
ಅಂಕೋಲಾ : ತಾಲೂಕಿನ ಬೇಲೇಕೆರಿಯಲ್ಲಿ ದಿನಾಂಕ 13-02-2025 ರಂದು ಖಾರ್ವಿವಾಡ ಮತ್ತು ಬಂಗ್ಲೆವಾಡ. ಪೊಲೀಸ್ ಸ್ಟೇಷನ್ ವಾಡದ ಜನರು ನೀರಿಗಾಗಿ ಹೋರಾಟ ಹಮ್ಮಿಕೊಂಡಿದ್ದು, ಬೆಳಿಗ್ಗೆ 10 ಗಂಟೆಗೆ ಬೆಲೇಕೆರಿಯ ದತ್ತಾತ್ರೇಯ ದೇವಸ್ಥಾನದ ಹತ್ತಿರ ಮೀನುಗಾರ ಮಹಿಳೆಯರು ಹಾಗೂ ಪುರುಷರು ನೂರಾರು ಸಂಖ್ಯೆಯಲ್ಲಿ ಸೇರಿದ್ದು. ಹೋರಾಟ ಪ್ರಾರಂಭವಾಗುವ ಮೊದಲು ಪದ್ಮಶ್ರೀ ಪುರಸ್ಕತೆ ಸುಕ್ರಿ ಬೊಮ್ಮ ಗೌಡ ಇವರ ನಿಧನದ ಹಿನ್ನೆಲೆ ಸುಕ್ರಜ್ಜಿಯ ಆತ್ಮಕ್ಕೆ ಶಾಂತಿ ಸಿಗಲೆಂದು 2 ನಿಮಿಷ ಮೌನ ಆಚರಣೆಯನ್ನು ಆಚರಿಸಿ ನಂತರ ಪ್ರತಿಭಟನೆಯನ್ನು ಮುಂದುವರಿಸಿದರು. ಮೆರವಣಿಗೆ ಪೊಲೀಸ್ ಬಂದೋಬಸ್ತ್ ಅನ್ನು ನೀಡಲಾಗಿತ್ತು.
ಬೇಲಿಕೆರಿಯ ಮಹಿಳೆಯರು ಮತ್ತು ಪುರುಷರು ಮೆರವಣಿಗೆ ಮೂಲಕ ಹೋಗುವಾಗ ಪಂಚಾಯತ ಭ್ರಷ್ಟ ಅಧಿಕಾರಿಗಳಿಗೆ ಧಿಕ್ಕಾರ. ರೇಡಾರ್ ಗೆ ನೀರಿನ ಸಂಪರ್ಕ ನೀಡಿರುವ ಅಧಿಕಾರಿಗಳಿಗೆ ದಿಕ್ಕಾರ. ಅರ್ಜಿ ಕೊಟ್ಟರು ಸ್ಪಂದಿಸದ ಗ್ರಾಮ ಪಂಚಾಯಿತಿಗೆ ಧಿಕ್ಕಾರ ಎಂದು ಘೋಷಣೆ ಕೂಗುತ್ತಾ ಹೊರಟು ಬೇಲಿಕೆರೆ ಪಂಚಾಯತಿ ಹತ್ತಿರ ಮೆರವಣಿಗೆ ಬಂದು ಮುಟ್ಟಿತು.

ಪ್ರತಿಭಟನಾಕಾರರು ಗ್ರಾಮ ಪಂಚಾಯತಿ ಕಚೇರಿ ಒಳಗಡೆ ನುಗ್ಗದಂತೆ ಅಂಕೋಲಾ ಪೊಲೀಸ್ ಇಲಾಖೆಯ ಪಿಎಸ್ಐ ಉದ್ದಪ್ಪ ಧರೆಪ್ಪನವರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಪಂಚಾಯತಿಯ ಸುತ್ತಮುತ್ತ ಬಿಗಿ ಬಂಧೋ ಬಸ್ತನ್ನು ಏರ್ಪಡಿಸಲಾಗಿತ್ತು.
ಬೆಲೇಕೇರಿಯ ಪಂಚಾಯತಿಯಲ್ಲಿ ಅಭಿವೃದ್ಧಿ ಅಧಿಕಾರಿ ಪೂರ್ಣಿಮ ಗೌಡ ಹಾಗೂ ಕೆಲವು ಗ್ರಾಮ ಪಂಚಾಯತ್ ಸದಸ್ಯರು ಹಾಜರಿದ್ದರು. ಪಂಚಾಯಿತಿ ಸದಸ್ಯರನ್ನು ಹಾಗೂ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಪ್ರತಿಭಟನಾಕಾರರು ಈಗಾಗಲೇ ಬೆಲೇಕೇರಿಯಲ್ಲಿ ತೀವ್ರತರನಾದ ನೀರಿನ ಸಮಸ್ಯೆ ಉಲ್ಬಣಿಸಿದೆ. ಜೆಜೆಎಂ ಕಾಮಗಾರಿ ಯಿಂದ ನಮಗೆ ಸರಿಯಾಗಿ ನೀರು ಬರುತ್ತಿಲ್ಲ.. ಅಂತರ್ಜಲವನ್ನು ಗುರುತಿಸದೆ ಒಂದುವರೆ ಕೋಟಿ ವೆಚ್ಚದಲ್ಲಿ ಪೈಪ್ ಲೈನ್ ಅಳವಡಿಸಿ ನೀರು ಬರದೇ ಹ್ಯಾಂಡವರನ್ನು ತೆಗೆದುಕೊಂಡಿದ್ದು ಯಾಕೆ?. ರೆಡಾರ್ ಗೆ ನೀರಿನ ಸಂಪರ್ಕ ಕೊಡುವಾಗ ಯಾಕೆ ಸ್ಥಳೀಯ ಜನರಿಗೆ ಮಾಹಿತಿ ನೀಡಿಲ್ಲ. ಹೀರೆಕಟ್ಟದಲ್ಲಿ ನೀರಿನ ಬಾವಿತೋಡದಂತೆ ಪಂಚಾಯಿತಿಗೆ ಅರ್ಜಿಯನ್ನು ಕೊಟ್ಟವರು ಯಾರು? ಅವರ ಹೆಸರನ್ನು ಈ ಸಂದರ್ಭದಲ್ಲಿ ಹೇಳಿ? ನಾವು ಮತ ಹಾಕಿದ ಪಂಚಾಯಿತಿ ಸದಸ್ಯರು ಎಲ್ಲಿ ಹೋದರು ಅವರನ್ನು ಇಲ್ಲಿ ಕರೆಸಿ ಎಂದು ಪ್ರತಿಭಟನಾಕಾರರು ಬಿಗಿಪಟ್ಟು ಹಿಡಿದರು.. ಮಹಿಳೆಯರು ತಲೆಯ ಮೇಲೆ ಕೊಡ ಹಿಡಿದು ಪ್ರತಿಬಟಿಸುತ್ತಾ. ಪಂಚಾಯಿತಿಯ ಪಿಡಿಒ ಹಾಗೂ ಪಂಚಾಯಿತಿಯ ಸದಸ್ಯರಿಗೆ ವಿರುದ್ಧ ಜೋರಾಗಿ ಧಿಕ್ಕಾರವನ್ನು ಕೂಗಿದರು.

ಸುಡು ಬಿಸಿಲಿನಲ್ಲೂ ಘೋಷಣೆಗಳು ಜೋರಾಗಲು ಪ್ರಾರಂಭಿಸಿದಾಗ ಅಂಕೋಲಾ ಠಾಣೆಯ ಪೊಲೀಸ್ ಪಿಎಸ್ಐ ಪ್ರತಿಭಟನಕಾರರಿಗೆ ಶಾಂತವಾಗಿ ವರ್ತಿಸುವಂತೆ. ಹಾಗೂ ತಮ್ಮ ಸಮಸ್ಯೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಪರಿಹಾರ ಪಡೆದುಕೊಳ್ಳುವಂತೆ. ಅಭಿವೃದ್ಧಿ ಅಧಿಕಾರಿಗಳಿಗೆ ಮಾತನಾಡಲು ಅವಕಾಶ ನೀಡಿ ಎಂದರು.
ಪಂಚಾಯತ್ ಅಭಿವೃದ್ಧಿ ಪೂರ್ಣಿಮಾ ಗೌಡರು ಮಾತನಾಡಿ ಈಗಾಗಲೇ 800 ಜನರಿಗೆ ಜಲಜೀವನ್ ಮಿಷೀನ್ ಯೋಜನೆಯಡಿ ನೀರಿನ ಸಂಪರ್ಕ ನೀಡಿದ್ದು. 2.50 ಲಕ್ಷ ಲೀಟರ್ ಟ್ಯಾಂಕ್ ನೀರನ್ನು ಅರ್ಬನ್ ವಾಟರ್ ಹೊನ್ನಳ್ಳಿಯಿಂದ ಪ್ರತಿನಿತ್ಯ ಬೆಲೆಕೇರಿಗೆ ಸರಬರಾಜು ಮಾಡುತ್ತಿದ್ದು. ಆದರೂ ನೀರಿನ ಸಮಸ್ಯೆ ತಲೆದೋರುತ್ತಿದೆ . ಅದಕ್ಕೆ ಬೆಲೆಕೇರಿ ಪಂಚಾಯಿತಿಗೆ ನೀರಿನ ಪ್ರಮಾಣ ಸಾಕಾಗುತ್ತಿಲ್ಲ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು. ಹಾಗೂ ಹೀರೆಕಟ್ಟಾದಲ್ಲಿ ನೀರಿನ ಜಲ ಇದೆ.. ಅಲ್ಲಿ ಬಾವಿ ಕೋರೆಸಬಾರದು ಎಂದು ಪಂಚಾಯಿತಿಗೆ 21 ಜನರ ಸಹಿ ಹಾಕಿ ಸಾರ್ವಜನಿಕರು ಅರ್ಜಿಯನ್ನು ನೀಡಿದ್ದಾರೆ .. ಹಾಗೂ ಹೀರೆಕಟ್ಟದಲ್ಲಿ ಗುರುತಿಸಿದ ಜಮೀನು ಅರಣ್ಯ ಇಲಾಖೆಯವರು ಆಗಿದೆ.. ಹಾಗಾಗಿ ನಮಗೆ ಬಾವಿ ತೋಡಲು ಅನಾನುಕೂಲ ಉಂಟಾಗಿದೆ ಎಂದರು..
ಪ್ರತಿಭಟನಾಕಾರರು ಹಿರೆಕಟ್ಟಾದಲ್ಲಿ ಬಾವಿ ತೋಡಬಾರದು ಎಂದು ಯಾವ ಸಾರ್ವಜನಿಕರು ಅರ್ಜಿ ನೀಡಿದ್ದಾರೆ. ಅವರ ಹೆಸರನ್ನು ಹೇಳಿ ಎಂದು ಬಿಗಿಪಟ್ಟು ಹಿಡಿದರು . ಸಾರ್ವಜನಿಕರ ಆಕ್ರೋಶ ಕಾವೇರುತ್ತಿದ್ದಂತೆ ಪಿಡಿಒ ಸದರಿ ಅರ್ಜಿಯನ್ನು ಓದಿ ಹೇಳಿದರು. ಆ ಅರ್ಜಿಯಲ್ಲಿ ಪಂಚಾಯಿತಿ ಸದಸ್ಯರಿಬ್ಬರೂ ಸಹಿ ಹಾಕಿದ್ದು. ಜೊತೆಗೆ ಒಂದು ಸಮುದಾಯದವರೇ ಹೆಚ್ಚಾಗಿ ಸಹಿ ಹಾಕಿದ್ದು ಬಹು ಸಂಖ್ಯಾತ ಬೆಲೇಕೇರಿಯ ಮೀನುಗಾರರ ಮಹಿಳೆಯರು ಹಾಗೂ ಪುರುಷರು ತೀವ್ರ ಆಕ್ರೋಶವನ್ನು ಹೊರ ಹಾಕಿದರು… ಸದರಿ ಸಹಿ ಹಾಕಿದ ಸದಸ್ಯರಿಗೆ ಆ 21 ಜನ ಮಾತ್ರ ಮತ ಹಾಕಿದ್ದಾರೆ ಯೇ.. ನಾವ್ಯಾರು ಮತವನ್ನು ಹಾಕಿಲ್ಲವೇ.. ನೀರನ್ನು ಕೊಡದೆ ಇದ್ದರೆ ನೀವೆಲ್ಲ ಯಾಕೆ ಬೇಕು. ಜಲಜೀವನ್ ಮಷೀನ್ ಅಡಿ ಪಂಚಾಯಿತಿ ದವರು ಹಣ ಕೊಳ್ಳೆ ಹೊಡೆದಿದ್ದೀರಿ. ಎಂದಲ್ಲ ಕಿಡಿಕಾರಿದರು.

ನೀರಿನ ಸಮಸ್ಯೆ ವಿಷಯ ತಾರಕಕ್ಕೇರಿದಂತೆ ಮಧ್ಯಪ್ರವೇಶಿಸಿದ ಕೆಲವು ಮೀನುಗಾರ ಹಿರಿಯ ಹಾಗೂ ಕಿರಿಯ ಮುಖಂಡರು. ಮಾತನಾಡಿ ಖಾರ್ವಿವಾಡ ಕನ್ನಡ ಶಾಲೆ ಹತ್ತಿರ ಗಂಜಿ ಕೇಂದ್ರ ಇದ್ದು ಆ ಬಾವಿ ನೀರನ್ನು ಖಾರ್ವಿವಾಡಕ್ಕೆ ಒಂದು ದಿನ ಹಾಗೂ ಬಂಗ್ಲೆ ವಾಡಕ್ಕೆ ಒಂದು ದಿನ ಪೂರೈಸಿದರೆ ನೀರಿನ ಸಮಸ್ಯೆ ಬಗೆಹರಿಸಬಹುದು. ಕಾರ್ವಿವಾಡದಲ್ಲಿ 3 ಬಾವಿಗಳು ಇದ್ದು ಆ ನೀರನ್ನು ಖಾರ್ವಿವಾಡ್ ಮತ್ತು ಬಂಗ್ಲೆ ವಾಡಕ್ಕೆ ಪೂರೈಸಬಹುದು.
ಮಾನ್ಯ ಶಾಸಕರು ತಮ್ಮ ಸ್ವಂತ ಹಣದಿಂದ ಹಿರೇಕಟ್ಟಾ ಭಾಗದಲ್ಲಿ ಗೌಡರ ಸಮಾಜದವರ ಸಹಕಾರದಲ್ಲಿ ಕಟ್ಟಿರುವ ಬಾವಿಯಲ್ಲಿ ಬೆಲೇಕೆರೆಗೆ ಸಾಕಾಗುವಷ್ಟು ನೀರಿದೆ.. ಯಾರದ್ದು ತಂಟೆ ತಕ್ರಾರಿಗೆ ಆ ಬಾವಿ ನೀರು ಯಾರು ಸದುಪಯೋಗ ಪಡೆದುಕೊಳ್ಳುತ್ತಿಲ್ಲ. ಈ ಬಗ್ಗೆ ತಾಲೂಕಾಡಳಿತ ಮುಂದೆ ಬಂದು ಸರ್ವೆ ಮಾಡಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು ಎಂದರು. ಹಿರೆಕಟ್ಟ ಭಾಗದಲ್ಲಿ ನೀರಿನ ಬಾವಿಯನ್ನು ತೋಡಲು ಬೆಲೆಕೆರೆ ಗ್ರಾಮಸ್ಥರು ಸಂಬಂಧಪಟ್ಟ ಇಲಾಖೆಗೆ ಬಗ್ಗೆ ಮನವಿ ಮಾಡಲು ಸಿದ್ದರಿದ್ದೇವೆ. ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದರು.
ಪ್ರತಿಭಟನೆಗೆ ಬಂದಿದ್ದ ಮೀನುಗಾರ ಮಹಿಳೆಯರು ಮಾತನಾಡಿ 15 ದಿನಗಳವರೆಗೆ ನಮಗೆ ಶಾಶ್ವತ ನೀರಿನ ಪರಿಹಾರ ದೊರಕದೇ ಇದ್ದಲ್ಲಿ ಮತ್ತೆ ಪಂಚಾಯತ್ ಮುಂದೆ ದರಣಿ ಸತ್ಯಾಗ್ರಹವನ್ನು ಮಾಡಲಾಗುವುದು ಎಂದರು.. ಜನರ ಸಮಸ್ಯೆಯನ್ನು ಆಲಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸದಸ್ಯರು ನೀರಿನ ಸಮಸ್ಯೆಗೆ ಪರಿಹಾರ ದೊರಕಿಸಿದಾಗಿ ಆಶ್ವಾಸನೆ ನೀಡಿದರು. ವಿಕಾಸ ವಾಹಿನಿಯೊಂದಿಗೆ ಇಂಜಿನಿಯರ್ ರಾಘವೇಂದ್ರ ನಾಯಕ ಮಾತನಾಡಿ ಹಿರೆಕಟ್ಟಾದಲ್ಲಿ ಭಾವಿಯನ್ನು ತೋಡಲು ಸ್ಥಳ ಪರಿಶೀಲನೆಗೆ ಹೋದಾಗ ಅರಣ್ಯ ಇಲಾಖೆಯವರು ನಮಗೆ ನೋಟಿಸ್ ನೀಡಿದ್ದಾರೆ. ಹೀಗಾದರೆ ನಾವು ಯಾವ ರೀತಿ ಕೆಲಸ ಮಾಡಬೇಕು ಜೊತೆಗೆ ಪರಿಹಾರವನ್ನು ಕಂಡುಕೊಳ್ಳಬೇಕು? ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯತಿಯ ಸದಸ್ಯರು ಹಾಗೂ ಅಧಿಕಾರಿಗಳು ಮಾತನಾಡಿ ಬೆಲೇಕೆರೆ ವ್ಯಾಪ್ತಿಯಲ್ಲಿ ಅನೇಕ ಜನರು ಜಲಜೀವನ್ ಮಷೀನ್ ಯೋಜನೆಯಡಿ ನೀರು ಬಿಟ್ಟಾಗ ಅನಧಿಕೃತವಾಗಿ ನೀರಿಗೆ ಪಂಪಸೆಟ್ಟನ್ನು ಅಳವಡಿಸಿದ್ದು ಕಂಡು ಬಂದಿದೆ. ಆದ ಕಾರಣ ಇತರೆ ಜನರಿಗೆ ನೀರನ್ನು ಸಮರ್ಪಕವಾಗಿ ನೀರು ಪೂರೈಕೆ ಆಗುತ್ತಿಲ್ಲ.. ಇನ್ನು ಕೆಲವರು ಕುಡಿಯುವ ನೀರನ್ನು ತೆಂಗಿನ ಮರಕ್ಕೆ, ಮನೆ ಅಂಗಳಕ್ಕೆ ಬಿಡುತ್ತಿದ್ದು ನೀರು ಪೋಲಾಗುತ್ತಿರುವುದನ್ನು ಕೂಡ ಇದೇ ಸಂದರ್ಭದಲ್ಲಿ ವಿಕಾಸ ವಾಹಿನಿಗೆ ಮಾಹಿತಿ ನೀಡಿದರು ಅಂತೂ ಬೆಲೇಕೆರಿಯಲ್ಲಿ ಮೀನುಗಾರ ಸಮುದಾಯದವರು ನಡೆಸಿದ ನೀರಿಗಾಗಿ ಹೋರಾಟವು ತಮ್ಮ ಬದುಕಿಗಾಗಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವಂತೆ ನಡೆಸಿದ್ದು ,ಬಾರಿ ಕಿಚ್ಚನ್ನು ಹೊತ್ತಿಸಿದಂತೂ ಸುಳ್ಳಲ್ಲ .ಮತ್ತೆ ನೀರಿನ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಮುಂದೆ ಯಾವ ರೀತಿ ಹೋರಾಟ ನಡೆಯಲಿದೆ ಎಂದು ಕಾದುನೋಡಬೇಕಾಗಿದೆ.
ಇಂದಿನ ಈ ಹೋರಾಟದಲ್ಲಿ ಕಾತ್ಯಾಯನಿ ಪ್ರಗತಿಪರ ಯೂನಿಯನ್ ನ ಅಧ್ಯಕ್ಷರಾದ ನಾಗೇಶ ಕುಡ್ತಳ್ಕರ್. ಉಪಾಧ್ಯಕ್ಷ ಶ್ರೀನಾಥ ಕುಡ್ತಳಕರ್. ಮೀನುಗಾರ ಧುರೀಣರಾದ ಬೋಳ ನಾಗಪ್ಪ ಕುರ್ತಳ್ಕರ್. ಗುರುದಾಸ ಬಾನವಳಿಕರ್. ಗುರುನಾಥ ಬಾನಾವಳಿಕರ್. ಸಂತೋಷ ಬಾನಾವಳಿಕರ್. ಸುರಜ್ ಬಾನಾವಳಿಕರ್ .ಅರವಿಂದ ಕುಡ್ತಾಳ್ಕರ್.. ಚಂದ್ರಕಾಂತ ತಾಂಡೇಲ. ಗೌರೀಶ ಬಾನಾವಳಿಕರ್. ವಿನೋದ ಡಿ ಬಾನಾವಳಿಕರ್. ವಿಕ್ರಾಂತ ಬಾನಾವಳಿಕರ್. ನಾಗರಾಜ ಎಸ್ ಬಾನವಾಳಿಕರ್. ಮಹಿಳಾ ಪ್ರಮುಖರಾದ ಶೈಲಾ ಜಿ ಬಾನಾವಳಿಕರ, ಚಂದ್ರಹಾಸ್ ಬಾನಾವಳಿಕರ್ ಹಾಗೂ ಸಮಸ್ತ ಖಾರ್ವಿವಾಡ ಹಾಗೂ ಬಂಗ್ಲೇವಾಡ. ಪೊಲೀಸ್ ಸ್ಟೇಷನ್ ವಾಡ ದ ಸಮಸ್ತ ಮಹಿಳೆಯರು. ಜೊತೆಗೆ ಪುರುಷರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

