ದಿವಂಗತ ಗೋಪಾಲ್ ನಾಯ್ಕ್ ಅವರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಕ್ಕೆ ಧನಸಹಾಯ – ಮಾನವೀಯತೆಗೆ ಸಾಕ್ಷಿಯಾದ ಪಂಚಾಯತ್ ಕುಟುಂಬದ ಒಗ್ಗಟ್ಟು..

ಹೊನ್ನಾವರ ತಾಲೂಕಿನ ಕರ್ವಾ ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದಿವಂಗತ ಗೋಪಾಲ್ ನಾಯ್ಕ್ ಅವರ ಅಕಾಲಿಕ ನಿಧನವು ಪಂಚಾಯತ್ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಯ ನೋವು ಕುಟುಂಬದವರಿಗೆ ಮಾತ್ರವಲ್ಲದೆ, ಅವರೊಂದಿಗೆ ಕೆಲಸ ಮಾಡಿದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಕ್ಕೂ ತೀವ್ರ ದುಃಖವನ್ನುಂಟು ಮಾಡಿದ್ದ ಈ ಹಿನ್ನೆಲೆಯಲ್ಲಿ ದಿವಂಗತ ಗೋಪಾಲ್ ನಾಯ್ಕ್ ಅವರ ಆತ್ಮಕ್ಕೆ ಚಿರಶಾಂತಿ ಕೋರಿ ಹಾಗೂ ಅವರ ಕುಟುಂಬಕ್ಕೆ ಸಾಂತ್ವನ ಮತ್ತು ಆರ್ಥಿಕ ನೆರವು ನೀಡುವ ಉದ್ದೇಶದಿಂದ ಇಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗ್ರಾಮ ಪಂಚಾಯತಿ…

News Desk

ಅಂಕೋಲಾದ ಹುಲಿದೇವರವಾಡದಲ್ಲಿ ಗಾಳಿ-ಮಳೆಗೆ ಜಖಂಗೊಂಡ ಮನೆ – ಪರಿಹಾರಕ್ಕಾಗಿ ಸಂತ್ರಸ್ತರ ಆಗ್ರಹ..

ಅಂಕೋಲಾ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವೆಡೆ ಆಸ್ತಿಪಾಸ್ತಿಗಳಿಗೆ ಹಾನಿಯಾದ ಘಟನೆಗಳು ವರದಿಯಾಗುತ್ತಿವೆ. ತಾಲೂಕಿನ ಶೇಡಗೇರಿ ಗ್ರಾಮದ ಹುಲಿದೇವರವಾಡದಲ್ಲಿ ವರುಣನ ಆರ್ಭಟಕ್ಕೆ ಮನೆಯೊಂದರ ಚಾವಣಿ ಹಾಗೂ ಗೋಡೆಗಳಿಗೆ ಹಾನಿಯಾಗಿದೆ. ಹುಲಿದೇವರವಾಡ-ಶೇಡಗೇರಿ ನಿವಾಸಿ ತಾಹಿರಾಬಿ ಅಬ್ದುಲ್ ಮುನಾಪ ಶೇಖ್ (ಮನೆ ನಂಬರ್: 921/A) ಅವರ ಮನೆಗೆ ಜುಲೈ 5ರಂದು ಸುರಿದ ವಿಪರೀತ ಗಾಳಿ - ಮಳೆಯ ಪರಿಣಾಮವಾಗಿ ಈ ಹಾನಿ ಸಂಭವಿಸಿದೆ. ಗಾಳಿ ಮಳೆಯ ರಭಸಕ್ಕೆ ಮನೆಯ ಮಾಡು (ಮೇಲ್ಛಾವಣಿ) ಹಾನಿಗೀಡಾಗಿದ್ದು, ಗೋಡೆಗಳು ಬಿರುಕುಬಿಟ್ಟಿವೆ. ಇದರಿಂದಾಗಿ ಮನೆಯಲ್ಲಿ ವಾಸಿಸುವ ಪರಿಸ್ಥಿತಿ ದುಸ್ತರವಾಗಿದ್ದು,…

News Desk

ಅಂಕೋಲಾ ಅವರ್ಸಾ ಬಳಿ ನಿಯಂತ್ರಣ ತಪ್ಪಿ ಉರುಳಿಬಿದ್ದ ಖಾಸಗಿ ಬಸ್..

ಅಂಕೋಲಾ (ಉತ್ತರ ಕನ್ನಡ): ತಾಲೂಕಿನ ಅವರ್ಸಾ ವ್ಯಾಪ್ತಿಯಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಖಾಸಗಿ ಬಸ್ಸೊಂದು ದಿಢೀರ್ ನಿಯಂತ್ರಣ ತಪ್ಪಿ ರಸ್ತೆಬದಿಗೆ ಮಗುಚಿಬಿದ್ದ ಪರಿಣಾಮ, ವಾಹನದಲ್ಲಿದ್ದ ಪ್ರಯಾಣಿಕರು ಗಾಯಗೊಂಡಿರುವ ಘಟನೆ ವರದಿಯಾಗಿದೆ. ಬೆಂಗಳೂರಿನಿಂದ ಗೋವಾ ಕಡೆಗೆ ಸಾಗುತ್ತಿದ್ದ 'ಸೀಬರ್ಡ್' ಟ್ರಾವೆಲ್ಸ್‌ಗೆ ಸೇರಿದ ವಾಹನ ಇದಾಗಿದ್ದು, ಅಪಘಾತದ ನಿಖರ ಕಾರಣದ ಕುರಿತು ಪೊಲೀಸ್ ತನಿಖೆ ನಡೆಯುತ್ತದೆ. ಲಭ್ಯವಾದ ಪ್ರಾಥಮಿಕ ಮಾಹಿತಿಗಳ ಪ್ರಕಾರ, ಘಟನಾ ಸಮಯದಲ್ಲಿ ಬಸ್ಸಿನಲ್ಲಿ ಹೆಚ್ಚಿನ ಜನದಟ್ಟಣೆ ಇರಲಿಲ್ಲ. ಒಂದು ವೇಳೆ ಬಸ್ ಭರ್ತಿಯಾಗಿದ್ದಿದ್ದರೆ ಭಾರಿ ಅನಾಹುತವೇ ಸಂಭವಿಸುವ ಸಾಧ್ಯತೆಯಿತ್ತು ಎಂದು ಪ್ರತ್ಯಕ್ಷದರ್ಶಿಗಳು ವಿಶ್ಲೇಷಿಸಿದ್ದಾರೆ. ಆದಾಗ್ಯೂ,…

News Desk

ಅಂಕೋಲಾದ ಬೆಳಸೆ ಪಂಚಾಯತ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ: ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಲ್ಟಿಯಾದ ಕಾರು..!!

ಅಂಕೋಲಾ: ತಾಲೂಕಿನ ಬೆಳಸೆ ಗ್ರಾಮ ಪಂಚಾಯತ್ ಸಮೀಪ ತಡರಾತ್ರಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಗುರುಳಿದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಅಂಕೋಲಾ ಕಡೆಯಿಂದ ಕುಮಟಾ ದಿಕ್ಕಿನತ್ತ ವೇಗವಾಗಿ ಚಲಿಸುತ್ತಿದ್ದ ಕಾರು, ಮಾರ್ಗಮಧ್ಯೆ ಕತ್ತಲೆಯಲ್ಲಿ ದಿಢೀರ್ ನಿಯಂತ್ರಣ ಕಳೆದುಕೊಂಡು ಈ ಅವಘಡಕ್ಕೀಡಾಗಿದೆ ಎಂದು ತಿಳಿದುಬಂದಿದೆ. ಅಪಘಾತದ ರಭಸಕ್ಕೆ ವಾಹನದ ಮುಂಭಾಗ ಜಖಂಗೊಂಡಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಕಾರು ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ವೈದ್ಯಕೀಯ ಚಿಕಿತ್ಸೆ ಮುಂದುವರಿದಿದೆ ಎನ್ನುವು ಮಾಹಿತಿ ಇದೆ. ರಾತ್ರಿಯ ಕಾರ್ಗತ್ತಲು, ರಸ್ತೆಯ ತಿರುವು, ಅತಿ ವೇಗ ಅಥವಾ ಚಾಲಕನಿಗೆ ಆವರಿಸಿದ ನಿದ್ರೆಯ…

News Desk

ತೋಟಗಾರಿಕೆ ಇಲಾಖೆ ಪ್ರಕಟಣೆ: ಅಂಕೋಲಾ ತಾಲೂಕಿನಲ್ಲಿ 2026ರ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಜುಲೈ 31 ಕೊನೆಯ ದಿನ..

ಅಂಕೋಲಾ ತಾಲೂಕಿನ ರೈತರಿಗೆ 2026ನೇ ಸಾಲಿನ ಮುಂಗಾರು ಹಂಗಾಮಿನ ಹವಾಮಾನ ಆಧಾರಿತ ಮರುರಚಿಸಲಾದ ಬೆಳೆವಿಮೆ ಯೋಜನೆಯಡಿ ನೋಂದಾಯಿಸಿಕೊಳ್ಳಲು ಜುಲೈ 31 ಕೊನೆಯ ದಿನವಾಗಿದೆ ಎಂದು ತೋಟಗಾರಿಕೆ ಇಲಾಖೆ ತಿಳಿಸಿದೆ. ನಿಗದಿತ ದಿನಾಂಕದೊಳಗೆ ರೈತರು ಈ ವಿಮಾ ಯೋಜನೆಗೆ ನೋಂದಾಯಿಸಿಕೊಂಡು ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳುವಂತೆ ಇಲಾಖೆಯು ಪ್ರಕಟಣೆಯಲ್ಲಿ ಕೋರಿದೆ. ಈ ಯೋಜನೆಯಡಿ ವಿವಿಧ ತೋಟಗಾರಿಕಾ ಬೆಳೆಗಳಿಗೆ ಪ್ರತಿ ಎಕ್ಕರೆಗೆ ವಿಮಾ ಮೊತ್ತ ಹಾಗೂ ರೈತರು ಪಾವತಿಸಬೇಕಾದ ವಿಮಾ ಕಂತನ್ನು ನಿಗದಿಪಡಿಸಲಾಗಿದೆ. ಅಡಿಕೆ ಬೆಳೆಗೆ ಪ್ರತಿ ಎಕರೆಗೆ 51,200 ರೂ. ವಿಮಾ ಮೊತ್ತ ನಿಗದಿಪಡಿಸಿದ್ದು, ರೈತರು 2,560…

News Desk

ಅಂಕೋಲಾದಲ್ಲಿ ವಕೀಲರ ಬಳಗದಿಂದ ತಾಲೂಕು ವೈದ್ಯಾಧಿಕಾರಿಗೆ ಅರ್ಥಪೂರ್ಣ ಸನ್ಮಾನ..

ಸಮಾಜದಲ್ಲಿ ಜೀವ ರಕ್ಷಕರಾಗಿ ಹಗಲಿರುಳು ಶ್ರಮಿಸುವ ವೈದ್ಯರ ಸೇವೆ ಅನನ್ಯವಾದದ್ದು. "ವೈದ್ಯೋ ನಾರಾಯಣೋ ಹರಿ" ಎಂಬ ಉಕ್ತಿಯಂತೆ ದೇವರ ಸ್ವರೂಪರಾಗಿರುವ ವೈದ್ಯರನ್ನು ಸ್ಮರಿಸುವ ಮತ್ತು ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವ 'ವೈದ್ಯರ ದಿನಾಚರಣೆ'ಯ ಅಂಗವಾಗಿ, ಅಂಕೋಲಾ ತಾಲೂಕು ವೈದ್ಯಾಧಿಕಾರಿಗಳಾದ ಶ್ರೀ ಜಗದೀಶ ನಾಯಕ ಅವರನ್ನು ವಕೀಲರ ಬಳಗದ ವತಿಯಿಂದ ಅತ್ಯಂತ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ಸ್ವಾಸ್ಥ್ಯ ಕಾಪಾಡುವ ವೈದ್ಯಕೀಯ ಕ್ಷೇತ್ರ ಹಾಗೂ ಜನರಿಗೆ ನ್ಯಾಯ ದೊರಕಿಸಿಕೊಡುವ ಕಾನೂನು ವಲಯದ ನಡುವಿನ ಪರಸ್ಪರ ಗೌರವ ಮತ್ತು ಬಾಂಧವ್ಯಕ್ಕೆ ಈ ಸರಳ ಹಾಗೂ ಅರ್ಥಪೂರ್ಣ ಸಮಾರಂಭ…

News Desk

ಪುರಲಕ್ಕಿಬೇಣದಲ್ಲಿ ಮಳೆಯ ಅಬ್ಬರ; ಮನೆಯ ಮೇಲೆ ಮುರಿದು ಬಿತ್ತು ಜೀವದಾತ ಮರ..!!

ಪ್ರಕೃತಿಯ ಮುನಿಸಿಗೆ ಎಂತಹ ಬಲಿಷ್ಠ ಜೀವವೂ ತಲೆಬಾಗಲೇಬೇಕು ಎಂಬುದಕ್ಕೆ ಅಂಕೋಲಾ ತಾಲೂಕಿನ ಪುರಲಕ್ಕಿ ಬೇಣದ ಆನಂದಗಿರಿ ಸಾಕ್ಷಿಯಾಗಿದೆ. ಭಾರಿ ಮಳೆ ಮತ್ತು ಬಿರುಗಾಳಿಯ ಅಬ್ಬರಕ್ಕೆ ದಶಕಗಳಿಂದ ಫಲ ನೀಡುತ್ತಾ ಬಂದಿದ್ದ ಬೃಹತ್ ತೆಂಗಿನ ಮರವೊಂದು ಮನೆಯ ಮೇಲೆ ಉರುಳಿದೆ. ಈ ಘಟನೆಯ ನಡುವೆಯೂ ಮನೆಯೊಳಗಿದ್ದ ಕಂದಮ್ಮನೊಂದು ಪವಾಡಸದೃಶ ರೀತಿಯಲ್ಲಿ ಪಾರಾಗಿದೆ. ಪುರಲಕ್ಕಿ ಬೇಣದ ದಿವಂಗತ ಡೋಲು ನಾಯ್ಕ ರವರ ಜಾಗದಲ್ಲಿ ಹೆಮ್ಮರಾವಾಗಿ ಬೆಳೆದು ನಿಂತಿದ್ದ ತೆಂಗಿನ ಮರವು, ಗಾಳಿಯ ರಭಸಕ್ಕೆ ತಾಳಲಾರದೆ ಪಕ್ಕದಲ್ಲೇ ಇದ್ದ ವಿನಾಯಕ ಆಚಾರಿ ಅವರ ಮನೆಯ ಛಾವಣಿಯ ಮೇಲೆ ದಿಢೀರನೆ…

News Desk

ಪ್ರೇಮ ವೈಫಲ್ಯದ ಶಂಕೆ: ಯುವತಿಯ ಮೇಲೆ ಹಲ್ಲೆ ನಡೆಸಿ, ಕಾರು ಸ್ಫೋಟದಲ್ಲಿ ಅಂತ್ಯಕಂಡ ಅಂಕೋಲಾ ಯುವಕ..!!

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಪ್ರೇಯಸಿಗೆ ಚಾಕು ಇರಿದು ಬಳಿಕ ಕಾರು ಸ್ಫೋಟಗೊಂಡು ಪ್ರಿಯಕರ ಸಜೀವ ದಹನವಾಗಿದ್ದಾನೆ. ಮೃತ ಯುವಕನನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹೆಬ್ಬುಲು ಗ್ರಾಮದ ನಾಗೇಂದ್ರ (30) ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಯುವತಿ ರಮ್ಯಾ ಸದ್ಯ ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ನಾಗೇಂದ್ರ ಹಾಗೂ ರಮ್ಯಾ ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ರಮ್ಯಾ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ಅಲ್ಲಿನ ಸಂಜಯ್…

News Desk

ಯಾರಿಗೂ ಹೇಳದೆ ಮನೆಯಿಂದ ತೆರಳಿದ್ದ ಅಂಕೋಲಾದ ಗಾಬಿತವಾಡದ ಯುವತಿ ನಾಪತ್ತೆ..!!

ಅಂಕೋಲಾ: ತಾಲೂಕಿನ ಕೇಣಿ ಗ್ರಾಮದ ಗಾಬೀತವಾಡದ ಯುವತಿಯೊಬ್ಬಳು ಮನೆಯಿಂದ ಯಾರಿಗೂ ಏನನ್ನೂ ಹೇಳದೆ ಹೊರಟು, ದಿಢೀರ್ ನಾಪತ್ತೆಯಾಗಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಈ ಬಗ್ಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹುಡುಕಾಟವನ್ನು ಚುರುಕುಗೊಳಿಸಿದ್ದಾರೆ. ನಾಪತ್ತೆಯಾದ ಯುವತಿಯನ್ನು ಸಾಕ್ಷಿ ಸೂರ್ಯಕಾಂತ್ ಚೊಡನಕರ್ ಎಂದು ಗುರುತಿಸಲಾಗಿದೆ. ಈ ಹಿಂದೆ ಅಂಕೋಲಾ ಪಟ್ಟಣದ 'ವೈಶ್ಯ ಟ್ರೇಡರ್ಸ್' ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ್ದ ಈಕೆ, ಕಳೆದ ಮೂರ್ನಾಲ್ಕು ತಿಂಗಳುಗಳಿಂದ ಕೆಲಸ ಬಿಟ್ಟು ಮನೆಯಲ್ಲೇ ಇದ್ದಳು. ದಿನಾಂಕ 23-06-2026 ರಂದು ಬೆಳಗ್ಗೆ 9:00 ರಿಂದ ಮಧ್ಯಾಹ್ನ 3:00 ಗಂಟೆಯ…

News Desk

ಅಂಕೋಲಾ: ತಾಯಿಗೆ ಔಷಧಿ ತರಲು ಶಿರಸಿ ಆಸ್ಪತ್ರೆಗೆ ಹೋಗಿ ಬರುವುದಾಗಿ ಹೇಳಿ ಹೋದ 18 ವರ್ಷದ ಯುವತಿ ನಾಪತ್ತೆ..

ಅಂಕೋಲಾ: ತಾಲೂಕಿನ ಕುಂಟಕಣಿ ಗ್ರಾಮದ ಅಸಳ್ಳಿ ಮೂಲದ 18 ವರ್ಷದ ಯುವತಿ ಯೋರ್ವಳು ತಾಯಿಗೆ ಔಷಧಿ ತರಲು ಶಿರಸಿಗೆ ಹೋದವಳು ನಿಗೂಢವಾಗಿ ನಾಪತ್ತೆಯಾಗಿರುವ ಘಟನೆ ಸಂಭವಿಸಿದೆ. ನಾಪತ್ತೆಯಾದ ಯುವತಿಯನ್ನು ಶ್ರೀದೇವಿ ಈಶ್ವರ ಗೌಡ ಎಂದು ಗುರುತಿಸಲಾಗಿದ್ದು, ಈಕೆ ಜೂನ್ 24 ರಂದು ಬೆಳಿಗ್ಗೆ 8:00 ಗಂಟೆಗೆ ಮನೆಯಿಂದ ಹೊರಟವಳು ಇಂದಿನವರೆಗೂ ಮರಳಿ ಬಂದಿಲ್ಲ. ಈ ಕುರಿತು ಯುವತಿಯ ಸಹೋದರ ಪರಮೇಶ್ವರ ಈಶ್ವರ ಗೌಡ ಅವರು ನೀಡಿದ ಅಧಿಕೃತ ದೂರಿನ ಮೇರೆಗೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ಕ್ರೈಂ ಸಂಖ್ಯೆ 125/2026 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು,…

News Desk
- Sponsored -
Ad imageAd image

Editor's Pick

Weather
25°C
Karnataka
scattered clouds
25° _ 25°
69%
6 km/h
Tue
24 °C
Wed
28 °C
Thu
29 °C
Fri
29 °C
Sat
29 °C

Follow US

Most Read

Discover Categories

ಅಕ್ಷರ ಕಲಿಸಿದ ಶಾಲೆಗೆ ಹಳೆ ವಿದ್ಯಾರ್ಥಿಗಳ ಕೃತಜ್ಞತೆ:ಮಿರ್ಜಾನ ಹಿರಿಯ ಪ್ರಾಥಮಿಕ ಶಾಲೆಗೆ ಸಿಸಿಟಿವಿ ಕೊಡುಗೆ..

ಕುಮಟಾ/ ಮಿರ್ಜಾನ್: ತಾವು ಕಲಿತ ಮಾತೃಶಾಲೆಯ ಬಗ್ಗೆ ಹೆಮ್ಮೆ ಹಾಗೂ ಅಭಿಮಾನವನ್ನು ಉಳಿಸಿಕೊಂಡಿರುವ ಹಿರಿಯ ವಿದ್ಯಾರ್ಥಿಗಳು,…

News Desk

ಕಾರವಾರ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ: ಆರೋಪಿಗಳ ಶೀಘ್ರ ಪತ್ತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಿರಿಯ ವಕೀಲರಾದ ‘ಉಮೇಶ ನಾಯ್ಕ’ ಆಗ್ರಹ..

ಕಾರವಾರ/ಅಂಕೋಲಾ: ಕಾರವಾರ ಜಿಲ್ಲಾ ನ್ಯಾಯಾಲಯ ಸೇರಿದಂತೆ ಕರಾವಳಿ ಭಾಗದ ನ್ಯಾಯಾಲಯಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ…

News Desk

‘ವಿಕಾಸ ವಾಹಿನಿ’ ಇಂಪ್ಯಾಕ್ಟ್: ಅಂಕೋಲಾ ಹೆದ್ದಾರಿಯ ‘ಅಪಾಯಕಾರಿ ಶಾರ್ಟ್-ಕಟ್’ಗೆ ಕಾಂಕ್ರೀಟ್ ಬೀಗ.!

ಅಂಕೋಲಾ: ಸಾರ್ವಜನಿಕರ ಜೀವ ರಕ್ಷಣೆಗಾಗಿ 'ವಿಕಾಸ ವಾಹಿನಿ' ಮಾಡಿದ ಎಚ್ಚರಿಕೆಯ ವರದಿಗೆ ಪ್ರತಿಫಲ ಸಿಕ್ಕಿದೆ. ಅಂಕೋಲಾ…

News Desk

ಅಂಕೋಲಾ: ಮಗನೊಂದಿಗೆ ಆಸ್ಪತ್ರೆಗೆ ತೆರಳುತ್ತಿದ್ದಾಗ ಅವಘಡ; ಬೈಕ್ ಗೆ ಆಟೋ ಡಿಕ್ಕಿಯಾಗಿ ವೃದ್ಧೆ ಸಾವು..

ಅಂಕೋಲಾ: ರಕ್ತ ಪರೀಕ್ಷೆಗಾಗಿ ಮಗನ ಜೊತೆ ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ವೃದ್ಧೆಯೊಬ್ಬರು ಆಟೋ ರಿಕ್ಷಾ…

News Desk

ಹೈಕೋರ್ಟ್ ಪೀಠದ ವ್ಯಾಪ್ತಿ ಬದಲಾವಣೆಗೆ ಆಕ್ಷೇಪ: ‘ಉತ್ತರ ಕನ್ನಡ ಜಿಲ್ಲೆ’ಯನ್ನು ಧಾರವಾಡ ಪೀಠದಲ್ಲೇ ಮುಂದುವರಿಸಲು ಅಂಕೋಲಾದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಕೆ..

ಪ್ರಸ್ತಾವಿತ ಮಂಗಳೂರು ಸಂಚಾರಿ ಹೈಕೋರ್ಟ್ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರಿಸುವ ರಾಜ್ಯ ಸರ್ಕಾರದ…

News Desk

ಅಂಕೋಲಾ ಹೆದ್ದಾರಿಯಲ್ಲಿ ‘ಶಾರ್ಟ್ ಕಟ್ ‘ ಸಾಹಸ: ನಿಯಮಗಳನ್ನೇ ಗಾಳಿಗೆ ತೂರಿ ಡಿವೈಡರ್ ಜಂಪ್ ಮಾಡುತ್ತೀರೋ ದ್ವಿಚಕ್ರ ವಾಹನ ಸವಾರರು..!!

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸಮಯ ಉಳಿಸುವ ಭರದಲ್ಲಿ ದ್ವಿಚಕ್ರ ವಾಹನ ಸವಾರರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿರುವ…

News Desk

ಸರ್ಕಾರಿ ನೌಕರರ ಹಾಜರಾತಿಗೆ ಕಟ್ಟುನಿಟ್ಟು: ‘ಕರ್ತವ್ಯ’ ಆ್ಯಪ್ ಕಡ್ಡಾಯ; ನೋಂದಾಯಿಸದ 2.13 ಲಕ್ಷ ಸಿಬ್ಬಂದಿಗೆ ಸರ್ಕಾರದ ಚಾಟಿ..!

ರಾಜ್ಯದ ಸರ್ಕಾರಿ ಕಚೇರಿಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ವಿಳಂಬವಾಗಿ ಆಗಮಿಸುವ ಪ್ರವೃತ್ತಿಗೆ ಕಡಿವಾಣ ಹಾಕಲು…

News Desk

ಬೀದಿ ದೀಪದಡಿ ಬಿಂದಾಸ್ ಜೂಜಾಟ, ದಿಢೀರ್ ಎಂಟ್ರಿ ಕೊಟ್ಟು ಬೆವರಿಳಿಸಿದ ಖಾಕಿ ಪಡೆ: ಬೆಳಂಬರದ ಖಾರ್ವಿವಾಡದಲ್ಲಿ ಐವರ ಸೆರೆ.!

ಅಂಕೋಲಾ: ತಾಲೂಕಿನ ಬೆಳಂಬರ ಗ್ರಾಮದ ಉತ್ತರ ಖಾರ್ವಿವಾಡದಲ್ಲಿ ಸಾರ್ವಜನಿಕ ರಸ್ತೆಯನ್ನೇ ಜೂಜುಕೋರರು ತಮ್ಮ ಅಡ್ಡೆಯನ್ನಾಗಿ ಪರಿವರ್ತಿಸಿಕೊಂಡಿದ್ದ…

News Desk