ಉತ್ತರ ಕನ್ನಡದಲ್ಲಿ ಡಾಕ್ಟರ್ ಚಲೋ ಇದ್ದಾರೆ – ಆದರೆ ಇಲ್ಲಿನ ವ್ಯವಸ್ಥೆಯೇ ಸರಿ ಇಲ್ಲ. ಜಿಲ್ಲೆಯಲ್ಲಿ ಓಶಿ – ಕುಟು ಕುಟಿ- ಕ್ಲಬ್ ಶುರುಮಾಡುವ ಚಿಂತೆ.! ದೊಡ್ಡ ಆಸ್ಪತ್ರೆ ಮಾಡುವ ಚಿಂತೆ ಯಾರಿಗೂ ಇಲ್ಲ?ಅಂಕೋಲಾದ ತಂದೆ ಮಗನ ರೀಲ್ಸ್ ಬಾರಿ ವೈರಲ್..
ಅಂಕೋಲಾ :(ದಿ29-03-2025) ಉತ್ತರ ಕನ್ನಡದಲ್ಲಿ ರಾಜಕೀಯ ಇಚ್ಚಾ ಶಕ್ತಿಯ ಕೊರತೆಯಿಂದಾಗಿ ಜನರ ಬಹು ಬೇಡಿಕೆ ಇರುವ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಒದಗಿಸಲು ಸಾಧ್ಯವಾಗದೆ ಸರ್ಕಾರವು ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಹೆಚ್ಚಾಗಿ ಪ್ರಜೆಗಳಿಗೆ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ನಿರ್ಮಾಣದ ಆಶ್ವಾಸನೆ ನೀಡುತ್ತಾ ಮೂಗಿಗೆ ತುಪ್ಪ ಸವರಿದ್ದು ಬಿಟ್ಟರೆ. ಜಿಲ್ಲೆಯಲ್ಲಿ ಸಾಕಷ್ಟು ಹೋರಾಟಗಳು ನಡೆದರು ಇಲ್ಲಿಯವರೆಗೆ ಸರಿಯಾದ ಆಶಾದಾಯಕ ಪ್ರಗತಿಯು ಇನ್ನು ಕಂಡುಬಂದಿಲ.. ಕೆಲವು ಜನ ಪ್ರತಿನಿಧಿಗಳು ಘಟ್ಟದ ಕೆಳಗಿನ ಪ್ರದೇಶದಲ್ಲಿ ಮಲ್ಟಿ ಸ್ಪೆಷಲಿಟಿ ಹಾಸ್ಪಿಟಲ್ ಬೇಕು ಎಂದು ಘರ್ಜಿಸಿದರೆ . ಇನ್ನು ಕೆಲವರು ಘಟ್ಟದ ಮೇಲಿನ ಪ್ರದೇಶದಲ್ಲಿ ಮಲ್ಟಿ ಸ್ಪೆಷಲಿಟಿ ಹಾಸ್ಪಿಟಲ್ ನಿರ್ಮಾಣವಾಗಬೇಕು ಎನ್ನುತ್ತಾರೆ.
ಇನ್ನು ಕೆಲವರು ಜಿಲ್ಲಾ ಕೇಂದ್ರದಲ್ಲಿ ಆಸ್ಪತ್ರೆ ನಿರ್ಮಾಣವಾಗಬೇಕು ಎಂದು ಹೇಳುತ್ತ ಜನಪ್ರತಿನಿಧಿಗಳು ತಮ್ಮ ತಮ್ಮ ನಿಲುವನ್ನು ತಾಳಿದ್ದು.. ಜಿಲ್ಲೆಯನ್ನು ಪ್ರತಿನಿಧಿಸುವ ಜನಪ್ರತಿನಿಧಿಗಳಲ್ಲಿ ಒಮ್ಮತ ಮೂಡಿ ಬರದೇ ಇರುವ ಕಾರಣದಿಂದಾಗಿ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ನಿರ್ಮಾಣ ಆಗುವ ಕನಸು ಈಡೇರುವಂತೆ ಕಂಡುಬರುವುದಿಲ್ಲ.. ಜನಸಾಮಾನ್ಯರ ತೆರಿಗೆ ದುಡ್ಡಿನಿಂದ ನಡೆಸಲ್ಪಟ್ಟಿರುವ ಸರ್ಕಾರಗಳು ಜನಸಾಮಾನ್ಯರಿಗೆ ಅತಿ ಅವಶ್ಯಕವಿರುವ ಜಿಲ್ಲೆಯಲ್ಲಿ ಒಂದೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಬಗ್ಗೆ ದಿಟ್ಟ ಕ್ರಮ ಕೈಗೊಳ್ಳದೆ ಇರುವುದು ಜನಾಕ್ರೋಶಕ್ಕೆ ಕಾರಣವಾಗಿದೆ ..
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಅಂಕೋಲಾದ ತಂದೆ ಮಗನ ರಿಲ್ಸ್ ಬಾರಿ ವೈರಲ್ : ಜನ ಮೆಚ್ಚುಗೆ..
ಮೋಜಿನ ಸಂಭಾಷಣೆ ಮೂಲಕ ರಿಲ್ಸಗಳನ್ನು ಮಾಡುತ್ತಾ ಅಂಕೋಲದ ತಂದೆ -ಮಗ ಸಕ್ಕತ್ ಸಂಚಲನವನ್ನು ಉಂಟು ಮಾಡಿದ್ದಾರೆ.. ಅಂಕೋಲಾದ ತೆಂಕಣಕೇರಿ ಗ್ರಾಮದ ಶ್ರೀಯುತ ವಿನಾಯಕ ನಾಯ್ಕರು ರಂಗಭೂಮಿಯ ಖ್ಯಾತ ಹಾಸ್ಯ ಕಲಾವಿದರಾಗಿದ್ದಾರೆ. ಇವರು ನೂರಕ್ಕೂ ಹೆಚ್ಚು ನಾಟಕಗಳಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸಿದ್ದಾರೆ. ಇವರು ಅಭಿನಯಿಸಿದ ಪ್ರತಿಯೊಂದು ನಾಟಕದ ಹಾಸ್ಯ ತುಣುಕು ನೋಡಿದ ಎಂತಹ ಗಂಭೀರ ವ್ಯಕ್ತಿತ್ವದ ಗಂಟು ಮುಖದ ವ್ಯಕ್ತಿಗಳು ಸಹ ಇವರ ಹಾಸ್ಯಕ್ಕೆ ಮನಸೋಲದೇ ನಕ್ಕದೇ ಇರಲಾರ. ಇವರು ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿಸಿದ್ದಾರೆ.
ಕೆಲವು ತಿಂಗಳಿಂದ ತಂದೆಯ ಜೊತೆ ಮಗನು ಕೂಡ ತನ್ನ ಶಿಕ್ಷಣದ ಜೊತೆಗೆ ರಿಲ್ಸನಲ್ಲಿ ತನ್ನ ತಂದೆಗೆ ಪೈಪೋಟಿ ನೀಡುತ್ತಿದ್ದಾನೆ.. ಈ ಪುಟ್ಟ ಬಾಲಕ ಅಮಯ ನಾಯ್ಕ್.. ಹಿಮಾಲಯ ಸ್ಕೂಲಿನ್ 6 ವರ್ಷದ LKG ಯ ಬಾಲಕನಾಗಿದ್ದು. ತಂದೆ ಜೊತೆಗಿನ ಬಾಲಕನ ರೀಲ್ಸ್ ನ್ ಸಂಭಾಷಣೆಯ ಮುಗ್ದ ತೊದಲು ನುಡಿ. ಸನ್ನಿವೇಶಕ್ಕೆ ತಕ್ಕಂತೆ ಪ್ರಾರಂಭದಿಂದ- ಕೊನೆಯಲ್ಲಿ ಕಡಕ್ ಡೈಲಾಗ್ ನೋಡುಗರನ್ನು ನಕ್ಕು ನಗಿಸುವಂತೆ ಮಾಡಿದೆ.
ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ಅಗತ್ಯತೆ ಬಗ್ಗೆ ತಂದೆ-ಮಗನ ರೀಲ್ಸ್ ನ್ ಸಂಭಾಷಣೆ ಈ ಕೆಳಗಿನಂತಿದೆ
ತಂದೆ: ಮಗ ನೀನು ದೊಡ್ಡ ಆದ ಮೇಲೆ ಏನು ಆಗುತ್ತೀಯ ಕೇಳಿದ ಪ್ರಶ್ನೆಗೆ
ಮಗನು ಉತ್ತರಿ ಸುತ್ತ: ಅಪ್ಪ ನಾನು ದೊಡ್ಡವನಾದ ಮೇಲೆ ಡಾಕ್ಟರ್ ಆಗಲು ಇಚ್ಚಿಸಿದ್ದೆ ಆದರೆ ನಾನು ಡಾಕ್ಟರ್ ಆಗುವುದಿಲ್ಲ?
ತಂದೆ : ಯಾಕೆ ನೀನು ಡಾಕ್ಟರ ಆಗುವುದಿಲ್ಲ.. ನೀನು ಡಾಕ್ಟರ್ ಆದರೆ ಸುಮಾರು ಜನ ರೋಗಿಗಳ ಜೀವವನ್ನು ಉಳಿಸಬಹುದಾಗಿದೆ.
ಎಂದಾಗ ಇದಕ್ಕೆ ಮಗನ ಉತ್ತರ: ಅಪ್ಪಾ ಜನರ ಜೀವ ಹೇಗೆ ಉಳಿಸುವುದು. ಈ ಸರ್ಕಾರ ಮಾಡಿದ ತಪ್ಪಿಗೆ ಈ ಡಾಕ್ಟರ ಮಂದಿ ಬೈಸಿಕೊಳ್ಳಬೇಕಾಗಿದೆ. ನಮ್ಮ ಉತ್ತರ ಕನ್ನಡದಲ್ಲಿ ಡಾಕ್ಟರ್ ಚಲೋ ಇದ್ದಾರೆ. ಆದರೆ ವ್ಯವಸ್ಥೆನೆ ಸರಿಯಾಗಿ ಇಲ್ಲ. ಇಲ್ಲಿ ಕುಟುಕುಟಿ ಯಾವಾಗ ಶುರು ಮಾಡುವ, ಓಸಿ ಯಾವಾಗ ಶುರು ಮಾಡುವ, ಕ್ಲಬ್ ಯಾವಾಗ ಶುರು ಮಾಡುವ ಇದೇ ಚಿಂತೆ. ಇಲ್ಲಿ ಹೊರತು! ಆಸ್ಪತ್ರೆ ಮಾಡುವ ಚಿಂತೆ ಯಾರಿಗೂ ಇಲ್ಲ ಅಪ್ಪ! ದೊಡ್ಡ ದೊಡ್ಡ ಕೇಸ್ ಬಂದರೆ ಮಣಿಪಾಲ್ ಹೋಗಬೇಕಂತೆ! ಹೋಗ್ತಾ ಹೋಗ್ತಾ ದಾರಿಲಿ ಆ ಜನ ಸಾಯ್ತಾರೆ . ಈ ಸರ್ಕಾರಕ್ಕೆ ನಮ್ಮ ಉತ್ತರ ಕನ್ನಡ ದೊಡ್ಡ್ ಆಸ್ಪತ್ರೆ ಬಗ್ಗೆ ಯಾವಾಗ ಕಾಣುತ್ತದೆಯೋ ಏನು?..ಎಂದು ನಿರಾಸೆದಾಯಕವಾಗಿ ನುಡಿದಿದ್ದಾನೆ.
ಕೊನೆಯದಾಗಿ ಪ್ಲೀಸ್ ಸಪೋರ್ಟ್ ಮಾಡಿ. ನಮ್ಮ ಉತ್ತರ ಕನ್ನಡದಲ್ಲೊಂದು ” ಮಲ್ಟಿ ಸ್ಪೆಶಾಲಿಟಿ ಹಾಸ್ಪಿಟಲ್” ಗಾಗಿ ಇದು ನಮ್ಮ ಉತ್ತರ ಕನ್ನಡದ ಕೂಗು ಎಂದು ಬರೆದು ಅಂತ್ಯ ಗೊಳಿಸಿದ್ದಾರೆ. ರಿಲ್ಸ್ ಗಳು ಕೇವಲ ಮನೋರಂಜನೆ ಮಾತ್ರವಲ್ಲ. ಈ ರಿಲ್ಸ್ ಗಳಿಂದ ಸಾರ್ವಜನಿಕ ಜವಾಬ್ದಾರಿಯನ್ನು ಸಂಬಂಧಪಟ್ಟವರಿಗೆ ಎಚ್ಚರಿಸುವುದು ಸಾರ್ವಜನಿಕ ಸೇವಕರ ಕರ್ತವ್ಯ ಪ್ರಶ್ನೆಯಲ್ಲಿ ಬದಲಾವಣೆ ತರಲು ಕೂಡ ಪ್ರಮುಖ ಪಾತ್ರ ವಹಿಸುತ್ತದೆ..
ಸದರಿ ತಂದೆ ಮಗನ ಆಸ್ಪತ್ರೆ ಕುರಿತಾದಂತೆ ಮಾಡಿದ ರೀಲ್ಸ್ ಗೆ ಉತ್ತರ ಕನ್ನಡ ಜಿಲ್ಲೆಯ ಜನತೆ ಮೆಚ್ಚುಗೆ ಗಳಿಸಿದ್ದು. “ಮಸ್ಕರಿ ಪೊರ್ಗಳು ” ಅಂಕೋಲಾದ ವಾಟ್ಸಾಪ್ ಗ್ರೂಪ್ ಕೂಡ ವಿಕಾಸ ವಾಹಿನಿಯ ಮೂಲಕ ವಿಶೇಷ ಅಭಿನಂದನೆಯನ್ನು ಸಲ್ಲಿಸುತ್ತದೆ.
ಸರ್ಕಾರಿ ಬಾವಿಗೆ ಅಡ್ಡ ಬಂದ ಬಂಡೆಕಲ್ಲು : 2 ವರ್ಷದ ಹಿಂದೆ ಸ್ಥಗಿತಗೊಂಡಿದ್ದ ಕಾಮಗಾರಿಯನ್ನು ಮತ್ತೊಂದು ಗುತ್ತಿಗೆದಾರನಿಂದ ಮುಂದುವರಿಸುವ ಯತ್ನ : ಅಂಕೋಲಾ ಪೊಲೀಸ್ ಠಾಣೆಯಲ್ಲಿ ಮಂಗೂ ಗೌಡನ ವಿರುದ್ಧ ದೂರು ದಾಖಲಿಸಿದ ಸಂಜೀವ್. ಪಿ ನಾಯ್ಕ..
ಅಂಕೋಲಾ : ಪುರಸಭೆ ವ್ಯಾಪ್ತಿಯ ಅಂಬಾರಕೊಡ್ಲದಲ್ಲಿ ಸರ್ಕಾರಿ ಕುಡಿಯುವ ನೀರಿನ ಬಾವಿಯ ಕಾಮಗಾರಿಯನ್ನು ಪ್ರಾರಂಭಿಸಿ ತಳಭಾಗದಲ್ಲಿ ಬಂಡೆಕಲ್ಲು ಬಂದಿದ್ದರಿಂದ 2 ವರ್ಷದ ಹಿಂದೆ ಸ್ಥಗಿತಗೊಂಡ ಕಾಮಗಾರಿಯಿಂದ ಜೊತೆಗೆ ಮಾಡಿದ ಕೆಲಸಕ್ಕೆ ಸರಿಯಾಗಿ ಪುರಸಭೆಯಿಂದ 60,000 ರೂ ಬಿಲ್ ಪಾವತಿ ಆಗದೆ ದೋಷವಿದ್ದ ಬಾವಿಯ ಕಾಮಗಾರಿಯನ್ನು ಮುಂದುವರಿಸಲು ಹೋಗಿ ತಾಲೂಕಿನ ಗುತ್ತಿಗೆದಾರನೋರ್ವ ತಪ್ಪೊಪ್ಪಿಗೆ ಬರೆದು ಕೊಟ್ಟು ಪಜೀತಿಗೆ ಒಳಗಾಗಿದ್ದು, ಸದರಿ ಗುತ್ತಿಗೆದಾರನ ಮೇಲೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಘಟನೆಯ ಹಿನ್ನಲೆ : ತಾಲೂಕಿನ ಪುರಸಭೆ ವ್ಯಾಪ್ತಿಯಲ್ಲಿ ಕಳೆದ 2023ನೇ ಸಾಲಿನಲ್ಲಿ ಗುತ್ತಿಗೆ ಆದರದ ಮೇಲೆ ಅಂಬಾರ ಕೊಡ್ಲಾ ಗದ್ದುಗೆ ದೇವಸ್ಥಾನ ಪಕ್ಕದಲ್ಲಿ ಕುಡಿಯುವ ನೀರಿನ ಬಾವಿಯೊಂದರ ನಿರ್ಮಾಣದ ಕಾಮಗಾರಿಯನ್ನು ಪಡೆದುಕೊಂಡಿದ್ದ ಕೋಟೆವಾಡದ ಸಂಜೀವ ಪಿ. ನಾಯ್ಕ್ ಗುತ್ತಿಗೆದಾರನಿಗೆ ಪುರಸಭೆ ಎಸ್ಟಿಮೇಟ್ ಪ್ರಕಾರ ನಿಗದಿತ 32 ಪುಟದ ಬಾವಿ ಯನ್ನು ನಿರ್ಮಾಣ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿತ್ತು..
ಸದರಿ ಕಾಮಗಾರಿಯನ್ನು ಕೈಗೊಂಡಾಗ ಗುತ್ತಿಗೆದಾರನ ದುರಾದೃಷ್ಟವೊ ಎನ್ನುವಂತೆ ಸದರಿ ಬಾವಿಯ 20 ಪುಟ್ ಅಂತರಕ್ಕೆ ಬಾವಿಯ ತಳ ಭಾಗದಲ್ಲಿ ಬಂಡೆಕಲ್ಲು ಬಂದಿದ್ದರಿಂದ ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಬಂಡೆಯನ್ನು ಒಡೆಯಲು Re Estimate ಮಾಡಿಕೊಡುವಂತೆ ವಿನಂತಿಸಿದರು. ಆದರೆ ಪುರಸಭೆಯ ಅಂದಿನ ಇಂಜಿನಿಯರ ಕಾಮಗಾರಿ ಮುಂದುವರಿಸುವ ಬಗ್ಗೆ ಯಾವುದೇ ಪರಿಹಾರದ ಕ್ರಮವನ್ನು ಸೂಚಿಸದೇ ಇರುವ ಕಾರಣ ಅನಿವಾರ್ಯವಾಗಿ ಸಂಜೀವ್ ನಾಯ್ಕ್ ರವರು ನಿಯಮದಂತೆ ಕುಡಿಯುವ ನೀರಿನ ಬಾವಿಯ ಒಳಭಾಗದಲ್ಲಿ ಸುತ್ತಲೂ ಚಿರೆ ಕಲ್ಲನ್ನು ಕಟ್ಟಿ. ಸದ್ರಿ ಬಾವಿಯ 20 ಪುಟಕ್ಕೆ ಕಾಮಗಾರಿಯನ್ನು ಸ್ಥಗಿತಗೊಳಿಸಿದರು .
ನಂತರ ತಾನು ಮಾಡಿದ ಕಾಮಗಾರಿಗೆ ತಕ್ಕಂತೆ ಎಸ್ಟಿಮೇಟ್ ಮಾಡಿ ಸದರಿ ಬಾವಿಯ ಬಿಲ್ಲನ್ನು ಪಾವತಿಸುವಂತೆ ಅಂದಿನ ಪುರಸಭೆ ಇಂಜಿನಿಯರ್ ಭಾಸ್ಕರ್ ಗೌಡ ರವರಿಗೆ ಕೋರಿಕೊಂಡಿದ್ದು. ನಂತರ ಗುತ್ತಿಗೆದಾರನ ಮನವಿಗೆ ಸರಿಯಾಗಿ ಸ್ಪಂದಿಸದ ಭಾಸ್ಕರ್ ಗೌಡರ ವಿರುದ್ಧ ಗುತ್ತಿಗೆದಾರ ಸಂಜೀವ್ ನಾಯ್ಕರು ಪುರಸಭೆಯಲ್ಲಿ ಗಾಂಧಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಫೋಟೋ ಇಟ್ಟು ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ್ದು. ಅಂದು ಈ ವಿಷಯವು ಬಾರಿ ಸಂಚಲವನ್ನು ಉಂಟು ಮಾಡಿತ್ತು.. ಗುತ್ತಿಗೆದಾರನ ಹೋರಾಟದ ಫಲವಾಗಿ ಅಧಿಕಾರಿಗಳು ರೂ 1,60,000 ಕಾಮಗಾರಿ ಆಗಿದೆ ಎಂದು ಎಸ್ಟಿಮೇಟ್ ವರದಿ ತಯಾರಿಸಲಾಗಿತ್ತು.ಹಾಗಾಗಿ ಗುತ್ತಿಗೆದಾರನಿಗೆ ಪುರಸಭೆಯಿಂದ 1.03800 ರೂಪಾಯಿಗಳನ್ನು ಮಂಜೂರಿ ಮಾಡಿದ್ದು . ಸದರಿ ಹಣದಲ್ಲಿ GST ಇನ್ನುಳಿದ ಖರ್ಚು ಕಳೆದು 98000 ರೂ ಸಾವಿರ ರೂಪಾಯಿಗಳು ಗುತ್ತಿಗೆದಾರನಿಗೆ ಜಮಾ ಆಗಿತ್ತು.ಇನ್ನು ಬಾಕಿ 60.000 ರೂ ಹಣ ಗುತ್ತಿಗೆದಾರನಿಗೆ ಪುರಸಭೆಯಿಂದ ಸಂದಾಯವಾಗಬೇಕಿತ್ತು.
2 ವರ್ಷದ ನಂತರ ಸದರಿ ಬಾವಿಯ ಕಾಮಗಾರಿಗೆ ಮತ್ತೊಬ್ಬ ಗುತ್ತಿಗೆದಾರನ ಎಂಟ್ರಿ. – ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು.
2023 ರಲ್ಲಿ ಸ್ಥಗಿತಗೊಂಡಿದ್ದ ಬಾವಿಯ ಕಾಮಗಾರಿಯನ್ನು ಅಧಿಕಾರಿಗಳು Re estimate ಮಾಡದೇ ಇರುವ ಕಾರಣ ಮತ್ತು ತನಗೆ ಬರಬೇಕಾದ ಬಾಕಿ ಇರುವ 60,000 ರೂ ಬಿಲ್ ಪಾವತಿ ಮಾಡುವಂತೆ ಗುತ್ತಿಗೆದಾರ ಸಂಜೀವ್ ನಾಯ್ಕರು ಮಾಹಿತಿ ಹಕ್ಕು ಅರ್ಜಿಯನ್ನು ಬಳಸಿ ದಾಖಲೆಗಳನ್ನು ಸಂಗ್ರಹಿಸುತ್ತಾ. ತನಗೆ ಕಾಮಗಾರಿಯಲ್ಲಿ ಬಿಲ್ ಪಾವತಿ ಮಾಡಲು ಅಧಿಕಾರಿಗಳು ತೋರಿದ ಬೇಜವಾಬ್ದಾರಿ, ಇನ್ನಿತರ ಕೆಲವು ಕಾರಣಗಳನ್ನು ಲೋಕಾಯುಕ್ತರು ಹಾಗೂ ಇನ್ನಿತರ ಸಕ್ಷಮ ಪ್ರಾಧಿಕಾರಗಳಿಗೆ ನೀಡಿ ದೂರು ಅರ್ಜಿ ಸಲ್ಲಿಸುತ್ತಾ ಹೋರಾಟವನ್ನು ನಡೆಸುತ್ತಾ ಬಂದಿರುತ್ತಾರೆ.
ಹೀಗಿರುವಾಗ ತಾಲೂಕಿನ ಮತ್ತೊಬ್ಬ ಗುತ್ತಿಗೆದಾರ ಮಂಗೂ ಗೌಡ ಎಂಬುವವರು ದಿನಾಂಕ 14-04-2025 ರಂದು ಸದರಿ ಬಾವಿಯಲ್ಲಿ ಅಳವಡಿಸಿದ್ದ ಚೀರೆ ಕಲ್ಲನ್ನು ತೆಗೆದು ಬಾವಿಯನ್ನು ಸಂಪೂರ್ಣವಾಗಿ ನಾಶಪಡಿಸಿದ್ದು. ಜೊತೆಗೆ ಸಾರ್ವಜನಿಕವಾಗಿ ಪುರಸಭೆಗೆ ಹಾನಿಯಾಗಿದೆ. ತನಗೂ 60000 ರೂ ಪುರಸಭೆಯಿಂದ ಬಿಲ್ ಬರಬೇಕಾಗಿದ್ದು , ಸದರಿವರ ಮೇಲೆ ಕಾನೂನು ಕ್ರಮ ಜರುಗಿಸಬೇಕಾಗಿ ಸಂಜೀವ್ ಪಿ ನಾಯ್ಕ್ ಅಂಕೋಲಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ಅಂಕೋಲಾ ಪೋಲೀಸರು ಪ್ರಕರಣ ದಾಖಲಿಸಿ ಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು. ಆರೋಪಿತ ವ್ಯಕ್ತಿಯು ಸದರಿ ಬಾವಿ ಯನ್ನು ಪುನಹ ಸರಿಪಡಿಸಿ ಕೊಡುತ್ತೇನೆ ಎಂದು ಮುಚ್ಚಳಕ್ಕೆ ಬರೆದು ಕೊಟ್ಟಿದ್ದಾನೆ ಎಂದು ಸಂಜೀವ್ ಪಿ ನಾಯ್ಕ್ ಇವರು ವಿಕಾಸ ವಾಹಿನಿಗೆ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರ ತೆರಿಗೆ ದುಡ್ಡು ಪೋಲು
ಅಂಕೋಲಾ ಪುರಸಭೆಯ ಅಂಬಾರಕೊಡ್ಲದ ಗದ್ದುಗೆ ದೇವಸ್ಥಾನದ ಹತ್ತಿರ 2023 ರ ಮೊದಲೇ ಸಾರ್ವಜನಿಕ ಬಾವಿಯನ್ನು ನಿರ್ಮಿಸಲಾಗಿತ್ತು.. ನಂತರ ಅಲ್ಲಿಯೇ ಪಕ್ಕದಲ್ಲಿ ಗುತ್ತಿಗೆದಾರ ಸಂಜೀವ ಪಿ . ನಾಯ್ಕ್ ರವರು ಇನ್ನೊಂದು ಬಾವಿಯನ್ನು ನಿರ್ಮಿಸಲು ಮುಂದಾದಾಗ ತಳ ಭಾಗದಲ್ಲಿ ಬಂಡೆಕಲ್ಲು ಬಂದು ಸ್ಥಗಿತವಾಗಿತ್ತು. ಈಗ ಅದೇ ಸ್ಥಳದಲ್ಲಿ ಇನ್ನೊಂದು ಬಾವಿಯನ್ನು ಮಾಡಲು ಪುರಸಭೆಯಿಂದ ಮುಂದಾಗಿದ್ದಾರೆ ಎಂಬ ವಿಷಯ ಗುಟ್ಟಾಗಿ ಏನು ಉಳಿದಿಲ್ಲ. ಹೀಗೆ ಒಂದೇ ಕ್ಷೇತ್ರದಲ್ಲಿ ಒಂದಾದ ನಂತರ ಒಂದರಂತೆ ಬಾವಿಯನ್ನು ತೋಡಲು ಆಸಕ್ತಿ ತೋರುತ್ತಿರುವ ಅಧಿಕಾರಿಗಳ ನಡೆಯ ಹಿಂದೆ ಸಾರ್ವಜನಿಕರ ತೆರಿಗೆ ದುಡ್ಡು ಬೇಕಾಬಿಟ್ಟಿ ಪೋಲು ಮಾಡುವ ಉದ್ದೇಶವನ್ನು ಬಹಿರಂಗಪಡಿಸುತ್ತದೆ ಎಂದು ಹೇಳಿದರೆ ತಪ್ಪಾಗಲಾರದು.
ಬಾವಿಗಾಗಿ ಮೀಸಲಾಗಿರುವ ಜಾಗ ಪಹಣಿ ಪತ್ರಿಕೆಯಲ್ಲಿ ಎಂಟ್ರಿ ಆಗುತ್ತಿಲ್ಲ -ಸ್ವಾದಿನಪಡಿಸಿಕೊಳ್ಳದೇ ಕಾಮಗಾರಿಗೆ ಚಾಲನೆ ನೀಡುವುದು ಅನಧಿಕೃತ….
ಹೌದು ಅಂಕೋಲಾ ಪುರಸಭೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಅನೇಕ ಕಾಮಗಾರಿಗಳು ನಡೆಯುತ್ತಿದೆ. ಆದರೆ ಕಾಮಗಾರಿ ಖಾಸಗಿ ಅವರ ಕ್ಷೇತ್ರದಲ್ಲಿ ನಡೆದರೆ ಮೊದಲು ಖಾಸಗಿ ಅವರು ಸದರಿ ಸ್ಥಳವನ್ನು ಪುರಸಭೆಗೆ ಸ್ವಾದಿನ ಮಾಡಬೇಕು.. ಅಲ್ಲಿ ಖಾಸಗಿಯವರ ನಿರಾಕ್ಷೇಪಣಾ ಪತ್ರ ಮುಖ್ಯವಾಗಿದೆ. ಆದರೆ ಅಧಿಕಾರಿಗಳು ಕಾಮಗಾರಿ ನಡೆಯುವ ಪೂರ್ವದಲ್ಲಿ ಸದರಿ ಪಹಣಿ ಪತ್ರಿಕೆಯನ್ನು ಸ್ವಾದಿನ ಪಡಿಸಿಕೊಳ್ಳದೆ ಕಾನೂನುಬಾಹಿರುವಾಗಿ ಸಾಕಷ್ಟು ಕಾಮಗಾರಿ ನಡೆಸಿದ್ದಾರೆ. ಈಗಲೂ ಕೂಡ ಕೆಲವೊಂದು ಕಡೆ ಖಾಸಗಿ ಅವರ ಕಡೆಯಿಂದ ಸ್ವಾಧೀನ ಪಡಿಸಿ ಕೊಳ್ಳದೆ ಕಾಮಗಾರಿ ನಡೆಯುತ್ತಿದೆ. ಸದರಿ ದಾಖಲೆಗಳನ್ನು ಪಡೆಯಲು ಕಾಮಗಾರಿಗೆ ಸರ್ವೇ ಸಮೇತ ಮಾಹಿತಿ ಹಕ್ಕಿನಲ್ಲಿ ಅರ್ಜಿ ಸಲ್ಲಿಸಿದರೆ ತಹಶೀಲ್ದಾರ ಕಛೇರಿಯಿಂದ ಕಾಮಗಾರಿ ನಡೆದ ಸ್ಥಳದ ಪಹಣಿ ಪತ್ರಿಕೆ ತೆಗೆದುಕೊಳ್ಳಿ ಎಂದು ಹಾರಿಕೆ ಹಿಂಬರಹ ನೀಡುವುದು ವಾಡಿಕೆಯಾಗಿ ಬಿಟ್ಟಿದೆ.
ಯಾವುದೇ ಕಾಮಗಾರಿ ಸ್ವಾಧೀನ ಪಡಿಸಿಕೊಳ್ಳುವ ಮುಂಚೆಯೇ ನಡೆಸಿದರೆ ಕಾನೂನು ಹೋರಾಟ ಮಾಡುತ್ತೇನೆ – ಸಂಜಿವ. ಪಿ ನಾಯ್ಕ.
ಪುರಸಭೆ ವ್ಯಾಪ್ತಿಯಲ್ಲಿ ಸಾಕಷ್ಟು ಕಾಮಗಾರಿಗಳನ್ನು ಖಾಸಗಿ ಮಾಲೀಕರಿಂದ ಸ್ವಾದಿನ ಪಡಿಸಿಕೊಳ್ಳುವ ಮುಂಚೆಯೇ ಮಾಡಲಾಗುತ್ತಿದೆ. ಹುಲುಸ್ವಾರ ಕೇರಿಯಲ್ಲಿ ತುಳುಸು ಗೌಡ ಎಂಬುವವರು 32 ಪುಟದ ಬಾವಿಯನ್ನು 2023ರಲ್ಲಿ ನಿರ್ಮಿಸಿದ್ದು ಸದರಿ ಬಾವಿಗೆ ಎರಡು ಲಕ್ಷದ 36 ಸಾವಿರ ರೂಪಾಯಿ ಯನ್ನು 3 ಕಂತಿನಲ್ಲಿ ಪಾವತಿಸಲಾಗಿದ್ದು.. ಇಲ್ಲಿ ನನ್ನಂಥ ಹೋರಾಟದ ಮನೋಭಾವನೆಯುಳ್ಳಂತಹ ವ್ಯಕ್ತಿಗಳು ಕಾನೂನು ಪ್ರಕಾರ ಕೆಲಸ ಮಾಡಿ. ಮಾಡಿದ ಕೆಲಸಕ್ಕೆ ಯಾವ ಅಧಿಕಾರಿಗಳಿಗೂ ಒಂದು ರೂಪಾಯಿ ಲಂಚ ಕೊಡದೆ ನ್ಯಾಯಯುತವಾಗಿ ಬಿಲ್ ಪಾವತಿ ಮಾಡುವಂತೆ ಕೇಳಿದರೆ ಕಾಮಗಾರಿ ನಡೆಸಿದ ಎರಡು ಮೂರು ವರ್ಷ ಆದರೂ ಹಣ ಪಾವತಿ ಆಗಿಲ್ಲ.
ಪುರಸಭೆ ಅಧಿಕಾರಿಗಳು ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದು.ಈ ಬಗ್ಗೆ ತಾರತಮ್ಯದ ನೀತಿಯ ಬಗ್ಗೆ ಮಾಹಿತಿ ಹಕ್ಕಿನಲ್ಲಿ ಕೆಲವು ದಾಖಲೆಗಳಿಂದ ನನಗೆ ತಿಳಿದು ಬಂದಿದೆ. ಇದರಲ್ಲಿ ರಾಜಕೀಯ ಷಡ್ಯಂತ್ರ ಕೂಡ ಇದೆ. ಇನ್ನು ಮುಂದಿನ ದಿನಗಳಲ್ಲಿ ಪುರಸಭೆಯಲ್ಲಿ ನಡೆಯುತ್ತಿರುವ ಕಾಮಗಾರಿ ವಿಷಯದಲ್ಲಿನ ಭ್ರಷ್ಟಾಚಾರಗಳನ್ನು ಬಯಲಿ ಗೆಳೆಯುತ್ತೇನೆ.- ಸಂಜೀವ್. ಪಿ. ನಾಯ್ಕ್. ( ಕೋಟೆವಾಡ )
ಅಂಕೋಲಾ : ತಾಲೂಕಿನ ಪೂಜಗೇರಿ ಹಳ್ಳದ ಕಿರು ಸೇತುವೆ ಪಕ್ಕ ಪೂರ್ವ ದಿಕ್ಕಿನಲ್ಲಿ ಸರಿಸುಮಾರು ನೂರು ಮೀಟರ್ ಸಿಮೆಂಟ್ ಕಾಂಕ್ರೀಟ್ ರಸ್ತೆಯನ್ನು ಹಳ್ಳಕ್ಕೆ ಲಗತ್ತಾಗಿ ನಿರ್ಮಿಸಲಾಗಿದೆ.. ಸದರಿ ರಸ್ತೆಯ ಲಾಭವನ್ನು ಪಡೆದು ಸಂಜೆಯಾಗುತ್ತಿದ್ದಂತೆ ಟಾಟಾ ಏಸ್ ರಿಕ್ಷಾದ ಮೇಲೆ ಗಾಡಿ ತುಂಬಾ ಮದುವೆ, ಸಭೆ ಸಮಾರಂಭದಲ್ಲಿ ಬಳಸಿದ ಪ್ಲಾಸ್ಟಿಕ್ ಬಾಟಲ್ ಗಳನ್ನು, ಇನ್ನಿತರ ತ್ಯಾಜ್ಯ ವಸ್ತುಗಳನ್ನು ತಂದು ಹಳ್ಳದ ಪಕ್ಕ ಸುರಿದು ಬೆಂಕಿ ಹಾಕುವ ಕಿಡಿಗೇಡಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ..
ರಿಯಲ್ ಎಸ್ಟೇಟ್ ಮಾಫಿಯಾ ಗಳಿಂದ ಕೃಷಿ ಭೂಮಿ ಸರ್ವನಾಶ : ಪೂಜಗೇರಿ ಹಳ್ಳಕ್ಕೂ ಸಂಚಕಾರ.
ಕೃಷಿ ಭೂಮಿಗೆ ಹೆಸರಾಗಿದ್ದ ಪೂಜಗೇರಿ – ಹಳ್ಳದ ಪಕ್ಕ ತೆಂಕಣಕೇರಿ ಗ್ರಾಮಕ್ಕೆ ಸೇರಿರುವ ನೂರಾರು ಎಕರೆ ಭೂಮಿಗಳು ರಿಯಲ್ ಎಸ್ಟೇಟ್ ಮಾಫಿಯಾ ಗಳು ಖರೀದಿ ಮಾಡಿಕೊಂಡು. ಸದರಿ ಕೃಷಿ ಭೂಮಿಯನ್ನು ಭೂ ಪರಿವರ್ತನೆಯನ್ನು ಮಾಡಿಕೊಂಡು ಜನವಸತಿ ಪ್ರದೇಶಗಳನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ.
ಈ ಕಾರಣದಿಂದಾಗಿ ಕೃಷಿ ಭೂಮಿಗಳು ಈ ಪ್ರದೇಶದಲ್ಲಿ ಸರ್ವನಾಶವಾಗಿದೆ. ಖಾಸಗಿ ಅವರ ಜಮೀನಿಗೆ ಹೋಗಲು ಹಳ್ಳದ ಕಿರು ಸೇತುವೆಯ. ಮುಖ್ಯ ರಸ್ತೆಯಿಂದ ಲಂಬಕೋನಾಕೃತಿಯಲ್ಲಿ ಪೂರ್ವ ದಿಕ್ಕಿಗೆ ರಸ್ತೆ ನಿರ್ಮಾಣ ಮಾಡಲಾಗಿದ್ದು ಸದರಿ ಖಾಸಗಿಯವರ ಅಭಿವೃದ್ಧಿಗೋಸ್ಕರ ರಸ್ತೆಯನ್ನು ಸರ್ಕಾರದ ಅನುದಾನವನ್ನು ಬಳಸಿ ಹಳ್ಳದ ಪಕ್ಕ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದರೇ ಎಂಬ ಅನುಮಾನ ಕಾಡಿದೆ.
ಸದರ ಹಳ್ಳಕ್ಕೆ ಲಗತ್ತಾಗಿ ರಸ್ತೆ ನಿರ್ಮಾಣ ಮಾಡಿರುವುದರಿಂದ ಪ್ರತಿನಿತ್ಯ ಮೋಜು ಮಸ್ತಿ ಮಾಡಲು ಬರುವವರು ಸಂಖ್ಯೆಯ ಜೊತೆ ಬಿಯರ್ ಬಾಟಲ್ ಗಳನ್ನು ತಂದು ಹಳ್ಳದ ಅಕ್ಕ ಪಕ್ಕ. ಬಿಸಾಡಿ ಹೋಗುವರ ಸಂಖ್ಯೆಯು ಅಧಿಕವಾಗಿದೆ ಜೊತೆಗೆ ಸಭೆ ಸಮಾರಂಭಕ್ಕೆ ಬಳಸಲಾಗಿರುವ ಪ್ಲಾಸ್ಟಿಕ್ ಬಾಟಲುಗಳು ಇನ್ನಿತರ ತ್ಯಾಜ್ಯ ವಸ್ತುಗಳನ್ನು ವಾಹನದ ಮೂಲಕ ತಂದು ಹಳ್ಳಕ್ಕೆ ಬಿಸಾಡುತ್ತಿರುವ ಕಿಡಿಗೇಡಿಗಳಿಂದ ಪರಿಸರ ನಾಶಕ್ಕೆ ಇನ್ನಷ್ಟು ಕಾರಣವಾಗಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಸಭೆ-ಸಮಾರಂಭದ ಪ್ಲಾಸ್ಟಿಕ್ ಬಾಟಲಗಳನ್ನು. ಇನ್ನಿತರ ತ್ಯಾಜ್ಯ ವಸ್ತುಗಳನ್ನು ಗಳನ್ನು ಹಳ್ಳಕ್ಕೆ ಸುರಿಯುತ್ತಿರುವ ಕಿಡಿಗೇಡಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕಾಗಿ ವಿಕಾಸ ವಾಹಿನಿಯು ಸಾರ್ವಜನಿಕರ ಪರವಾಗಿ ಆಗ್ರಹಿಸುತ್ತದೆ.
ಅಂಕೋಲಾ: ಕಾಂಗ್ರೆಸ್ ಪಕ್ಷವು ತನ್ನ ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದೆ. ಮಂಜೇಶ್ವರ ಎಂ ನಾಯಕರವರನ್ನು ಸರ್ವಾನುಮತದಿಂದ ಅಂಕೋಲಾ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.
ಮಂಜೇಶ್ವರ ಎಂ ನಾಯಕರವರು ಪಕ್ಷದಲ್ಲಿ ಧೀರ್ಘ ಕಾಲದಿಂದ ಸಕ್ರಿಯರಾಗಿದ್ದು, ಸಂಘಟನಾ ಚಾತುರ್ಯತೆಯನ್ನು ಹೊಂದಿದ್ದಾರೆ.ಪಕ್ಷದಲ್ಲಿ ಸದಾ ಕ್ರಿಯಾಶೀಲತೆಯಿಂದಿರುವ ಹಾಗೂ ನಿಷ್ಟೆಯಿಂದಿರುವ ಮಂಜೇಶ್ವರ ಎಂ ನಾಯಕರವರು ಅಂಕೋಲಾ ಬ್ಲಾಕ್ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ಅಂಕೋಲಾ ಕಾಂಗ್ರೆಸ್ ವಲಯದಲ್ಲಿ ಸಂತಸವುಂಟುಮಾಡಿದೆ.