅವರು ವಹಿಸಿದ್ದರು. ಪರಿಸರ ಕಾಳಜಿಯ ವಿಶಿಷ್ಟ ಉದ್ಘಾಟನೆ: ಸಾಮಾನ್ಯವಾಗಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸುವುದು ವಾಡಿಕೆ. ಆದರೆ, ಈ ಬಾರಿ ಕರಾವಳಿಯ ಬದುಕಿನ…

News Desk

ಗಂಗಾವಳಿ ಸೇತುವೆಯ ಅವೈಜ್ಞಾನಿಕ ತಿರುವಿನಲ್ಲಿ ದಿಢೀರ್ ಎದುರಾಗುವ ಬ್ಯಾರಿಕೇಡ್; ತಿರುವಿನ ಎರಡೂ ತುದಿಯಲ್ಲಿ ಬ್ಯಾರಿಕೇಡ್ ಅಳವಡಿಕೆ ಅಗತ್ಯ..

ಅಂಕೋಲಾ: ಮಂಜುಗುಣಿಯಿಂದ ಗಂಗಾವಳಿ ಕಡೆಗೆ ಸಂಪರ್ಕಿಸುವ ಗಂಗಾವಳಿ ಸೇತುವೆಯ ಸಂಪರ್ಕವಿರುವ ರಸ್ತೆ ತಿರುವು ವಾಹನ ಸಂಚಾರಕ್ಕೆ ಸವಾಲಾಗಿ ಪರಿಣಮಿಸಿದೆ. ವಿಶೇಷವಾಗಿ ಮಂಜುಗುಣಿ ಕಡೆಯಿಂದ ಗಂಗಾವಳಿ ಕಡೆಗೆ ಸಾಗುವಾಗ, ಇಲ್ಲಿನ ಅವೈಜ್ಞಾನಿಕ ತಿರುವಿನಲ್ಲಿ ವಾಹನಗಳ ನಿಯಂತ್ರಣ ತಪ್ಪುವ ಸಾಧ್ಯತೆ ಹೆಚ್ಚಿದೆ. ಪ್ರಸ್ತುತ ಈ ಜಾಗದಲ್ಲಿರುವ ಬ್ಯಾರಿಕೇಡ್ ಚಾಲಕರಿಗೆ ತೀರಾ ಹತ್ತಿರ ಬಂದಾಗಲಷ್ಟೇ ಗೋಚರಿಸುತ್ತಿದ್ದು, ಇಲ್ಲಿನ ಅವೈಜ್ಞಾನಿಕ ತಿರುವಿನಲ್ಲಿ ದಿಡೀರನೆ ಬ್ಯಾರಿಕೇಡ್ ಎದುರಾಗುವುದರಿಂದ ಚಾಲಕರು ಗಲಿಬಿಲಿಗೊಂಡು ವಾಹನ ನಿಯಂತ್ರಿಸಲು ಕಷ್ಟಪಡುವಂತಾಗಿದೆ. ರಸ್ತೆ ಮತ್ತು ತಿರುವಿನ ರಚನೆ ಈ ರೀತಿಯಾಗಿರುವುದರಿಂದ, ಬ್ಯಾರಿಕೇಡ್ ಕೂಡ ಕಾಣದಂತೆ ಇರುವುದು ಅಪಾಯವನ್ನು ಹೆಚ್ಚಿಸಿದೆ.…

News Desk

ಅಂಕೋಲಾದಲ್ಲಿ ಫೆ.1ರಂದು ವಿಜೃಂಭಣೆಯ ‘ಕರಾವಳಿ ಕನ್ನಡ ಹಬ್ಬ’: ಕಲೆ, ಸಾಹಿತ್ಯ, ಸಂಗೀತದ ಸಂಗಮ..

ಅಂಕೋಲಾ: ಕನ್ನಡ ನಾಡು-ನುಡಿಯ ಕಂಪನ್ನು ಪಸರಿಸುವ ಮತ್ತು ಸ್ಥಳೀಯ ಕಲಾ ವೈಭವವನ್ನು ಅನಾವರಣಗೊಳಿಸುವ ಮಹತ್ವಾಕಾಂಕ್ಷೆಯೊಂದಿಗೆ, ಕರ್ನಾಟಕ ರಣಧೀರರ ವೇದಿಕೆಯ ವತಿಯಿಂದ ಇದೇ ಫೆಬ್ರವರಿ 1 ರಂದು ಪಟ್ಟಣದ ಜೈಹಿಂದ್ ಮೈದಾನದಲ್ಲಿ ‘ಕರಾವಳಿ ಕನ್ನಡ ಹಬ್ಬ’ವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಅಂದು ಸಂಜೆ 5 ಗಂಟೆಗೆ ವರ್ಣರಂಜಿತ ನೃತ್ಯ ಸ್ಪರ್ಧೆಯೊಂದಿಗೆ ಆರಂಭವಾಗಲಿದ್ದು, ಸ್ಥಳೀಯ ಪ್ರತಿಭೆಗಳು ಕರಾವಳಿಯ ಜಾನಪದ ಹಾಗೂ ಕನ್ನಡದ ಗೀತೆಗಳಿಗೆ ಹೆಜ್ಜೆ ಹಾಕುವ ಮೂಲಕ ಪ್ರೇಕ್ಷಕರಿಗೆ ಮನರಂಜನೆ ನೀಡಲಿದ್ದಾರೆ. ಸಾಧಕರಿಗೆ ಸನ್ಮಾನ: ಸಂಜೆ 7 ಗಂಟೆಗೆ ನಡೆಯಲಿರುವ ಮುಖ್ಯ ವೇದಿಕೆ ಕಾರ್ಯಕ್ರಮದಲ್ಲಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ…

News Desk

ವಿಭೂತಿ ಜಲಪಾತದಲ್ಲಿ ಪ್ರಾಣಾಪಾಯದಿಂದ ಪಾರಾದ ಪ್ರವಾಸಿಗ; ರಕ್ಷಣಾ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ..

ಅಂಕೋಲಾ: ತಾಲೂಕಿನ ಗಡಿಭಾಗದಲ್ಲಿರುವ ಪ್ರಸಿದ್ಧ ವಿಭೂತಿ ಜಲಪಾತದಲ್ಲಿ ಸೋಮವಾರ ಮೋಜಿಗೆಂದು ಬಂದಿದ್ದ ಪ್ರವಾಸಿಗನೊಬ್ಬರು ನೀರಿನ ಆಳಕ್ಕೆ ಸಿಲುಕಿ ಒದ್ದಾಡುತ್ತಿದ್ದಾಗ, ಸ್ಥಳದಲ್ಲಿದ್ದ ರಕ್ಷಣಾ ಸಿಬ್ಬಂದಿ ತಮ್ಮ ಸಮಯಪ್ರಜ್ಞೆಯಿಂದ ಅವರನ್ನು ರಕ್ಷಿಸಿದ ಘಟನೆ ನಡೆದಿದೆ. ತಮಿಳುನಾಡು ಮೂಲದ 19 ವರ್ಷದ ಆದಿತ್ಯೆ ಎಂಬುವವರೇ ಪ್ರಾಣಾಪಾಯದಿಂದ ಪಾರಾದ ಯುವಕ. ಇವರು ತಮಿಳುನಾಡಿನಿಂದ ಸುಮಾರು 40 ಜನರ ಪ್ರವಾಸಿಗರ ತಂಡದೊಂದಿಗೆ ಇಲ್ಲಿಗೆ ಆಗಮಿದ್ದರು. ಜಲಪಾತದ ವೀಕ್ಷಣೆ ವೇಳೆ ಉತ್ಸಾಹದಲ್ಲಿ ಸ್ನೇಹಿತರಿಗಿಂತ ಮುಂದೆ ಸಾಗಿದ ಆದಿತ್ಯೆ , ನೀರಿನ ಆಳದ ಅರಿವಿಲ್ಲದೆ ಇಳಿದಿದ್ದು, ಈ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಲಾರಂಭಿಸಿದ್ದಾರೆ.…

News Desk

ಜನಪರ ಆಡಳಿತಕ್ಕೆ ಬ್ರೇಕ್: ಅಂಕೋಲಾ ತಹಶೀಲ್ದಾರ್ ಡಾ. ಚಿಕ್ಕಪ್ಪ ನಾಯಕ ವರ್ಗಾವಣೆ..

ಅಂಕೋಲಾ (ಜ24): ವೃತ್ತಿಯಿಂದ ವೈದ್ಯರಾಗಿದ್ದು, ನಂತರ ಕೆಎಎಸ್ ಪರೀಕ್ಷೆಯಲ್ಲಿ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದು ಆಡಳಿತ ಸೇವೆಗೆ ಪ್ರವೇಶಿಸಿದ ಯುವ ಹಾಗೂ ಕಾರ್ಯಕ್ಷಮ ಅಧಿಕಾರಿ ಡಾ. ಚಿಕ್ಕಪ್ಪ ನಾಯಕ ಅವರು, ಬೆಳಗಾವಿಯ ಬೈಲಹೊಂಗಲದಲ್ಲಿ ಗ್ರೇಡ್–2 ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ ಬಳಿಕ 30 ಜೂನ್ 2025ರಂದು ಅಂಕೋಲಾ ತಾಲ್ಲೂಕಿನ ತಹಶೀಲ್ದಾರ್ ಹಾಗೂ ತಾಲೂಕು ದಂಡಾಧಿಕಾರಿಯಾಗಿ (Executive Magistrate) ಗ್ರೇಡ್–1 ತಹಶೀಲ್ದಾರ್ ಹುದ್ದೆಗೆ ನೇಮಕಗೊಂಡು ಅಧಿಕಾರ ಸ್ವೀಕರಿಸಿದರು. ಹಲವು ವರ್ಷಗಳ ನಂತರ ಅಂಕೋಲಾಕ್ಕೆ ದೊರಕಿದ ಪೂರ್ಣಾವಧಿ ತಹಶೀಲ್ದಾರ್ ಎಂಬ ಕಾರಣಕ್ಕೆ ಅವರ ಆಗಮನವೇ ಸಾರ್ವಜನಿಕರಲ್ಲಿ ಶಿಸ್ತು,…

News Desk

ಅಂಕೋಲಾದಲ್ಲಿ ಜನವರಿ 23ರಂದು ಮೂರನೇ ವರ್ಷದ ಹಿಂದೂ ಉತ್ಸವ— ಪೋಸ್ಟರ್ ಅನಾವರಣ; ಹಿಂದೂ ಒಗ್ಗಟ್ಟಿನ ಕರೆ..

ಅಂಕೋಲಾ ತಾಲೂಕಿನಲ್ಲಿ ಜನವರಿ 23ರಂದು ನಡೆಯಲಿರುವ ಮೂರನೇ ವರ್ಷದ ಹಿಂದೂ ಉತ್ಸವದ ಪೋಸ್ಟರ್ ಅನ್ನು ದಿನಾಂಕ 21-12-2026ರಂದು ಹಿಂದೂ ಉತ್ಸವ ಸಮಿತಿಯ ವತಿಯಿಂದ ಶಾಂತದುರ್ಗ ದೇವಿಯ ಬಂಡಿಕಟ್ಟೆ ಹತ್ತಿರ ಅನಾವರಣಗೊಳಿಸಲಾಯಿತು. ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ವಿವಿಧ ಜಾತಿಗಳನ್ನು ಪ್ರತಿನಿಧಿಸುವ ಹಿಂದೂ ಸಮಾಜದ ಪ್ರಮುಖರು ಉಪಸ್ಥಿತರಿದ್ದು, ಹಿಂದೂ ಉತ್ಸವಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹಿಂದೂ ಉತ್ಸವ ಸಮಿತಿಯ ಪ್ರಮುಖರಾದ ಸುನಿಲ ನಾಯ್ಕ ಹೊನ್ನಿಕೇರಿ, “ಎಲ್ಲಾ ದೇವರಿಗೆ ನಮಸ್ಕರಿಸುತ್ತಾ ಅಂಕೋಲಾದ ಸಮಸ್ತ ಹಿಂದೂ ಬಾಂಧವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ. ಅಂಕೋಲಾದ ಹಿಂದೂ…

News Desk

ಹಟ್ಟಿಕೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಇ-ಕಲಿಕಾ’ ಕೊಠಡಿ ಉದ್ಘಾಟನೆ..

ಅಂಕೋಲಾ :ತಾಲೂಕಿನ ಹಟ್ಟಿಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಶ್ರೀ ಮಾತೋಶ್ರೀ ಗಾಯತ್ರಿ ಸೇವಾ ಸಂಸ್ಥೆ ವತಿಯಿಂದ ಪ್ರೊಜೆಕ್ಟರ್ ವ್ಯವಸ್ಥೆಯನ್ನು ಒದಗಿಸಿ ‘ಇ-ಕಲಿಕಾ’ ಕೊಠಡಿಯನ್ನು ಉದ್ಘಾಟಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಜತ್ ಭಟ್ ಅವರು ಪ್ರೊಜೆಕ್ಟರ್ ಅನ್ನು ಸ್ಕ್ರೀನ್ ಮೇಲೆ ಚಾಲನೆ ನೀಡುವ ಮೂಲಕ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಮಕ್ಕಳು ಮನೆಗಳಲ್ಲಿ ಮೊಬೈಲ್ ವೀಕ್ಷಣೆ ಮಾಡುವ ಅವಶ್ಯಕತೆ ಇಲ್ಲದೆ, ಶಾಲೆಯಲ್ಲಿಯೇ ಶಿಕ್ಷಕರ ಮಾರ್ಗದರ್ಶನದಲ್ಲಿ ಪ್ರೊಜೆಕ್ಟರ್ ಮೂಲಕ ಪಾಠಗಳನ್ನು ಕಲಿಯಬೇಕು. ಇದರಿಂದ ಕಲಿಕೆ…

News Desk

ಗ್ರಾಮದ ಹೆಸರು ಕೂಡ ಸರಿಯಾಗಿ ಬರೆಯಲಾಗದ ಅಂಕೋಲಾ ಪುರಸಭೆ – “ಬೇಲುಕೇರಿ ರಸ್ತೆ” ವಿವಾದ: ಇದು ಟೈಪಿಂಗ್ ತಪ್ಪೇ? ಇಲ್ಲ ಆಡಳಿತಾತ್ಮಕ ನಿರ್ಲಕ್ಷ್ಯವೇ..?

ಅಂಕೋಲಾ: ಅಂಕೋಲಾ ಪುರಸಭೆ ವ್ಯಾಪ್ತಿಯಲ್ಲಿ ವಿವಿಧ ವಾರ್ಡ್‌ಗಳ ರಸ್ತೆ ಹಾಗೂ ಪ್ರದೇಶಗಳ ಗುರುತಿಗಾಗಿ ಸಾರ್ವಜನಿಕ ಹಣ ಬಳಸಿ ಸೂಚನಾ ನಾಮಫಲಕಗಳನ್ನು ಅಳವಡಿಸಲಾಗುತ್ತಿದೆ. ಸಾಮಾನ್ಯವಾಗಿ ಜನರಿಗೆ ದಾರಿ ತಿಳಿಯಲು ಹಾಗೂ ಪ್ರದೇಶಗಳನ್ನು ಗುರುತಿಸಲು ಸಹಕಾರಿಯಾಗಬೇಕಾದ ಈ ಕಾರ್ಯ ಇದೀಗ ಪುರಸಭೆಯ ಅಜಾಗರೂಕತೆ ಮತ್ತು ನಿರ್ಲಕ್ಷ್ಯವನ್ನು ಬಹಿರಂಗಪಡಿಸುವ ಉದಾಹರಣೆಯಾಗಿ ಮಾರ್ಪಟ್ಟಿದೆ. ಇತ್ತೀಚೆಗೆ ಬೆಲೇಕೇರಿ ಗ್ರಾಮಕ್ಕೆ ಸಂಬಂಧಿಸಿದ ರಸ್ತೆಯ ನಾಮಫಲಕದಲ್ಲಿ ಗ್ರಾಮ ಹೆಸರನ್ನು ತಪ್ಪಾಗಿ “ಬೇಲುಕೇರಿ ರಸ್ತೆ” ಎಂದು ಬರೆದು ಹಾಕಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ಬೆಲೇಕೇರಿ ಎಂಬುದು ದಶಕಗಳಿಂದಲೂ ಸರಕಾರಿ ದಾಖಲೆಗಳು,…

News Desk

ಬೆಲೆಕೇರಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ: ಅಶಾಂತಿ ಸೃಷ್ಟಿಸಿದ ವ್ಯಕ್ತಿ ವಿರುದ್ಧ ಗಡಿಪಾರು ಕ್ರಮಕ್ಕೆ ಎಸ್‌ಡಿಎಂಸಿ ಅಧ್ಯಕ್ಷರಿಂದ ತಹಶೀಲ್ದಾರರಿಗೆ ಮನವಿ..

ಅಂಕೋಲಾ ತಾಲೂಕಿನ ಬೇಲೆಕೇರಿ ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಘಟನೆಗಳು ನಡೆಯುತ್ತಿದ್ದು, ಗ್ರಾಮಸ್ಥರಲ್ಲಿ ಭಯ ಹಾಗೂ ಆತಂಕದ ವಾತಾವರಣ ನಿರ್ಮಾಣವಾಗಿದೆ.ಈ ಸಂಬಂಧ ಸುರಜ ಗುರುದಾಸ ಬಾನಾವಳಿಕರ, ಎಸ್.ಡಿ.ಎಮ್.ಸಿ ಅಧ್ಯಕ್ಷರು, ಪಿ.ಎಮ್.ಶ್ರೀ ಎಮ್.ಎಚ್.ಪಿ.ಎಸ್ ಶಾಲೆ ಖಾರ್ವಿವಾಡ, ಬೇಲೆಕೇರಿ ಅವರು ಅಂಕೋಲಾ ತಹಶೀಲ್ದಾರರ ಕಚೇರಿಗೆ ದಿನಾಂಕ12-1-2026ರಂದು ಲಿಖಿತ ದೂರು ಸಲ್ಲಿಸಿದ್ದಾರೆ. ದೂರು ಪತ್ರದಲ್ಲಿ, ಬೇಲೆಕೇರಿ ಗ್ರಾಮದ ಒಬ್ಬ ಅಶಾಂತಿ ಸೃಷ್ಟಿಸುವ ವ್ಯಕ್ತಿ ಕಳೆದ ಕೆಲವು ದಿನಗಳಿಂದ ಗ್ರಾಮದಲ್ಲಿ ಗುಂಡಾಗಿರಿ ನಡೆಸುತ್ತಿದ್ದು, ಗಣ್ಯ ವ್ಯಕ್ತಿಗಳ ಮೇಲೆ ಪದೇಪದೇ ಹಲ್ಲೆ ಮಾಡುತ್ತಿರುವ ಆರೋಪಗಳನ್ನು ಉಲ್ಲೇಖಿಸಲಾಗಿದೆ. ವ್ಯಕ್ತಿಯ ವಿರುದ್ಧ ಪೊಲೀಸ್…

News Desk
- Sponsored -
Ad imageAd image

Editor's Pick

Weather
30°C
Karnataka
clear sky
30° _ 30°
18%
5 km/h
Wed
30 °C
Thu
30 °C
Fri
31 °C
Sat
31 °C
Sun
31 °C

Follow US

Most Read

Discover Categories

ಬದುಕು ನೀಡುವ ಕಸುಬೇ ಕೊನೆಗೆ ಮುಳುವಾಯಿತು ; ವಿದ್ಯುತ್ ಶಾಕ್‌ನಿಂದ ತೆಂಗಿನ ಮರವೇರಿದ “ರಾಜು ಗೌಡ” ಸಾವು..

ಅಂಕೋಲಾ: ಮೂಲತಃ ಸೆಂಟ್ರಿಂಗ್ ಕೆಲಸಗಾರರಾಗಿದ್ದ ಇವರು, ಈ ಕೆಲಸವಿಲ್ಲದ ಸಮಯದಲ್ಲಿ ಜೀವನ ನಿರ್ವಹಣೆಗಾಗಿ ತೆಂಗಿನ ಮರ…

News Desk

ಅಂಕೋಲಾ: ವಿವೇಕಾನಂದರ ಆದರ್ಶಗಳು ಯುವಜನತೆಗೆ ದಾರಿದೀಪಕೆಎಲ್ಇ ಶೇಷಗಿರಿ ಪಿಕಳೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ..

ಅಂಕೋಲ:ಸ್ವಾಮಿ ವಿವೇಕಾನಂದರು ನಮ್ಮ ದೇಶದ ಅಮೂಲ್ಯ ಆಸ್ತಿಯಾಗಿದ್ದು, ದೇಶದ ಯುವಜನರೇ ನಿಜವಾದ ಸಂಪತ್ತು ಎಂದು ಅವರು…

News Desk

ಅಂಕೋಲಾದಲ್ಲಿ ರೂರಲ್ ರೋಟರಿಯಿಂದ ರಕ್ತದಾನ ಹಾಗೂ ಉಚಿತ ರಕ್ತ ತಪಾಸಣಾ ಶಿಬಿರ..

ಅಂಕೋಲಾ: ಬುಧವಾರ ದಿನಾಂಕ 13 ರಂದು ಅಂಕೋಲಾ ರೂರಲ್ ರೋಟರಿ ಕ್ಲಬ್ ವತಿಯಿಂದ ರಕ್ತದಾನ ಶಿಬಿರ…

News Desk

ಪಡ್ತಿ ಸಮಾಜದ ಕ್ರಿಕೆಟ್ ಟೂರ್ನಾಮೆಂಟ್ 2026 – ಸೀಸನ್ 1 : ಕ್ರೀಡೆಯ ಜೊತೆ ಪುಣ್ಯದ ಕೆಲಸವೂ ಅಗತ್ಯ – ಗೋಪಾಲಕೃಷ್ಣ ನಾಯಕ..

ಅಂಕೋಲಾ: ಪಡ್ತೀ ಸಮಾಜದ ಕ್ರಿಕೆಟ್ ಟೂರ್ನಮೆಂಟ್ 2026 – ಸೀಸನ್ 1ರ ಉದ್ಘಾಟನಾ ಸಮಾರಂಭವು ಬಾಸಗೋಡದ…

News Desk

ಚಿಣ್ಣರ ಕನಸಿಗೆ ರೆಕ್ಕೆ ಕಟ್ಟುವ ಶಾಂತಿನಿಕೇತನ ಪ್ಲೇಸ್ಕೂಲ್ ಶಿಕ್ಷಣ ಮಾದರಿ : ಸಂಜಯ ಕಾಮತ..

ಅಂಕೋಲಾ : ಮಕ್ಕಳ ಕನಸಿಗೆ ಹಾಗೂ ಪ್ರತಿಭೆಗೆ ನಿಜವಾದ ರೂಪ ಕೊಡುವ ಶಿಲ್ಲಿಗಳೇ ಶಿಕ್ಷಕರು. ಈ…

News Desk

ಮಂಜುಗುಣಿ ಬಳಿ ನಡೆದಿದ್ದ ಭೀಕರ ರಸ್ತೆ ಅಪಘಾತ; ಚಿಕಿತ್ಸೆ ಫಲಕಾರಿಯಾಗದೇ ಅಲಗೇರಿಯ ಯುವಕ ಪ್ರೀತೇಶ್ ನಾಯ್ಕ ಇನ್ನಿಲ್ಲ..

ಅಂಕೋಲಾ: ಇಲ್ಲಿನ ಮಂಜುಗುಣಿ ಸೇತುವೆ ಬಳಿ ಡಿಸೆಂಬರ್ 31 ರ ರಾತ್ರಿ ಸಂಭವಿಸಿದ ಭೀಕರ ರಸ್ತೆ…

News Desk

ಅಂಕೋಲಾದ ಕೋಟೆವಾಡ ದಲ್ಲಿ ಹುಚ್ಚುನಾಯಿ “ಒಬ್ಬ ಮಹಿಳೆಗೆ ಕಚ್ಚಿದರೂ ಆಡಳಿತ ಮೌನ: ನಾಳೆ ಶಾಲಾ ಮಕ್ಕಳಿಗೆ ಏನಾದರೂ ಆದರೆ ಯಾರು ಹೊಣೆ ?”

ಅಂಕೋಲಾ: ಅಂಕೋಲಾ ಪಟ್ಟಣದ ಕೋಟೆವಾಡ ಪ್ರದೇಶದಲ್ಲಿ ಆರಂಭವಾದ ಹುಚ್ಚುನಾಯಿ ಅಟ್ಟಹಾಸ ಇದೀಗ ಕೇವಲ ಒಂದೇ ಪ್ರದೇಶಕ್ಕೆ…

News Desk