ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಕೇಂದ್ರದ ಅಧಿಕೃತ ಮುದ್ರೆ: ಅಂಕೋಲಾದ ಈ 16 ಹಳ್ಳಿಗಳ ಮೂಲಕ ಹಾದುಹೋಗಲಿದೆ ನೂತನ ಬ್ರಾಡ್ ಗೇಜ್ ಮಾರ್ಗ..

ದಶಕಗಳಿಂದ ಬಾರಿ ಚರ್ಚೆಯಲ್ಲಿದ್ದ ಆರ್ಥಿಕತೆಯ ದಿಕ್ಸೂಚಿ ಎಂದೇ ವಿಶ್ಲೇಷಿಸಲಾಗುತ್ತಿರುವ 'ಹುಬ್ಬಳ್ಳಿ-ಅಂಕೋಲಾ' ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರವು ಮಹತ್ವದ ಕಾನೂನಾತ್ಮಕ ಶಕ್ತಿ ಒದಗಿಸಿದೆ. ಭಾರತದ ರಾಜಪತ್ರದಲ್ಲಿ ಪ್ರಕಟಗೊಂಡ ಅಧಿಕೃತ ಅಧಿಸೂಚನೆಯನ್ವಯ, ಈ ಬಹುನಿರೀಕ್ಷಿತ ಮಾರ್ಗವನ್ನು "ವಿಶೇಷ ರೈಲ್ವೆ ಯೋಜನೆ" ಎಂದು ಘೋಷಿಸಲಾಗಿದೆ. 1989ರ ರೈಲ್ವೆ ಕಾಯ್ದೆಯ ಸೆಕ್ಷನ್ 2ರ ಉಪ-ಕಲಂ 37(ಎ) ಅಡಿಯಲ್ಲಿ ಪ್ರದತ್ತವಾದ ವಿಶೇಷ ಅಧಿಕಾರವನ್ನು ಚಲಾಯಿಸಿರುವ ರೈಲ್ವೆ ಸಚಿವಾಲಯವು, ಸಾರ್ವಜನಿಕ ಉದ್ದೇಶಕ್ಕಾಗಿ ಮತ್ತು ರಾಷ್ಟ್ರೀಯ ಮೂಲಸೌಕರ್ಯ ಅಭಿವೃದ್ಧಿಯ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿದೆ. ಈ ಅಧಿಸೂಚನೆಯು ಪ್ರಕಟಗೊಂಡ ದಿನಾಂಕದಿಂದಲೇ ಜಾರಿಗೆ ಬಂದಿದ್ದು, ಯೋಜನೆಗೆ…

News Desk

ಬರ್ಗಿ ಬಳಿ ಕಾರು ಡಿಕ್ಕಿ, ರಸ್ತೆ ದಾಟುತ್ತಿದ್ದ ವೃದ್ಧೆ ಸ್ಥಳದಲ್ಲೇ ದುರ್ಮರಣ..

ಬರ್ಗಿ (ಕುಮಟಾ): ಕುಮಟಾ ತಾಲೂಕಿನ ಬರ್ಗಿ ಬಳಿಯ ರಾಷ್ಟ್ರೀಯ ಹೆದ್ದಾರಿ 66 (NH-66) ಮತ್ತೊಂದು ಭೀಕರ ರಸ್ತೆ ಅಪಘಾತಕ್ಕೆ ಸಾಕ್ಷಿಯಾಗಿದೆ. ಹೆದ್ದಾರಿ ದಾಟುತ್ತಿದ್ದ ವೃದ್ಧೆಯೋರ್ವಳಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿರುವ ದಾರುಣ ಘಟನೆ ಸೋಮವಾರ ವರದಿಯಾಗಿದೆ. ಮೃತಪಟ್ಟ ವೃದ್ಧೆಯನ್ನು ಕುಮಟಾ ತಾಲೂಕಿನ ನಿವಾಸಿ ದುರ್ಗಿ ಹರಿಕಾಂತ (70) ಎಂದು ಗುರುತಿಸಲಾಗಿದೆ. ಘಟನೆಯ ವಿವರ: ದುರ್ಗಿ ಹರಿಕಾಂತ ಅವರು ಬರ್ಗಿಯಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡುವ ಉದ್ದೇಶದಿಂದ ಕುಮಟಾದಿಂದ ಆಗಮಿಸಿದ್ದರು. ಬರ್ಗಿಯ ಸರ್ಕಾರಿ ಪ್ರೌಢಶಾಲೆಯ ಸಮೀಪ ಬಸ್ ಇಳಿದು, ತಮ್ಮ…

News Desk

ಅಂಕೋಲಾ: ನಡುರಸ್ತೆಯಲ್ಲಿ ಯುವತಿಯ ಅಡ್ಡಗಟ್ಟಿ ಹಲ್ಲೆ: ‘ನನ್ನ ಲವ್ ಮಾಡ್ಲಿಲ್ಲ ಅಂದ್ರೆ ಸಾಯ್ತೀನಿ’ ಎಂದು ಫೀನೈಲ್ ಕುಡಿದ ಯುವಕ : ಪ್ರಕರಣದ ದಾಖಲು..

ಅಂಕೋಲಾ ತಾಲೂಕಿನಲ್ಲಿ ಏಕಮುಖ ಪ್ರೇಮಿಯೊಬ್ಬನು ಪ್ರೀತಿಸಲು ನಿರಾಕರಿಸಿದ ಯುವತಿಯನ್ನು ನಡುರಸ್ತೆಯಲ್ಲಿ ಅಡ್ಡಗಟ್ಟಿ ಹಲ್ಲೆ ನಡೆಸಿದ ಘಟನೆ ವರದಿಯಾಗಿದೆ. ಅಷ್ಟೇ ಅಲ್ಲದೆ, ತನ್ನನ್ನು ಪ್ರೀತಿಸದಿದ್ದರೆ ನಿನ್ನ ಹೆಸರು ಬರೆದಿಟ್ಟು ಸಾಯುತ್ತೇನೆ ಎಂದು ಬೆದರಿಸಿ ಆತ ಫೀನೈಲ ಕುಡಿದು ಹೈಡ್ರಾಮಾ ಸೃಷ್ಟಿಸಿದ್ದಾನೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಅಂಕೋಲಾದ ಮಾವಿನಕೇರಿ ನಿವಾಸಿ, 18 ವರ್ಷದ ವಿದ್ಯಾರ್ಥಿನಿ ದೂರು ನೀಡಿದ ನೊಂದ ಯುವತಿಯಾಗಿದ್ದಾಳೆ. ಅವರ್ಸಾ ಸಮೀಪದ ಸಕಲಬೇಣ ನಿವಾಸಿ ಪ್ರೀತಮ್ ನಾಯ್ಕ ಎಂಬಾತನೇ ಈ ಕೃತ್ಯವೆಸಗಿದವನು. ಕಳೆದ 2-3 ತಿಂಗಳುಗಳಿಂದ ಆರೋಪಿಯು ಯುವತಿಗೆ ಬೇರೆ…

News Desk

‘ವಿಕಾಸ ವಾಹಿನಿ’ ವರದಿ ಹಾಗೂ ವಕೀಲ ಉಮೇಶ ನಾಯ್ಕ ಕಾಳಜಿಗೆ ಮನ್ನಣೆ : ಆ.10 ರಂದು ನೂತನ ಕಟ್ಟಡಕ್ಕೆ ಅಂಕೋಲಾ ಉಪನೋಂದಣಾಧಿಕಾರಿ ಕಛೇರಿ ಸ್ಥಳಾಂತರ..

ಅಂಕೋಲಾ: ಸಾರ್ವಜನಿಕರ ಹಿತದೃಷ್ಟಿಯಿಂದ ಅಂಕೋಲಾದ ವಕೀಲರಾದ ಶ್ರೀ ಉಮೇಶ ನಾಯ್ಕ ಅವರು ಸಲ್ಲಿಸಿದ್ದ ಜವಾಬ್ದಾರಿಯುತ ಮನವಿಗೆ ಹಾಗು ಈ ಕುರಿತು ವಿಕಾಸ ವಾಹಿನಿ ಮಾಡಿದ ವರದಿಗೆ ಜಿಲ್ಲಾಡಳಿತ ತ್ವರಿತವಾಗಿ ಸ್ಪಂದಿಸಿದೆ. ಇದರ ಫಲವಾಗಿ, ಬಹುಕಾಲದ ಬೇಡಿಕೆಯಾಗಿದ್ದ ಅಂಕೋಲಾ ಉಪನೋಂದಣಾಧಿಕಾರಿ ಕಛೇರಿಯು ಆಗಸ್ಟ್ 10 ರಂದು ಬೆಳಿಗ್ಗೆ 10:00 ಗಂಟೆಗೆ "ಪ್ರಜಾಸೌಧ" ತಹಶೀಲ್ದಾರ್ ಕಚೇರಿ ಎರಡನೇ ಮಹಡಿಗೆ ಅಧಿಕೃತವಾಗಿ ಸ್ಥಳಾಂತರಗೊಳ್ಳುತ್ತಿದ್ದು, ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಳೆಯ ಕಟ್ಟಡದ ಸಮಸ್ಯೆಗಳ ಕಿರುನೋಟ: ಈ ಹಿಂದೆ ಉಪನೋಂದಣಾಧಿಕಾರಿ ಕಛೇರಿಯು ಹಳೆಯ ಪುರಸಭಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡವು ತೀವ್ರ ಶಿಥಿಲಾವಸ್ಥೆಯಲ್ಲಿದ್ದು,…

News Desk

ಅಂಕೋಲಾದ ಹಿಚ್ಕಡ್ ಕ್ರಾಸ್ ಹೆದ್ದಾರಿಯಲ್ಲಿ ಪಲ್ಟಿಯಾದ ಬಾಳೆಕಾಯಿ ಪಿಕಪ್: ನಿಯಂತ್ರಣ ತಪ್ಪಿ ಡಿವೈಡರ್ ಕಂಬಕ್ಕಪ್ಪಳಿಸಿದ ಕಾರು..!!

ಅಂಕೋಲಾ: ತಾಲೂಕಿನ ಹಿಚ್ಕಡ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಾಳೆಕಾಯಿ ತುಂಬಿದ ಮಿನಿ ಪಿಕಪ್ ವಾಹನವೊಂದು ರಸ್ತೆಯ ಮಧ್ಯೆ ಪಲ್ಟಿಯಾದ ಪರಿಣಾಮ, ಅದರ ಹಿಂದೆಯೇ ಬರುತ್ತಿದ್ದ ಕಾರೊಂದು ಅಪಘಾತವನ್ನು ತಪ್ಪಿಸಲು ಹೋಗಿ ಡಿವೈಡರ್ ಏರಿ ಲೈಟ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದ ಘಟನೆ ಜರುಗಿದೆ. ಅದೃಷ್ಟವಶಾತ್ ಈ ಭೀಕರ ಅಪಘಾತದಲ್ಲಿ ಯಾವುದೇ ದೊಡ್ಡ ಮಟ್ಟದ ಪ್ರಾಣಹಾನಿ ಸಂಭವಿಸಿಲ್ಲ. ಅಂಕೋಲಾ ಕಡೆಗೆ ಸಾಗುತ್ತಿದ್ದ ಮಿನಿ ಪಿಕಪ್ ವಾಹನವು ಹಿಚ್ಕಡ ಕ್ರಾಸ್ ಬಳಿ ಬರುತ್ತಿದ್ದಂತೆ ಏಕಾಏಕಿ ವಾಹನದ ನಿಯಂತ್ರಣ ತಪ್ಪಿದ ಪರಿಣಾಮ ವಾಹನವು…

News Desk

ಮಿರ್ಜಾನದಲ್ಲಿ ಕೋಳಿ ಅಂಕದ ಜುಗಾರಾಟಕ್ಕೆ ಬ್ರೇಕ್: ಖಾಕಿ ದಿಢೀರ್ ದಾಳಿಯಿಂದ ಕೋಳಿ, ಚಾಕು, ಹಣ ಬಿಟ್ಟು ಪರಾರಿಯಾದ ಖದೀಮರು..

ಕುಮಟಾ ತಾಲೂಕಿನ ಮಿರ್ಜಾನ ಬಳಿಯ ತಾರಿಬಾಗಿಲು ರಸ್ತೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಹಣ ಪಣಕ್ಕಿಟ್ಟು ಕೋಳಿ ಅಂಕ (ಜುಗಾರಾಟ) ನಡೆಸುತ್ತಿದ್ದ ಅಡ್ಡೆಯ ಮೇಲೆ ಕುಮಟಾ ಪೊಲೀಸರು ದಿಢೀರ್ ದಾಳಿ ನಡೆಸಿದ್ದಾರೆ. ಭಾನುವಾರ ಸಂಜೆ ನಡೆದ ಈ ಕಾರ್ಯಾಚರಣೆ ವೇಳೆ ಪೊಲೀಸರನ್ನು ಕಂಡ ಜುಗಾರಿಗಳು ಕೋಳಿ, ಚಾಕು ಹಾಗೂ ಹಣವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದು, ಓರ್ವ ಆರೋಪಿ ಮಾತ್ರ ಪೊಲೀಸರ ಬಲೆಗೆ ಬಿದ್ದಿದ್ದಾನೆ. ತಮ್ಮ ಅನ್ಯಾಯದ ಲಾಭಗೋಸ್ಕರ ಕೋಳಿ ಹುಂಜಗಳ ಮೇಲೆ ಹಣವನ್ನು ಪಂಥವಾಗಿ ಕಟ್ಟಿ ಈ ಜುಗಾರಾಟವನ್ನು ನಡೆಸಲಾಗುತ್ತಿತ್ತು. ಆಗಸ್ಟ್ 02, 2026…

News Desk

ಅಂಕೋಲಾ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ “ರಾಮು ಜಿ ಅಗ್ನಿ” ಅಧಿಕಾರ ಸ್ವೀಕಾರ : ಅಭಿವೃದ್ಧಿ ಹಾಗೂ ದಕ್ಷ ಆಡಳಿತದತ್ತ ಹೊಸ ಹೆಜ್ಜೆ..

ಅಂಕೋಲಾ ತಾಲೂಕು ಪಂಚಾಯತ್‌ನ ನೂತನ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಇ.ಒ) ರಾಮು ಜಿ. ಅಗ್ನಿ ಅವರು ಅಧಿಕೃತವಾಗಿ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ತಾಲೂಕಿನ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ಬದಲಾವಣೆ ಮಹತ್ವ ಪಡೆದುಕೊಂಡಿದ್ದು, ಇದುವರೆಗೆ ಅಂಕೋಲಾದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಧಿಕಾರಿ ರಾಮು ಗುನಗಿ ಅವರು ನೂತನ ಅಧಿಕಾರಿಗೆ ಕಡತಗಳನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು. ರಾಮು ಜಿ. ಅಗ್ನಿ ಅವರು ಈ ಹಿಂದೆ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅಪಾರ ಆಡಳಿತಾತ್ಮಕ ಅನುಭವವನ್ನು ಹೊಂದಿದ್ದಾರೆ. ಸಿಂದಗಿಯಲ್ಲಿ ತಮ್ಮ ಆಡಳಿತದ ಮೂಲಕ…

News Desk

ಕಾವೇರಿ ನಮ್ಮ ಹಕ್ಕು: ಕಾವೇರಿಗಾಗಿ ಕಾರವಾರದಲ್ಲಿ ಕರವೇ ಪ್ರತಿಭಟನೆ..

ಕಾರವಾರ: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯವನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಜಿಲ್ಲಾ ಘಟಕದ ವತಿಯಿಂದ ನಗರದ ಸುಭಾಷ್ ವೃತ್ತದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧ್ಯಕ್ಷರಾದ ಅರುಣ್ ಹರ್ಕಡೆ ಅವರ ನೇತೃತ್ವದಲ್ಲಿ ಹಾಗೂ ವಿವಿಧ ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಹಯೋಗದೊಂದಿಗೆ ಈ ಪ್ರತಿಭಟನೆ ಜರುಗಿತು. ಕಾವೇರಿ ನಮ್ಮ ಹಕ್ಕು, ರಾಜ್ಯದ ರೈತರ ಹಿತಾಸಕ್ತಿಯನ್ನು ಯಾವುದೇ ಕಾರಣಕ್ಕೂ ಬಲಿಕೊಡಬಾರದು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಒಕ್ಕೊರಲಿನಿಂದ ಘೋಷಣೆಗಳನ್ನು ಕೂಗುವ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದರು. ಈ ಪ್ರತಿಭಟನಾ…

News Desk

ಹೆದ್ದಾರಿಯಲ್ಲಿ ಹಬ್ಬುತ್ತಿದೆ ಮಾದಕ ಜಾಲದ ಕಬಂಧಬಾಹು: ಬಾಳೆಗುಳಿಯಲ್ಲಿ ಗಾಂಜಾ ಮಾರಾಟಗಾರನ ಬೆನ್ನತ್ತಿದ ಖಾಕಿ ಪಡೆ..

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿಯ ಕತ್ತಲು ಆವರಿಸುತ್ತಿದ್ದಂತೆಯೇ ಅಕ್ರಮ ಚಟುವಟಿಕೆಗಳ ಜಾಲವೊಂದು ಸದ್ದಿಲ್ಲದೆ ತನ್ನ ಕಬಂಧಬಾಹುವನ್ನು ಚಾಚುತ್ತಿದೆ. ಲಾರಿ ಚಾಲಕರು ಮತ್ತು ಸಾರ್ವಜನಿಕರನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳನ್ನು ಪೂರೈಸುವ ವ್ಯವಸ್ಥಿತ ಜಾಲವೊಂದು ಕಾರ್ಯಾಚರಣೆ ನಡೆಸುತ್ತಿರುವ ಆಘಾತಕಾರಿ ಅಂಶವೊಂದು ಇದೀಗ ಬೆಳಕಿಗೆ ಬಂದಿದೆ. ಅಂಕೋಲಾ ತಾಲೂಕಿನ ಬಾಳೆಗುಳಿ ಫ್ಲೈಓವರ್ ಕೆಳಭಾಗದಲ್ಲಿ ರಾಜಾರೋಷವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಅಪರಿಚಿತ ವ್ಯಕ್ತಿಯೊಬ್ಬನ ವಿರುದ್ಧ ಅಂಕೋಲಾ ಪೊಲೀಸ್ ಠಾಣೆಯಲ್ಲಿ 1985ರ ಎನ್‌ಡಿಪಿಎಸ್ (NDPS) ಕಾಯ್ದೆಯಡಿ ಕಠಿಣ ಪ್ರಕರಣ ದಾಖಲಾಗಿದೆ. ಜುಲೈ 31, 2026 ರಂದು ರಾತ್ರಿ ಹೆದ್ದಾರಿಯ ವಾಹನ ಸಂಚಾರ…

News Desk

ಕಾರವಾರ ಸೀಬರ್ಡ್ ‘ಕದಂಬ’ ನೌಕಾನೆಲೆ ಮುಖ್ಯದ್ವಾರದಲ್ಲಿ ಕನ್ನಡ ನಾಮಫಲಕ ಅಳವಡಿಸಲು ಕರವೇ ಆಗ್ರಹ..

ಕಾರವಾರ: ಇಲ್ಲಿನ ಭಾರತೀಯ ನೌಕಾಪಡೆಯ ಸೀಬರ್ಡ್ ಕದಂಬ ನೌಕಾನೆಲೆಯ ನೂತನ ಮುಖ್ಯದ್ವಾರದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯ ನಾಮಫಲಕವನ್ನು ಅಳವಡಿಸಬೇಕು ಮತ್ತು ರಾಜ್ಯದ ಅಧಿಕೃತ ಭಾಷೆಗೆ ಗೌರವ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಯವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು. ಕರವೇ ಜಿಲ್ಲಾಧ್ಯಕ್ಷರಾದ ಅರುಣ ಹರಕಡೆ ಅವರ ನೇತೃತ್ವದ ನಿಯೋಗವು ಈ ಮನವಿ ಪತ್ರವನ್ನು ನೀಡಲಾಯಿತು. ಕರ್ನಾಟಕದ ಹೆಮ್ಮೆಯ ಪ್ರಥಮ ರಾಜವಂಶವಾದ 'ಕದಂಬ' ಹೆಸರನ್ನು ಈ ನೌಕಾನೆಲೆಗೆ ಇಡಲಾಗಿದೆ. ಆದರೆ, ನೂತನ ಮುಖ್ಯದ್ವಾರದ ನಾಮಫಲಕಗಳಲ್ಲಿ…

News Desk
- Sponsored -
Ad imageAd image

Editor's Pick

Weather
24°C
Karnataka
overcast clouds
24° _ 24°
73%
3 km/h
Mon
24 °C
Tue
28 °C
Wed
29 °C
Thu
28 °C
Fri
28 °C

Follow US

Most Read

Discover Categories

ನಿವೃತ್ತಿಯಾದ ಡಾ. ಸದಾನಂದ ಪೈರನ್ನು ಗೌರವಿಸಿದ ಕರ್ನಾಟಕ ರಣಧೀರರ ವೇದಿಕೆ ಕುಮಟಾ ಘಟಕ – ಮರೆಯದ ಚಾರಿತ್ರಿಕ ವೈದ್ಯರು ಸದಾನಂದ ಪೈ : ಮಂಜುನಾಥ ಗಾಂವ್ಕರ್ ಬರ್ಗಿ..

ಕುಮಟಾ : ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಜನಪ್ರಿಯ ವೈದ್ಯಾಧಿಕಾರಿಗಳಾದ ಡಾ. ಸದಾನಂದ ಪೈರವರನ್ನು ವಯೋ ನಿವೃತ್ತಿಗೊಂಡ…

News Desk

ಪಂಚಾಯತ್ ಆಡಳಿತಕ್ಕೆ ಕಂಟಕವಾದ ತಾಂತ್ರಿಕ ದೋಷಗಳು: ಪರಿಹಾರಕ್ಕಾಗಿ ಸಿಇಒ ಮೊರೆ ಹೋದ ಅಧಿಕಾರಿಗಳು..!!

ಇಂದು ಉತ್ತರ ಕನ್ನಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾ ಪಂಚಾಯತ್‌ನ ಮಾನ್ಯ…

News Desk

ಅಂಕೋಲಾ ಉಪನೋಂದಣಾಧಿಕಾರಿ ಕಛೇರಿ ಸ್ಥಳಾಂತರ ವಿಳಂಬ: ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಜಿಲ್ಲಾಧಿಕಾರಿಗೆ ದೂರು ನೀಡಿದ ವಕೀಲ ‘ಉಮೇಶ ನಾಯ್ಕ’..

ಅಂಕೋಲಾ ತಾಲೂಕಿನ ಉಪ ನೋಂದಣಾಧಿಕಾರಿ (ಸಬ್ ರಿಜಿಸ್ಟ್ರಾರ್) ಕಛೇರಿಯು ಹಳೆಯ ಪುರಸಭಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕರಿಗೆ…

News Desk

ಅಂಕೋಲಾ ಕಾರ್ಯನಿರತ ಪತ್ರಕರ್ತರ ಧ್ವನಿ ವತಿಯಿಂದ ಪತ್ರಿಕಾ ದಿನಾಚರಣೆ: ಸಮಾಜದಲ್ಲಿ ಆಗುವ ಅನೇಕ ತಪ್ಪುಗಳನ್ನು ತಿದ್ದುವಲ್ಲಿ ಪತ್ರ ಕರ್ತರ ಪಾತ್ರ ಪ್ರಮುಖವಾಗಿದೆ- ಗಿರೀಶ್ ನಾಯಕ..

ಅಂಕೋಲಾ: ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ಎತ್ತಿತೋರಿಸುವ ಜೊತೆಗೆ ಉತ್ತಮ ಕೆಲಸಗಳನ್ನು ಬೆಳಕಿಗೆ ತಂದು ಪ್ರೋತ್ಸಾಹ ನೀಡುವ…

News Desk

ಅಪರಾಧ ತನಿಖೆಗೆ ವೈಜ್ಞಾನಿಕ ಸ್ಪರ್ಶ: ಉತ್ತರ ಕನ್ನಡ ಜಿಲ್ಲಾ ಪೊಲೀಸರ ‘ಸೊಕೊ’ ವಾಹನಕ್ಕೆ ಕಾರವಾರದಲ್ಲಿ ನ್ಯಾಯಾಧೀಶರಿಂದ ಚಾಲನೆ..

ಕಾರವಾರ: ಅಪರಾಧ ಕೃತ್ಯಗಳ ತ್ವರಿತ, ನಿಖರ ಹಾಗೂ ವೈಜ್ಞಾನಿಕ ತನಿಖೆಗೆ ನೆರವಾಗುವ ನಿಟ್ಟಿನಲ್ಲಿ ಉತ್ತರ ಕನ್ನಡ…

News Desk

ಸಪ್ತ ವಯಸ್ಸಿನಲ್ಲೇ ‘ಭರತನಾಟ್ಯ ಕಲಾ ಮಾಣಿಕ್ಯ’ ರಾಜ್ಯ ಪ್ರಶಸ್ತಿ ಮುಡಿಗೇರಿಸಿಕೊಂಡ ಅಂಕೋಲಾದ ಕುವರಿ ಐಶಾನಿ..

ಅಂಕೋಲಾ ತಾಲೂಕಿನ 7 ವರ್ಷದ ಬಾಲಕಿ ಐಶಾನಿ ಸಂತೋಷ್ ನಾಯ್ಕ್ ಎಳೆಯ ವಯಸ್ಸಿನಲ್ಲಿಯೇ "ಭರತನಾಟ್ಯ ಕಲಾ…

News Desk

ರಾತ್ರಿ ವೇಳೆ ಒಂಟಿ ಪಾದಚಾರಿಗಳೇ ಟಾರ್ಗೆಟ್: 24 ಗಂಟೆಯೊಳಗೆ ಸರಗಳ್ಳನ ಬಂಧನ..

ಉತ್ತರ ಕನ್ನಡ ಜಿಲ್ಲೆಯ ಮುರ್ಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಚಿನ್ನದ ಸರ ಸುಲಿಗೆ ಪ್ರಕರಣವನ್ನು…

News Desk

ಅಂಕೋಲಾದ ಹೆಮ್ಮೆಯ ಸಮಾಜ ಸೇವಕ ವಿಜಯ್ ಕುಮಾರ್ ಯಶವಂತ ನಾಯ್ಕ ಅವರಿಗೆ ಪ್ರತಿಷ್ಠಿತ ‘ಶ್ರೇಷ್ಠ ಜೀವ ಮಾನವ’ ರಾಷ್ಟ್ರ ಪ್ರಶಸ್ತಿ ಗರಿ..

ಅಂಕೋಲಾ ತಾಲೂಕಿನ ಕನಸೆಗದ್ದೆ ನಿವಾಸಿ ಹಾಗೂ ಸಕ್ರಿಯ ಸಮಾಜ ಸೇವಾ ಕಾರ್ಯಕರ್ತರಾದ ಶ್ರೀ ವಿಜಯ್ ಕುಮಾರ್…

News Desk