ಅಂಕೋಲಾ ಪುರಸಭೆಗೆ ತುರ್ತು ಆಡಳಿತಾಧಿಕಾರಿ ನೇಮಕ ಮಾಡಿ – ಮಾಹಿತಿ ಹಕ್ಕು ಕಾರ್ಯಕರ್ತ “ಚೇತನ ನಾಯಕ್” ಆಗ್ರಹ..

News Desk
1 Min Read

ಅಂಕೋಲಾ: (ಅಗಸ್ಟ 13). ಅಂಕೋಲಾ ಪುರಸಭೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಸಾಮಾನ್ಯ ಸಭೆ ನಡೆಯದೇ ಇರುವುದರಿಂದ ಸಾರ್ವಜನಿಕ ಸೇವೆಗಳು ಸ್ಥಗಿತಗೊಂಡಿವೆ. ಸದಸ್ಯರು ಅಸಮಾಧಾನದಿಂದ ಸಭೆಗೆ ಹಾಜರಾಗದೆ ಇರುವುದೇ ಪ್ರಮುಖ ಕಾರಣ. ಇದರ ಪರಿಣಾಮವಾಗಿ ಕುಡಿಯುವ ನೀರು, ರಸ್ತೆ ದುರಸ್ತಿ, ಕಸದ ವಿಲೇವಾರಿ, ಬಡಾವಣಾ ಅಭಿವೃದ್ಧಿ ಸೇರಿದಂತೆ ಅನೇಕ ಮೂಲಭೂತ ಕಾರ್ಯಗಳು ಸ್ಥಗಿತಗೊಂಡಿವೆ.

ಪುರಸಭೆಯ ಮುಖ್ಯಾಧಿಕಾರಿ ಅಕ್ಷತಾ ಎಚ್ ಅವರು ತಮ್ಮ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೂ, ಸಭೆ ನಡೆಯದೇ ಇರುವುದರಿಂದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿಕಾರಿಗಳ ತಪ್ಪಲ್ಲದೆ ಸದಸ್ಯರ ಗೈರುಹಾಜರಿಯೇ ಈ ಸ್ಥಿತಿಗೆ ಕಾರಣವಾಗಿರುವುದನ್ನು ಸ್ಥಳೀಯರು ಉಲ್ಲೇಖಿಸುತ್ತಿದ್ದಾರೆ.

ಈ ನಡುವೆ, ಮಾಹಿತಿ ಹಕ್ಕು ಕಾರ್ಯಕರ್ತ ಹಾಗೂ ಸಾಮಾಜಿಕ ಹೋರಾಟಗಾರರಾದ “ಚೇತನ ನಾಯಕರು” ವಿಕಾಸ ವಾಹಿನಿಗೆ ನೀಡಿದ ಮಾಧ್ಯಮ ಪ್ರಕಟಣೆಯಲ್ಲಿ ಹೀಗೆ ತಿಳಿಸಿದ್ದಾರೆ:

ಚೇತನ ನಾಯಕರ ಅಭಿಪ್ರಾಯದಿಂದ, ಪುರಸಭೆಯ ಸ್ಥಗಿತಕ್ಕೆ ಪರಿಹಾರ ಕಂಡುಹಿಡಿಯಲು ಜಿಲ್ಲಾಡಳಿತದ ತ್ವರಿತ ಮಧ್ಯಪ್ರವೇಶಕ್ಕೆ ಸಾರ್ವಜನಿಕ ನಿರೀಕ್ಷೆ ಹೆಚ್ಚಾಗಿದೆ.

……….

Share This Article