ಗ್ಯಾಸ್ ದರ ಏರಿಕೆ ಬಿಸಿ: ಅಂಕೋಲಾದಲ್ಲಿ ಭುಗಿಲೆದ್ದ ಆಕ್ರೋಶ; ಕೇಂದ್ರದ ವಿರುದ್ಧ ರಸ್ತೆಗಿಳಿದ ಕೈ ಪಡೆ.!

ಅಂಕೋಲಾ (ಮಾ. 11): ಸಾಮಾನ್ಯ ಜನರು ದಿನನಿತ್ಯ ಬಳಸುವ ಅಡುಗೆ ಅನಿಲದ (ಎಲ್‌ಪಿಜಿ) ದರವನ್ನು ದಿಢೀರ್ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ, ಅಂಕೋಲಾದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಯಿತು. ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್ ಹಾಗೂ ಅಂಕೋಲಾ ಬ್ಲಾಕ್ ಕಾಂಗ್ರೆಸ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ರಸ್ತೆಗಿಳಿದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಇಂದು ಅಂಕೋಲಾ ಬಸ್ ನಿಲ್ದಾಣದ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ ಕಾರ್ಯಕರ್ತರು, ಕೇಂದ್ರ ಸರ್ಕಾರದ ನಡೆಯ ಆಕ್ರೋಶ ಹೊರ ಹಾಕಿದರು. ಪ್ರತಿಭಟನಾಕಾರರ ಪ್ರಮುಖ ಆರೋಪಗಳೇನು? "ಈಗಾಗಲೇ ಬೆಲೆ ಏರಿಕೆಯ ಬಿಸಿಯಿಂದ ಜನಸಾಮಾನ್ಯರು…

News Desk

ಕುಮಟಾ ಪೊಲೀಸರ ದಾಳಿ: 1 ಲಕ್ಷ ಮೌಲ್ಯದ 3 ಕೆ.ಜಿ ಗಾಂಜಾ ವಶ, ಮೂವರು ಅರೆಸ್ಟ್!!

ಇತ್ತೀಚಿನ ದಿನಗಳಲ್ಲಿ ಕರಾವಳಿ ಭಾಗದಲ್ಲಿ ಯುವಕರನ್ನೇ ಗುರಿಯಾಗಿಸಿಕೊಂಡು ಹರಡುತ್ತಿದ್ದ ಮಾದಕ ಜಾಲವೊಂದನ್ನು ಕುಮಟಾ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ತಂಡ, ಮೂರೂರು ಗುಡ್ಡದ ಕಾಗಾಲ ಮಾನೀರ ಬಳಿ ಮಂಗಳವಾರ (ಮಾ. 10) ಮಧ್ಯಾಹ್ನ 1:05 ರ ಸುಮಾರಿಗೆ ದಾಳಿ ನಡೆಸಿ, ಬರೋಬ್ಬರಿ 1 ಲಕ್ಷ ರೂ. ಮೌಲ್ಯದ 3 ಕೆ.ಜಿ. ಗಾಂಜಾ, ಗಾಂಜಾ ಮಾರಾಟಕ್ಕೆ ಬಳಸುತ್ತಿದ್ದ 1 ಲಕ್ಷ ರೂ. ಮೌಲ್ಯದ ಸ್ಕೂಟರ್ ಹಾಗೂ 2 ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ. ಗಾಂಜಾ ಸಾಗಾಟ ಮತ್ತು ಮಾರಾಟ…

News Desk

ವಿಕಾಸ ವಾಹಿನಿ “ಬಿಗ್ ಇಂಪ್ಯಾಕ್ಟ್” : ಅಂಕೋಲಾ ಹೆದ್ದಾರಿ ಅಂಚಿನ ಕಸದ ಸಮಸ್ಯೆಗೆ 24 ಗಂಟೆಯೊಳಗೆ ಪರಿಹಾರ ಕ್ರಮ ಆರಂಭ..

ಅಂಕೋಲಾದಲ್ಲಿ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯ ಅಂಚಿನಲ್ಲಿ ಕಸ ಸಂಗ್ರಹವಾಗಿದ್ದು ಹಾಗೂ ಸುರಕ್ಷತಾ ಕ್ರಮಗಳ ಕೊರತೆಯ ಬಗ್ಗೆ ವಿಕಾಸ ವಾಹಿನಿ ವರದಿ ಮಾಡಿದ್ದಕ್ಕೆ ಸ್ಪಂದನೆ ವ್ಯಕ್ತವಾಗಿದೆ. ವರದಿ ಪ್ರಸಾರವಾದ ಕೇವಲ 24 ಗಂಟೆಗಳೊಳಗೆ ಸ್ವಚ್ಛತಾ ಕಾರ್ಯ ಆರಂಭವಾಗಿದ್ದು, ಸ್ಥಳೀಯ ಆಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐ.ಆರ್.ಬಿ ಕಂಪನಿ ಸುರಕ್ಷತಾ ಮುಚ್ಚಳ ಇಲ್ಲದೆ ಬಿಟ್ಟಿದ್ದ ಕಾಂಕ್ರೀಟ್ ಚರಂಡಿಗಳು ಹಾಗೂ ಅಲ್ಲಲ್ಲಿ ಜಮೆಯಾಗಿದ್ದ ಪ್ಲಾಸ್ಟಿಕ್ ಮತ್ತು ಇತರ ಘನತ್ಯಾಜ್ಯಗಳ ಬಗ್ಗೆ ವಿಕಾಸ ವಾಹಿನಿ ವರದಿ ಮಾಡಿತ್ತು. ಈ ವರದಿಯ ನಂತರ…

News Desk

ಕಾರವಾರ ಹೆದ್ದಾರಿಯಲ್ಲಿ ಭೀಕರ ಅಪಘಾತ: ಕಾರಿನ ಮೇಲೆ ಕಂಟೆನರ್ ಪಲ್ಟಿ, ಬಾಲಕ ಸಾವು..

ಕಾರವಾರ ಸಮೀಪದ ರಾಷ್ಟ್ರೀಯ ಹೆದ್ದಾರಿ-66ರ ಬಿಣಗಾ ಮಾರ್ಗದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತವೊಂದು ಹೆದ್ದಾರಿ ಪ್ರಯಾಣಿಕರನ್ನು ಬೆಚ್ಚಿಬೀಳಿಸಿದೆ. ಮಹಾರಾಷ್ಟ್ರ ನೋಂದಣಿಯ (MH 15 KG 4891) ಕಾರಿಗೆ ಭಾರಿ ಗಾತ್ರದ ಕಂಟೈನರ್‌ವೊಂದು ದಿಢೀರನೆ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನಿಯಂತ್ರಣ ಕಳೆದುಕೊಂಡ ಕಂಟೈನರ್, ನೇರವಾಗಿ ಕಾರಿನ ಮೇಲೆಯೇ ಉರುಳಿ ಬಿದ್ದಿದೆ. ಬೃಹತ್ ವಾಹನದ ಭಾರಕ್ಕೆ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ಕಾರಿನೊಳಗಿದ್ದ ಎಂಟು ವರ್ಷದ ಬಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಘಟನೆಯಲ್ಲಿ ಕಾರಿನಲ್ಲಿದ್ದ ಇತರ ಮೂವರಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ತುರ್ತು ಚಿಕಿತ್ಸೆಗೆ…

News Desk

ಅಂಕೋಲಾ ಹೆದ್ದಾರಿ ಸರ್ವೀಸ್ ರಸ್ತೆ ಬದಿಯಲ್ಲಿ ಇದೇನು ಅವ್ಯವಸ್ಥೆ? ಕಸದ ರಾಶಿಯ ನಡುವೆ ಕಾದು ಕುಳಿತಿದೆ ಗಂಭೀರ ಅಪಾಯ!

ಅಂಕೋಲಾದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಗುಣಮಟ್ಟ ಹಾಗೂ ಸಾರ್ವಜನಿಕ ಸುರಕ್ಷತೆಯ ಬಗ್ಗೆ ಈಗ ಗಂಭೀರ ಪ್ರಶ್ನೆಗಳು ಎದ್ದಿವೆ. ಹೆದ್ದಾರಿ ನಿರ್ಮಾಣದ ಹೊಣೆ ಹೊತ್ತಿರುವ ಐ.ಆರ್.ಬಿ ಕಂಪನಿಯು ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಬಿಟ್ಟುಹೋಗಿರುವ ಅಪಾಯಕಾರಿ ಕುರುಹುಗಳು ವಾಹನ ಸವಾರರಲ್ಲಿ ತೀವ್ರ ಆತಂಕ ಮೂಡಿಸಿವೆ. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುತ್ತಿರುವ ಈ ಕಾಮಗಾರಿಯ ಪಕ್ಕದಲ್ಲೇ ಸಾರ್ವಜನಿಕರ ಜೀವಕ್ಕೆ ಕಂಟಕವಾಗುವಂತಹ ಗಂಭೀರ ಲೋಪವೊಂದು ಕಣ್ಣಿಗೆ ಬೀಳುತ್ತಿದೆ. ಅಧಿಕಾರಿಗಳ ಈ ಬೇಜವಾಬ್ದಾರಿತನದ ವಿರುದ್ಧ ಸಾರ್ವಜನಿಕ ವಲಯದಲ್ಲಿ ಅಸಮಾದಾನ ವ್ಯಕ್ತವಾಗುತ್ತಿದೆ. ಹೆದ್ದಾರಿ ಬದಿಯ ಈ ಕಸದ ನಿರ್ವಹಣೆ…

News Desk

ಅಂಕೋಲಾ: ಶಿರೂರು ನವಚೈತನ್ಯ ನಾಮಧಾರಿ ಸಂಘದ 13ನೇ ವಾರ್ಷಿಕೋತ್ಸವ ಸಂಭ್ರಮ – ಜನಸಾಮಾನ್ಯರಂತೆ ಬೆರೆತು ನಾಟಕ ವೀಕ್ಷಿಸಿದ “ಶಾಸಕ ಸತೀಶ್ ಸೈಲ್”..

ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ನವಚೈತನ್ಯ ನಾಮಧಾರಿ ಸಂಘದ 13ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಶನಿವಾರ (ಮಾ. 7) ಆಯೋಜಿಸಲಾಗಿದ್ದ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮಗಳು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡವು. ಗಮನ ಸೆಳೆದ ಶಾಸಕರ ಸರಳತೆ: ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ಕೃಷ್ಣ ಸೈಲ್ ಅವರು ತಮ್ಮ ದೈನಂದಿನ ಹಾಗೂ ರಾಜಕೀಯದ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ, ಬೆಂಗಳೂರಿನಿಂದ ನೇರವಾಗಿ ಶಿರೂರು ಗ್ರಾಮದ ಕಾರ್ಯಕ್ರಮಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಶಾಸಕರ ಆಗಮನವು ಸಂಘಟನೆಯ ಸದಸ್ಯರು ಹಾಗೂ ಗ್ರಾಮಸ್ಥರಲ್ಲಿ ಅತೀವ ಸಂತಸ…

News Desk

ಶಿರೂರು: ಬೃಹತ್ ಮಾವಿನ ಮರ ಉರುಳಿ ಕೂದಲೆಳೆ ಅಂತರದಲ್ಲಿ ಪಾರಾದ ಮಹಿಳೆಗೆ ಸಣ್ಣಪುಟ್ಟ ಗಾಯ; ಅಪ್ಪಚ್ಚಿಯಾದ ಬೈಕ್‌ಗಳು..

ಅಂಕೋಲಾ: ತಾಲೂಕಿನ ಶಿರೂರು ಗ್ರಾಮದಲ್ಲಿ ನಿನ್ನೆ ಸಂಜೆ ಭಾರೀ ಗಾತ್ರದ ಮಾವಿನ ಮರವೊಂದು ದಿಢೀರ್ ಧರೆಗುರುಳಿದ ಪರಿಣಾಮ ಮಹಿಳೆಯೊಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದು, ಅವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಆಘಾತಕಾರಿ ಘಟನೆ ನಡೆದಿದೆ. ಮರದ ಅಡಿಗೆ ಸಿಲುಕಿ ದ್ವಿಚಕ್ರ ವಾಹನಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಭಾರಿ ಅನಾಹುತವೊಂದು ಸ್ವಲ್ಪದರಲ್ಲೇ ತಪ್ಪಿದಂತಾಗಿದೆ. ಕೂದಲೆಳೆ ಅಂತರದಲ್ಲಿ ಪಾರಾದ ಜೀವ ಗ್ರಾಮದ ಬೀರ ಪಟಿಯಾ ಗೌಡ ಎಂಬುವವರ ಮನೆಯ ಆವರಣದಲ್ಲಿದ್ದ ಈ ಮರವು ಅನಿರೀಕ್ಷಿತವಾಗಿ ಉರುಳಿ ಬಿದ್ದಿದೆ. ಘಟನೆಯ ಸಮಯದಲ್ಲಿ ಅಲ್ಲೇ ಇದ್ದ ಮಹಿಳೆಯೊಬ್ಬರ ಮೇಲೆ ಮರದ ಕೊಂಬೆಗಳು ಬೀಳುವಷ್ಟರಲ್ಲಿ…

News Desk

ಎಸ್.ಎಸ್.ಎಲ್.ಸಿ ಕಡ್ಡಾಯ ಹಿಂದಿ ಪರೀಕ್ಷೆ ರದ್ದತಿಗೆ ಆಗ್ರಹ: ಪರೀಕ್ಷೆ ತಡೆಯುವ ಎಚ್ಚರಿಕೆ ನೀಡಿದ ಕರ್ನಾಟಕ ರಣಧೀರರ ವೇದಿಕೆ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು .ಕೆ.ಆರ್..

ನೆಲಮಂಗಲ: ಕರ್ನಾಟಕದ ಶಾಲಾ ಶಿಕ್ಷಣದಲ್ಲಿ ಹಿಂದಿ ಹೇರಿಕೆಯನ್ನು ತೀವ್ರವಾಗಿ ವಿರೋಧಿಸಿ ಹಾಗೂ ಮುಂಬರುವ 2026ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಹಿಂದಿ ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಣಧೀರರ ವೇದಿಕೆಯ ರಾಜ್ಯಾಧ್ಯಕ್ಷರಾದ ಶಂಕರ್ ಗೌಡ್ರು .ಕೆ.ಆರ್. ಅವರು ರಾಜ್ಯ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ದಿನಾಂಕ 02-03-2026 ರಂದು ನೆಲಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಅಧಿಕೃತ ಮನವಿ ಪತ್ರ ಸಲ್ಲಿಸಿರುವ ಅವರು, ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ನುಡಿಯ ಬೆಳವಣಿಗೆಗೆ ಕಡ್ಡಾಯ ಹಿಂದಿ ಕಲಿಕೆ ತೊಡಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.…

News Desk

ಅಂಕೋಲಾ : ಸಿನಿಮಾ ಸ್ಟೈಲ್‌ನಲ್ಲಿ ಬ್ಯಾಂಕ್ ಗೋಡೆ ಕೊರೆದಿದ್ದ ಖದೀಮರು ಕೊನೆಗೂ ಅಂದರ್..

ಅಂಕೋಲಾ: ಸಿನಿಮಾ ಶೈಲಿಯಲ್ಲಿ ಬ್ಯಾಂಕೊಂದರ ಸ್ಟ್ರಾಂಗ್ ರೂಮ್ ಗೋಡೆ ಕೊರೆದು ಕಳ್ಳತನಕ್ಕೆ ಯತ್ನಿಸಿದ್ದಲ್ಲದೇ, ತಾಲೂಕಿನಾದ್ಯಂತ ಕೈಚಳಕ ತೋರಿಸಿ ಸಾರ್ವಜನಿಕರ ನಿದ್ದೆಗೆಡಿಸಿದ್ದ ಐವರು ಕುಖ್ಯಾತ ಕಳ್ಳರ ಗ್ಯಾಂಗ್ ಅನ್ನು ಅಂಕೋಲಾ ಪೊಲೀಸರು ಕೊನೆಗೂ ಹೆಡೆಮುರಿ ಕಟ್ಟಿದ್ದಾರೆ. ತಾಲೂಕಿನ ಸುಂಕಸಾಳದ ಬ್ಯಾಂಕ್ ಆಫ್ ಬರೋಡಾ ಶಾಖೆ, ಹೆಗ್ಗಾರಿನ ಕಲ್ಪತರು ವಿವಿದ್ದೋದ್ದೇಶಗಳ ಸಹಕಾರಿ ಸಂಘ ಹಾಗೂ ಕನಕನಹಳ್ಳಿಯ ಕಿರಾಣಿ ಅಂಗಡಿಯಲ್ಲಿ ನಡೆದಿದ್ದ ಸರಣಿ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಖಾಕಿ ಪಡೆ ಯಶಸ್ವಿಯಾಗಿದೆ. ಕಳೆದ ಜನವರಿ 09 ರಿಂದ 12ರ ನಡುವಿನ ಅವಧಿಯಲ್ಲಿ ಸುಂಕಸಾಳದ ಬ್ಯಾಂಕ್ ಆಫ್ ಬರೋಡಾ ಶಾಖೆಯ…

News Desk

ಅಂಕೋಲಾದ ಈ ಅಭಿವೃದ್ಧಿಯಾದ ರಸ್ತೆಗೆ ಹಳೆಯ ಕಿರಿದಾದ ಸೇತುವೆಯೇ ಕಂಟಕ!.

ಅಂಕೋಲಾ: ತಾಲೂಕಿನ ಅಭಿವೃದ್ಧಿಗೊಂಡ ರಸ್ತೆಗಳ ಪೈಕಿ ಪ್ರಮುಖವಾದ ಪೂಜಗೇರಿ ರಸ್ತೆಯಲ್ಲಿರುವ ಹಳೆಯ ಕಿರಿದಾದ ಸೇತುವೆ ಇದೀಗ ಸಂಚಾರ ದಟ್ಟಣೆಗೆ ಕಾರಣ ವಾಗುತ್ತಿದೆ. ರಸ್ತೆ ಅಗಲೀಕರಣಗೊಂಡು ವಾಹನ ಸಂಚಾರ ಸುಗಮವಾಗಿದ್ದರೂ, ಮಧ್ಯದಲ್ಲಿರುವ ಈ ಸೇತುವೆ ಮಾತ್ರ ಹಳೆಯ ವಿನ್ಯಾಸದಲ್ಲೇ ಉಳಿದಿದೆ. ಗಂಗಾವಳಿ ಸೇತುವೆ ಸಾರಿಗೆಗೆ ಮುಕ್ತವಾಗಿರುವುದರಿಂದ ಇದೇ ಮಾರ್ಗದ ಮೂಲಕ ಗೋಕರ್ಣ ಕಡೆಗೆ ತೆರಳುವ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರವಾಸಿಗರ ವಾಹನಗಳ ಜೊತೆಗೆ ಶಾಲಾ-ಕಾಲೇಜು ಬಸ್‌ಗಳು, ಸರಕಾರಿ ಮತ್ತು ಖಾಸಗಿ ಸಾರಿಗೆ ವಾಹನಗಳ ಓಡಾಟವೂ ಹೆಚ್ಚಳ ಕಂಡಿದೆ. ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ…

News Desk
- Sponsored -
Ad imageAd image
Weather
33°C
Karnataka
scattered clouds
33° _ 33°
13%
4 km/h
Wed
33 °C
Thu
34 °C
Fri
35 °C
Sat
35 °C
Sun
35 °C

Follow US

Discover Categories

ಭಕ್ತಿಗೂ ಬಿಡದ ಸೈಬರ್ ಖದೀಮರು: ಮಾರಿಕಾಂಬಾ ದೇವಿಯ ಹೆಸರಲ್ಲಿ ಹಣ ದೋಚಲು ಬಂದ ‘ಯಜಮಾನ’ನ ಬಣ್ಣ ಬಯಲು!.

ನಾಡಿನ ಪ್ರಸಿದ್ಧ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆಯ ಸಂಭ್ರಮದ ನಡುವೆಯೇ, ಭಕ್ತರ ಭಕ್ತಿ ಹಾಗೂ ನಂಬಿಕೆಯನ್ನು…

News Desk

ಕಸಿದುಕೊಂಡ ಕೆಲಸ, ಅಡವಿಟ್ಟ ಒಡವೆ: ನಯನಾಳ ಸಾವಿಗೆ ಕಾರಣವಾಯ್ತಾ ಕೌಟುಂಬಿಕ ದೌರ್ಜನ್ಯ?

ಅಂಕೋಲಾ: ಹದಿಮೂರು ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ವಿವಾಹಿತೆಯೊಬ್ಬಳು ಗಂಡನ ಮನೆಯವರ ಮಾನಸಿಕ ಮತ್ತು ದೈಹಿಕ…

News Desk

ಮನೆಯ ಮಾಡು ಒಡೆದು ಒಳನುಗ್ಗಿ ಕೃತ್ಯ: ಹಣಕ್ಕಾಗಿ ವೃದ್ಧೆಯನ್ನು ಕೊಂದಾತನಿಗೆ ಕಾನೂನಿನಡಿ ಕಠಿಣ ಶಿಕ್ಷೆ..

ಹಣ ಹಾಗೂ ಒಡವೆಗಳಿಗಾಗಿ ವೃದ್ಧೆಯೊಬ್ಬರ ಮನೆಯ ಮಾಡು ಒಡೆದು ಒಳನುಗ್ಗಿ, ಕತ್ತು ಹಿಸುಕಿ ಬರ್ಬರವಾಗಿ ಕೊಲೆ…

News Desk

ಮಿರ್ಜಾನ ಕೋಟೆ ರಸ್ತೆಗೆ ಗೇಟ್ ಅಳವಡಿಕೆ ನಿರ್ಧಾರ ಕೈಬಿಟ್ಟ ಪಂಚಾಯತ್ – ಗ್ರಾಮಸ್ಥರಿಗೆ ಲಿಖಿತ ಭರವಸೆ..

ಕುಮಟಾ: ತಾಲೂಕಿನ ಐತಿಹಾಸಿಕ ಮಿರ್ಜಾನ ಕೋಟೆ ರಸ್ತೆಯಲ್ಲಿ (ಛತ್ರಕೂರ್ವೆ ಗ್ರಾಮಕ್ಕೆ ತೆರಳುವ ಮಾರ್ಗ) ಅಕ್ರಮವಾಗಿ ಗೇಟ್…

News Desk

ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಭೀಕರ ಸರಣಿ ಅಪಘಾತ – ಐದಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ..

ಅಂಕೋಲಾ: ತಾಲೂಕಿನ ಸುಂಕಸಾಳ ಸಮೀಪದ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಮುಂಜಾನೆ ಹೊತ್ತಿಗೆ ಎರಡು ಖಾಸಗಿ ಬಸ್‌ಗಳು…

News Desk

ನಡುರಾತ್ರಿ ಮನೆಯವರು ನಿದ್ರಿಸುತ್ತಿದ್ದ ವೇಳೆ ಮನೆಗೆ ನುಗ್ಗಿದ ಕಳ್ಳ… 24 ಗಂಟೆಯೊಳಗೆ ಪೊಲೀಸರ ಬಲೆಗೆ!!

ಕುಮಟಾ: ಪಟ್ಟಣದ ಬಸ್ತಿಪೇಟೆ ಬಳಿ ಮನೆಯೊಂದರಲ್ಲಿ ಜನರು ನಿದ್ರಿಸುತ್ತಿದ್ದ ವೇಳೆ ನುಗ್ಗಿ ಸಾವಿರಾರು ರೂಪಾಯಿ ನಗದು…

News Desk

ಮನವಿ ಸಲ್ಲಿಸಿದ ತಕ್ಷಣ ಸ್ಪಂದನೆ: ಮಂಡ್ಲಿಕೊಪ್ಪ ಬಸ್ ನಿಲ್ದಾಣಕ್ಕೆ 3.5 ಲಕ್ಷ ರೂ. ಅನುದಾನ ಘೋಷಿಸಿದ ಶಾಸಕ ಭೀಮಣ್ಣ ನಾಯ್ಕ್..

ಸಿದ್ದಾಪುರ: ತಾಲೂಕಿನ ಮಂಡ್ಲಿಕೊಪ್ಪ ಗ್ರಾಮದಲ್ಲಿ ಬಸ್ ನಿಲ್ದಾಣದ ಸಮಸ್ಯೆಗೆ ಸಂಬಂಧಿಸಿದಂತೆ ಕರ್ನಾಟಕ ರಣಧೀರ ವೇದಿಕೆ ಹಾಗೂ…

News Desk

ಉತ್ತರ ಕನ್ನಡದಲ್ಲಿ ಬಿಸಿಲಿನ ತಾಪ ಏರಿಕೆಗೆ ಮುಂದಿನ 2 ದಿನ ಎಚ್ಚರಿಕೆ ವಹಿಸಲು ಸೂಚನೆ..

ಉತ್ತರ ಕನ್ನಡ : ಜಿಲ್ಲೆಯಲ್ಲಿ ಮುಂದಿನ ಎರಡು ದಿನಗಳ ಕಾಲ (ಫೆ. 14 ಮತ್ತು 15)…

News Desk