ಭಾನುವಾರ ಸರ್ಕಾರದ ಕೆಲಸಕ್ಕೆ ಆದೇಶಿಸಿದರೂ ಅಂಕೋಲಾ ಉಪನೋಂದಣಿ ಕಚೇರಿ ಬೀಗ ಹಾಕಿದ್ದೇಕೆ? ಸರ್ಕಾರಿ ಆದೇಶ ಗಾಳಿಗೆ ತೂರಿದರೇ ಅಧಿಕಾರಿಗಳು?!

News Desk
2 Min Read

ಅಂಕೋಲಾ, ಜುಲೈ 13: ಕರ್ನಾಟಕ ಸರ್ಕಾರದ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಮೇ 23, 2025 ರಂದು ಹೊರಡಿಸಿದ ಆದೇಶದ ಪ್ರಕಾರ, ಪ್ರತಿ ತಿಂಗಳ 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳಲ್ಲಿ ರಾಜ್ಯದ ಎಲ್ಲಾ ಉಪ ನೋಂದಣಿ ಕಚೇರಿಗಳು ಕಾರ್ಯ ನಿರ್ವಹಿಸಬೇಕು. ಈ ದಿನಗಳಲ್ಲಿ ಕೆಲಸ ಮಾಡಿದ ನಂತರದ ಮಂಗಳವಾರದಂದು ಕಚೇರಿಗೆ ರಜೆ ನೀಡಬೇಕೆಂದು ಸ್ಪಷ್ಟವಾಗಿ ಹೇಳಲಾಗಿದೆ.

ಈ ಆದೇಶ ಜೂನ್ 1 ರಿಂದ ಡಿಸೆಂಬರ್ 28, 2025ರ ತನಕ ಜಾರಿಯಲ್ಲಿದೆ. ಆದರೂ ಕೂಡ, ಜುಲೈ 13ನೇ ಭಾನುವಾರದಂದು ಅಂಕೋಲಾ ಉಪನೋಂದಣಿ ಕಚೇರಿ ಮುಚ್ಚಲ್ಪಟ್ಟಿತ್ತು. ಈ ಬಗ್ಗೆ ಅಧಿಕಾರಿಗಳಿಗೆ ಕೇಳೋಣ ಎಂದು ಉಪ ನೋಂದಣಿ ಅಧಿಕಾರಿಗೆ ಕರೆ ಮಾಡಲಾಗಿ ಮೊಬೈಲ್ ರಿಂಗ್ ಆಗಿತ್ತು ಆದರೆ ಅಧಿಕಾರಿ ಕರೆ ಸ್ವೀಕರಿಸಲೇ ಇಲ್ಲ . ಮೊಬೈಲ್ ಕಂಪನಿ ಕಡೆಯಿಂದ ನೀವು ಕರೆ ಮಾಡಲಾಗಿರುವ ಚಂದಾದಾರರು ನಿಮ್ಮ ಕರೆಯನ್ನು ಸ್ವೀಕರಿಸುತ್ತಿಲ್ಲ ಸ್ವಲ್ಪ ಸಮಯದ ನಂತರ ಕರೆ ಮಾಡಿ ಎಂದು ಹೇಳಿ ಕರೆ ಕಟ್ಟಾಯಿತು..

ಈಗ ಬರುವ ಮಂಗಳವಾರದಂದು ಸಹ ಕಚೇರಿ ಮುಚ್ಚಿಲಿರುವ ಸಾಧ್ಯತೆಯಿದೆ ಎಂಬ ಮಾಹಿತಿ ಸಿಕ್ಕಿರುವ ಕಾರಣ, ಜನರಿಗೆ ನಿರಂತರವಾಗಿ ಎರಡು ದಿನ ಸೇವೆ ಸಿಗದಂತಾಗಿದೆ.ಇದರಿಂದಾಗಿ, ಭಾನುವಾರ ತಮ್ಮ ದಾಖಲೆಗಳ ನೋಂದಣಿಗಾಗಿ ಕಚೇರಿಗೆ ಭೇಟಿ ನೀಡಿದ ಸಾರ್ವಜನಿಕರು ಕಂಗಾಲಾಗಿ ಹಿಂತಿರುಗಬೇಕಾಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾಮಾಜಿಕ ಹೋರಾಟಗಾರ ಶ್ರೀ ಸುಭಾಷ್ ಗಂಗಾಧರ ನಾಯ್ಕ ಅವರು ತಮ್ಮ ಅಸಮಾಧಾನವನ್ನು ಹೀಗೆ ವ್ಯಕ್ತಪಡಿಸಿದ್ದಾರೆ:

Share This Article