ಹೆದ್ದಾರಿಯಲ್ಲಿ ಹಬ್ಬುತ್ತಿದೆ ಮಾದಕ ಜಾಲದ ಕಬಂಧಬಾಹು: ಬಾಳೆಗುಳಿಯಲ್ಲಿ ಗಾಂಜಾ ಮಾರಾಟಗಾರನ ಬೆನ್ನತ್ತಿದ ಖಾಕಿ ಪಡೆ..

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿಯ ಕತ್ತಲು ಆವರಿಸುತ್ತಿದ್ದಂತೆಯೇ ಅಕ್ರಮ ಚಟುವಟಿಕೆಗಳ ಜಾಲವೊಂದು ಸದ್ದಿಲ್ಲದೆ ತನ್ನ ಕಬಂಧಬಾಹುವನ್ನು ಚಾಚುತ್ತಿದೆ. ಲಾರಿ ಚಾಲಕರು ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಪೂರೈಸುವ ವ್ಯವಸ್ಥಿತ ಜಾಲವೊಂದು ಕಾರ್ಯಾಚರಣೆ ನಡೆಸುತ್ತಿರುವ ಆಘಾತಕಾರಿ ಅಂಶವೊಂದು ಇದೀಗ ಬೆಳಕಿಗೆ ಬಂದಿದೆ. ಅಂಕೋಲಾ ತಾಲೂಕಿನ ಬಾಳೆಗುಳಿ ಫ್ಲೈಓವರ್ ಕೆಳಭಾಗದಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ 1985ರ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಾಗಿದೆ. ಜುಲೈ 31, 2026 ರಂದು ರಾತ್ರಿ ಹೆದ್ದಾರಿಯ ವಾಹನ ಸಂಚಾರ…

News Desk

ಕಾರವಾರ ಸೀಬರ್ಡ್ ‘ಕದಂಬ’ ನೌಕಾನೆಲೆ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಸಲು ಕರವೇ ಆಗ್ರಹ..

ಕಾರವಾರ: ಇಲ್ಲಿನ ಭಾರತೀಯ ನೌಕಾಪಡೆಯ ಸೀಬರ್ಡ್ ಕದಂಬ ನೌಕಾನೆಲೆಯ ನೂತನ ಮುಖ್ಯದ್ವಾರದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮಫಲಕವನ್ನು ಅಳವಡಿಸಬೇಕು ಮತ್ತು ರಾಜ್ಯದ ಅಧಿಕೃತ ಭಾಷೆಗೆ ಗೌರವ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಯವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ಕರವೇ ಜಿಲ್ಲಾಧ್ಯಕ್ಷರಾದ ಅರುಣ ಹರಕಡೆ ಅವರ ನೇತೃತ್ವದ ನಿಯೋಗವು ಈ ಮನವಿ ಪತ್ರವನ್ನು ನೀಡಲಾಯಿತು. ಕರ್ನಾಟಕದ ಹೆಮ್ಮೆಯ ಪ್ರಥಮ ರಾಜವಂಶವಾದ 'ಕದಂಬ' ಹೆಸರನ್ನು ಈ ನೌಕಾನೆಲೆಗೆ ಇಡಲಾಗಿದೆ. ಆದರೆ, ನೂತನ ಮುಖ್ಯದ್ವಾರದ ನಾಮಫಲಕಗಳಲ್ಲಿ…

News Desk

ನಿವೃತ್ತಿಯಾದ ಡಾ. ಸದಾನಂದ ಪೈರನ್ನು ಗೌರವಿಸಿದ ಕರ್ನಾಟಕ ರಣಧೀರರ ವೇದಿಕೆ ಕುಮಟಾ ಘಟಕ – ಮರೆಯದ ಚಾರಿತ್ರಿಕ ವೈದ್ಯರು ಸದಾನಂದ ಪೈ : ಮಂಜುನಾಥ ಗಾಂವ್ಕರ್ ಬರ್ಗಿ..

ಕುಮಟಾ : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಜನಪ್ರಿಯ ವೈದ್ಯಾಧಿಕಾರಿಗಳಾದ ಡಾ. ಸದಾನಂದ ಪೈರವರನ್ನು ವಯೋ ನಿವೃತ್ತಿಗೊಂಡ ಪ್ರಯುಕ್ತ ಆಯೋಜಿಸಿದ ಬೀಳ್ಕೊಡುಗೆಯ ಸಮಾರಂಭದಲ್ಲಿ ಕರ್ನಾಟಕ ರಣಧೀರರ ವೇದಿಕೆಯ ಕುಮಟಾ ತಾಲ್ಲೂಕಾ ಘಟಕದಿಂದ ಆಪ್ತವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಅಧ್ಯಾಪಕ ಮಂಜುನಾಥ ಗಾಂವಕರ್ ಬರ್ಗಿಯವರು, ಸದಾನಂದ ಪೈರವರು ತಮ್ಮ ಸಜ್ಜನಿಕೆಯ ಜನಮುಖಿ ಸೇವೆಯ ಮೂಲಕ ಕುಮಟಾ ಮರೆಯಲಾಗದ ಅಪರೂಪದ ವೈದ್ಯರಾಗಿ ಚರಿತ್ರೆಯನ್ನು ಸಲ್ಲಿಸಿರುವ ಕುರಿತು ಅವರನ್ನು ಅಭಿನಂದಿಸಿ, ಆಲೇಖ ಪತ್ರವನ್ನು ಸಮರ್ಪಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಆಡಳಿತ ವೈದ್ಯಾಧಿಕಾರಿ ಡಾ.…

News Desk

ಪಂಚಾಯತ್ ಆಡಳಿತಕ್ಕೆ ಕಂಟಕವಾದ ತಾಂತ್ರಿಕ ದೋಷಗಳು: ಪರಿಹಾರಕ್ಕಾಗಿ ಸಿಇಒ ಮೊರೆ ಹೋದ ಅಧಿಕಾರಿಗಳು..!!

ಇಂದು ಉತ್ತರ ಕನ್ನಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾ ಪಂಚಾಯತ್‌ನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಭೇಟಿ ಮಾಡಿ, ಗ್ರಾಮ ಪಂಚಾಯಿತಿಗಳ ಆಡಳಿತ ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ಸಮಸ್ಯೆಗಳ ಕುರಿತು ಮನವಿ ಸಲ್ಲಿಸಲಾಯಿತು. ಮನವಿಯಲ್ಲಿ ವಿಶೇಷವಾಗಿ ವಿಬಿಜಿ ಆರ್.ಎಂ.ಜಿ (VBG-RMG) ಯೋಜನೆಯ ಅನುಷ್ಠಾನದಲ್ಲಿ ಎದುರಾಗುತ್ತಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳು, ಗ್ರಾಮ ಪಂಚಾಯಿತಿಗಳಿಗೆ ಅನುದಾನದ ಕೊರತೆಯಿಂದ ಉಂಟಾಗಿರುವ ಅಭಿವೃದ್ಧಿ ಕಾರ್ಯಗಳ ಅಡಚಣೆಗಳು, ಹಾಗೂ ಇ-ಸ್ವತ್ತು (e-Swathu) ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿವರವಾಗಿ ಗಮನ ಸೆಳೆಯಲಾಯಿತು. ಮಾನ್ಯ…

News Desk

ಅಂಕೋಲಾ ಉಪನೋಂದಣಾಧಿಕಾರಿ ಕಛೇರಿ ಸ್ಥಳಾಂತರ ವಿಳಂಬ: ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ ವಕೀಲ ‘ಉಮೇಶ ನಾಯ್ಕ’..

ಅಂಕೋಲಾ ತಾಲೂಕಿನ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಛೇರಿಯು ಹಳೆಯ ಪುರಸಭಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಮಳೆಗಾಲದಲ್ಲಿ ಈ ಕಟ್ಟಡವು ಸೋರುತ್ತಿದ್ದು, ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಆಗಾಗ್ಗೆ ವಿದ್ಯುತ್ ಕಡಿತಗೊಳ್ಳುವುದರಿಂದ ಕತ್ತಲೆಯಲ್ಲಿ ಕೆಲಸಕಾರ್ಯಗಳಿಗೆ ಪರದಾಡುವಂತಾಗಿದೆ. ಅಲ್ಲದೆ, ಕಛೇರಿಯನ್ನು ತಲುಪಲು ಸುಮಾರು 26 ಮೆಟ್ಟಿಲುಗಳನ್ನು ಹತ್ತಬೇಕಾಗಿರುವುದರಿಂದ ವಿಕಲಚೇತನರು ಹಾಗೂ ವಯೋವೃದ್ಧರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ಜೊತೆಗೆ ಕಛೇರಿಗೆ ಮೇಲಾಧಿಕಾರಿಗಳು ಬೆಳಿಗ್ಗೆ 11 ಗಂಟೆಯ ನಂತರವೇ ಆಗಮಿಸುವುದರಿಂದ, ಕಛೇರಿ ಕೆಲಸಕ್ಕಾಗಿ ಬರುವ ಸಾರ್ವಜನಿಕರು ಕಾದು ಸುಸ್ತಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿನಲ್ಲಿ ಉಲ್ಲೆಖಿಸಿದ್ದಾರೆ. ಸಾರ್ವಜನಿಕರ…

News Desk

ಅಂಕೋಲಾ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ಪತ್ರಿಕಾ ದಿನಾಚರಣೆ: ಸಮಾಜದಲ್ಲಿ ಆಗುವ ಅನೇಕ ತಪ್ಪುಗಳನ್ನು ತಿದ್ದುವಲ್ಲಿ ಪತ್ರ ಕರ್ತರ ಪಾತ್ರ ಪ್ರಮುಖವಾಗಿದೆ- ಗಿರೀಶ್ ನಾಯಕ..

ಅಂಕೋಲಾ: ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಎತ್ತಿತೋರಿಸುವ ಜೊತೆಗೆ ಉತ್ತಮ ಕೆಲಸಗಳನ್ನು ಬೆಳಕಿಗೆ ತಂದು ಪ್ರೋತ್ಸಾಹ ನೀಡುವ ಪತ್ರಿಕೆಗಳು ಸಮಾಜದ ಕಣ್ಣುಗಳಿದ್ದಂತೆ ಪ್ರತಿದಿನ ಹಲವಾರು ಸವಾಲುಗಳನ್ನು ಎದುರಿಸಿ ವರದಿಗಳನ್ನು ಮಾಡುವ ಪತ್ರಕರ್ತರ ಕೆಲಸ ಸುಲಭವಲ್ಲ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಗಿರೀಶ ನಾಯಕ ಹೇಳಿದರು. ಕಾರ್ಯನಿರತ ಪತ್ರಕರ್ತರ ಧ್ವನಿ ಅಂಕೋಲಾ ಇವರ ವತಿಯಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಸತಿ ನಿಲಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪತ್ರಿಕಾ ವರದಿಗಳು ಸಮಾಜದಲ್ಲಿ ಅಸಹಾಯಕರಿಗೆ ಸಹಾಯ ಹಸ್ತ…

News Desk

ಅಪರಾಧ ತನಿಖೆಗೆ ವೈಜ್ಞಾನಿಕ ಸ್ಪರ್ಶ: ಉತ್ತರ ಕನ್ನಡ ಜಿಲ್ಲಾ ಪೊಲೀಸರ ‘ಸೊಕೊ’ ವಾಹನಕ್ಕೆ ಕಾರವಾರದಲ್ಲಿ ನ್ಯಾಯಾಧೀಶರಿಂದ ಚಾಲನೆ..

ಕಾರವಾರ: ಅಪರಾಧ ಕೃತ್ಯಗಳ ತ್ವರಿತ, ನಿಖರ ಹಾಗೂ ವೈಜ್ಞಾನಿಕ ತನಿಖೆಗೆ ನೆರವಾಗುವ ನಿಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆಗೆ ಹೊಸದಾಗಿ ಹಂಚಿಕೆಯಾಗಿರುವ ಅತ್ಯಾಧುನಿಕ 'ಸೊಕೊ' (SOCO - Scenes of Crime Officer) ಮೊಬೈಲ್ ಫೊರೆನ್ಸಿಕ್ ವಾಹನವನ್ನು ಇಂದು ಅಧಿಕೃತವಾಗಿ ಸೇವೆಗೆ ಮುಕ್ತಗೊಳಿಸಲಾಯಿತು. ಕಾರವಾರದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಪರಮೇಶ್ವರ ಪ್ರಸನ್ನ ಬಿ. ಅವರು ಈ ನೂತನ ವಾಹನಕ್ಕೆ ಹಸಿರು ನಿಶಾನೆ ತೋರುವುದರ ಮೂಲಕ ವಿಧ್ಯುಕ್ತವಾಗಿ ಚಾಲನೆ ನೀಡಿದರು. ಈ…

News Desk

ಸಪ್ತ ವಯಸ್ಸಿನಲ್ಲೇ ‘ಭರತನಾಟ್ಯ ಕಲಾ ಮಾಣಿಕ್ಯ’ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡ ಅಂಕೋಲಾದ ಕುವರಿ ಐಶಾನಿ..

ಅಂಕೋಲಾ ತಾಲೂಕಿನ 7 ವರ್ಷದ ಬಾಲಕಿ ಐಶಾನಿ ಸಂತೋಷ್ ನಾಯ್ಕ್ ಎಳೆಯ ವಯಸ್ಸಿನಲ್ಲಿಯೇ "ಭರತನಾಟ್ಯ ಕಲಾ ಮಾಣಿಕ್ಯ" ರಾಜ್ಯ ಪ್ರಶಸ್ತಿಗೆ ಭಾಜನಳಾಗುವ ಮೂಲಕ ಜಿಲ್ಲೆ ಹಾಗೂ ತಾಲೂಕಿಗೆ ಅಪಾರ ಕೀರ್ತಿ ತಂದಿದ್ದಾಳೆ. ಕಲ್ಬುರ್ಗಿ ಜಿಲ್ಲೆಯ ಅಫ್ಜಲ್ ಪುರದಲ್ಲಿ ಇತ್ತೀಚೆಗೆ 'ವಿಶ್ವ ದರ್ಶನ' ದಿನಪತ್ರಿಕೆಯ ವತಿಯಿಂದ ಆಯೋಜಿಸಲಾಗಿದ್ದ 7ನೇ ರಾಜ್ಯಮಟ್ಟದ ಭಾವೈಕ್ಯತಾ ಸಮ್ಮೇಳನದಲ್ಲಿ ಈ ಪುಟ್ಟ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭರತನಾಟ್ಯದಲ್ಲಿ ಅತೀವ ಆಸಕ್ತಿ ಹೊಂದಿರುವ ಐಶಾನಿ, ಕರಾವಳಿ ಉತ್ಸವ, ಅಂಕೋಲಾ ಉತ್ಸವ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಕಾರ್ಯಕ್ರಮಗಳಲ್ಲಿ…

News Desk

ರಾತ್ರಿ ವೇಳೆ ಒಂಟಿ ಪಾದಚಾರಿಗಳೇ ಟಾರ್ಗೆಟ್: 24 ಗಂಟೆಯೊಳಗೆ ಸರಗಳ್ಳನ ಬಂಧನ..

ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನದ ಸರ ಸುಲಿಗೆ ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ದಿನಾಂಕ 20-07-2026 ರಂದು ರಾತ್ರಿ ರಾಷ್ಟ್ರೀಯ ಹೆದ್ದಾರಿ-66ರ ದೊಡ್ಡ ಬಲಸೆ ಕ್ರಾಸ್ ಬಳಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿದ್ದ ಇಬ್ಬರು ಅಪರಿಚಿತರು, ಅಂದಾಜು 22 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ಅಡಿ (ಗು.ನಂ: 85/2026) ಪ್ರಕರಣ ದಾಖಲಾಗಿತ್ತು.ಪ್ರಕರಣ ದಾಖಲಾದ ಕೂಡಲೇ ಆರೋಪಿಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಲಾಯಿತು.…

News Desk

ಅಂಕೋಲಾದ ಹೆಮ್ಮೆಯ ಸಮಾಜ ಸೇವಕ ವಿಜಯ್ ಕುಮಾರ್ ಯಶವಂತ ನಾಯ್ಕ ಅವರಿಗೆ ಪ್ರತಿಷ್ಠಿತ ‘ಶ್ರೇಷ್ಠ ಜೀವ ಮಾನವ’ ರಾಷ್ಟ್ರ ಪ್ರಶಸ್ತಿ ಗರಿ..

ಅಂಕೋಲಾ ತಾಲೂಕಿನ ಕನಸೆಗದ್ದೆ ನಿವಾಸಿ ಹಾಗೂ ಸಕ್ರಿಯ ಸಮಾಜ ಸೇವಾ ಕಾರ್ಯಕರ್ತರಾದ ಶ್ರೀ ವಿಜಯ್ ಕುಮಾರ್ ಯಶವಂತ ನಾಯ್ಕ ಅವರ ನಿಸ್ವಾರ್ಥ ಸೇವೆಗೆ ಮಹತ್ವದ ಗೌರವ ಒಲಿದುಬಂದಿದೆ. ಅಫಜಲಪುರದಲ್ಲಿ 19/07/2026 ರಂದು ನಡೆದ 'ವಿಶ್ವದರ್ಶನ' ಕನ್ನಡ ದಿನಪತ್ರಿಕೆಯ 7ನೇ ರಾಜ್ಯ ಮಟ್ಟದ ಭಾವೈಕ್ಯತಾ ಸಮ್ಮೇಳನದಲ್ಲಿ ಇವರಿಗೆ ಪ್ರತಿಷ್ಠಿತ "ಶ್ರೇಷ್ಠ ಜೀವ ಮಾನವ" ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಮಾಜ ಸೇವಾ ಕ್ಷೇತ್ರದಲ್ಲಿ ಅವರು ಮಾಡಿರುವ ಅನನ್ಯ ಸಾಧನೆ, ಸಮಾಜಮುಖಿ ಚಿಂತನೆ ಮತ್ತು ಸಮರ್ಪಣಾ ಭಾವವನ್ನು ಗುರುತಿಸಿ ವಿಶ್ವದರ್ಶನ ದಿನಪತ್ರಿಕೆ ವತಿಯಿಂದ ಪತ್ರಿಕಾ ಸಂಪಾದಕರಾದ ಡಾ.ಎಸ್…

News Desk
- Sponsored -
Ad imageAd image

Editor's Pick

Weather
22°C
Karnataka
light rain
22° _ 22°
83%
3 km/h
Sat
22 °C
Sun
28 °C
Mon
29 °C
Tue
27 °C
Wed
28 °C

Follow US

Most Read

Discover Categories

ಹೊನ್ನಾವರದ ಕಾಸರಕೋಡು ಟೊಂಕದಲ್ಲಿ ಆಕಸ್ಮಿಕ ಅಗ್ನಿ ಅವಘಡ; ಮೀನುಗಾರಿಕಾ ಬೋಟ್ ಬಹುಪಾಲು ಅಗ್ನಿಗಾಹುತಿ..

ಹೊನ್ನಾವರ: ತಾಲೂಕಿನ ಕಾಸರಕೋಡು ಟೊಂಕದ ಬಂದರಿನಲ್ಲಿ ಲಂಗರು ಹಾಕಿದ್ದ ಪರ್ಸಿನ್ ಬೋಟ್‌ವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ…

News Desk

ಅಂಕೋಲದ ಶೇಡಗೇರಿಯಲ್ಲಿ ನೆರೆಹೊರೆಯವರ ಹೈಡ್ರಾಮಾ: ಚರ್ಚ್‌ಗೆ ಹೊರಟಿದ್ದ ವೃದ್ಧನ ಮೂಗಿಗೆ ಪಂಚ್, ಪ್ರಕರಣ ದಾಖಲು..!!

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿದೇವರವಾಡಾ ಶೇಡಗೇರಿಯಲ್ಲಿ ಜುಲೈ 19, 2026…

News Desk

ಉತ್ತರ ಕನ್ನಡ ಜಿಲ್ಲೆ ಗಣಿ ಇಲಾಖೆಯಲ್ಲಿ ಮಹತ್ವದ ‘ಸರ್ಜರಿ’: ಜಿಲ್ಲೆಯಲ್ಲಿ ಅಕ್ರಮಗಳಿಗೆ ಬ್ರೇಕ್ ಹಾಕುವ ಹೊಣೆ ಹೊತ್ತ ನೂತನ ಅಧಿಕಾರಿಗಳು..!!

ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಅಧಿಕಾರಿಗಳು ಒಂದೇ ಸ್ಥಳದಲ್ಲಿ ದೀರ್ಘಕಾಲದಿಂದ ಮುಂದುವರಿದಿರುವುದರಿಂದ ಹಾಗೂ…

News Desk

ಹೊನ್ನಾವರ ತಾಲೂಕಿನ ಕರ್ವ ಗ್ರಾಮ ಪಂಚಾಯಿತಿಯಲ್ಲಿ ಅರ್ಥಪೂರ್ಣವಾಗಿ ಗೃಹಲಕ್ಷ್ಮಿ ದಿನಾಚರಣೆ ಆಚರಣೆ..

ಹೊನ್ನಾವರ ತಾಲೂಕಿನ ಕರ್ವ ಗ್ರಾಮ ಪಂಚಾಯಿತಿಯಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಮೂರು…

News Desk

ಅಂಕೋಲಾದ ಬೆಳಂಬಾರ ಕಡಲ ತೀರದಲ್ಲಿ ದೈತ್ಯ ಡಾಲ್ಫಿನ್ ಮೃತದೇಹ ಪತ್ತೆ..!!

ಅಂಕೋಲಾ ತಾಲೂಕಿನ ಪ್ರಸಿದ್ಧ ಬೆಳಂಬಾರ ಕಡಲ ತೀರದಲ್ಲಿ ಶನಿವಾರ ಬೃಹತ್ ಗಾತ್ರದ ಡಾಲ್ಫಿನ್ ವೊಂದು ಮೃತಪಟ್ಟ…

News Desk

‘ಒಂದು ಕೊಡಿ, ಎಂಬತ್ತು ತಗೊಳ್ಳಿ!’: ಮಟಕಾ ಚೀಟಿ ಬರೆಯುತ್ತಿದ್ದವನ ಬೆವರಿಳಿಸಿದ ಖಾಕಿ..

ಕುಮಟಾ: ಸಾರ್ವಜನಿಕ ಸ್ಥಳದಲ್ಲಿ ದಾರಿಹೋಕರಿಗೆ ಹಣದ ಆಮಿಷವೊಡ್ಡಿ ಅಕ್ರಮವಾಗಿ ನಡೆಯುತ್ತಿದ್ದ ಓ.ಸಿ ಮಟಕಾ ಜುಗಾರಿ ಅಡ್ಡೆಯೊಂದರ…

News Desk

ಉತ್ತರ ಕನ್ನಡ ಅರಣ್ಯ ವಲಯಗಳಿಗೆ ಹೊಸ ಮುಖಗಳು: ರಾಜ್ಯದ 40 ಆರ್‌ಎಫ್‌ಒಗಳ ವರ್ಗಾವಣೆಯಲ್ಲಿ ಜಿಲ್ಲೆಗೇ ಅಗ್ರಸ್ಥಾನ..

ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ರಾಜ್ಯಾದ್ಯಂತ ಒಟ್ಟು 40…

News Desk

ಅಂಕೋಲಾದ ಹೊಸಕಂಬಿ ವಲಯದ ಅರಣ್ಯ ಇಲಾಖೆಯ ಹುಲಿ ಗಣತಿ ಕ್ಯಾಮೆರಾ ಕಳ್ಳತನ ಭೇದಿಸಿದ ಪೊಲೀಸರು; ಓರ್ವನ ಬಂಧನ..

ಅಂಕೋಲಾ: ತಾಲೂಕಿನ ಹೊಸಕಂಬಿ ವಲಯದ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿಗಾಗಿ ಅರಣ್ಯ ಇಲಾಖೆ ಅಳವಡಿಸಿದ್ದ ಬೆಲೆಬಾಳುವ…

News Desk