ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ: 617 ಅಂಕಗಳೊಂದಿಗೆ ಅಂಕೋಲಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಶಿರೂರಿನ “ಸ್ವೀಕಾರ ನಾಯ್ಕ”..

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೌಲಭ್ಯಗಳ ಕೊರತೆಯ ನಡುವೆಯೂ ತಮ್ಮ ಕಠಿಣ ಪರಿಶ್ರಮ ಹಾಗೂ ಅಚಲ ಆತ್ಮವಿಶ್ವಾಸದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಬಲ್ಲರು ಎಂಬುದಕ್ಕೆ ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಪ್ರತಿಭಾವಂತ ವಿದ್ಯಾರ್ಥಿ ಸ್ವೀಕಾರ ಅರುಣ ನಾಯ್ಕ ಅತ್ಯುತ್ತಮ ನಿದರ್ಶನವಾಗಿದ್ದಾರೆ. ಪಟ್ಟಣದ ಪ್ರತಿಷ್ಠಿತ 'ನಿರ್ಮಲ ಹೃದಯ ಪ್ರೌಢಶಾಲೆಯ ವಿದ್ಯಾರ್ಥಿಯಾಗಿರುವ ಈತ, ಇತ್ತೀಚೆಗೆ ಪ್ರಕಟವಾದ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಒಟ್ಟು 625ಕ್ಕೆ ಬರೋಬ್ಬರಿ 617 ಅಂಕಗಳನ್ನು ( 98.72%) ಗಳಿಸುವ ಮೂಲಕ ಇಡೀ ಅಂಕೋಲಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡು, ತಮ್ಮ ಶಾಲೆ ಹಾಗೂ ಶಿರೂರು…

News Desk

ಬೇಲೆಕೇರಿಯಿಂದ ಮಂಗಳೂರಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ: 11 ತಿಂಗಳ ಬಳಿಕ ಪೋಲಿಸ್ ಠಾಣೆ ಮೆಟ್ಟಿಲೇರಿದ ವೃದ್ಧ ತಂದೆ.!

ಅಂಕೋಲಾ: ಮಂಗಳೂರಿಗೆಂದು ಕೆಲಸದ ನಿಮಿತ್ತ ತೆರಳಿದ್ದ ತಾಲೂಕಿನ ಬೇಲೆಕೇರಿ ಮೂಲದ ಕಾರ್ಮಿಕನೋರ್ವ ಕಳೆದ 11 ತಿಂಗಳುಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದು, ಮಗನ ಬರುವಿಕೆಗಾಗಿ ಕಾಯ್ದು ಸುಸ್ತಾದ ವೃದ್ಧ ತಂದೆ ಇದೀಗ ಅಂಕೋಲಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಬೇಲೆಕೇರಿ ನಿವಾಸಿ, ವೃತ್ತಿಯಲ್ಲಿ ಕೂಲಿ ಕಾರ್ಮಿಕರಾಗಿರುವ ಗಿರೀಶ ಜಾತೂರ ನಾಯ್ಕ (42) ಕಣ್ಮರೆಯಾದ ವ್ಯಕ್ತಿ. ಈತ ಕಳೆದ ವರ್ಷ ಜೂನ್ 26 (26-06-2025) ರಂದು ಮಧ್ಯಾಹ್ನ 3:00 ಗಂಟೆ ಸುಮಾರಿಗೆ ತನ್ನ ಮನೆಯಿಂದ ಮಂಗಳೂರಿಗೆ ಹೋಗುವುದಾಗಿ ಹೇಳಿ ನಿರ್ಗಮಿಸಿದ್ದನು. ಆದರೆ, ಅಂದಿನಿಂದ ಈವರೆಗೂ ಆತ ಮನೆಗೆ ಮರಳಿಲ್ಲ ಹಾಗೂ…

News Desk

ಭಟ್ಕಳದಲ್ಲಿ ಕರುಳು ಹಿಂಡುವ ಜಲದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ 8 ಮಂದಿ ಸಾವು..

ಭಟ್ಕಳ (ಉತ್ತರ ಕನ್ನಡ): ಕಪ್ಪೆಚಿಪ್ಪು ತೆಗೆಯಲು ನದಿಗೆ ಇಳಿದಿದ್ದವರು ನೀರಿನ ಭಾರಿ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿರುವ ಅತ್ಯಂತ ಭೀಕರ ಜಲದುರಂತವೊಂದು ಭಟ್ಕಳ ತಾಲೂಕಿನ ಶಿರಾಲಿಯ ತಟ್ಟೆಹಕ್ಕಲು ನದಿಯಲ್ಲಿ ಭಾನುವಾರ ಸಂಭವಿಸಿದೆ. ಈ ಘೋರ ದುರ್ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದು, ಇಡೀ ಶಿರಾಲಿ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ. ಭಾನುವಾರದ ಕಾರಣ ತಂಡವೊಂದು ಕಪ್ಪೆಚಿಪ್ಪು ಸಂಗ್ರಹಿಸುವ ಉದ್ದೇಶದಿಂದ ಸಮೀಪದ ತಟ್ಟೆಹಕ್ಕಲು ನದಿ ತೀರಕ್ಕೆ ತೆರಳಿತ್ತು. ನದಿಯಲ್ಲಿ ದಿಢೀರನೆ ಎದುರಾದ ನೀರಿನ ರಭಸಕ್ಕೆ ಸಿಲುಕಿ 8 ಮಂದಿ ಜಲಸಮಾಧಿಯಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಘಟನೆಯ ವಿಷಯ ತಿಳಿಯುತ್ತಿದ್ದಂತೆ…

News Desk

ಶಿರೂರು ದುರಂತ: ಗಂಗಾವಳಿ ನದಿಗೆ ಉರುಳಿದ್ದ ಗುಡ್ಡದ ಮಣ್ಣು ತೆರವಿಗೆ 4.35 ಕೋಟಿ ರೂ. ಮಂಜೂರು; ಟೀಕಾಕಾರರಿಗೆ ‘ಸತೀಶ್ ಸೈಲ್’ ಕಾರ್ಯತಂತ್ರದ ತಿರುಗೇಟು..!

ಅಂಕೋಲಾ : ಮುಂಗಾರು ಕರಾವಳಿಯನ್ನು ಆವರಿಸುತ್ತಿರುವ ಬೆನ್ನಲ್ಲೇ, ಶಿರೂರು ಭಾಗದ ಜನರನ್ನು ಕಾಡುತ್ತಿದ್ದ ಕೃತಕ ಪ್ರವಾಹದ ಭೀತಿಗೆ ಕೊನೆಗೂ ಆಡಳಿತಾತ್ಮಕ ಪರಿಹಾರ ದೊರಕಿದೆ. 2024ರ ಜುಲೈನಲ್ಲಿ ಸಂಭವಿಸಿದ ಭೀಕರ ಗುಡ್ಡ ಕುಸಿತದಿಂದ ಗಂಗಾವಳಿ ನದಿಯ ಒಡಲು ಸೇರಿದ್ದ ಅಪಾರ ಪ್ರಮಾಣದ ಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ಆಡಳಿತಾತ್ಮಕ ಜಡತ್ವದ ಸುಳಿಯಿಂದ ಹೊರಬಂದಿದೆ. ಇದೆ ವಿಷಯವನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದ ಟೀಕಾಕಾರರಿಗೆ, ಕಾರವಾರ-ಅಂಕೋಲಾ ಶಾಸಕ ಸತೀಶ್ ಸೈಲ್ ಅವರು ₹4.35 ಕೋಟಿ ಮಂಜೂರು ಮಾಡಿಸುವ ಮೂಲಕ 'ಕಾರ್ಯ'ರೂಪದ ತಾರ್ಕಿಕ ತಿರುಗೇಟು ನೀಡಿದ್ದಾರೆ. ಮಣ್ಣು ತೆರವಿಗೆ ₹4.34 ಕೋಟಿಗಳ…

News Desk

ಉತ್ತರ ಕನ್ನಡ: ಮೇ 17-18ರಂದು ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ; ಜಿಲ್ಲಾಡಳಿತದಿಂದ ‘ಹೈ ಅಲರ್ಟ್’ ಘೋಷಣೆ

ಉತ್ತರ ಕನ್ನಡ : ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ, ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮೇ 17 ಮತ್ತು 18 ರಂದು ಗುಡುಗು, ಮಿಂಚು ಹಾಗೂ ಬಿರುಗಾಳಿ ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಹಾಗೂ ಜಿಲ್ಲಾಡಳಿತವು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಮುಂದಿನ ಎರಡು ದಿನಗಳ ಕಾಲ ಸಮುದ್ರದಲ್ಲಿ ಅಲೆಗಳ ತೀವ್ರತೆ ಹೆಚ್ಚಿರಲಿರುವುದರಿಂದ ಮೀನುಗಾರರು ಕಡಲಿಗೆ…

News Desk

ಕುಮಟಾ: ಪಿಎಸ್‌ಐ ದರ್ಪ, ಅಕ್ರಮ ದಂಡ ವಸೂಲಿ ಆರೋಪ: ಕ್ರಮ ಕೈಗೊಳ್ಳದಿದ್ದರೆ ಧರಣಿ ಸತ್ಯಾಗ್ರಹದ ಎಚ್ಚರಿಕೆ ನೀಡಿದ ‘ಮಂಜುನಾಥ್ ನಾಯ್ಕ’..

ಕುಮಟಾ: ಇಲ್ಲಿನ ತಾಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕಾದ ಪೊಲೀಸ್ ಅಧಿಕಾರಿಯೊಬ್ಬರು ದರ್ಪ ತೋರುತ್ತಿರುವುದು ಮತ್ತು ಕಾನೂನು ಬಾಹಿರವಾಗಿ ದಂಡ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಕುಮಟಾ ಪಿಎಸ್‌ಐ ಖಾದರ್ ಭಾಷಾ ಅವರ ವರ್ತನೆಯನ್ನು ಖಂಡಿಸಿ, ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಡಿಐಜಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸುವುದಾಗಿ ಕೆಪಿಸಿಸಿ ಮುಖಂಡ ಮಂಜುನಾಥ ಎಲ್. ನಾಯ್ಕ ಎಚ್ಚರಿಸಿದ್ದಾರೆ. ಕುಮಟಾದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ ನಾಯ್ಕ, ಮೇ 8ರಂದು ಧಾರೇಶ್ವರದ ಅಕ್ಷಯ ನಾಯ್ಕ ಎಂಬ ಯುವಕ ಹೆಗಡೆ ಕ್ರಾಸ್‌ನಿಂದ ಮನೆಗೆ ತೆರಳುತ್ತಿದ್ದಾಗ…

News Desk

ಶಿರಸಿ ಪೊಲೀಸ್ ವ್ಯವಸ್ಥೆಗೆ ಹೊಸ ಸಾರಥಿ: ಸಿ.ಪಿ.ಐ. ಆಗಿ ಸಂಪತ್ ಕುಮಾರ್ ನೇಮಕ..

ಶಿರಸಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಡೆದಿರುವ ಮಹತ್ವದ ಆಡಳಿತಾತ್ಮಕ ಬದಲಾವಣೆಗಳ ಭಾಗವಾಗಿ, ಶಿರಸಿಯ ನೂತನ ವೃತ್ತ ನಿರೀಕ್ಷಕರಾಗಿ (ಸಿ.ಪಿ.ಐ) ಸಂಪತ್ ಕುಮಾರ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಉತ್ತರ ಕನ್ನಡ ಜಿಲ್ಲೆಯ ಕಾನೂನು ಸುವ್ಯವಸ್ಥೆ ಹಾಗೂ ಭೌಗೋಳಿಕತೆಯ ಬಗ್ಗೆ ಉತ್ತಮ ಅರಿವು ಹೊಂದಿರುವ ಸಂಪತ್ ಕುಮಾರ್ ಅವರು, ಈ ಮೊದಲು ಜಿಲ್ಲೆಯ ಅಂಕೋಲಾ ಹಾಗೂ ಕುಮಟಾ ಸೇರಿದಂತೆ ಹಲವೆಡೆ ತಮ್ಮ ಕರ್ತವ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ ಅನುಭವ ಹೊಂದಿದ್ದಾರೆ. ಇದೀಗ ಅವರು ಶಿರಸಿ ಉಪವಿಭಾಗದ ಪ್ರಮುಖ ಜವಾಬ್ದಾರಿಯನ್ನು ಹೊರಲಿದ್ದಾರೆ. ಕಳೆದ ಎರಡು ವರ್ಷಗಳಿಂದ…

News Desk

ಅಂಕೋಲಾ: ಮಾದನಗೇರಿ ಯಲ್ಲಿ ಕ್ರಿಮಿಗಳಾದ ಮಣ್ಣಿನಲ್ಲಿ ಕೂತು ಮೀನು ಮಾರಾಟ ಮಾಡುವ ದುಸ್ಥಿತಿ: ಸಾಂಕ್ರಾಮಿಕ ರೋಗದ ಆತಂಕ, ಸ್ಥಳೀಯ ಆಡಳಿತದ ಅಮಾನವೀಯ ನಿರ್ಲಕ್ಷ್ಯ..!!

ಅಂಕೋಲಾ: ತಾಲೂಕಿನ ಮಾದನಗೇರಿ ಗ್ರಾಮದ ಮೀನು ಮಾರುಕಟ್ಟೆ ಪ್ರಸ್ತುತ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದ್ದು, ಇದು ಸಂಬಂಧಪಟ್ಟ ಪಂಚಾಯತ್‌ನ ಅಮಾನವೀಯ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಮಾರುಕಟ್ಟೆಯ ಆವರಣದಲ್ಲಿ ಎಲ್ಲಿ ನೋಡಿದರೂ ಕೆಸರು, ಮಣ್ಣು ತುಂಬಿಕೊಂಡಿದ್ದು, ಅದರಲ್ಲಿ ಕ್ರಿಮಿಗಳು ಮತ್ತು ಹುಳುಗಳು ವೃದ್ಧಿಯಾಗುತ್ತಿವೆ. ಮಾರುಕಟ್ಟೆಯಲ್ಲಿ ಕನಿಷ್ಠ ಮೂಲಸೌಕರ್ಯಗಳು ಇಲ್ಲದಿರುವುದರಿಂದ, ಇಂತಹ ಅನೈರ್ಮಲ್ಯ ವಾತಾವರಣದಲ್ಲೇ ಮೀನು ಮಾರಾಟಗಾರ ಮಹಿಳೆಯರು ಮಣ್ಣಿನಲ್ಲಿ ಕುಳಿತು ವ್ಯಾಪಾರ ಮಾಡುವಂತಹ ಶೋಚನೀಯ ದುಸ್ಥಿತಿ ನಿರ್ಮಾಣವಾಗಿದೆ. ಮಹಿಳಾ ವ್ಯಾಪಾರಿಗಳ ಬದುಕಿನೊಡನೆ ಚೆಲ್ಲಾಟ: ಬೆಳ್ಳಂಬೆಳಗ್ಗೆ ತಮ್ಮ ಜೀವನೋಪಾಯಕ್ಕಾಗಿ ಬರುವ ಮೀನು ಮಾರಾಟಗಾರ ಮಹಿಳೆಯರು, ಅನಿವಾರ್ಯವಾಗಿ ಕ್ರಿಮಿ,…

News Desk

ಕೈಗಾ ಅಣುಸ್ಥಾವರದ ಯಂತ್ರ ಹೊತ್ತಿದ್ದ ಬೃಹತ್ ವಾಹನ ಪಲ್ಟಿ: 3 ತಿಂಗಳ ಸುದೀರ್ಘ ಪಯಣದ ಅಂತ್ಯದಲ್ಲಿ ದುರದೃಷ್ಟಕರ ಅವಘಡ.!

ಕಾರವಾರ: ಗುಜರಾತ್‌ನಿಂದ ಸತತ ಮೂರು ತಿಂಗಳುಗಳ ಕಾಲ ಸಾವಿರಾರು ಕಿಲೋಮೀಟರ್ ಕ್ರಮಿಸಿ ಬಂದಿದ್ದ ಬೃಹತ್ ವಾಹನವೊಂದು ತನ್ನ ಗಮ್ಯಸ್ಥಾನ ತಲುಪಲು ಕೇವಲ ಮೂರು ಕಿಲೋಮೀಟರ್ ಬಾಕಿ ಇರುವಾಗ ಉರುಳಿ ಬಿದ್ದ ಘಟನೆ ಕಾರವಾರ ತಾಲೂಕಿನ ಹರ್ಟುಗಾ ಗ್ರಾಮದ ಬಳಿ ಗುರುವಾರ ಜರುಗಿದೆ. ಈ ವಾಹನವು ಕೈಗಾ ಅಣು ವಿದ್ಯುತ್ ಸ್ಥಾವರದ 5 ಮತ್ತು 6ನೇ ಘಟಕಗಳಿಗೆ ಅಗತ್ಯವಿದ್ದ ಬೃಹತ್ ಯಂತ್ರೋಪಕರಣವನ್ನು ಹೊತ್ತು ತರುತ್ತಿತ್ತು. ಕುತೂಹಲ ಮೂಡಿಸಿದ್ದ ಸುದೀರ್ಘ ಪಯಣ: ಈ ಬೃಹತ್ ಯಂತ್ರದ ಸಾಗಾಟ ಸ್ಥಳೀಯರ ಪಾಲಿಗೆ ಒಂದು ಅಚ್ಚರಿಯ ವಿಷಯವಾಗಿತ್ತು. ಕಳೆದ ಫೆಬ್ರವರಿ…

News Desk

ಹಣ ಡಬಲ್ ಮಾಡುವ ಆಮಿಷ: ಆನ್‌ಲೈನ್ ಟ್ರೇಡಿಂಗ್ ನೆಪದಲ್ಲಿ ಕುಮಟಾದ ವ್ಯಕ್ತಿಗೆ 9.34 ಲಕ್ಷ ರೂ. ವಂಚನೆ..!!

ಕುಮಟಾ: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹಣ ದುಪ್ಪಟ್ಟಾಗುತ್ತದೆ ಎಂದು ನಂಬಿಸಿ ಸೈಬರ್ ವಂಚಕರ ಜಾಲವೊಂದು ಕುಮಟಾ ಗಾಂಧಿನಗರದ ನಿವಾಸಿ ಗಣೇಶ್ ನಾಗೇಶ್ ಶೇಟ್ (43) ಎಂಬುವವರಿಗೆ ಬರೋಬ್ಬರಿ 9,34,413 ರೂಪಾಯಿ ವಂಚಿಸಿದ ಘಟನೆ ವರದಿಯಾಗಿದೆ. ಕಳೆದ 2025ರ ಅಕ್ಟೋಬರ್ ತಿಂಗಳ ಎರಡನೇ ವಾರದಲ್ಲಿ ವಂಚಕರು ಫೇಸ್‌ಬುಕ್ ಮೆಸೆಂಜರ್ ಮೂಲಕ ಗಣೇಶ್ ಅವರನ್ನು ಸಂಪರ್ಕಿಸಿ, ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡುವಂತೆ ಆಮಿಷವೊಡ್ಡಿದ್ದರು. ಬಳಿಕ ವಾಟ್ಸಾಪ್ ಲಿಂಕ್ ಕಳುಹಿಸಿ 'Intelligent 04' ಎಂಬ ಹೆಸರಿನ ವಾಟ್ಸಾಪ್ ಗ್ರೂಪ್‌ಗೆ ಸೇರಿಸಿದ್ದರು. ಸುಮಾರು 1 ತಿಂಗಳ ಕಾಲ ಆ…

News Desk
- Sponsored -
Ad imageAd image

Editor's Pick

Weather
28°C
Karnataka
overcast clouds
28° _ 28°
58%
3 km/h
Tue
28 °C
Wed
29 °C
Thu
30 °C
Fri
30 °C
Sat
29 °C

Follow US

Most Read

Discover Categories

ಅಂಕೋಲಾ: ಕಾಂಗ್ರೆಸ್ ಹಿರಿಯ ಮುಖಂಡ ರಮಾನಂದ ನಾಯಕ ಹಿಚ್ಚಡ ವಿಧಿವಶ..

ಅಂಕೋಲಾ: ತಾಲೂಕಿನ ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ, ಜನಸಾಮಾನ್ಯರ ಧ್ವನಿಯಾಗಿದ್ದ…

News Desk

ಅಂಕೋಲಾ: ಹಾರವಾಡದ ಮಗಳ ಮನೆಯಿಂದ ಮುಂಜಾನೆ ಹೊರಹೋದ 70ರ ವೃದ್ಧೆ ನಾಪತ್ತೆ..

ಅಂಕೋಲಾ: ತಾಲೂಕಿನ ತರಂಗಮೇಟು ಹಾರವಾಡದ ನಿವಾಸಿಯಾದ, ಕಳೆದ ಕೆಲ ವರ್ಷಗಳಿಂದ ಮಾನಸಿಕವಾಗಿ ಅಸ್ವಸ್ಥರಾಗಿದ್ದ 70 ವರ್ಷದ…

News Desk

ಪಿಡಿಒ ಆತ್ಮಹತ್ಯೆ ಪ್ರಕರಣ: ಸಮಗ್ರ ತನಿಖೆ ಆಗ್ರಹಿಸಿ ಕಾರವಾರದಲ್ಲಿ ಪಿಡಿಓ ಸಂಘದಿಂದ ಮನವಿ

ಕಾರವಾರ (ಮೇ 4): ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ…

News Desk

ಹೋಂಗಾರ್ಡ್ಸ್,ರಿಸರ್ವ್ ಪೊಲೀಸ್ ಮತ್ತು ಎಎಸೈ(ASI) ಗಿಂತ ಕಡಿಮೆ ದರ್ಜೆಯ ಪೊಲೀಸ್ ಸಿಬ್ಬಂದಿಗಳು ಸಾರ್ವಜನಿಕ ವಾಹನಗಳನ್ನು ಅಡ್ಡಗಟ್ಟಿದರೆ ಕ್ರಮ!

ರಾಜ್ಯದಲ್ಲಿ ಹಿರಿಯ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಸಾರ್ವಜನಿಕ ವಾಹನಗಳನ್ನು ಅಡ್ಡಗಟ್ಟಿ ತಪಾಸಣೆ ನಡೆಸುವಂತಿಲ್ಲ ಎಂದು ರಾಜ್ಯ ಪೊಲೀಸ್…

News Desk

ಅಂಕೋಲಾ: ಉಳುವರೆ ರೇಲ್ವೆ ಬ್ರಿಜ್ ಹತ್ತಿರ ಗಂಗಾವಳಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ..

ಅಂಕೋಲಾ ತಾಲೂಕಿನ ಉಳುವರೆಯ ರೇಲ್ವೆ ಬ್ರಿಜ್ ಹತ್ತಿರ ಗಂಗಾವಳಿ ನದಿಯಲ್ಲಿ ಸುಮಾರು 50-55 ವರ್ಷ ವಯಸ್ಸಿನ…

News Desk

ಮಂಕಿ ಕಬಡ್ಡಿ ಪಂದ್ಯಾವಳಿ: ಅಂಕೋಲಾದ ಶ್ರೀರಾಮ ಸ್ಪೋರ್ಟ್ಸ್ ಕ್ಲಬ್‌ಗೆ ಪ್ರಥಮ ಸ್ಥಾನ..

ಅಂಕೋಲಾ: ಹೊನ್ನಾವರ ತಾಲೂಕಿನ ಮಂಕಿಯ ಗುಳದಕೇರಿಯಲ್ಲಿ ಆಯೋಜಿಸಲಾಗಿದ್ದ ದ್ವಿತೀಯ ವರ್ಷದ ಹೊನಲು ಬೆಳಕಿನ ಮ್ಯಾಟ್ ಕಬಡ್ಡಿ…

News Desk

ಉತ್ತಮ ದಾಖಲಾತಿ ನಿರ್ವಹಣೆ: ಪಿಡಿಒ ‘ಗಿರೀಶ ನಾಯಕ್’ ಅವರಿಗೆ ‘ಉತ್ತಮ ಪಂಚಾಯತ ಅಭಿವೃದ್ಧಿ ಅಧಿಕಾರಿ’ ಪ್ರಶಸ್ತಿ ಪ್ರದಾನ..

ಕಾರವಾರ, (ಏಪ್ರಿಲ್ 24): ಗ್ರಾಮ ಪಂಚಾಯತ ಮಟ್ಟದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಹಾಗೂ ಪಾರದರ್ಶಕವಾಗಿ ಕಡತಗಳನ್ನು ನಿರ್ವಹಿಸಿದ…

News Desk

ಕಾಂಕ್ರೀಟ್ ರಸ್ತೆಯನ್ನು ಕೆಂಪು ಮಣ್ಣಿನಿಂದ ಮುಚ್ಚಲು ಹೊರಟರೇ ರಿಯಲ್ ಎಸ್ಟೇಟ್ ಮಾಫಿಯಾಗಳು

ವಿಕಾಸ ವಾಹಿನಿಯಲ್ಲಿ ಸುದ್ದಿ ಮಾಡಿದಂತೆ ಹಳ್ಳದ ಅಕ್ಕಪಕ್ಕ ಸುರಿದಿರುವ ಕಸವನ್ನು ಸಂಬಂಧಪಟ್ಟವರು ವಿಲೇವಾರಿ ಮಾಡಲಾಗಿದೆಯೋ ಅಥವಾ ಇಲ್ಲ ಎಂದು ಸ್ಥಳ ಪರಿಶೀಲನೆಗೆ ಹೊರಟಾಗ ಅಚ್ಚರಿ ಕಾದಿತ್ತು…. ಲ್ಯಾಂಡ್ ಆರ್ಮಿ ಇಂದ ಲಕ್ಷಾಂತರ ಪ್ರವೇಶದಲ್ಲಿ ನಿರ್ಮಿಸಿರುವ ಕಾಂಕ್ರೀಟ ರಸ್ತೆಯು ಕೆಂಪು ಮಣ್ಣಿನಿಂದ ಮುಚ್ಚಿ…

bluechipinfosystem