Connect with us

ಸ್ಥಳೀಯ ಸುದ್ದಿ

ಸರ್ಕಾರಿ ಕಚೇರಿಗೆ ಸಾರ್ವಜನಿಕರು ಸಲ್ಲಿಸಿದ ಯಾವುದೇ ದೂರು- ವಿನಂತಿ ಅರ್ಜಿಯ ಮೇಲೆ ಕೈಗೊಂಡ ಕ್ರಮದ ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿದಾರ ಕೋರಿದರೆ ಅಂತಹ ಮಾಹಿತಿ ಒದಗಿಸಲೇಬೇಕು..

Published

on

ಅಂಕೋಲಾ : ಸರ್ಕಾರಿ ಕಚೇರಿ ಎಂದ ಮೇಲೆ ಸಾರ್ವಜನಿಕರು ತಮ್ಮ ವಿವಿಧ ಬೇಡಿಕೆ ವಿವಿಧ ಸಮಸ್ಯೆಗಳನ್ನು ಪತ್ರದ ಮೂಲಕ ಸರ್ಕಾರಿ ಕಚೇರಿಗೆ ಸಲ್ಲಿಸುತ್ತಾರೆ. ಆದರೆ ಕೆಲವೊಮ್ಮೆ ಆ ಪತ್ರಗಳು ಅಧಿಕಾರಿಗಳ ನಿರ್ಲಕ್ಷದಿಂದಾಗಿ ಯಾವುದೇ ಕ್ರಮವಾಗದೆ ಕಸದ ಬುಟ್ಟಿಗೆ ಸೇರುವುದೇ ಹೆಚ್ಚು..

ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ ನಿಮ್ಮ ಅರ್ಜಿಯ ಕ್ರಮದ ಕುರಿತು ಮಾಹಿತಿ ಪಡೆಯಬಹುದಾಗಿದೆ..

ಸಾಕಷ್ಟು ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪತ್ರದ ಮೂಲಕ ಸರ್ಕಾರಿ ಕಚೇರಿಗೆ ರವಾನೆಯಾದಗ ಒಂದು ವಾರದಲ್ಲಿ ಅಥವಾ ಒಂದು ತಿಂಗಳಿನಲ್ಲಿ ಯಾವುದೇ ಕ್ರಮವನ್ನು ಜರುಗಿಸದೆ ಇರುವ ಪಕ್ಷದಲ್ಲಿ ಕೂಡಲೇ ಮಾಹಿತಿ ಹಕ್ಕು ಅಧಿನಿಯಮವನ್ನು ಬಳಸಿ ನಿಮ್ಮ ಅರ್ಜಿಗೆ ಕೈಗೊಂಡ ಕ್ರಮದ ಕುರಿತು ಮಾಹಿತಿಯನ್ನು ಪಡೆಯಬಹುದಾಗಿದೆ.

ಕೆಲವೊಂದು ಸಾರ್ವಜನಿಕ ಪ್ರಾಧಿಕಾರಗಳು ಮಾಹಿತಿ ಹಕ್ಕು ಅಧಿನಿಯಮದಲ್ಲಿಯೂ ಕೂಡ ಅರ್ಜಿದಾರನಿಗೆ ಮಾಹಿತಿ ಹಕ್ಕು ದೊರಕಿಸದೆ ಒಂದಕ್ಕೊಂದು ಸಂಬಂಧವಿಲ್ಲದ ಹಿಂಬರಹವನ್ನು ನೀಡುತ್ತಿದ್ದಾರೆ.

ಸರ್ಕಾರಿ ಕಚೇರಿಯ ವ್ಯಾಪ್ತಿಯಲ್ಲಿ ಅನಧಿಕೃತ ಕಾರ್ಯ ಚಟುವಟಿಕೆ ವಿರುದ್ಧ ಅರ್ಜಿದಾರರು ದೂರು ನೀಡಿದಾಗ ಸಾರ್ವಜನಿಕ ಪ್ರಾಧಿಕಾರವು ಸಾರ್ವಜನಿಕರ ಅರ್ಜಿಗೆ ಯಾವುದೇ ಕ್ರಮ ಕೈಗೊಳ್ಳದೇ ಇರುವ ಪಕ್ಷದಲ್ಲಿ.. ಮಾಹಿತಿ ಹಕ್ಕು ಅಧಿನಿಯಮದಡಿ ಕೈಗೊಂಡ ಕ್ರಮದ ಕುರಿತು ಅರ್ಜಿದಾರನು ಮಾಹಿತಿ ಕೋರಿದಾಗ ಅದಕ್ಕೆ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ದೂರು ಅರ್ಜಿಯ ಮೇಲೆ ಕ್ರಮವನ್ನು ಕೈಗೊಂಡ ಕುರಿತು ಮಾಹಿತಿಯನ್ನು ಒದಗಿಸಲೇ ಬೇಕಾಗಿರುತ್ತದೆ.

ಈ ಬಗ್ಗೆ ಕರ್ನಾಟಕ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿದ್ದ ರಿಟ್ ಅರ್ಜಿ ಸಂಖ್ಯೆ 17103/2009(GM-RES) ಶ್ರೀ ಕೆ ಮಹೇಶ ವಿರುದ್ಧ ಎಲ್ ಐ ಸಿ ಪ್ರಕರಣ ದ ತೀರ್ಪಿನ ಪ್ರಕಾರ ಅರ್ಜಿದಾರರನ್ನು ನೀಡಿದ ದೂರು ಅರ್ಜಿಯ ಮೇಲೆ ಕೈಗೊಂಡ ಕ್ರಮದ ಮಾಹಿತಿಯನ್ನು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ಕೇಳಿದಾಗ ಉತ್ತರ ನೀಡಲೇ ಬೇಕಾಗಿರುತ್ತದೆ ಎಂದು ನಿರ್ದೇಶನ ನೀಡಿರುವುದನ್ನು ತಿಳಿಸಿದೆ.

ಆಡಳಿತದಲ್ಲಿ ನಡೆಯುವ ಭ್ರಷ್ಟಾಚಾರ ಮತ್ತು ಕೆಟ್ಟ ಆಡಳಿತವನ್ನು ಬಯಲು ಮಾಡಲು ಹೋರಾಡುತ್ತಿರುವ ಮಾಹಿತಿ ಹಕ್ಕು ಬಳಕೆದಾರರು ಜಾಗರೂಕತೆಯಿಂದ ಹೆಜ್ಜೆ ಇಡಬೇಕಾಗಿದೆ. ಜೊತೆಗೆ ಈ ಮೇಲಿನ ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ನಿರ್ದೇಶನದ ಕುರಿತಂತೆ ಮಾಹಿತಿ ಹಕ್ಕು ಬಳಕೆದಾರರಿಗೆ ಕ್ರಮದ ಕುರಿತು ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಪಡೆಯಲು ಅನುಕೂಲವಾಗಲಿದೆ….

Click to comment

Leave a Reply

Your email address will not be published. Required fields are marked *

ಸ್ಥಳೀಯ ಸುದ್ದಿ

ಕಚೇರಿಗೆ ತಡವಾಗಿ ಬರುವುದರೊಂದಿಗೆ ಕರ್ನಾಟಕ ರಾಜ್ಯದಲ್ಲಿಯೇ ಮಾದರಿಯಾದ ಅಂಕೋಲಾ ಉಪ ನೋಂದಣಾಧಿಕಾರಿ ಗಳು : ಪ್ರತಿನಿತ್ಯ ಕಚೇರಿಗೆ 11:30 ಕ್ಕೆ ಆಗಮನ..

Published

on

ಅಂಕೋಲಾ : ತಾಲೂಕಿನ ಉಪ ನೊಂದಣಾಧಿಕಾರಿಗಳು ಕಳೆದ ಕೆಲವು ತಿಂಗಳಿಂದ ಕಚೇರಿಗೆ ಬೆಳಿಗ್ಗೆ 10 ಗಂಟೆಗೆ ಬರುವುದನ್ನು ಮರೆತುಬಿಟ್ಟಿದ್ದು. ಪ್ರತಿ ದಿನ 11:30ಕ್ಕೆ ಕಚೇರಿಗೆ ಆಗಮಿಸುತ್ತಿರುವ ಸಾಕಷ್ಟು ಸಾರ್ವಜನಿಕ ಚರ್ಚೆ-ಗೀಡು ಮಾಡಿದೆ..

ಈ ಹಿಂದೆ ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ಉಪನೊಂದಣಾದಿಕಾರಿಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ ಎಂದು ಸುದ್ದಿಯನ್ನು ಬಿತ್ತರ ಮಾಡಿತ್ತು. ಆದರೆ ಇದ್ಯಾವುದನ್ನು ತಲೆ ಕೆಡಿಸಿಕೊಳ್ಳದೆ ಸಾರ್ವಜನಿಕ ಸೇವಕರಾದ ನಮ್ಮ ತಾಲೂಕಿನ ಉಪ ನೊಂದಣಾಧಿಕಾರಿಗಳು ಪ್ರತಿನಿತ್ಯ ಎನ್ನುವಂತೆ ಬೆಳಗ್ಗೆ 11:30ಕ್ಕೆ ಒಂದೊಂದು ದಿನ 12 ಹೀಗೆ ಮನಸ್ಸಿಗೆ ಕಂಡಂತೆ ಕಚೇರಿಗೆ ಬರುತ್ತಿರುವುದರಿಂದ ಸದ್ರಿ ಅಧಿಕಾರಿಗಳ ಕರ್ತವ್ಯ ಬದ್ಧತೆ ಶಿಸ್ತುನ್ನು ತೋರ್ಪಡಿಸುವುದರ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ.

ತಾಲೂಕಿನ ಬೇರೆ ಎಲ್ಲಾ ಕಚೇರಿಗೆ ಹೋಲಿಸಿದರೆ ಅಂಕೋಲಾದ ಸಬ್ ರಿಜಿಸ್ಟರ್ ಕಚೇರಿಯು ಕಡ್ಡಾಯವಾಗಿ 10 ಗಂಟೆ ಒಳಗೆ ತೆರೆದಿಡಬೇಕು. ಮತ್ತು ಅಧಿಕಾರಿಗಳು ಹಾಜರಿರಲೇಬೇಕು. ಕಾರಣ ಆನ್ಲೈನ್ ನಲ್ಲಿ ವಿವಿಧ ತರಹದ ರಿಜಿಸ್ಟ್ರೇಷನ್ ಗಳನ್ನು ಮಾಡಲು ಸಾರ್ವಜನಿಕರು ಸ್ಲಾಟ್ಗಳನ್ನು ಬುಕ್ ಮಾಡುತ್ತಾರೆ. ಇದರಂತೆ ಬೆಳಿಗ್ಗೆ 10:15ಕ್ಕೆ ನಿಗದಿಪಡಿಸಿದ ಸ್ಲಾಟ್ಗಳನ್ನು ಪ್ರಾರಂಭವಾಗುತ್ತದೆ. ಆ ವೇಳೆ ಉಪನೊಂದಾವಣಿ ಅಧಿಕಾರಿಗಳು ಸದರಿ ಬುಕಿಂಗ್ ಆದ ಸ್ಲಾಟ್ಗಳನ್ನು ಪಾಸ್ವರ್ಡ್ ಅನ್ನು ಹಾಕಿ ರಿಜಿಸ್ಟ್ರೇಷನ್ ಪ್ರಕ್ರಿಯೆ ನಡೆಸಲೇಬೇಕಾಗುತ್ತದೆ .

ಆದರೆ ಅಂಕೋಲಾದಲ್ಲಿ ಮಾತ್ರ ಉಪನೊಂದಾವಣೆ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ದೂರದ ಕಾರವಾರದಿಂದ ಬರುತ್ತಿರುವ ಕಾರಣ ಪ್ರತಿನಿತ್ಯ ಲೇಟಾಗಿ ಬರುವುದು ವಾಡಿಕೆ ಯಾಗಿದೆ. ಸದ್ರಿ ಕಚೇರಿಯಲ್ಲಿ ಉಪನೊಂದಾವಣಿ ಅಧಿಕಾರಿಗಳ ಅನುಪಸ್ಥಿತಿಯಲ್ಲಿ ಖಾಸಗಿ ಮೂಲದ ಕೆಲವು ಸಿಬ್ಬಂದಿಗಳು ಕಳೆದ ಕೆಲವು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದು . ಇವರಿಗೆ ಸಬ್ ರಿಜಿಸ್ಟರ್ ಪ್ರಕ್ರಿಯೆ ಬಗ್ಗೆ ಸಾಕಷ್ಟು ತರಬೇತಿಗಳು ಇದ್ದು. ಇವರು ಕಚೇರಿಗೆ ಬೇಗ ಬಂದು ಉಪ ನೊಂದಣಿ ಅಧಿಕಾರಿಗಳು ಮಾಡಬೇಕಾದ ಕರ್ತವ್ಯವನ್ನು ಇವರೇ ನಿಭಾಯಿಸುತ್ತಾರೆ.

ಕಚೇರಿಗೆ ಸಮಯಕ್ಕೆ ಉಪ ನೊಂದಣಿ ಅಧಿಕಾರಿ ಬರದಿದ್ದರೂ ಇವರು ಉಪ ನೊಂದಣಿ ಅಧಿಕಾರಿಗಳ ಲಾಗಿನಿಂದ್ ನಿಗದಿಪಡಿಸಿರುವ ಸ್ಲಾಟ್ ಗಳನ್ನು ಮೊದಲೇ ಪಾಸ್ ಮಾಡಿಕೊಂಡು ಉಪನೊಂದಣಿ ಅಧಿಕಾರಿ ಕಚೇರಿಗೆ ಬಂದ ನಂತರ ಅಂತಿಮ ಹಂತದ ನೊಂದಣಿ ಪ್ರಕ್ರಿಯೆಗಳು ನಡೆಯುತ್ತದೆ.. ಈ ಪ್ರಕ್ರಿಯೆ ಕಾನೂನು ಬಾಹಿರವಾಗಿದ್ದು… ಇಲ್ಲಿ ಒಂದು ವೇಳೆ ಲೋಕಾಯುಕ್ತ ಅಧಿಕಾರಿಗಳು ರೈಡು ಮಾಡಿದಲ್ಲಿ ಸದರಿ ಸಿಬ್ಬಂದಿಗಳ ಜೊತೆಗೆ ಅಧಿಕಾರಿಗಳು ಜೈಲು ಊಟಮಾಡೋದು ಗ್ಯಾರೆಂಟಿ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ…..

ಕಚೇರಿಯಲ್ಲಿ ಬಯೋಮೆಟ್ರಿಕ್ ಹಾಗೂ ಸಿಸಿಟಿವಿ ಅಳವಡಿಸಿಲ್ಲದ ಕಾರಣ ಇಲ್ಲಿನ ವ್ಯವಸ್ಥೆ . ಅಧಿಕಾರಿಗಳ ಕರ್ತವ್ಯ ಲೋಪಕ್ಕೆ ಕಡಿವಾಣವೇ ಹಾಕಲು ಸಾಧ್ಯವೇ ಇಲ್ಲ ಎನ್ನುವಂತಾಗಿದೆ … ದೂರದ ಊರುಗಳಿಂದ ವಿವಿಧ ತರಹದ ನೋಂದಣಿ ಕಾರ್ಯವನ್ನು ಮಾಡಲು ಬರುತ್ತಿರುವ ಸಾರ್ವಜನಿಕರಿಗೆ ಸರಿಯಾದ ಸಮಯಕ್ಕೆ ಕೆಲಸವಾಗದೆ . ಅನಾನುಕೂಲ ಉಂಟಾಗುತ್ತಿದ್ದು. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸದರಿ ವಿಷಯವನ್ನು ಗಂಭೀರವಾಗಿ ಪರಿಶೀಲಿಸಿ ಕಚೇರಿಗೆ ವಿಳಂಬವಾಗಿ ಬರುತ್ತಿರುವ ಉಪ ನೊಂದಣಿ ಅಧಿಕಾರಿಗಳಿಗೆ ಕರ್ತವ್ಯ ಪ್ರಜ್ಞೆ ಮತ್ತು ಶಿಸ್ತನ್ನು ಮೂಡಿಸಲು ಸೂಕ್ತ ಕ್ರಮ ಜರುಗಿಸಲು ವಿಕಾಸ ವಾಹಿನಿ ಈ ಮೂಲಕ ಸಾರ್ವಜನಿಕರ ಪರವಾಗಿ ಆಗ್ರಹಿಸುತ್ತದೆ.

Continue Reading

ಸ್ಥಳೀಯ ಸುದ್ದಿ

ಲ್ಯಾಂಡ್ ಆರ್ಮಿ ಇಂದ ಪೂಜಗೇರಿ ಸೇತುವೆ ಪಕ್ಕ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಕಾಂಕ್ರೀಟ ಸಿಮೆಂಟ್ ರಸ್ತೆಗೆ ಬೇಡಿಕೆ ಇಟ್ಟವರು ಯಾರು? ಕಾಂಕ್ರೀಟ್ ಸಿಮೆಂಟ್ ರಸ್ತೆಯ ಮೇಲೆ ಕೆಂಪು ಮಣ್ಣನ್ನು ಸಮತಟ್ಟಾಗಿ ಹೊದಿಸಿದ ಕಿಡಿಗೇಡಿಗಳು ಯಾರು.?

Published

on

ಅಂಕೋಲಾ : ಮೊನ್ನೆ ದಿನಾಂಕ 19-04-2025 ರಂದು ನಿಮ್ಮ ವಿಕಾಸ ವಾಹಿನಿಯಲ್ಲಿ ” ಮದುವೆ ಸಭೆ ಸಮಾರಂಭದಲ್ಲಿ ಬಳಸಿದ ಪ್ಲಾಸ್ಟಿಕ್ ಬಾಟಲ್ ಗಳನ್ನು ಪೂಜಗೇರಿ ಹಳ್ಳದ ಅಕ್ಕ ಪಕ್ಕ ಸುರಿದು ಬೆಂಕಿ ಹಾಕುತ್ತಿರುವ ಕಿಡಿಗೇಡಿಗಳ ಸಂಖ್ಯೆ ಹೆಚ್ಚಳ. ” ಎಂಬ ಶೀರ್ಷಿಕೆ ಅಡಿ ಸುದ್ದಿ ಬಿತ್ತರ ಮಾಡಿದ್ದು ಸದರಿ ಸುದ್ದಿಯಲ್ಲಿ ಜನವಸತಿ ಇಲ್ಲದೆ ಇರುವ ಪ್ರದೇಶದಲ್ಲಿ ಖಾಸಗಿಯವರ ಅಭಿವೃದ್ಧಿಗೋಸ್ಕರ ಸರ್ಕಾರದ ಅನುದಾನವನ್ನು ಬಳಸಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕಾಂಕ್ರೀಟ ಸಿಮೆಂಟ್ ರಸ್ತೆಯನ್ನು ನಿರ್ಮಾಣ ಮಾಡಿದ್ದು ಸದರಿ ರಸ್ತೆಯ ಲಾಭವನ್ನು ಪಡೆದುಕೊಂಡ ಕೆಲವು ಕಿಡಿಗೇಡಿಗಳು ಕಾಂಕ್ರೀಟ್ ರಸ್ತೆಯಿಂದ ಚಲಾಯಿಸಿಕೊಂಡು ಬಂದು ಲೋಡ್ ಗಟ್ಟಲೆ ಕಸವನ್ನು ಹಳ್ಳದ ಅಕ್ಕಪಕ್ಕ ತಂದು ಸುರಿದು ಪ್ರಕೃತಿ ನಾಶವನ್ನು ಮಾಡುತ್ತಿದ್ದಾರೆ. ಎಂದು ಕಾಂಕ್ರೀಟ್ ರಸ್ತೆಯ ಬಗ್ಗೆ ಇದೇ ಸುದ್ದಿಯಲ್ಲಿ ಪ್ರಸ್ತಾಪಿಸಲಾಗಿತ್ತು.

ಕಾಂಕ್ರೀಟ್ ರಸ್ತೆಯನ್ನು ಕೆಂಪು ಮಣ್ಣಿನಿಂದ ಮುಚ್ಚಲು ಹೊರಟರೇ ರಿಯಲ್ ಎಸ್ಟೇಟ್ ಮಾಫಿಯಾಗಳು..?

ವಿಕಾಸ ವಾಹಿನಿಯಲ್ಲಿ ಸುದ್ದಿ ಮಾಡಿದಂತೆ ಹಳ್ಳದ ಅಕ್ಕಪಕ್ಕ ಸುರಿದಿರುವ ಕಸವನ್ನು ಸಂಬಂಧಪಟ್ಟವರು ವಿಲೇವಾರಿ ಮಾಡಲಾಗಿದೆಯೋ ಅಥವಾ ಇಲ್ಲ ಎಂದು ಸ್ಥಳ ಪರಿಶೀಲನೆಗೆ ಹೊರಟಾಗ ಅಚ್ಚರಿ ಕಾದಿತ್ತು. ಲ್ಯಾಂಡ್ ಆರ್ಮಿ ಇಂದ ಲಕ್ಷಾಂತರ ವೆಚ್ಚದಲ್ಲಿ ನಿರ್ಮಿಸಿರುವ ಕಾಂಕ್ರೀಟ ರಸ್ತೆಯು ಕೆಂಪು ಮಣ್ಣಿನಿಂದ ಮುಚ್ಚಿ ಸಮತಟ್ಟಾಗಿ ಹೋಗಿತ್ತು.. ಈ ಬಗ್ಗೆ ವಂದಿಗೆ ಮತ್ತು ಶೆಟಗೇರಿ ಪಂಚಾಯತದ ಅಭಿವೃದ್ಧಿ ಅಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ನಾಯಕ್ ರವರಿಗೆ ಮಾಹಿತಿ ನೀಡಲಾಗಿದ್ದು. ಸ್ಥಳಕ್ಕೆ ಕೂಡಲೇ ಬಂದ ಅಧಿಕಾರಿಗಳು ಸ್ಥಳದ ವೀಕ್ಷಣೆ ಮಾಡಿದರು. ಸದರಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿದ ಪ್ರದೇಶವು ಬಬ್ರುವಾಡ ಪಂಚಾಯಿತಿಗೆ ಬರುತ್ತದೆ ಎಂದು ಖಚಿತಪಡಿಸಿದರು. ಸದರಿ ಕಾಂಕ್ರೀಟ್ ರಸ್ತೆಯಲ್ಲಿ ಕೆಂಪು ಮಣ್ಣು ಹಾಕಿ ಮುಚ್ಚಿರುವ ಕುರಿತು ಬೊಬ್ರುವಾಡ ಪಂಚಾಯಿತಿಗೆ ಯಾವುದೇ ಮಾಹಿತಿ ಇಲ್ಲದಂತೆ ತೋರುತ್ತದೆ.

ಜನವಸತಿ ಇಲ್ಲದೆ ಇರುವ ಪ್ರದೇಶದಲ್ಲಿ ಲಕ್ಷಾಂತರ ರೂಪಾಯಿಯನ್ನು ಖರ್ಚು ಮಾಡಿ ಖಾಸಗಿ ಅವರ ಸೈಟುಗಳಿಗೆ ಲ್ಯಾಂಡ್ ಆರ್ಮಿ ಅವರು 200 ಮೀ ರಸ್ತೆ ನಿರ್ಮಾಣ ಮಾಡಿದ್ದು, ಸದ್ರಿ ರಸ್ತೆಗೆ ಬೇಡಿಕೆ ಇಟ್ಟವರು ಯಾರೂ? ಜನವಸತಿ ಇಲ್ಲದ ಪ್ರದೇಶಗಳಿಗೆ ಅಧಿಕಾರಿಗಳು ರಸ್ತೆಯನ್ನು ಮಂಜೂರು ಮಾಡಿ ಸರ್ಕಾರದ ಹಣವನ್ನು ಕೊಳ್ಳೆ ಹೊಡೆಯಲಾಗುತ್ತಿದೆಯೇ ಎಂಬ ಪ್ರಶ್ನೆ ಮೂಡಿದೆ. ತಾಲೂಕಿನ ಅನೇಕ ಗ್ರಾಮ ಪಂಚಾಯತಿಯ ಜನವಸತಿ ಇರುವ ಪ್ರದೇಶದಲ್ಲಿ ಸರಿಯಾದ ರಸ್ತೆ ಸಂಪರ್ಕವೇ ಇಲ್ಲ. ಜನ ವಸತಿ ಪ್ರದೇಶದಲ್ಲಿ ಸಾಕಷ್ಟು ರಸ್ತೆಯ ಬೇಡಿಕೆ ಇದ್ದು .. ಅಂತಹ ಪ್ರದೇಶಗಳಲ್ಲಿ ರಸ್ತೆ ಮಾಡುವುದನ್ನು ಬಿಟ್ಟು ಜನವಸತಿ ಇಲ್ಲದೆ ಇರುವ ಪ್ರದೇಶದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾಗಳ ಅಭಿವೃದ್ಧಿಗೋಸ್ಕರ ಸಿಆರಜೆಡ್ ವ್ಯಾಪ್ತಿಗೆ ಬರುವ ಹಳ್ಳದ ಪಕ್ಕ ಲಗತ್ತಾಗಿ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿ, ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡವರ ಜೊತೆಗೆ ಕಾಂಕ್ರೀಟ್ ರಸ್ತೆಗೆ ಕೆಂಪು ಮಣ್ಣನು ಹಾಕಿ ಸಮತಟ್ಟಾಗಿ ಬರಾವು ಮಾಡಿದ ಕಿಡಿಗೇಡಿಗಳ ಮೇಲೆ ಸಂಬಂಧ ಪಟ್ಟ ಅಧಿಕಾರಿಗಳು ಕಾನೂನು ರೀತಿಯಾಗಿ ಕ್ರಮ ಜರುಗಿಸುವರೇ ಎಂದು ಕಾದು ನೋಡಬೇಕಾಗಿದೆ….

Continue Reading

ಸ್ಥಳೀಯ ಸುದ್ದಿ

ಅಂಕೋಲಾ : ವೈ. ಆರ್ ಸದಾಶಿವ ರೆಡ್ಡಿಯ ಮೇಲೆ ಹಲ್ಲೆ ತಾಲೂಕ ವಕೀಲರ ಸಂಘ ಖಂಡನೆ, ವಕೀಲರ ಸಂರಕ್ಷಣಾ ಕಾಯ್ದೆ ಪರಿಣಾಮಕಾರಿಯಾಗಿ ಜಾರಿಗೆ ತರಲು ಆಗ್ರಹ..

Published

on

ಅಂಕೋಲಾ :ಭಾರತೀಯ ವಕೀಲ ಪರಿಷತ್ತಿನ ಸದಸ್ಯರು. ಪದಾಂಕಿತ ಹಿರಿಯ ವಕೀಲರಾದ ವೈ ಆರ್ ಸದಾಶಿವ ರೆಡ್ಡಿ ಅವರ ಕಚೇರಿಗೆ ನುಗ್ಗಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆಯನ್ನು ಖಂಡಿಸಿ. ಸೋಮವಾರ ಅಂಕೋಲಾ ವಕೀಲರ ಸಂಘದ ಎಲ್ಲಾ ಸದಸ್ಯರು ನ್ಯಾಯಾಲಯದ ಕಾರ್ಯಕ್ರಮದಿಂದ ದೂರ ಉಳಿಯುವುದರೊಂದಿಗೆ ನಂತರ ಅಂಕೋಲಾದ ಪ್ರಮುಖ ರಸ್ತೆಯಿಂದ ಕಾಲ್ನಡಿಗೆ ಮೂಲಕ ರಸ್ತೆ ಯುದ್ಧಕ್ಕೂ ಘೋಷಣೆಯನ್ನು ಕೂಗಿ ಅಂಕೋಲಾ ತಹಶೀಲ್ದಾರರ ಕಚೇರಿಗೆ ಬಂದು ವಕೀಲ ಸಂಘದ ಪ್ರಮುಖರು ಮೊದಲು ವಕೀಲರ ಮೇಲಿನ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ ಮಾತನಾಡಿದ್ದು ನಂತರ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿಯನ್ನು ನೀಡಿದರು . ತಹಶೀಲ್ದಾರರ ಪರವಾಗಿ ಗಿರೀಶ ಜಾಂಬ್ಳೆಕರ್ ಮನವಿಯನ್ನು ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನಾಗಾನಂದ ಬಂಟ ವಕೀಲರು ಹಿರಿಯ ವಕೀಲ ವೈ.ಆರ್. ಸದಾಶಿವ ರೆಡ್ಡಿ ಇವರ ಮೇಲಿನ ಹಲ್ಲೆಯನ್ನು ಅಂಕೋಲಾ ವಕೀಲರ ಸಂಘ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದಲ್ಲಿ ವಕೀಲರ ರಕ್ಷಣೆಯನ್ನು ನೀಡಲು ಕಾಯ್ದೆ ಪಾಸಾಗಿದ್ದು. ಆದರೂ ಸಹ ವಕೀಲರ ಮೇಲೆ ಹಲ್ಲ್ಲೆಯಾಗುವುದನ್ನು ತಡಿಲಿಕ್ಕೆ ಸಾಧ್ಯವಾಗುತ್ತಿಲ್ಲ . ಮಾರಣಾಂತಿಕ ಹಲ್ಲೆ ಮಾಡುವ ಅಮಾನುಷ ಕೃತ್ಯಗಳನ್ನು ಪದೇ ಪದೇ ಮಾಡುತ್ತಿದ್ದು, ವಿಶೇಷವಾಗಿ ನಮ್ಮ ವಕೀಲರ ಮೇಲೆ ಆಗುತ್ತಿರುವ ಹಲ್ಲೆಗಳನ್ನು ನಾವೆಲ್ಲರೂ ಒಗ್ಗಟ್ಟಾಗಿ ಖಂಡಿಸುತ್ತೇವೆ. ವೈ.ಆರ್ ಸದಾಶಿವ ರೆಡ್ಡಿ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು..

ಹಿರಿಯ ವಕೀಲ ಉಮೇಶ್ ನಾಯ್ಕರು ಮಾತನಾಡಿ ಕರ್ನಾಟಕ ಸರ್ಕಾರ ವಕೀಲರಿಗೆ ರಕ್ಷಣೆ ಕೊಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ವಕೀಲ ರಕ್ಷಣೆ ಗೋಸ್ಕರ ಮಾಡಿರುವ ಕಾಯ್ದೆ ಇದ್ದರು ಸರಿಯಾಗಿ ಜಾರಿಗೆ ಬರದೆ ವಕೀಲರಿಗೆ ರಕ್ಷಣೆ ಇಲ್ಲದಾಗಿದೆ.. ಕೂಡಲೇ ವಕೀಲರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಬಂದಿಸಬೇಕು ಎಂದರು.

ವಕೀಲ ಬಿ. ಡಿ.ನಾಯ್ಕ್ ಮಾತನಾಡಿ ವೈ.ಆರ್. ಸದಾಶಿವ ರೆಡ್ಡಿಯವರ ಮೇಲೆ ಆಗಿರುವ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದರು.. ವಕೀಲ ರಕ್ಷಣೆಗೆ ಇರುವ ಕಾಯ್ದೆ ಜಾರಿಗೆ ಇದ್ದರೂ ಅದು ಇನ್ನು ಪೂರ್ತಿ ಆಗದೆ ಇರುವುದರಿಂದ ವಕೀಲರ ಮೇಲೆ ಇನ್ನು ಹಲ್ಲೆಯಾಗುತ್ತಿದೆ. ಈ ಕಾಯ್ದೆ ಶೀಘ್ರವಾಗಿ ಜಾರಿಗೆ ಬರುವಂತೆ ಹಾಗೂ ವೈ. ಆರ್ ಸದಾಶಿವರೆಡ್ಡಿ ಹಿರಿಯ ವಕೀಲರ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕೆಂದರು..

ವಕೀಲರ ಸಂಘದ ಅಧ್ಯಕ್ಷ ದೀಕ್ಷಿತ ನಾಯಕ ಮಾತನಾಡಿ ಪದೇ ಪದೇ ವಕೀಲರ ಮೇಲೆ ಹಲ್ಲೆ ನಡೆಯುತ್ತಿರುವುದು. ನಾವು ಪ್ರತಿಭಟನೆ ಮಾಡುತ್ತಿರುವುದಾಗಿದೆ, ಆದರೆ ನಮಗೆ ರಕ್ಷಣೆ ಇಲ್ಲ . ಈ ಕೂಡಲೇ ಸರ್ಕಾರ ವಕೀಲರ ಸುರಕ್ಷತೆ ಮತ್ತು ರಕ್ಷಣೆ ಕಾಪಾಡುವುದು ಸರ್ಕಾರದ ಕರ್ತವ್ಯ ಎಂದರು….

ವಕೀಲರ ಸಂಘದ ಹಿರಿಯ ಸದಸ್ಯ ವಿ ಎಸ್ ನಾಯಕ . ಹಾಗೂ ಸಂತೋಷ್ ನಾಯ್ಕ್. ವೈ ಆರ್ ಸದಾಶಿವ ರೆಡ್ಡಿ ಇವರ ಮೇಲೆ ಆದ ಹಲ್ಲೆಯನ್ನು ಖಂಡಿಸಿ ಮಾತನಾಡಿದರು.

ಈ ಪ್ರತಿಭಟನೆಯಲ್ಲಿ ಅಂಕೋಲಾ ವಕೀಲರ ಸಂಘದ ಆರ್ ಟಿ ಗೌಡ, ನಿತ್ಯಾನಂದ ಕವರಿ ,ವಿನೋದ ಶಾನಭಾಗ, ಸಂತೋಷ ನಾಯ್ಕ ಬೆಲೆಕೇರಿ, ಸುರೇಶ ಬಾನಾವಳಿಕರ್, ಗುರುನಾಯ್ಕ, ಗಜಾನನಾ ನಾಯ್ಕ, ಮಮತಾ ಕೆರೆಮನೆ, ಮೋನಿಷ, ಬಿಟಿ ನಾಯಕ, ರಾಜು ಹರಿಕಂತ್ರ, ಪ್ರಸನ್ನ .ತೇಜು ಬಂಟ್, ಪ್ರಕೃತಿ ನಾಯಕ, ದೇವಿ ಗೌಡ, ಪ್ರಸಾದ ನಾಯಕ ಮತ್ತು ಲೇಖನಾ ಬಾಡಕರ್ ಭಾಗವಹಿಸಿದ್ದರು.

Continue Reading
Advertisement

Trending