Hot News
- Quick Links
- ಸ್ಥಳೀಯ ಸುದ್ದಿ
ದಶಕಗಳಿಂದ ಬಾರಿ ಚರ್ಚೆಯಲ್ಲಿದ್ದ ಆರ್ಥಿಕತೆಯ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ 'ಹುಬ್ಬಳ್ಳಿ-ಅಂಕೋಲಾ' ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರವು ಮಹತ್ವದ ಕಾನೂನಾತ್ಮಕ ಶಕ್ತಿ ಒದಗಿಸಿದೆ. ಭಾರತದ ರಾಜಪತ್ರದಲ್ಲಿ ಪ್ರಕಟಗೊಂಡ ಅಧಿಕೃತ ಅಧಿಸೂಚನೆಯನ್ವಯ, ಈ ಬಹುನಿರೀಕ್ಷಿತ ಮಾರ್ಗವನ್ನು "ವಿಶೇಷ ರೈಲ್ವೆ ಯೋಜನೆ" ಎಂದು ಘೋಷಿಸಲಾಗಿದೆ. 1989ರ ರೈಲ್ವೆ ಕಾಯ್ದೆಯ ಸೆಕ್ಷನ್ 2ರ ಉಪ-ಕಲಂ 37(ಎ) ಅಡಿಯಲ್ಲಿ ಪ್ರದತ್ತವಾದ ವಿಶೇಷ ಅಧಿಕಾರವನ್ನು ಚಲಾಯಿಸಿರುವ ರೈಲ್ವೆ ಸಚಿವಾಲಯವು, ಸಾರ್ವಜನಿಕ ಉದ್ದೇಶಕ್ಕಾಗಿ ಮತ್ತು ರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿದೆ. ಈ ಅಧಿಸೂಚನೆಯು ಪ್ರಕಟಗೊಂಡ ದಿನಾಂಕದಿಂದಲೇ ಜಾರಿಗೆ ಬಂದಿದ್ದು, ಯೋಜನೆಗೆ…
ಬರ್ಗಿ (ಕುಮಟಾ): ಕುಮಟಾ ತಾಲೂಕಿನ ಬರ್ಗಿ ಬಳಿಯ ರಾಷ್ಟ್ರೀಯ ಹೆದ್ದಾರಿ 66 (NH-66) ಮತ್ತೊಂದು ಭೀಕರ ರಸ್ತೆ ಅಪಘಾತಕ್ಕೆ ಸಾಕ್ಷಿಯಾಗಿದೆ. ಹೆದ್ದಾರಿ ದಾಟುತ್ತಿದ್ದ ವೃದ್ಧೆಯೋರ್ವಳಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿರುವ ದಾರುಣ ಘಟನೆ ಸೋಮವಾರ ವರದಿಯಾಗಿದೆ. ಮೃತಪಟ್ಟ ವೃದ್ಧೆಯನ್ನು ಕುಮಟಾ ತಾಲೂಕಿನ ನಿವಾಸಿ ದುರ್ಗಿ ಹರಿಕಾಂತ (70) ಎಂದು ಗುರುತಿಸಲಾಗಿದೆ. ಘಟನೆಯ ವಿವರ: ದುರ್ಗಿ ಹರಿಕಾಂತ ಅವರು ಬರ್ಗಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡುವ ಉದ್ದೇಶದಿಂದ ಕುಮಟಾದಿಂದ ಆಗಮಿಸಿದ್ದರು. ಬರ್ಗಿಯ ಸರ್ಕಾರಿ ಪ್ರೌಢಶಾಲೆಯ ಸಮೀಪ ಬಸ್ ಇಳಿದು, ತಮ್ಮ…
ಅಂಕೋಲಾ ತಾಲೂಕಿನಲ್ಲಿ ಏಕಮುಖ ಪ್ರೇಮಿಯೊಬ್ಬನು ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ನಡುರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಅಷ್ಟೇ ಅಲ್ಲದೆ, ತನ್ನನ್ನು ಪ್ರೀತಿಸದಿದ್ದರೆ ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ ಎಂದು ಬೆದರಿಸಿ ಆತ ಫೀನೈಲ ಕುಡಿದು ಹೈಡ್ರಾಮಾ ಸೃಷ್ಟಿಸಿದ್ದಾನೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಅಂಕೋಲಾದ ಮಾವಿನಕೇರಿ ನಿವಾಸಿ, 18 ವರ್ಷದ ವಿದ್ಯಾರ್ಥಿನಿ ದೂರು ನೀಡಿದ ನೊಂದ ಯುವತಿಯಾಗಿದ್ದಾಳೆ. ಅವರ್ಸಾ ಸಮೀಪದ ಸಕಲಬೇಣ ನಿವಾಸಿ ಪ್ರೀತಮ್ ನಾಯ್ಕ ಎಂಬಾತನೇ ಈ ಕೃತ್ಯವೆಸಗಿದವನು. ಕಳೆದ 2-3 ತಿಂಗಳುಗಳಿಂದ ಆರೋಪಿಯು ಯುವತಿಗೆ ಬೇರೆ…
ಅಂಕೋಲಾ: ಸಾರ್ವಜನಿಕರ ಹಿತದೃಷ್ಟಿಯಿಂದ ಅಂಕೋಲಾದ ವಕೀಲರಾದ ಶ್ರೀ ಉಮೇಶ ನಾಯ್ಕ ಅವರು ಸಲ್ಲಿಸಿದ್ದ ಜವಾಬ್ದಾರಿಯುತ ಮನವಿಗೆ ಹಾಗು ಈ ಕುರಿತು ವಿಕಾಸ ವಾಹಿನಿ ಮಾಡಿದ ವರದಿಗೆ ಜಿಲ್ಲಾಡಳಿತ ತ್ವರಿತವಾಗಿ ಸ್ಪಂದಿಸಿದೆ. ಇದರ ಫಲವಾಗಿ, ಬಹುಕಾಲದ ಬೇಡಿಕೆಯಾಗಿದ್ದ ಅಂಕೋಲಾ ಉಪನೋಂದಣಾಧಿಕಾರಿ ಕಛೇರಿಯು ಆಗಸ್ಟ್ 10 ರಂದು ಬೆಳಿಗ್ಗೆ 10:00 ಗಂಟೆಗೆ "ಪ್ರಜಾಸೌಧ" ತಹಶೀಲ್ದಾರ್ ಕಚೇರಿ ಎರಡನೇ ಮಹಡಿಗೆ ಅಧಿಕೃತವಾಗಿ ಸ್ಥಳಾಂತರಗೊಳ್ಳುತ್ತಿದ್ದು, ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಳೆಯ ಕಟ್ಟಡದ ಸಮಸ್ಯೆಗಳ ಕಿರುನೋಟ: ಈ ಹಿಂದೆ ಉಪನೋಂದಣಾಧಿಕಾರಿ ಕಛೇರಿಯು ಹಳೆಯ ಪುರಸಭಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡವು ತೀವ್ರ ಶಿಥಿಲಾವಸ್ಥೆಯಲ್ಲಿದ್ದು,…
ಅಂಕೋಲಾ: ತಾಲೂಕಿನ ಹಿಚ್ಕಡ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಾಳೆಕಾಯಿ ತುಂಬಿದ ಮಿನಿ ಪಿಕಪ್ ವಾಹನವೊಂದು ರಸ್ತೆಯ ಮಧ್ಯೆ ಪಲ್ಟಿಯಾದ ಪರಿಣಾಮ, ಅದರ ಹಿಂದೆಯೇ ಬರುತ್ತಿದ್ದ ಕಾರೊಂದು ಅಪಘಾತವನ್ನು ತಪ್ಪಿಸಲು ಹೋಗಿ ಡಿವೈಡರ್ ಏರಿ ಲೈಟ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಘಟನೆ ಜರುಗಿದೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ದೊಡ್ಡ ಮಟ್ಟದ ಪ್ರಾಣಹಾನಿ ಸಂಭವಿಸಿಲ್ಲ. ಅಂಕೋಲಾ ಕಡೆಗೆ ಸಾಗುತ್ತಿದ್ದ ಮಿನಿ ಪಿಕಪ್ ವಾಹನವು ಹಿಚ್ಕಡ ಕ್ರಾಸ್ ಬಳಿ ಬರುತ್ತಿದ್ದಂತೆ ಏಕಾಏಕಿ ವಾಹನದ ನಿಯಂತ್ರಣ ತಪ್ಪಿದ ಪರಿಣಾಮ ವಾಹನವು…
ಕುಮಟಾ ತಾಲೂಕಿನ ಮಿರ್ಜಾನ ಬಳಿಯ ತಾರಿಬಾಗಿಲು ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣ ಪಣಕ್ಕಿಟ್ಟು ಕೋಳಿ ಅಂಕ (ಜುಗಾರಾಟ) ನಡೆಸುತ್ತಿದ್ದ ಅಡ್ಡೆಯ ಮೇಲೆ ಕುಮಟಾ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಭಾನುವಾರ ಸಂಜೆ ನಡೆದ ಈ ಕಾರ್ಯಾಚರಣೆ ವೇಳೆ ಪೊಲೀಸರನ್ನು ಕಂಡ ಜುಗಾರಿಗಳು ಕೋಳಿ, ಚಾಕು ಹಾಗೂ ಹಣವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಓರ್ವ ಆರೋಪಿ ಮಾತ್ರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತಮ್ಮ ಅನ್ಯಾಯದ ಲಾಭಗೋಸ್ಕರ ಕೋಳಿ ಹುಂಜಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಈ ಜುಗಾರಾಟವನ್ನು ನಡೆಸಲಾಗುತ್ತಿತ್ತು. ಆಗಸ್ಟ್ 02, 2026…
ಅಂಕೋಲಾ ತಾಲೂಕು ಪಂಚಾಯತ್ನ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಇ.ಒ) ರಾಮು ಜಿ. ಅಗ್ನಿ ಅವರು ಅಧಿಕೃತವಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ತಾಲೂಕಿನ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಬದಲಾವಣೆ ಮಹತ್ವ ಪಡೆದುಕೊಂಡಿದ್ದು, ಇದುವರೆಗೆ ಅಂಕೋಲಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ರಾಮು ಗುನಗಿ ಅವರು ನೂತನ ಅಧಿಕಾರಿಗೆ ಕಡತಗಳನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು. ರಾಮು ಜಿ. ಅಗ್ನಿ ಅವರು ಈ ಹಿಂದೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಪಾರ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ. ಸಿಂದಗಿಯಲ್ಲಿ ತಮ್ಮ ಆಡಳಿತದ ಮೂಲಕ…
ಕಾರವಾರ: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾ ಘಟಕದ ವತಿಯಿಂದ ನಗರದ ಸುಭಾಷ್ ವೃತ್ತದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷರಾದ ಅರುಣ್ ಹರ್ಕಡೆ ಅವರ ನೇತೃತ್ವದಲ್ಲಿ ಹಾಗೂ ವಿವಿಧ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಹಯೋಗದೊಂದಿಗೆ ಈ ಪ್ರತಿಭಟನೆ ಜರುಗಿತು. ಕಾವೇರಿ ನಮ್ಮ ಹಕ್ಕು, ರಾಜ್ಯದ ರೈತರ ಹಿತಾಸಕ್ತಿಯನ್ನು ಯಾವುದೇ ಕಾರಣಕ್ಕೂ ಬಲಿಕೊಡಬಾರದು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಒಕ್ಕೊರಲಿನಿಂದ ಘೋಷಣೆಗಳನ್ನು ಕೂಗುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಈ ಪ್ರತಿಭಟನಾ…
ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿಯ ಕತ್ತಲು ಆವರಿಸುತ್ತಿದ್ದಂತೆಯೇ ಅಕ್ರಮ ಚಟುವಟಿಕೆಗಳ ಜಾಲವೊಂದು ಸದ್ದಿಲ್ಲದೆ ತನ್ನ ಕಬಂಧಬಾಹುವನ್ನು ಚಾಚುತ್ತಿದೆ. ಲಾರಿ ಚಾಲಕರು ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಪೂರೈಸುವ ವ್ಯವಸ್ಥಿತ ಜಾಲವೊಂದು ಕಾರ್ಯಾಚರಣೆ ನಡೆಸುತ್ತಿರುವ ಆಘಾತಕಾರಿ ಅಂಶವೊಂದು ಇದೀಗ ಬೆಳಕಿಗೆ ಬಂದಿದೆ. ಅಂಕೋಲಾ ತಾಲೂಕಿನ ಬಾಳೆಗುಳಿ ಫ್ಲೈಓವರ್ ಕೆಳಭಾಗದಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ 1985ರ ಎನ್ಡಿಪಿಎಸ್ (NDPS) ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಾಗಿದೆ. ಜುಲೈ 31, 2026 ರಂದು ರಾತ್ರಿ ಹೆದ್ದಾರಿಯ ವಾಹನ ಸಂಚಾರ…
ಕಾರವಾರ: ಇಲ್ಲಿನ ಭಾರತೀಯ ನೌಕಾಪಡೆಯ ಸೀಬರ್ಡ್ ಕದಂಬ ನೌಕಾನೆಲೆಯ ನೂತನ ಮುಖ್ಯದ್ವಾರದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮಫಲಕವನ್ನು ಅಳವಡಿಸಬೇಕು ಮತ್ತು ರಾಜ್ಯದ ಅಧಿಕೃತ ಭಾಷೆಗೆ ಗೌರವ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಯವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ಕರವೇ ಜಿಲ್ಲಾಧ್ಯಕ್ಷರಾದ ಅರುಣ ಹರಕಡೆ ಅವರ ನೇತೃತ್ವದ ನಿಯೋಗವು ಈ ಮನವಿ ಪತ್ರವನ್ನು ನೀಡಲಾಯಿತು. ಕರ್ನಾಟಕದ ಹೆಮ್ಮೆಯ ಪ್ರಥಮ ರಾಜವಂಶವಾದ 'ಕದಂಬ' ಹೆಸರನ್ನು ಈ ನೌಕಾನೆಲೆಗೆ ಇಡಲಾಗಿದೆ. ಆದರೆ, ನೂತನ ಮುಖ್ಯದ್ವಾರದ ನಾಮಫಲಕಗಳಲ್ಲಿ…
26 Nov 2024, 01:23 pm, 330 reads ಅಂಕೋಲಾ : ಅಜ್ಜಿಕಟ್ಟಾ-ಹುಲಿದೇವರವಾಡ ಮಧ್ಯೆ ಹಾದು ಹೋಗಿರುವ ರಾಷ್ಟ್ರೀಯ…
ಕುಮಟಾ : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಜನಪ್ರಿಯ ವೈದ್ಯಾಧಿಕಾರಿಗಳಾದ ಡಾ. ಸದಾನಂದ ಪೈರವರನ್ನು ವಯೋ ನಿವೃತ್ತಿಗೊಂಡ…
ಇಂದು ಉತ್ತರ ಕನ್ನಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾ ಪಂಚಾಯತ್ನ ಮಾನ್ಯ…
ಅಂಕೋಲಾ ತಾಲೂಕಿನ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಛೇರಿಯು ಹಳೆಯ ಪುರಸಭಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ…
ಅಂಕೋಲಾ: ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಎತ್ತಿತೋರಿಸುವ ಜೊತೆಗೆ ಉತ್ತಮ ಕೆಲಸಗಳನ್ನು ಬೆಳಕಿಗೆ ತಂದು ಪ್ರೋತ್ಸಾಹ ನೀಡುವ…
ಕಾರವಾರ: ಅಪರಾಧ ಕೃತ್ಯಗಳ ತ್ವರಿತ, ನಿಖರ ಹಾಗೂ ವೈಜ್ಞಾನಿಕ ತನಿಖೆಗೆ ನೆರವಾಗುವ ನಿಟ್ಟಿನಲ್ಲಿ ಉತ್ತರ ಕನ್ನಡ…
ಅಂಕೋಲಾ ತಾಲೂಕಿನ 7 ವರ್ಷದ ಬಾಲಕಿ ಐಶಾನಿ ಸಂತೋಷ್ ನಾಯ್ಕ್ ಎಳೆಯ ವಯಸ್ಸಿನಲ್ಲಿಯೇ "ಭರತನಾಟ್ಯ ಕಲಾ…
ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನದ ಸರ ಸುಲಿಗೆ ಪ್ರಕರಣವನ್ನು…
ಅಂಕೋಲಾ ತಾಲೂಕಿನ ಕನಸೆಗದ್ದೆ ನಿವಾಸಿ ಹಾಗೂ ಸಕ್ರಿಯ ಸಮಾಜ ಸೇವಾ ಕಾರ್ಯಕರ್ತರಾದ ಶ್ರೀ ವಿಜಯ್ ಕುಮಾರ್…
Confirmed
65.1M
Death
6.6M
Lorem ipsum dolor sit amet, consectetur adipisicing elit, sed do eiusmod tempor incididunt ut labore et dolore magna aliqua.
Good web design has visual weight, is optimized for various devices, and has content that is prioritized for the medium. The most important elements of a web page should have…
Sign in to your account