ಅಂಕೋಲಾ – ಕುಮಟಾ ಬಸ್ ಸೇವೆ. ಪ್ರತಿನಿತ್ಯ ಸರಿಯಾದ ಸಮಯಕ್ಕೆ ಬಸ್ ಸಿಗದೇ ಪ್ರಯಾಣಿಕರ ತೀವ್ರ ಪರದಾಟ : ನಾಳೆಯಿಂದಲೇ ಸರಿಯಾದ ವ್ಯವಸ್ಥೆ ಮಾಡಬೇಕು – ವಕೀಲೆ ಮೀನಾಕ್ಷಿ ನಾಯ್ಕ್ ಆಗ್ರಹ..

News Desk
1 Min Read

ಅಂಕೋಲಾ: ಅಂಕೋಲಾ ಬಸ್ ನಿಲ್ದಾಣದಲ್ಲಿ ಕುಮಟಾ ಮಾರ್ಗದ ಬಸ್ ಅವ್ಯವಸ್ಥೆಯಿಂದ ಪ್ರತಿದಿನ ಪ್ರಯಾಣಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಕುಮಟಾದಲ್ಲಿ ಸೇವೆ ಸಲ್ಲಿಸುತ್ತಿರುವ ವಕೀಲರಾದ ಮೀನಾಕ್ಷಿ ನಾಯ್ಕ್ ಅವರು ಗಂಭೀರವಾಗಿ ಪ್ರತಿಕ್ರಿಯಿಸಿ, ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರೊಂದಿಗೆ ಸೇರಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಅವರು ವಿಕಾಸ ವಾಹಿನಿ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಾ ಹೇಳಿದರು

ಮೀನಾಕ್ಷಿ ನಾಯ್ಕ್ ಮೂಲತಃ ಅಂಕೋಲದವರು. ಅವರು ದಿನನಿತ್ಯ ಕುಮಟಾ–ಅಂಕೋಲಾ ಬಸ್ಸಿನಲ್ಲಿ ಪ್ರಯಾಣಿಸಿ ವಕೀಲ ವೃತ್ತಿ ನಿರ್ವಹಿಸುತ್ತಿದ್ದಾರೆ. ಇದರ ಮೂಲಕ ಪ್ರಯಾಣಿಕರ ಸಂಕಷ್ಟವನ್ನು ನೇರವಾಗಿ ಗಮನಿಸುತ್ತಿದ್ದಾರೆ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅವರು ತಮ್ಮ ಸಾಮಾಜಿಕ ಜವಾಬ್ದಾರಿ ಹಿನ್ನೆಲೆಯಲ್ಲಿ ಪ್ರಯಾಣಿಕರ ಪರ ತೀವ್ರ ದ್ವನಿ ತೋರಿದ್ದಾರೆ. ಹೀಗಾಗಿ, ಬಸ್ ವ್ಯವಸ್ಥೆಯನ್ನು ತಕ್ಷಣ ಸರಿಪಡಿಸುವ ಅಗತ್ಯವಿದೆ ಎಂದು ಅವರು ಎಚ್ಚರಿಸಿದ್ದಾರೆ.

Share This Article