ಉತ್ತರ ಕನ್ನಡ ಜಿಲ್ಲೆ ಗಣಿ ಇಲಾಖೆಯಲ್ಲಿ ಮಹತ್ವದ ‘ಸರ್ಜರಿ’: ಜಿಲ್ಲೆಯಲ್ಲಿ ಅಕ್ರಮಗಳಿಗೆ ಬ್ರೇಕ್ ಹಾಕುವ ಹೊಣೆ ಹೊತ್ತ ನೂತನ ಅಧಿಕಾರಿಗಳು..!!

ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಅಧಿಕಾರಿಗಳು ಒಂದೇ ಸ್ಥಳದಲ್ಲಿ ದೀರ್ಘಕಾಲದಿಂದ ಮುಂದುವರಿದಿರುವುದರಿಂದ ಹಾಗೂ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು, ಇಲಾಖೆಯ ಘನತೆ ಕಾಪಾಡಲು, ವಸ್ತುನಿಷ್ಠತೆ, ಪಾರದರ್ಶಕತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯನ್ನು ಮರುಸ್ಥಾಪಿಸುವ ದಿಟ್ಟ ಹೆಜ್ಜೆಯಾಗಿ ದಿನಾಂಕ 20-07-2026 ರಂದು ಕಚೇರಿ ಆದೇಶದ ಮೂಲಕ ಮಹತ್ವದ ವರ್ಗಾವಣೆಗಳನ್ನು ಮಾಡಿದೆ. ಸರ್ಕಾರದ ಈ ಆದೇಶದಲ್ಲಿ ಉತ್ತರ ಕನ್ನಡ ಜಿಲ್ಲೆಯ ಗಣಿ ಇಲಾಖೆಗೂ ಮೇಜರ್ ಸರ್ಜರಿ ಮಾಡಲಾಗಿದ್ದು, ಅಕ್ರಮಗಳಿಗೆ ಕಡಿವಾಣ ಹಾಕುವ ಸ್ಪಷ್ಟ ಸಂದೇಶ ರವಾನಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದ…

News Desk

ಹೊನ್ನಾವರ ತಾಲೂಕಿನ ಕರ್ವ ಗ್ರಾಮ ಪಂಚಾಯಿತಿಯಲ್ಲಿ ಅರ್ಥಪೂರ್ಣವಾಗಿ ಗೃಹಲಕ್ಷ್ಮಿ ದಿನಾಚರಣೆ ಆಚರಣೆ..

ಹೊನ್ನಾವರ ತಾಲೂಕಿನ ಕರ್ವ ಗ್ರಾಮ ಪಂಚಾಯಿತಿಯಲ್ಲಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಮೂರು ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದರ ಸವಿನೆನಪಿಗಾಗಿ ಗೃಹಲಕ್ಷ್ಮಿ ದಿನಾಚರಣೆಯನ್ನು ಅತ್ಯಂತ ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಪರಿಸರ ಸಂರಕ್ಷಣೆಯ ಸಂದೇಶ ಸಾರುವ ಉದ್ದೇಶದಿಂದ ಅತಿಥಿಗಳು ಮತ್ತು ಫಲಾನುಭವಿಗಳು ಗಿಡಗಳನ್ನು ನೆಡುವ ಮೂಲಕ ಚಾಲನೆ ನೀಡಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಸಬಲೀಕರಣ, ಕುಟುಂಬದ ಆರ್ಥಿಕ ಸ್ಥಿರತೆ ಹಾಗೂ ಸಾಮಾಜಿಕ ಅಭಿವೃದ್ಧಿಗೆ ಉಂಟಾಗಿರುವ ಸಕಾರಾತ್ಮಕ ಪರಿಣಾಮಗಳ ಕುರಿತು ಸವಿಸ್ತಾರವಾಗಿ ಚರ್ಚಿಸಲಾಯಿತು. ಪಂಚಾಯಿತಿ…

News Desk

ಅಂಕೋಲಾದ ಬೆಳಂಬಾರ ಕಡಲ ತೀರದಲ್ಲಿ ದೈತ್ಯ ಡಾಲ್ಫಿನ್ ಮೃತದೇಹ ಪತ್ತೆ..!!

ಅಂಕೋಲಾ ತಾಲೂಕಿನ ಪ್ರಸಿದ್ಧ ಬೆಳಂಬಾರ ಕಡಲ ತೀರದಲ್ಲಿ ಶನಿವಾರ ಬೃಹತ್ ಗಾತ್ರದ ಡಾಲ್ಫಿನ್ ವೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಮುದ್ರ ತೀರದತ್ತ ತೆರಳಿದಾಗ ಸ್ಥಳೀಯ ನಿವಾಸಿ ನಂದನ ಖಾರ್ವಿ ಹಾಗೂ ಸ್ಥಳೀಯ ಮೀನುಗಾರರು ಈ ದೈತ್ಯ ಜಲಚರವನ್ನು ಗಮನಿಸಿದ್ದಾರೆ. ತಕ್ಷಣವೇ ಅವರು ಸುತ್ತಮುತ್ತಲಿನ ಊರಿನವರಿಗೆ ಮಾಹಿತಿಯನ್ನು ಮುಟ್ಟಿಸಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಕಡಲ ತೀರದಲ್ಲಿ ಸ್ಥಳೀಯರು ಜಮಾಯಿಸಿ ಅಂದಾಜು 8 ಅಡಿಗೂ ಹೆಚ್ಚು ಉದ್ದವಿದ್ದ ಅಪರೂಪದ ಡಾಲ್ಫಿನ್‌ನ ಕರುಣಾಜನಕ ಅಂತ್ಯವನ್ನು ಕಂಡು ವಿಷಾದ ವ್ಯಕ್ತಪಡಿಸಿದ್ದಾರೆ. ಡಾಲ್ಫಿನ್ ಸಾವಿಗೆ ನಿಖರವಾದ ಕಾರಣಗಳು ಸದ್ಯಕ್ಕೆ ತಿಳಿದುಬಂದಿಲ್ಲ. ಆದರೆ, ಕಳೆದ…

News Desk

‘ಒಂದು ಕೊಡಿ, ಎಂಬತ್ತು ತಗೊಳ್ಳಿ!’: ಮಟಕಾ ಚೀಟಿ ಬರೆಯುತ್ತಿದ್ದವನ ಬೆವರಿಳಿಸಿದ ಖಾಕಿ..

ಕುಮಟಾ: ಸಾರ್ವಜನಿಕ ಸ್ಥಳದಲ್ಲಿ ದಾರಿಹೋಕರಿಗೆ ಹಣದ ಆಮಿಷವೊಡ್ಡಿ ಅಕ್ರಮವಾಗಿ ನಡೆಯುತ್ತಿದ್ದ ಓ.ಸಿ ಮಟಕಾ ಜುಗಾರಿ ಅಡ್ಡೆಯೊಂದರ ಮೇಲೆ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳ ತಂಡವು, ಓರ್ವ ಆರೋಪಿಯನ್ನು ವಶಕ್ಕೆ ಪಡೆದು ನಗದು ಹಾಗೂ ಜುಗರಾಟಕ್ಕೆ ಬಳಸುತ್ತಿದ್ದ ಪರಿಕರಗಳನ್ನು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ. ಹೊಸ ಹೇರವಟ್ಟಾ ರೈಲ್ವೆ ಸೇತುವೆಯೊಂದರ ಸಮೀಪ ಜುಲೈ 15, 2026 ರಂದು ಬುಧವಾರ ಸಂಜೆ 7:50 ರ ಸುಮಾರಿಗೆ ಈ ದಿಢೀರ್ ದಾಳಿ ನಡೆದಿದ್ದು, ಸಾರ್ವಜನಿಕವಾಗಿ ರಾಜಾರೋಷವಾಗಿ ನಡೆಯುತ್ತಿದ್ದ ಕಾನೂನುಬಾಹಿರ ಜೂಜಾಟಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. ವೃತ್ತಿಯಲ್ಲಿ…

News Desk

ಉತ್ತರ ಕನ್ನಡ ಅರಣ್ಯ ವಲಯಗಳಿಗೆ ಹೊಸ ಮುಖಗಳು: ರಾಜ್ಯದ 40 ಆರ್‌ಎಫ್‌ಒಗಳ ವರ್ಗಾವಣೆಯಲ್ಲಿ ಜಿಲ್ಲೆಗೇ ಅಗ್ರಸ್ಥಾನ..

ಸಾರ್ವಜನಿಕ ಮತ್ತು ಆಡಳಿತಾತ್ಮಕ ಹಿತದೃಷ್ಟಿಯಿಂದ ಅರಣ್ಯ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು, ರಾಜ್ಯಾದ್ಯಂತ ಒಟ್ಟು 40 ವಲಯ ಅರಣ್ಯಾಧಿಕಾರಿಗಳನ್ನು (ಆರ್‌ಎಫ್‌ಒ) ದಿಢೀರ್ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 15, 2026ರಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆ ಮುಖ್ಯಸ್ಥರು) ಈ ಕಛೇರಿ ಆದೇಶವನ್ನು ಹೊರಡಿಸಿದ್ದು, ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಅದಲು-ಬದಲು ಒಟ್ಟು 40 ಅಧಿಕಾರಿಗಳ ವರ್ಗಾವಣೆ ಪಟ್ಟಿಯಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಯಾದ ಉತ್ತರ ಕನ್ನಡದ ಪಾಲು…

News Desk

ಅಂಕೋಲಾದ ಹೊಸಕಂಬಿ ವಲಯದ ಅರಣ್ಯ ಇಲಾಖೆಯ ಹುಲಿ ಗಣತಿ ಕ್ಯಾಮೆರಾ ಕಳ್ಳತನ ಭೇದಿಸಿದ ಪೊಲೀಸರು; ಓರ್ವನ ಬಂಧನ..

ಅಂಕೋಲಾ: ತಾಲೂಕಿನ ಹೊಸಕಂಬಿ ವಲಯದ ಅರಣ್ಯ ಪ್ರದೇಶದಲ್ಲಿ ಹುಲಿ ಗಣತಿಗಾಗಿ ಅರಣ್ಯ ಇಲಾಖೆ ಅಳವಡಿಸಿದ್ದ ಬೆಲೆಬಾಳುವ ಕ್ಯಾಮೆರಾಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಅಂಕೋಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಕಳುವಾಗಿದ್ದ ಕ್ಯಾಮೆರಾಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂಕೋಲಾ ತಾಲೂಕಿನ ಹಿಲ್ಲೂರು ಸಮೀಪದ ಕೋಳಗಿ ನಿವಾಸಿ, ಕೂಲಿ ಕಾರ್ಮಿಕ ದುರ್ಗಾ ದೇವು ಹರಿಕಾಂತ್ರ (54) ಬಂಧಿತ ಆರೋಪಿ. ಘಟನೆಯ ಹಿನ್ನೆಲೆ: ಅಖಿಲ ಭಾರತ ಹುಲಿ ಗಣತಿ ಹಿನ್ನೆಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ, ಮೇ 1, 2026 ರಂದು ಹೊಸಕಂಬಿ ವಲಯದ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ 'ಕಡಿಬ್ಯಾಕ್'…

News Desk

2012ರ ಭೀಕರ ರಸ್ತೆ ಅಪಘಾತ ಪ್ರಕರಣ: ನ್ಯಾಯಾಲಯಕ್ಕೆ ಹಾಜರಾಗದೆ 14 ವರ್ಷಗಳಿಂದ ನಾಪತ್ತೆಯಾಗಿದ್ದ ಲಾರಿ ಚಾಲಕ ಅಂಕೋಲಾ ಪೊಲೀಸರ ಬಲೆಗೆ..!!

ಅಂಕೋಲಾ: 2012ರಲ್ಲಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯಕ್ಕೆ ಹಾಜರಾಗದೆ ಕಳೆದ 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಲಾರಿ ಚಾಲಕನೋರ್ವನನ್ನು ಬಂಧಿಸುವಲ್ಲಿ ಅಂಕೋಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ತೋಟದಗಲ್ಲಿಯ ನಿವಾಸಿ ರಫೀಕ್ ಅಹ್ಮದ್ ಮೆಹಬೂಬ ಸುಬಾನಿ ಕಮಟಗಿ ಬಂಧಿತ ಆರೋಪಿ. ಈತನನ್ನು ಜುಲೈ 10, 2026ರಂದು ಅಂಕೋಲಾದ ಬಾಳೆಗುಳಿ ಬಳಿ ವಶಕ್ಕೆ ಪಡೆಯಲಾಗಿದೆ. ಪ್ರಕರಣದ ಹಿನ್ನೆಲೆ: ದಿನಾಂಕ 28-11-2012ರಂದು ಆರೋಪಿ ರಫೀಕ್ ಅಹ್ಮದ್ ತನ್ನ ಲಾರಿಯನ್ನು (KA-25/B-59) ಅಂಕೋಲಾ ಕಡೆಯಿಂದ ಯಲ್ಲಾಪುರ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಿದ್ದ.…

News Desk

ವಿಕಾಸ ವಾಹಿನಿ ಇಂಪ್ಯಾಕ್ಟ್: ವಿಕಲಚೇತನರ ಮಾರ್ಗ ಸುಗಮ – ತಹಶೀಲ್ದಾರ್ ತ್ವರಿತ ಸ್ಪಂದನೆಗೆ ವಕೀಲ ಉಮೇಶ ನಾಯ್ಕ ಮೆಚ್ಚುಗೆ..

ಅಂಕೋಲಾ: ತಹಶೀಲ್ದಾರ್ ಕಛೇರಿಯಲ್ಲಿ ವಿಕಲಚೇತನರ ಓಡಾಟಕ್ಕೆ ನಿರ್ಮಿಸಲಾದ ಮಾರ್ಗವು ಗಿಡಗಂಟಿಗಳಿಂದ ಆವೃತವಾಗಿ ಸಂಚಾರಕ್ಕೆ ಅಡ್ಡಿಯಾಗಿರುವ ಕುರಿತು ಹಿರಿಯ ವಕೀಲರಾದ ಉಮೇಶ ಎನ್. ನಾಯ್ಕ ಅವರು ಇತ್ತೀಚೆಗಷ್ಟೇ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಈ ಬಗ್ಗೆ ವಿಕಾಸವಾಹಿನಿ ಯಲ್ಲಿ ವರದಿಯು ಪ್ರಸಾರವಾಗಿತ್ತು. ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಈ ವರದಿಗೆ ಆಡಳಿತ ಯಂತ್ರವು ತಕ್ಷಣವೇ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ವಿಕಲಚೇತನರ ಮಾರ್ಗವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಮೂಲಕ ಜನಪರ ಕಾಳಜಿ ತೋರಿದೆ. ಸಾವಿರಾರು ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದರೂ, ನಿರ್ವಹಣೆಯ ಕೊರತೆಯಿಂದಾಗಿ ವ್ಹೀಲ್ ಚೇರ್ ಓಡಾಟಕ್ಕೆ…

News Desk

ಅನುದಾನವಿಲ್ಲದೆ ಕಮರಿದ ಗ್ರಾ.ಪಂ. ಅಭಿವೃದ್ಧಿ, ತಾಂತ್ರಿಕ ದೋಷದ ಸುಳಿಯಲ್ಲಿ ಜನತೆ: ಶೀಘ್ರ ಕ್ರಮಕ್ಕೆ ಉ.ಕ. ಜಿಲ್ಲಾಧ್ಯಕ್ಷ ಗಿರೀಶ್ ನಾಯಕ ಆಗ್ರಹ..!!

ಉತ್ತರ ಕನ್ನಡ: ರಾಜ್ಯದ ಗ್ರಾಮ ಪಂಚಾಯಿತಿಗಳು ಪ್ರಸ್ತುತ ತೀವ್ರ ಹಣಕಾಸಿನ, ತಾಂತ್ರಿಕ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಂದ ಸಂಕಷ್ಟಕ್ಕೆ ಸಿಲುಕಿವೆ. ಸರ್ಕಾರ ಕೂಡಲೇ ಎಚ್ಚೆತ್ತು ಈ ಸಮಸ್ಯೆಗಳನ್ನು ಬಗೆಹರಿಸದಿದ್ದರೆ, ರಾಜ್ಯದ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡಲಿದ್ದಾರೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಉತ್ತರ ಕನ್ನಡ ಜಿಲ್ಲಾಧ್ಯಕ್ಷ ಗಿರೀಶ್ ಎನ್. ನಾಯಕ ಎಚ್ಚರಿಕೆ ನೀಡಿದ್ದಾರೆ. ಗ್ರಾಮ ಪಂಚಾಯಿತಿಗಳ ಪ್ರಮುಖ ಆರ್ಥಿಕ ಮೂಲವಾಗಿರುವ 2025–26 ಹಾಗೂ 2026–27ನೇ ಸಾಲಿನ 15ನೇ ಹಣಕಾಸು ಯೋಜನೆಯ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ. ಇದರಿಂದಾಗಿ…

News Desk

ಅಂಕೋಲಾ ತಹಶೀಲ್ದಾರ್ ಕಛೇರಿಯಲ್ಲಿ “ವಿಕಲಚೇತನರಿಗೆ ದಾರಿ ಯಾವುದಯ್ಯಾ?”: ಡಿಸಿ ಭೇಟಿಗೆ ಆಗ್ರಹಿಸಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ವಕೀಲ “ಉಮೇಶ ನಾಯ್ಕ”..

ಅಂಕೋಲಾ ತಹಶೀಲ್ದಾರ್ ಕಛೇರಿಯು ಲಿಫ್ಟ್ ಸೌಲಭ್ಯವುಳ್ಳ ಎರಡು ಅಂತಸ್ತಿನ ಸುಸಜ್ಜಿತ ಕಟ್ಟಡವಾಗಿದ್ದರೂ, ಅಲ್ಲಿ ವಿಕಲಚೇತನರಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ ಎಂಬುದು ಬೇಸರದ ಸಂಗತಿ. ಕಛೇರಿಯ ಸಿಬ್ಬಂದಿ ವರ್ಗದವರು ತಮ್ಮ ಓಡಾಟಕ್ಕೆ ಲಿಫ್ಟ್ ಬಳಸುತ್ತಿದ್ದರೂ, ವಿಕಲಚೇತನರ ವ್ಹೀಲ್ ಚೇರ್ ಓಡಾಟಕ್ಕೆ ಅನುಕೂಲವಾಗಬೇಕಿದ್ದ ಮಾರ್ಗವನ್ನು ಸೂಕ್ತವಾಗಿ ನಿರ್ವಹಣೆ ಮಾಡದಿರುವುದು ಆಡಳಿತ ಯಂತ್ರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅಂಕೋಲಾದ ಹಿರಿಯ ವಕೀಲರಾದ ಉಮೇಶ ಎನ್. ನಾಯ್ಕ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ವಿಕಲಚೇತನರ ಸುಗಮ ಪ್ರವೇಶಕ್ಕಾಗಿ ಸಾವಿರಾರು ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸಿಮೆಂಟ್ ರಸ್ತೆಯು ಗಿಡಗಂಟಿಗಳಿಂದ ಆವೃತವಾಗಿ ಸಂಚಾರಕ್ಕೆ ಯೋಗ್ಯವಾಗಿಲ್ಲ.…

News Desk
- Sponsored -
Ad imageAd image

Editor's Pick

ಅಂಕೋಲಾದ ಕೋಟೆವಾಡ ದಲ್ಲಿ ಹುಚ್ಚುನಾಯಿ “ಒಬ್ಬ ಮಹಿಳೆಗೆ ಕಚ್ಚಿದರೂ ಆಡಳಿತ ಮೌನ: ನಾಳೆ ಶಾಲಾ ಮಕ್ಕಳಿಗೆ ಏನಾದರೂ ಆದರೆ ಯಾರು ಹೊಣೆ ?”

ಅಂಕೋಲಾ: ಅಂಕೋಲಾ ಪಟ್ಟಣದ ಕೋಟೆವಾಡ ಪ್ರದೇಶದಲ್ಲಿ ಆರಂಭವಾದ ಹುಚ್ಚುನಾಯಿ ಅಟ್ಟಹಾಸ ಇದೀಗ ಕೇವಲ ಒಂದೇ ಪ್ರದೇಶಕ್ಕೆ…

News Desk
Weather
24°C
Karnataka
overcast clouds
24° _ 24°
68%
5 km/h
Mon
24 °C
Tue
30 °C
Wed
29 °C
Thu
29 °C
Fri
30 °C

Follow US

Most Read

Discover Categories

ಅಂಕೋಲಾ ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ಕಿಂತ ಹೆಚ್ಚು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಬೈಕ್ ಕಳ್ಳನ ಬಂಧನ..

ಅಂಕೋಲಾ: ಪಟ್ಟಣದ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಮೋಟಾರ್ ಸೈಕಲ್ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ…

News Desk

ಜನಪರ ಕಾಳಜಿಯ ದಲಿತ ಮುಖಂಡ, ಅಂಕೋಲಾ ಮಾಜಿ ಪುರಸಭಾ ಸದಸ್ಯ ‘ಅಶೋಕ್ ಶೇಡಗೇರಿ’ ಇನ್ನಿಲ್ಲ..!!

ಸಮಾಜಮುಖಿ ಚಿಂತಕರು, ದಲಿತ ಮುಖಂಡರು ಹಾಗೂ ಅಂಕೋಲಾ ಪುರಸಭೆಯ ಮಾಜಿ ಸದಸ್ಯರಾದ ಅಶೋಕ್ ಶೇಡಗೇರಿ ಅವರು…

News Desk

ಅಂಕೋಲಾ ತಾಲೂಕಿನಲ್ಲಿ ಧರೆಗುರುಳಿದ ಕಂಬಗಳು, ಹಗಲಿರುಳು ಕಾರ್ಯಾಚರಣೆ: ವಿಪತ್ತಿನಲ್ಲೂ ಛಲಬಿಡದೆ ಶ್ರಮಿಸುತ್ತಿರುವ ಹೆಸ್ಕಾಂ ಅಧಿಕಾರಿಗಳು ಹಾಗೂ ಲೈನ್‌ಮನ್‌ಗಳು..!!

ಅಂಕೋಲಾ ತಾಲೂಕಿನಾದ್ಯಂತ ಕಳೆದ ಒಂದು ವಾರದಿಂದ ಆರಂಭವಾದ ಗಾಳಿ-ಮಳೆಯ ಆರ್ಭಟ ಈಗಲೂ ಬಿಡುವಿಲ್ಲದೆ ಮುಂದುವರೆದಿದ್ದು, ಜನಜೀವನ…

News Desk

ದಿವಂಗತ ಗೋಪಾಲ್ ನಾಯ್ಕ್ ಅವರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಕ್ಕೆ ಧನಸಹಾಯ – ಮಾನವೀಯತೆಗೆ ಸಾಕ್ಷಿಯಾದ ಪಂಚಾಯತ್ ಕುಟುಂಬದ ಒಗ್ಗಟ್ಟು..

ಹೊನ್ನಾವರ ತಾಲೂಕಿನ ಕರ್ವಾ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವಂಗತ ಗೋಪಾಲ್ ನಾಯ್ಕ್ ಅವರ ಅಕಾಲಿಕ…

News Desk

ಅಂಕೋಲಾದ ಹುಲಿದೇವರವಾಡದಲ್ಲಿ ಗಾಳಿ-ಮಳೆಗೆ ಜಖಂಗೊಂಡ ಮನೆ – ಪರಿಹಾರಕ್ಕಾಗಿ ಸಂತ್ರಸ್ತರ ಆಗ್ರಹ..

ಅಂಕೋಲಾ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಆಸ್ತಿಪಾಸ್ತಿಗಳಿಗೆ ಹಾನಿಯಾದ ಘಟನೆಗಳು…

News Desk

ಅಂಕೋಲಾ ಅವರ್ಸಾ ಬಳಿ ನಿಯಂತ್ರಣ ತಪ್ಪಿ ಉರುಳಿಬಿದ್ದ ಖಾಸಗಿ ಬಸ್..

ಅಂಕೋಲಾ (ಉತ್ತರ ಕನ್ನಡ): ತಾಲೂಕಿನ ಅವರ್ಸಾ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಖಾಸಗಿ ಬಸ್ಸೊಂದು ದಿಢೀರ್…

News Desk

ಅಂಕೋಲಾದ ಬೆಳಸೆ ಪಂಚಾಯತ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾದ ಕಾರು..!!

ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ಸಮೀಪ ತಡರಾತ್ರಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗುರುಳಿದ…

News Desk

ತೋಟಗಾರಿಕೆ ಇಲಾಖೆ ಪ್ರಕಟಣೆ: ಅಂಕೋಲಾ ತಾಲೂಕಿನಲ್ಲಿ 2026ರ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಜುಲೈ 31 ಕೊನೆಯ ದಿನ..

ಅಂಕೋಲಾ ತಾಲೂಕಿನ ರೈತರಿಗೆ 2026ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಮರುರಚಿಸಲಾದ ಬೆಳೆವಿಮೆ ಯೋಜನೆಯಡಿ…

News Desk