ಅಂಕೋಲಾ: ಮಗನೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದಾಗ ಅವಘಡ; ಬೈಕ್ ಗೆ ಆಟೋ ಡಿಕ್ಕಿಯಾಗಿ ವೃದ್ಧೆ ಸಾವು..

ಅಂಕೋಲಾ: ರಕ್ತ ಪರೀಕ್ಷೆಗಾಗಿ ಮಗನ ಜೊತೆ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೃದ್ಧೆಯೊಬ್ಬರು ಆಟೋ ರಿಕ್ಷಾ ಡಿಕ್ಕಿಯಾದ ಪರಿಣಾಮ ಸಾವನ್ನಪ್ಪಿರುವ ದಾರುಣ ಘಟನೆ ಪಟ್ಟಣದ ಅಂಬಾರಕೊಡ್ಲ ತಿರುವಿನಲ್ಲಿ ಇಂದು ಮುಂಜಾನೆ ಸಂಭವಿಸಿದೆ. ತಾಲೂಕಿನ ಶಿರಕುಳಿ ಗ್ರಾಮದ ನಿವಾಸಿ ಲಲಿತಾ ನಾಯ್ಕ (74) ಮೃತಪಟ್ಟ ದುರ್ದೈವಿ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಶನಿವಾರ ಬೆಳಿಗ್ಗೆ 7.30ರ ಸುಮಾರಿಗೆ ಮಗ ರವಿ ನಾಯ್ಕ ಅವರ ಬೈಕ್ ಹಿಂಬದಿಯಲ್ಲಿ ಕುಳಿತು ಆಸ್ಪತ್ರೆಗೆ ಹೊರಟಿದ್ದರು. ಇವರ ಬೈಕ್ ಅಂಬಾರಕೊಡ್ಲ ಬಳಿಯ ತಿರುವಿನಲ್ಲಿ ಸಾಗುತ್ತಿದ್ದ ವೇಳೆ, ಎದುರಿನಿಂದ ಬಂದ ಆಟೋ ರಿಕ್ಷಾವೊಂದು ಡಿಕ್ಕಿ…

News Desk

ಹೈಕೋರ್ಟ್ ಪೀಠದ ವ್ಯಾಪ್ತಿ ಬದಲಾವಣೆಗೆ ಆಕ್ಷೇಪ: ‘ಉತ್ತರ ಕನ್ನಡ ಜಿಲ್ಲೆ’ಯನ್ನು ಧಾರವಾಡ ಪೀಠದಲ್ಲೇ ಮುಂದುವರಿಸಲು ಅಂಕೋಲಾದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಕೆ..

ಪ್ರಸ್ತಾವಿತ ಮಂಗಳೂರು ಸಂಚಾರಿ ಹೈಕೋರ್ಟ್ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸುವ ರಾಜ್ಯ ಸರ್ಕಾರದ ಸಂಭಾವ್ಯ ನಡೆಯನ್ನು ತೀವ್ರವಾಗಿ ವಿರೋಧಿಸಿ, ಅಂಕೋಲಾ ತಾಲೂಕಿನ ವಕೀಲರು, ಬುದ್ಧಿಜೀವಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಶನಿವಾರ ಉಪ ತಹಶೀಲ್ದಾರ್ ಗಿರೀಶ್ ಜಾಂಬಳಿಕರ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಭಾಗದ ಜನರ ಅನುಕೂಲಕ್ಕಾಗಿ ಮಂಗಳೂರಿನಲ್ಲಿ ನೂತನ ಹೈಕೋರ್ಟ್ ಸಂಚಾರಿ ಪೀಠವನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರಕ್ಕೆ ನಮ್ಮ ವಿರೋಧವಿಲ್ಲ. ಆದರೆ, ಭೌಗೋಳಿಕವಾಗಿ ಅಂತರ ಹೊಂದಿರುವ ಹಾಗೂ ಪ್ರಸ್ತುತ ಧಾರವಾಡ ಹೈಕೋರ್ಟ್…

News Desk

ಅಂಕೋಲಾ ಹೆದ್ದಾರಿಯಲ್ಲಿ ‘ಶಾರ್ಟ್ ಕಟ್ ‘ ಸಾಹಸ: ನಿಯಮಗಳನ್ನೇ ಗಾಳಿಗೆ ತೂರಿ ಡಿವೈಡರ್ ಜಂಪ್ ಮಾಡುತ್ತೀರೋ ದ್ವಿಚಕ್ರ ವಾಹನ ಸವಾರರು..!!

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಯ ಉಳಿಸುವ ಭರದಲ್ಲಿ ದ್ವಿಚಕ್ರ ವಾಹನ ಸವಾರರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿರುವ ಆತಂಕಕಾರಿ ಬೆಳವಣಿಗೆಯೊಂದು ಅಂಕೋಲಾ ತಾಲೂಕಿನಾದ್ಯಂತ ಕಂಡುಬರುತ್ತಿದೆ. ಹೆದ್ದಾರಿಯ ಒಂದು ಬದಿಯಿಂದ ಮತ್ತೊಂದು ಬದಿಗೆ ತೆರಳಲು ನಿಗದಿತ 'ಯು-ಟರ್ನ್' ಬಳಸುವ ಬದಲು, ಅಡ್ಡಾದಿಡ್ಡಿಯಾಗಿ ರಸ್ತೆ ದಿವೈಡರ್ ಗಳನ್ನು ದಾಟುತ್ತಿರುವುದು ಇಲ್ಲಿ ನಿತ್ಯದ ದೃಶ್ಯವಾಗಿದೆ. ಈ ಹಿಂದೆ ಅಪಘಾತಗಳು ಸಂಭವಿಸಿದ ಉದಾಹರಣೆಗಳು ಇವೆ. ಮುಂದೆಯೂ ಸವಾರರ ಈ ಮಿತಿಮೀರಿದ ನಿರ್ಲಕ್ಷ್ಯದಿಂದಾಗಿ ಹೆದ್ದಾರಿಯಲ್ಲಿ ಭಾರಿ ಅಪಘಾತಗಳಾಗುವ ಸಾಧ್ಯತೆಗಳು ದಟ್ಟವಾಗಿವೆ. ತಾಲೂಕಿನ ಮೂಲಕ ಹಾದುಹೋಗುವ ಚತುಷ್ಪಥ ಹೆದ್ದಾರಿಯಲ್ಲಿ ವಾಹನಗಳು ಹಗಲಿರುಳು ಅತಿ ವೇಗವಾಗಿ…

News Desk

ಸರ್ಕಾರಿ ನೌಕರರ ಹಾಜರಾತಿಗೆ ಕಟ್ಟುನಿಟ್ಟು: ‘ಕರ್ತವ್ಯ’ ಆ್ಯಪ್ ಕಡ್ಡಾಯ; ನೋಂದಾಯಿಸದ 2.13 ಲಕ್ಷ ಸಿಬ್ಬಂದಿಗೆ ಸರ್ಕಾರದ ಚಾಟಿ..!

ರಾಜ್ಯದ ಸರ್ಕಾರಿ ಕಚೇರಿಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ವಿಳಂಬವಾಗಿ ಆಗಮಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದ್ದು, ಹಾಜರಾತಿ ದಾಖಲಿಸಲು 'ಕರ್ತವ್ಯ' (KARTAVYA - KAAMS) ಮೊಬೈಲ್ ಅಪ್ಲಿಕೇಶನ್ ಬಳಕೆಯನ್ನು ಕಡ್ಡಾಯಗೊಳಿಸಿ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಜೂನ್ 4 ರಂದು ಮಾನ್ಯ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ನಡೆದ ಎಲ್ಲಾ ಇಲಾಖೆಗಳ ಕಾರ್ಯದರ್ಶಿಗಳ ಸಭೆಯಲ್ಲಿ, ಸರ್ಕಾರಿ ನೌಕರರು ಸಮಯಕ್ಕೆ ಸರಿಯಾಗಿ ಕಚೇರಿಯಲ್ಲಿ ಹಾಜರಿರುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಪ್ರತಿಯೊಬ್ಬ ಸರ್ಕಾರಿ ಅಧಿಕಾರಿ ಹಾಗೂ ನೌಕರರು…

News Desk

ಬೀದಿ ದೀಪದಡಿ ಬಿಂದಾಸ್ ಜೂಜಾಟ, ದಿಢೀರ್ ಎಂಟ್ರಿ ಕೊಟ್ಟು ಬೆವರಿಳಿಸಿದ ಖಾಕಿ ಪಡೆ: ಬೆಳಂಬರದ ಖಾರ್ವಿವಾಡದಲ್ಲಿ ಐವರ ಸೆರೆ.!

ಅಂಕೋಲಾ: ತಾಲೂಕಿನ ಬೆಳಂಬರ ಗ್ರಾಮದ ಉತ್ತರ ಖಾರ್ವಿವಾಡದಲ್ಲಿ ಸಾರ್ವಜನಿಕ ರಸ್ತೆಯನ್ನೇ ಜೂಜುಕೋರರು ತಮ್ಮ ಅಡ್ಡೆಯನ್ನಾಗಿ ಪರಿವರ್ತಿಸಿಕೊಂಡಿದ್ದ ಪ್ರಕರಣವನ್ನು ಭೇದಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಸಾರ್ವಜನಿಕ ಬಾವಿಯ ಸಮೀಪ ಬೀದಿ ದೀಪದ ಬೆಳಕಿನಲ್ಲಿಯೇ ಅಕ್ರಮವಾಗಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಖಚಿತ ಮಾಹಿತಿ ಆಧರಿಸಿ ಅಂಕೋಲಾ ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ&ಸೂ) ಶ್ರೀ ಗುರುನಾಥ ಹಾದಿಮನಿ ಅವರು ಸ್ವಯಂ ಪ್ರೇರಿತರಾಗಿ ಈ ಭರ್ಜರಿ ಕಾರ್ಯಾಚರಣೆಯನ್ನು ಮುನ್ನಡೆಸಿದ್ದಾರೆ. ಜೂಜುಕೋರರು 200 ಹಾಗೂ 500 ರೂಪಾಯಿಗಳ ಹಣವನ್ನು…

News Desk

ಪ್ರಕೃತಿಯ ಮಡಿಲಲ್ಲಿ ‘ಕಿಕ್’ ಹುಡುಕಲು ಹೋಗಿ ‘ಲಾಕ್’ ಆದ ಮಿರ್ಜಾನ್ ಯುವಕ.!

ಕುಮಟಾ: ಪ್ರಕೃತಿಯ ಮಡಿಲಲ್ಲಿರುವ ಮೂರೂರು ಗುಡ್ಡದ ನಿರ್ಜನ ಹಾಗೂ ರಮಣೀಯ ಅರಣ್ಯ ಪ್ರದೇಶವೀಗ ಮಾದಕ ವ್ಯಸನಿಗಳ ಅಚ್ಚುಮೆಚ್ಚಿನ ತಾಣವಾಗಿ ಬದಲಾಗುತ್ತಿದೆಯೇ ಎಂಬ ಅನುಮಾನ ಹುಟ್ಟಿಕೊಂಡಿದೆ. ಶನಿವಾರ, ದಿನಾಂಕ 13-06-2026 ರಂದು ನಡುಹಗಲಿನಲ್ಲಿ, ಅಂದರೆ ಮಧ್ಯಾಹ್ನ 12:40ರ ಸುಮಾರಿಗೆ ಕುಮಟಾ ತಾಲೂಕಿನ ಸಿದ್ದನಬಾವಿ ಗ್ರಾಮದ ವ್ಯಾಪ್ತಿಯಲ್ಲಿರುವ ಮೂರೂರು ಗುಡ್ಡದ ಮೇಲೆ ಯುವಕನೊಬ್ಬ ಗಾಂಜಾ ಅಮಲಿನಲ್ಲಿ ತೇಲುತ್ತಿದ್ದಾಗ ಪೊಲೀಸರ ಅತಿಥಿಯಾಗಿದ್ದಾನೆ. ಕಾಡಿನ ಮಧ್ಯೆ ನಡೆದದ್ದೇನು? ಕುಮಟಾ ಪೊಲೀಸ್ ಠಾಣೆಯ ಉಪ-ನಿರೀಕ್ಷಕರಾದ (PSI) ಶ್ರೀ ಖಾದರ ಭಾಷಾ ಅವರ ನೇತೃತ್ವದ 'ಟೌನ್ ಬೀಟ್ 1' ಸಿಬ್ಬಂದಿ ವಾಡಿಕೆಯಂತೆ ಅರಣ್ಯ…

News Desk

ಅಂಕೋಲಾದ ಚನಗಾರ ಮಕ್ಕಳ ಶೈಕ್ಷಣಿಕ ಪರದಾಟಕ್ಕೆ ಮುಕ್ತಿ: ಶಾಲೆ ಉನ್ನತೀಕರಣಕ್ಕೆ ಶಾಸಕ ಸತೀಶ ಸೈಲ್ ತ್ವರಿತ ಸ್ಪಂದನೆ..!

ಅಂಕೋಲಾ ತಾಲೂಕಿನ ಚನಗಾರ ಗ್ರಾಮದ ವಿದ್ಯಾರ್ಥಿಗಳ ಸುದೀರ್ಘ ಕಾಲದ ಶೈಕ್ಷಣಿಕ ಬೇಡಿಕೆಯೊಂದು ಕೊನೆಗೂ ಈಡೇರುವ ಕಾಲ ಸನ್ನಿಹಿತವಾಗಿದೆ. ಗ್ರಾಮದ ಕಿರಿಯ ಪ್ರಾಥಮಿಕ ಶಾಲೆಯನ್ನು ಹಿರಿಯ ಪ್ರಾಥಮಿಕ ಶಾಲೆಯಾಗಿ ಮೇಲ್ದರ್ಜೆಗೇರಿಸುವಂತೆ ಕೋರಿ ಆಗಮಿಸಿದ ನಿಯೋಗದ ಮನವಿಗೆ ಶಾಸಕ ಸತೀಶ್ ಸೈಲ್ ಅವರು ತಕ್ಷಣವೇ ಸ್ಪಂದಿಸಿದ್ದು, ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳಿಗೆ ಸ್ಥಳದಿಂದಲೇ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ. ಪೋಷಕರ ಆತಂಕಕ್ಕೆ ಪರಿಹಾರ: ಚನಗಾರ ಗ್ರಾಮದಲ್ಲಿರುವ ಶಾಲೆಯಲ್ಲಿ ಪ್ರಸ್ತುತ 1 ರಿಂದ 5ನೇ ತರಗತಿಯವರೆಗೆ ಮಾತ್ರ ಕಲಿಯಲು ಅವಕಾಶವಿತ್ತು. 6 ಮತ್ತು 7ನೇ ತರಗತಿ ವ್ಯಾಸಂಗ ಮಾಡಲು ಸ್ಥಳೀಯವಾಗಿ ಯಾವುದೇ…

News Desk

ಪಾಲಕರು ಬೈದರೆಂದು ಮನೆಬಿಟ್ಟು ಹೊರಟಿದ್ದ ಅಪ್ರಾಪ್ತೆ: ಪಿಡಿಒ ಗಿರೀಶ್ ನಾಯಕ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ, ಸುರಕ್ಷಿತವಾಗಿ ಮನೆ ಸೇರಿದ ಬಾಲಕಿ..

ಕುಮಟಾ: ಪಾಲಕರು ಬೈದರು ಎಂಬ ಕಾರಣಕ್ಕೆ ಮನನೊಂದು ಯಾವುದೇ ದಿಕ್ಕುದೆಸೆಯಿಲ್ಲದೆ ಒಂಟಿಯಾಗಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನು ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಗಿರೀಶ್ ನಾಯಕರ ಸಮಯಪ್ರಜ್ಞೆ ಹಾಗೂ ಸಾಮಾಜಿಕ ಕಳಕಳಿಯಿಂದ ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿಸಿದ ಹೃದಯಸ್ಪರ್ಶಿ ಘಟನೆ ಶನಿವಾರ ನಡೆದಿದೆ. ಘಟನೆಯ ಹಿನ್ನೆಲೆ: ಇಂದು (ಜೂ. 6) ಸಂಜೆ ಸುಮಾರು 4 ಗಂಟೆ ಸುಮಾರಿಗೆ ಭಟ್ಕಳದಿಂದ ಹುಬ್ಬಳ್ಳಿಗೆ ಹೊರಟಿದ್ದ ಬಸ್ಸಿನಲ್ಲಿ ಭಟ್ಕಳ ಮೂಲದ ಅಪ್ರಾಪ್ತ ಬಾಲಕಿಯೊಬ್ಬಳು ಒಂಟಿಯಾಗಿ ಪ್ರಯಾಣಿಸುತ್ತಿದ್ದಳು. ಮನೆಯಲ್ಲಿ ಪಾಲಕರು ಯಾವುದೋ ವಿಚಾರಕ್ಕೆ ಬೈದರು ಎಂಬ ಕಾರಣಕ್ಕೆ ತೀವ್ರವಾಗಿ…

News Desk

ರಾಜ್ಯ ಮಟ್ಟದ ‘ಎನ್.ಎಂ.ಎಂ.ಎಸ್’ ಪ್ರತಿಭಾನ್ವೇಷಣೆ: ಬೆಳಸೆಯ ಆರ್.ಪಿ.ಎಸ್ ಶಾಲಾ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ..

ಅಂಕೋಲಾ: ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹಾಗೂ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ ಜಂಟಿ ಆಶ್ರಯದಲ್ಲಿ 2025-26ನೇ ಸಾಲಿನಲ್ಲಿ ನಡೆಸಲಾದ ರಾಜ್ಯ ಮಟ್ಟದ ಪ್ರತಿಷ್ಠಿತ 'ಎನ್.ಎಂ.ಎಂ.ಎಸ್' (National Means-cum-Merit Scholarship) ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ತಾಲೂಕಿನ ಬೆಳಸೆಯ ಆರ್.ಪಿ.ಎಸ್ ಸೆಕೆಂಡರಿ ಸ್ಕೂಲ್‌ನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರುವ ಮೂಲಕ ಶಾಲೆಗೆ ಹಾಗೂ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿನಿಯರಾದ ಪವಿತ್ರಾ ಮುಕುಂದ ಗೌಡ ಮತ್ತು ವೇದಾ ಮಂಜುನಾಥ ನಾಯ್ಕ ಅವರು ಈ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ…

News Desk

ಮಹಾಬಲೇಶ್ವರ ಗಿರಿಯಾ ನಾಯ್ಕರ ನುಡಿನಮನ ಹಾಗೂ ಎಂ.ಜಿ . ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ ಲೋಕಾರ್ಪಣೆ..

ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಅಜ್ಜಿಮನೆ ಸ್ಥಳದಲ್ಲಿ ಜೂನ್ 04, 2026ರಂದು ಹಿರಿಯ ಶಿಕ್ಷಕ, ಕವಿ ಹಾಗೂ ಸಮಾಜಮುಖಿ ವ್ಯಕ್ತಿತ್ವದ ದಿವಂಗತ ಮಹಾಬಲೇಶ್ವರ ಗಿರಿಯಾ ನಾಯ್ಕ ಅವರ ನುಡಿ ನಮನ ಕಾರ್ಯಕ್ರಮ ಹಾಗೂ ಎಂ.ಜಿ. ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟನ ಲೋಕಾರ್ಪಣೆ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ದಿವಂಗತ ಮಹಾಬಲೇಶ್ವರ ಗಿರಿಯಾ ನಾಯ್ಕ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ವಿವಿಧ ಗಣ್ಯರು , ಅತಿಥಿಗಳು ಶಿಕ್ಷಕರು ಮಾತನಾಡಿ, ಎಂ .ಜಿ.ಯವರು ಶಿಕ್ಷಕರಾಗಿ, ಸಾಹಿತಿಗಳಾಗಿ ಮಾಡಿದ ಸೇವೆ,…

News Desk
- Sponsored -
Ad imageAd image

Editor's Pick

Weather
26°C
Karnataka
overcast clouds
26° _ 26°
66%
2 km/h
Sat
26 °C
Sun
27 °C
Mon
28 °C
Tue
23 °C
Wed
26 °C

Follow US

Most Read

Discover Categories

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತ್ಯುನ್ನತ ಸಾಧನೆ: 617 ಅಂಕಗಳೊಂದಿಗೆ ಅಂಕೋಲಾ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಶಿರೂರಿನ “ಸ್ವೀಕಾರ ನಾಯ್ಕ”..

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸೌಲಭ್ಯಗಳ ಕೊರತೆಯ ನಡುವೆಯೂ ತಮ್ಮ ಕಠಿಣ ಪರಿಶ್ರಮ ಹಾಗೂ ಅಚಲ ಆತ್ಮವಿಶ್ವಾಸದಿಂದ…

News Desk

ಬೇಲೆಕೇರಿಯಿಂದ ಮಂಗಳೂರಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ: 11 ತಿಂಗಳ ಬಳಿಕ ಪೋಲಿಸ್ ಠಾಣೆ ಮೆಟ್ಟಿಲೇರಿದ ವೃದ್ಧ ತಂದೆ.!

ಅಂಕೋಲಾ: ಮಂಗಳೂರಿಗೆಂದು ಕೆಲಸದ ನಿಮಿತ್ತ ತೆರಳಿದ್ದ ತಾಲೂಕಿನ ಬೇಲೆಕೇರಿ ಮೂಲದ ಕಾರ್ಮಿಕನೋರ್ವ ಕಳೆದ 11 ತಿಂಗಳುಗಳಿಂದ…

News Desk

ಭಟ್ಕಳದಲ್ಲಿ ಕರುಳು ಹಿಂಡುವ ಜಲದುರಂತ: ಕಪ್ಪೆಚಿಪ್ಪು ತೆಗೆಯಲು ಹೋದ 8 ಮಂದಿ ಸಾವು..

ಭಟ್ಕಳ (ಉತ್ತರ ಕನ್ನಡ): ಕಪ್ಪೆಚಿಪ್ಪು ತೆಗೆಯಲು ನದಿಗೆ ಇಳಿದಿದ್ದವರು ನೀರಿನ ಭಾರಿ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿರುವ…

News Desk

ಶಿರೂರು ದುರಂತ: ಗಂಗಾವಳಿ ನದಿಗೆ ಉರುಳಿದ್ದ ಗುಡ್ಡದ ಮಣ್ಣು ತೆರವಿಗೆ 4.35 ಕೋಟಿ ರೂ. ಮಂಜೂರು; ಟೀಕಾಕಾರರಿಗೆ ‘ಸತೀಶ್ ಸೈಲ್’ ಕಾರ್ಯತಂತ್ರದ ತಿರುಗೇಟು..!

ಅಂಕೋಲಾ : ಮುಂಗಾರು ಕರಾವಳಿಯನ್ನು ಆವರಿಸುತ್ತಿರುವ ಬೆನ್ನಲ್ಲೇ, ಶಿರೂರು ಭಾಗದ ಜನರನ್ನು ಕಾಡುತ್ತಿದ್ದ ಕೃತಕ ಪ್ರವಾಹದ…

News Desk

ಉತ್ತರ ಕನ್ನಡ: ಮೇ 17-18ರಂದು ಬಿರುಗಾಳಿ, ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ; ಜಿಲ್ಲಾಡಳಿತದಿಂದ ‘ಹೈ ಅಲರ್ಟ್’ ಘೋಷಣೆ

ಉತ್ತರ ಕನ್ನಡ : ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ…

News Desk

ಕುಮಟಾ: ಪಿಎಸ್‌ಐ ದರ್ಪ, ಅಕ್ರಮ ದಂಡ ವಸೂಲಿ ಆರೋಪ: ಕ್ರಮ ಕೈಗೊಳ್ಳದಿದ್ದರೆ ಧರಣಿ ಸತ್ಯಾಗ್ರಹದ ಎಚ್ಚರಿಕೆ ನೀಡಿದ ‘ಮಂಜುನಾಥ್ ನಾಯ್ಕ’..

ಕುಮಟಾ: ಇಲ್ಲಿನ ತಾಲೂಕು ವ್ಯಾಪ್ತಿಯಲ್ಲಿ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕಾದ ಪೊಲೀಸ್ ಅಧಿಕಾರಿಯೊಬ್ಬರು ದರ್ಪ ತೋರುತ್ತಿರುವುದು ಮತ್ತು…

News Desk

ಶಿರಸಿ ಪೊಲೀಸ್ ವ್ಯವಸ್ಥೆಗೆ ಹೊಸ ಸಾರಥಿ: ಸಿ.ಪಿ.ಐ. ಆಗಿ ಸಂಪತ್ ಕುಮಾರ್ ನೇಮಕ..

ಶಿರಸಿ: ರಾಜ್ಯ ಪೊಲೀಸ್ ಇಲಾಖೆಯಲ್ಲಿ ನಡೆದಿರುವ ಮಹತ್ವದ ಆಡಳಿತಾತ್ಮಕ ಬದಲಾವಣೆಗಳ ಭಾಗವಾಗಿ, ಶಿರಸಿಯ ನೂತನ ವೃತ್ತ…

News Desk

ಅಂಕೋಲಾ: ಮಾದನಗೇರಿ ಯಲ್ಲಿ ಕ್ರಿಮಿಗಳಾದ ಮಣ್ಣಿನಲ್ಲಿ ಕೂತು ಮೀನು ಮಾರಾಟ ಮಾಡುವ ದುಸ್ಥಿತಿ: ಸಾಂಕ್ರಾಮಿಕ ರೋಗದ ಆತಂಕ, ಸ್ಥಳೀಯ ಆಡಳಿತದ ಅಮಾನವೀಯ ನಿರ್ಲಕ್ಷ್ಯ..!!

ಅಂಕೋಲಾ: ತಾಲೂಕಿನ ಮಾದನಗೇರಿ ಗ್ರಾಮದ ಮೀನು ಮಾರುಕಟ್ಟೆ ಪ್ರಸ್ತುತ ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿದ್ದು, ಇದು…

News Desk